Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಹಲವು ದೇಗುಲಗಳಲ್ಲಿ ಘಂಟಾನಾದಕ್ಕೆ ನಿರ್ಬಂಧ ವಿಧಿಸಿ ನೋಟಿಸ್ ಜಾರಿ ಮಾಡಿದ ಧಾರ್ಮಿಕ ದತ್ತಿ ಇಲಾಖೆ

ದೇವಸ್ಥಾನದ ಮಹಾ ಮಂಗಳಾರತಿ, ಅಭಿಷೇಕದ ಸಂದರ್ಭದಲ್ಲಿ ನಿಗದಿತ ಡೆಸಿಬಲ್ಗಿಂತ ಹೆಚ್ಚಿನ ಶಬ್ದ ಬಳಕೆ ಆಗುತ್ತಿರುವ ಹಿನ್ನೆಲೆ ನಿಗದಿತ ಡೆಸಿಬಲ್ಗಿಂತ ಕಡಿಮೆ ಶಬ್ದ ಬಳಸುವಂತೆ ದೇವಸ್ಥಾನಗಳಿಗೆ ನೋಟಿಸ್ ನೀಡಲಾಗಿದೆ. ದೇವಸ್ಥಾನದ ಘಂಟೆ, ಡಮರುಗ, ಧ್ವನಿ ವರ್ಧಕ ಬಳಕೆಗೆ ನಿಗದಿತ ಡೆಸಿಬಲ್ಗಿಂತ ಮೀರಬಾರದು.

ಬೆಂಗಳೂರಿನ ಹಲವು ದೇಗುಲಗಳಲ್ಲಿ ಘಂಟಾನಾದಕ್ಕೆ ನಿರ್ಬಂಧ ವಿಧಿಸಿ ನೋಟಿಸ್ ಜಾರಿ ಮಾಡಿದ ಧಾರ್ಮಿಕ ದತ್ತಿ ಇಲಾಖೆ
ಬೆಂಗಳೂರಿನ ಹಲವು ದೇಗುಲಗಳಲ್ಲಿ ಘಂಟಾನಾದಕ್ಕೆ ನಿರ್ಬಂಧ ವಿಧಿಸಿ ನೋಟಿಸ್ ಜಾರಿ ಮಾಡಿದ ಧಾರ್ಮಿಕ ದತ್ತಿ ಇಲಾಖೆ
Follow us
TV9 Web
| Updated By: ಆಯೇಷಾ ಬಾನು

Updated on:Feb 16, 2022 | 7:38 AM

ಬೆಂಗಳೂರು: ನಗರದ ಹಲವು ದೇಗುಲಗಳಲ್ಲಿ ಘಂಟಾನಾದಕ್ಕೆ ನಿರ್ಬಂಧ ವಿಧಿಸಿ ನೋಟಿಸ್ ಜಾರಿ ಮಾಡಲಾಗಿದೆ. ದೊಡ್ಡ ಗಣಪತಿ ದೇವಸ್ಥಾನ, ಮಿಂಟೋ ಆಂಜನೇಯ ದೇಗುಲ, ಕಾರಂಜಿ ಆಂಜನೇಯಸ್ವಾಮಿ, ದೊಡ್ಡ ಬಸವಣ್ಣ ದೇವಸ್ಥಾನ, ಮಲ್ಲಿಕಾರ್ಜುನಸ್ವಾಮಿ ಸೇರಿ ಹಲವು ದೇಗುಲಗಳಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ.

ದೇವಸ್ಥಾನದ ಮಹಾ ಮಂಗಳಾರತಿ, ಅಭಿಷೇಕದ ಸಂದರ್ಭದಲ್ಲಿ ನಿಗದಿತ ಡೆಸಿಬಲ್ಗಿಂತ ಹೆಚ್ಚಿನ ಶಬ್ದ ಬಳಕೆ ಆಗುತ್ತಿರುವ ಹಿನ್ನೆಲೆ ನಿಗದಿತ ಡೆಸಿಬಲ್ಗಿಂತ ಕಡಿಮೆ ಶಬ್ದ ಬಳಸುವಂತೆ ದೇವಸ್ಥಾನಗಳಿಗೆ ನೋಟಿಸ್ ನೀಡಲಾಗಿದೆ. ದೇವಸ್ಥಾನದ ಘಂಟೆ, ಡಮರುಗ, ಧ್ವನಿ ವರ್ಧಕ ಬಳಕೆಗೆ ನಿಗದಿತ ಡೆಸಿಬಲ್ಗಿಂತ ಮೀರಬಾರದು. ಘಂಟೆ ಬಾರಿಸುವ ಸಂದರ್ಭದಲ್ಲೂ ನಿಗದಿತ ಡೆಸಿಬಲ್ ಗಿಂತ ಕಡಿಮೆ ಶಬ್ದ ಬಳಕೆ ಆಗಬೇಕು ಎಂದು ತಿಳಿಸಲಾಗಿದೆ.

