AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಈದ್​ ಮಿಲಾದ್​: ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ

ಈದ್​ ಮಿಲಾದ್​ ಹಬ್ಬದ ಪ್ರಯುಕ್ತ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮೆಜೆಸ್ಟಿಕ್​, ಕೆಆರ್​ ಮಾರುಕಟ್ಟೆ ಕಡೆಗೆ ಹೋಗುವ ವಾಹನ ಸವಾರರು ಬದಲಿ ಮಾರ್ಗ ಅನುಸರಿಸಬೇಕಾಗಿ ಬೆಂಗಳೂರು ಸಂಚಾರಿ ಪೋಲಿಸರು ಸೂಚನೆ ನೀಡಿದ್ದಾರೆ.

ಬೆಂಗಳೂರು ಈದ್​ ಮಿಲಾದ್​: ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ
ಮೈಸೂರು ರಸ್ತೆ
ವಿವೇಕ ಬಿರಾದಾರ
|

Updated on: Sep 16, 2024 | 8:39 AM

Share

ಬೆಂಗಳೂರು, ಸೆಪ್ಟೆಂಬರ್​ 16: ಈದ್​ ಮಿಲಾದ್​​ (Eid Milad) ಹುಬ್ಬದ ಪ್ರಯುಕ್ತ ನೃಪತುಂಗ ರಸ್ತೆಯಲ್ಲಿನ ವಾಯ್​. ಎಮ್​.ಸಿ.ಎ. ಮೈದಾನಕ್ಕೆ ಅಲಂಕೃತ ವಾಹನ ಹಾಗೂ ಮೆರವಣಿಗೆಗಳು ಬರಲಿವೆ. ಹೀಗಾಗಿ ಜೆ.ಸಿ ರಸ್ತೆ, ಬಿವಿಕೆ ಆಯ್ಯಾಂಗರ್ ರಸ್ತೆ, ಅವಿನ್ಯೂ ರಸ್ತೆ, ಕಲಾಸಿಪಾಳ್ಯ ಮುಖ್ಯರಸ್ತೆ ಹಾಗೂ ಮೈಸೂರು ಮುಖ್ಯರಸ್ತೆಗಳಲ್ಲಿ ಹೆಚ್ಚು ವಾಹನ ಸಂಚಾರ ದಟ್ಟಣೆ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಯಿಂದ ಮೈಸೂರು ರಸ್ತೆಯಲ್ಲಿ ತಾತ್ಕಾಲಿಕವಾಗಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಬದಲಿ ಮಾರ್ಗ ಸೂಚಿಸಿದ್ದಾರೆ.

