AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬತ್ತಿದ ಉದ್ಯಾನವನದ ಕೊಳವೆಬಾವಿ, ಕೆರೆಗಳು: ಹನಿ ನೀರಿಗಾಗಿ ವನ್ಯಜೀವಿಗಳ ಹಾಹಾಕಾರ -ಎಲ್ಲಿ?

ರಾಜ್ಯವನ್ನು ಕಾಡುತ್ತಿರುವ ಭೀಕರ ಬರ ಇದೀಗ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವನ್ಯಜೀವಿಗಳಿಗೂ ಕಾಡುತ್ತಿದ್ದು, ನೀರಿಗಾಗಿ ಉದ್ಯಾನವನದ ಅಧಿಕಾರಿಗಳು ಶಾಶ್ವತ ಕ್ರಮ ವಹಿಸದಿರುವುದೇ ಇಂದಿನ ಸ್ಥಿತಿಗೆ ಕಾರಣ ಎನ್ನಲಾಗಿದೆ. ಉದ್ಯಾನವನದ 8 ಕೊಳವೆ ಬಾವಿಗಳಲ್ಲಿ 6 ಈಗಾಗಲೇ ಬತ್ತಿದ್ದು, ಕೇವಲ 2 ಕೊಳವೆ ಬಾವಿಗಳಿಂದ ಸದ್ಯ 20,000 ಲೀಟರ್ ನೀರು ಪೂರೈಕೆ ಮಾಡಲಾಗುತ್ತಿದೆ. ಉದ್ಯಾನವನದ ಸಿಬ್ಬಂದಿಗಾಗಿ ನಿತ್ಯ ಐದು ಟ್ಯಾಂಕರ್ ನೀರು ಖರೀದಿಸಲಾಗುತ್ತಿದೆ.

ಬತ್ತಿದ ಉದ್ಯಾನವನದ ಕೊಳವೆಬಾವಿ, ಕೆರೆಗಳು: ಹನಿ ನೀರಿಗಾಗಿ ವನ್ಯಜೀವಿಗಳ ಹಾಹಾಕಾರ -ಎಲ್ಲಿ?
ಬತ್ತಿದ ಉದ್ಯಾನವನದ ಕೊಳವೆಬಾವಿ, ಕೆರೆಗಳು: ಹನಿ ನೀರಿಗಾಗಿ ವನ್ಯಜೀವಿಗಳ ಹಾಹಾಕಾರ
ರಾಮು, ಆನೇಕಲ್​
| Edited By: |

Updated on: Mar 12, 2024 | 11:02 AM

Share

ರಾಜ್ಯದ ಜನರನ್ನು ಕಾಡುತ್ತಿರುವ ಭೀಕರ ಜಲಕ್ಷಾಮ ಇದೀಗ ವನ್ಯಜೀವಿಗಳಿಗೂ (Wildlife) ತಟ್ಟಿದೆ. ಬೇಸಿಗೆ ಆರಂಭದಲ್ಲಿಯೇ ನೀರಿನ ಬರದಿಂದಾಗಿ ವನ್ಯಜೀವಿಗಳು ತತ್ತರಿಸಿಹೋಗಿದ್ದು, ಜೀವಜಲಕ್ಕಾಗಿ (drinking water) ಪರದಾಡುವಂತಾಗಿದೆ.‌ ಅಷ್ಟಕ್ಕೂ ಹನಿನೀರಿಗಾಗಿ ವನ್ಯಜೀವಿಗಳ ಹಾಹಾಕಾರ ಅನುಭವಿಸುತ್ತಿರುವುದಾದರೂ ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ. ಹೌದು ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನ (Bannerghatta Biological Park) ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದಾಗಿತ್ತು. ಅಪರೂಪದ ವನ್ಯಜೀವಿಗಳಿಂದಾಗಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿತ್ತು. ಆದ್ರೆ ಇದೀಗ ಬನ್ನೇರುಘಟ್ಟ ಜೈವಿಕ ಉದ್ಯಾನವನ ಬೇಸಿಗೆ ಆರಂಭದಲ್ಲಿಯೇ ಜಲಕ್ಷಾಮ‌ ಎದುರಿಸುತ್ತಿದೆ .