ನೋಟಿಸ್ ಹಿನ್ನೆಲೆಯಲ್ಲಿ ಅರ್ಚಕರ ಸಂಘ ಗರಂ ಢಮರುಗ, ಧ್ವನಿವರ್ಧಕ ಬಳಕೆ ಬಗ್ಗೆ ದೇಗುಲಗಳಿಗೆ ನೋಟಿಸ್ ಹಿನ್ನೆಲೆಯಲ್ಲಿ ಅರ್ಚಕರ ಸಂಘ ಗರಂ ಆಗಿದೆ. ದೇವರಿಗೆ ಅಭಿಷೇಕ ವೇಳೆ ವಿದ್ಯುತ್ ಚಾಲಿತ ಢಮರುಗ ಬಳಕೆ ಮಾಡಲಾಗುತ್ತೆ. ಅದಕ್ಕೆ ಪೊಲೀಸರು ನೋಟಿಸ್ ನೀಡಿರುವುದು ವಿಪರ್ಯಾಸ. ನೋಟಿಸ್ ಹಿಂಪಡೆಯದಿದ್ದರೆ ಪೂಜೆ ಸ್ಥಗಿತಗೊಳಿಸುತ್ತೇವೆ. ದೇವಸ್ಥಾನಗಳಲ್ಲಿ ಪೂಜಾಕೈಂಕರ್ಯ ಸ್ಥಗಿತಗೊಳಿಸಲಾಗುವುದು ಎಂದು ಅರ್ಚಕರ ಸಂಘ ಎಚ್ಚರಿಕೆ ಕೊಟ್ಟಿದೆ.

ಮಸೀದಿ ಹಾಗೂ ದರ್ಗಾದಲ್ಲಿ ರಾತ್ರಿ 10ರಿಂದ ಬೆಳಗ್ಗೆ 6ರ ತನಕ ಧ್ವನಿ ವರ್ಧಕ ಬಳಸುವಂತಿಲ್ಲ ಬೆಂಗಳೂರು: ಕರ್ನಾಟಕ ವಕ್ಫ್​ ಮಂಡಳಿ ಹೊರಡಿಸಿರುವ ಆದೇಶದ ಅನ್ವಯ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ನಡುವಿನ ಅವಧಿಯಲ್ಲಿ ಮಸೀದಿಯ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂಬ ನಿಯಮ ಜಾರಿಗೆ ಬಂದಿದೆ. ಧ್ವನಿವರ್ಧಕಗಳ ಮೂಲಕ ಅಜಾನ್​ ಅಥವಾ ಯಾವುದೇ ಇಸ್ಲಾಮಿಕ್​ ಕರೆಯನ್ನು ಇಲಾಖೆ ನಿರ್ಬಂಧನೆ ಹೇರಿದ ಅವಧಿಯಲ್ಲಿ ನೀಡುವಂತಿಲ್ಲ ಎಂದು ಸೂಚಿಸಲಾಗಿದೆ. ಶಬ್ಧ ಮಾಲಿನ್ಯ ನಿಯಂತ್ರಿಸುವ ಸಲುವಾಗಿ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ತಿಳಿಸಿರುವ ಇಲಾಖೆ, ಮಸೀದಿ ಹಾಗೂ ದರ್ಗಾದ ಸುತ್ತಮುತ್ತ ಶಬ್ಧದ ಪ್ರಮಾಣ ಹೆಚ್ಚಿರುವುದು ಗಮನಕ್ಕೆ ಬಂದಿದೆ. ಇದು ಮನುಷ್ಯನ ಆರೋಗ್ಯ ಮತ್ತು ಮಾನಸಿಕ ಸ್ಥಿತಿಯ ಮೇಲೆ ಅಡ್ಡಪರಿಣಾಮ ಬೀರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಾತಾವರಣದಲ್ಲಿನ ಶಬ್ಧ ಮಾಲಿನ್ಯ ನಿಯಂತ್ರಿಸಲು ಕಾಯ್ದೆಯೊಂದು ಜಾರಿಯಲ್ಲಿದೆ. ಅದರ ಪ್ರಕಾರ ರಾತ್ರಿ 10ರಿಂದ ಬೆಳಗ್ಗೆ 6ರ ತನಕ ಧ್ವನಿವರ್ಧಕ ಬಳಸಕೂಡದು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.

ನೂರು ಮೀಟರ್​ಗಳ ಅಂತರದಲ್ಲಿ ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆ, ನ್ಯಾಯಾಲಯವಿದ್ದರೆ ಅದನ್ನು ಶಬ್ಧ ರಹಿತ ವಲಯ ಎಂದು ಘೋಷಿಸಲಾಗುತ್ತದೆ. ಈ ಪ್ರದೇಶದಲ್ಲಿ ಯಾವುದೇ ರೀತಿಯ ಧ್ವನಿ ವರ್ಧಕ, ಸಿಡಿಮದ್ದು, ಪಟಾಕಿ ಬಳಕೆ ಅಥವಾ ಸಾರ್ವಜನಿಕ ಘೋಷಣೆಗಳನ್ನು ಮಾಡಿದರೆ ಪರಿಸರ ಸಂರಕ್ಷಣಾ ಕಾಯ್ದೆ 1986ರ ಅಡಿಯಲ್ಲಿ ದಂಡ ವಿಧಿಸಬಹುದಾಗಿದೆ ಎಂದು ತಿಳಿಸಲಾಗಿದೆ. ಜೊತೆಗೆ, ಜನಸಾಮಾನ್ಯರಿಗಾಗಿ ಆಗುವ ತೊಂದರೆಯನ್ನು ತಪ್ಪಿಸುವ ಸಲುವಾಗಿ ನಿಯಂತ್ರಣವೇ ಪರಿಹಾರ ಎಂದು ಅಭಿಪ್ರಾಯಪಡಲಾಗಿದೆ.

ಇದನ್ನೂ ಓದಿ: ದೇಗುಲಗಳಲ್ಲಿ ಘಂಟೆ ಬಾರಿಸುವುದೇಕೆ, ಘಂಟಾನಾದದ ಮಹತ್ವವೇನು?

Published On - 11:49 am, Tue, 15 February 22