ಬದಲಿ ಮಾರ್ಗ

  • ಮೈಸೂರು ರಸ್ತೆ ಕಡೆಯಿಂದ ಮೆಜೆಸ್ಟಿಕ್‌ ಗೆ ಹೋಗುವ ವಾಹನಗಳು: ನಾಯಂಡಹಳ್ಳಿ ಜಂಕ್ಷನ್-ನಾಗರಭಾವಿ ಸರ್ಕಲ್- ಮದ್ದೂರಮ್ಮ ದೇವಸ್ಥಾನ- ಚಂದ್ರಲೇಔಟ್ ಜಂಕ್ಷನ್-ಆರ್.ಪಿಸಿ ಲೇಔಟ್ ಜಂಕ್ಷನ್-ವೇಸ್ಟ್ ಆಪ್ ಕಾರ್ಡ ರಸ್ತೆ-ವಿಜಯನಗರ ಮೆಟ್ರೋ ನಿಲ್ದಾಣ-ಟೋಲ್ ಗೇಟ್ ಜಂಕ್ಷನ್ ಪ್ರಸನ್ನ ಜಂಕ್ಷನ್ ಹುಣಸೇಮರ ಜಂಕ್ಷನ್- ಲೂಲು ಮಾಲ್- ಓಕಳಿಪುರಂ ಜಂಕ್ಷನ್-ಖೋಡೆ ಜಂಕ್ಷನ್ ಮೂಲಕ ಮೆಜೆಸ್ಟಿಕ್​ಗೆ ಹೋಗಬಹುದು.
  • ಮೈಸೂರು ರಸ್ತೆ ಕಡೆಯಿಂದ ಮಾರ್ಕೆಟ್​ ಕಡೆಗೆ ಹೋಗುವ ವಾಹನಗಳು: ನಾಯಂಡಹಳ್ಳಿ ಜಂಕ್ಷನ್- ನಾಗರಭಾವಿ ಸರ್ಕಲ್- ಮದ್ದೂರಮ್ಮ ದೇವಸ್ಥಾನ- ಚಂದ್ರಲೇಔಟ್ ಜಂಕ್ಷನ್-ಆರ್ ಪಿಸಿ ಲೇಔಟ್ ಜಂಕ್ಷನ್-ವೇಸ್ಟ್ ಆಪ್ ಕಾರ್ಡ ರಸ್ತೆ-ವಿಜಯನಗರ ಮೆಟ್ರೋ ನಿಲ್ದಾಣ-ಟೋಲ್ ಗೇಟ್ ಜಂಕ್ಷನ್- ಪ್ರಸನ್ನ ಜಂಕ್ಷನ್ ಹುಣಸೇಮರ ಜಂಕ್ಷನ್- ಅಂಗಳಾ ಪರಮೇಶ್ವರಿ ದೇವಸ್ಥಾನ- ಬಿನ್ನಿಮಿಲ್ ಜಂಕ್ಷನ್- ಗೂಡ್ಸ್‌ ಶೆಡ್ ರಸ್ತೆ-ರಾಯನ್ ರಸ್ತೆ ಶಾಂತಲ ವೃತ್ತ-ಖೋಡೆ ಜಂಕ್ಷನ್- ಲಕ್ಷ್ಮಣಪುರಿ ಬ್ರಿಡ್ಜ್- ಫ್ರೀಡಂ ಪಾರ್ಕ್ ಜಂಕ್ಷನ್ ಮಹಾರಾಣಿ ಬ್ರಿಡ್ಜ್ ಮೂಲಕ ಹೋಗಬಹುದು.
  • ಸ್ಥಬ್ಧ ಚಿತ್ರಗಳು ಮಾರ್ಕೆಟ್ ಸರ್ಕಲ್​ಗೆ ಬಂದಾಗ: ಎ.ಎಸ್ ಚಾರ್ ಸ್ಟ್ರೀಟ್ ಜಂಕ್ಷನ್​ನಲ್ಲಿ ವಾಹನಗಳು ಎಡ ತಿರುವು ಪಡೆದುಕೊಂಡು, (ಬಿವಿಕೆ ಅಯ್ಯಂಗಾರ್ ರಸ್ತೆ ಕಡೆಗೆ) ಹಾಗೂ ಜಿ.ಪಿ ಸ್ಪೀಟ್​ನಿಂದ ಎಸ್. ಆರ್ ರಸ್ತೆ ಮಾರ್ಗವಾಗಿ ಬರುವ ವಾಹಗಳು ಎಸ್.ಆರ್ ಸ್ಟ್ರೀಟ್ ರಸ್ತೆಗೆ ಬರದೆ, ಜಿಪಿ ಸ್ಟ್ರೀಟ್ ರಸ್ತೆಯಲ್ಲಿಯೇ ಮುಂದುವರೆದು ಬಿ.ವಿ.ಕೆ ಐಯ್ಯಾಂಗಾರ್ ರಸ್ತೆ ಮೂಲಕ ಮುಂದೆ ಹೋಗಲು ಅನುವು ಮಾಡಿಕೊಡಲಾಗಿದೆ.
  • ಕೆ.ಆರ್ ರಸ್ತೆ ಕಡೆಯಿಂದ ಮಾರ್ಕೆಟ್ ವೃತ್ತದ ಕಡೆಗೆ ಬರುವ ಎಲ್ಲ ವಾಹನಗಳು: ಫೋ. ಶಿವಶಂಕರಪ್ಪ ವೃತ್ತ- ಎಲ್.ಬಿ.ಎಫ್. ರಸ್ತೆ – ಪೆಸಿ.ರಸ್ತೆ – ಚೌನ ಹಾಲ್ ಕಡೆ ಹೋಗಬೇಕು. ಹಾಗೂ ಎ.ವಿ. ರಸ್ತೆ ಮೂಲಕ ಕೆ.ಆರ್. ರಸ್ತೆಗೆ ಬರುವ ವಾಹನಗಳು ಎ.ವಿ. ರಸ್ತೆ ಮೂಲಕ ಮೀಂಟೋ ವೃತ್ತದ ಕಡೆಗೆ ಹೋಗಬೇಕು.