ಸುಮಾರು 731 ಹೆಕ್ಟೇರ್ ‌ಪ್ರದೇಶದಲ್ಲಿ ವಿಸ್ತರಿಸಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಜೂ, ಚಿಟ್ಟೆ ಪಾರ್ಕ್ ಸವಾರಿಯಲ್ಲಿ ನೂರು ಪ್ರಬೇಧದ 2000 ಕ್ಕೂ ಅಧಿಕ ಪ್ರಾಣಿ ಸಂಕುಲವಿದೆ. ಅದ್ರಲ್ಲೂ ಅತಿ ಹೆಚ್ಚು ಸಾಕಾನೆಗಳನ್ನು ಹೊಂದಿರುವ ಖ್ಯಾತಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕಿದೆ. ಸಾಕಾನೆಗಳು, ನೀರು ಕುದುರೆಗಳು, ಮೊಸಳೆಗಳು ಮತ್ತು ಕೊಕ್ಕರೆಗಳು ಸೇರಿದಂತೆ ಉದ್ಯಾನವನದ ಗಿಡಗಳ ಪಾಲನೆ ಸೇರಿದಂತೆ ಜೈವಿಕ ಉದ್ಯಾನವನದಲ್ಲಿ ನಿತ್ಯ ಒಂದು ಲಕ್ಷ ಲೀಟರ್ ನೀರು ಬಳಕೆ ಮಾಡಲಾಗುತ್ತಿತ್ತು. ಆದ್ರೆ ಇದೀಗ ಜಲಕ್ಷಾಮ ಎದುರಾಗಿದ್ದು, ಜೀವಜಲಕ್ಕಾಗಿ ವನ್ಯಜೀವಿಗಳು ಪರಿತಪಿಸುವಂತಾಗಿದೆ.

ಇನ್ನು ಇಲ್ಲಿಯವರೆಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ಅಧಿಕಾರಿಗಳು ನೀರಿಗಾಗಿ ಉದ್ಯಾನವನದ ಕೊಳವೆ ಬಾವಿಗಳು ಮತ್ತು ಕೆರೆಗಳನ್ನು ನೆಚ್ಚಿಕೊಂಡಿದ್ದರು. ಉದ್ಯಾನವನದ ರೆಸ್ಕ್ಯೂ ಸೆಂಟರ್, ಜೂ ಮತ್ತು ಸಫಾರಿಯಲ್ಲಿದ್ದ 8 ಕೊಳವೆ ಬಾವಿಗಳು ಮತ್ತು ಸಫಾರಿ ವ್ಯಾಪ್ತಿಯಲ್ಲಿರುವ ಐದು ಕೆರೆಗಳಿಂದ ನಿತ್ಯ ಲಕ್ಷ ಲೀಟರ್ ನೀರು ಉದ್ಯಾನವನಕ್ಕೆ ನಿತ್ಯ ಪೂರೈಕೆ ಮಾಡಲಾಗುತ್ತಿತ್ತು.

ಆದ್ರೆ ಉದ್ಯಾನವನದ 8 ಕೊಳವೆ ಬಾವಿಗಳಲ್ಲಿ 6 ಈಗಾಗಲೇ ಬತ್ತಿದ್ದು, ಕೇವಲ 2 ಕೊಳವೆ ಬಾವಿಗಳಿಂದ ಸದ್ಯ ಎಪ್ಪತ್ತು ಸಾವಿರ ಲೀಟರ್ ನೀರು ಪೂರೈಕೆ ಮಾಡಲಾಗುತ್ತಿದೆ. ಉದ್ಯಾನವನದ ಸಿಬ್ಬಂದಿಗಾಗಿ ನಿತ್ಯ ಐದು ಟ್ಯಾಂಕರ್ ನೀರು ಖರೀದಿಸಲಾಗುತ್ತಿದೆ. ಇದರ ನಡುವೆ ಆನೆ ಬಿಡಾರ ಬಳಿಯ ಸೀಗೆ ಕಟ್ಟೆ, ಕೆರೆ, ದೀಪಮ್ಮ ಕೆರೆ, ಸಿಗಡಿ ಕುಂಟೆ ಸೇರಿದಂತೆ ಉದ್ಯಾನವನದ ಐದು ಕೆರೆಗಳಲ್ಲಿ ಇದೇ ಮೊದಲ ಬಾರಿಗೆ ನೀರು ಪಾತಾಳ ತಲುಪಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಉದ್ಯಾನವನದ ವನ್ಯಜೀವಿಗಳ ನೀರಿನ ಹಾಹಾಕಾರ ಮತ್ತಷ್ಟು ಹೆಚ್ಚಾಗಲಿದೆ.

ಒಟ್ನಲ್ಲಿ ರಾಜ್ಯವನ್ನು ಕಾಡುತ್ತಿರುವ ಭೀಕರ ಬರ ಇದೀಗ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವನ್ಯಜೀವಿಗಳಿಗೂ ಕಾಡುತ್ತಿದ್ದು, ನೀರಿಗಾಗಿ ಉದ್ಯಾನವನದ ಅಧಿಕಾರಿಗಳು ಶಾಶ್ವತ ಕ್ರಮ ವಹಿಸದಿರುವುದೇ ಇಂದಿನ ಸ್ಥಿತಿಗೆ ಕಾರಣ ಎನ್ನಲಾಗಿದ್ದು, ಇನ್ನಾದರೂ ಉದ್ಯಾನವನದ ಅಧಿಕಾರಿಗಳು ನೀರಿನ ಹಾಹಾಕಾರಕ್ಕೆ ಶಾಶ್ವತ ಕ್ರಮದ ಮೂಲಕ ಪರಿಹಾರ ಕಂಡುಕೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