  • ಸ್ಥಬ್ದ ಚಿತ್ರಗಳು ಎಸ್.ಜೆ.ಪಿ ರಸ್ತೆಯಲ್ಲಿ ಬಂದಾಗ: ಮೈಸೂರು ರಸ್ತೆಯಿಂದ ಬರುವ ಸವಾರರು ಸಿಟಿ ಮಾರುಕಟ್ಟೆ ವೃತ್ತದಿಂದ ಕಲಾಸಿಪಾಳ್ಯ ಮುಖ್ಯರಸ್ತೆಯ ಕಡೆಗೆ ಬಲ ತಿರುವು ಪಡೆದುಕೊಂಡು ಕೆ.ಪಿ. ವಾಯಿಂಟ್- ಬಸಪ್ಪ ವೃತ್ತದಲ್ಲಿ ಎಡ ತಿರುವು ಪಡೆದುಕೊಂಡು ಎಲ್.ಬಿ.ಎಫ್ ರಸ್ತೆ ಮೂಲಕ ಜೆ.ಸಿ ರಸ್ತೆ ಟೌನ್‌ ಹಾಲ್‌ ಮುಖಾಂತರ ಮುಂದೆ ಹೋಗಬೇಕು.
  • ಮೆರವಣಿಗೆಯು ಮೈಸೂರು ರಸ್ತೆ ಸಿರ್ಸಿ ವೃತ್ತದ ಮೂಲಕ ಟೌನ್ ಹಾಲ್ ಕಡೆಗೆ ಹಾದು ಹೋಗುವಾಗ ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು: ಬಿ.ಜಿ.ಎಸ್ ಪ್ರೈಓವರ್ ಆಪ್ ಯಾಂಪ್- ಬಿ.ಜಿ.ಎಸ್ ಆನ್ ಫೈಓವರ್ ವೆಟಿನರಿ ಜಂಕ್ಷನ್​ನಲ್ಲಿ ಎಡ ತಿರುವು ಪಡೆದುಕೊಂಡು ಗೂಡ್‌ಶೆಡ್ ರಸ್ತೆ- ಡಾ. ಟಿ.ಸಿ.ಎಂ ರಾಯನ್ ರಸ್ತೆ ಶಾಂತಲ ವೃತ್ತ ಮೂಲಕ ಮೆಜೆಸ್ಟಿಕ್​ಗೆ ಹೋಗಬಹುದಾಗಿದೆ.
  • ಮೆರವಣಿಗೆಯು ಮೈಸೂರು ರಸ್ತೆ ಸಿರ್ಸಿ ವೃತ್ತದ ಮೂಲಕ ಟೌನ್ ಹಾಲ್ ಕಡೆಗೆ ಹಾದು ಹೋಗುವಾಗ, ಮಾಗಡಿ ರಸ್ತೆ ಕಡೆಯಿಂದ ಬರುವ ವಾಹನಗಳು: ಸಿರ್ಸಿ ವೃತ್ತ ಚಾಮರಾಜಪೇಟೆ 7ನೇ ಅಡ್ಡರಸ್ತೆಯಲ್ಲಿ ಬಲ ತಿರುವು ಪಡೆದುಕೊಂಡಯ ಚಾಮರಾಜಪೇಟೆ 2, 3, 4 ಮತ್ತು 5ನೇ ಮುಖ್ಯರಸ್ತೆಯಲ್ಲಿ ಎಡತಿರುವು ಪಡೆದುಕೊಂಡಯ ಸಿಟಿ ಮಾರುಕಟ್ಟೆ ಹಾಗೂ ಇತರೆ ಕಡೆಗೆ ಸಂಚರಿಸಬಹುದಾಗಿದೆ.

ಇದನ್ನೂ ಓದಿ: ಶಿವಮೊಗ್ಗ ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ತಲ್ವಾರ್‌, ಚೂರಿ ಝಳಪಿಸಿದ ವಿಡಿಯೋ ಹರಿಬಿಟ್ಟ ಬಿಜೆಪಿ

ಮಧ್ಯಾಹ್ನ 1-00 ಗಂಟೆಯಿಂದ ರಾತ್ರಿ 10-00 ಗಂಟೆಯ ವರೆಗೆ ಕೆಳಕಂಡ ರಸ್ತೆಗಳಲ್ಲಿ, ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

  • ಕೆಂಗೇರಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ದೊಡ್ಡಬೆಲೆ ಜಂಕ್ಷನ್ ನಿಂದ ಬರುವ ಧಾರಿ ವಾಹನಗಳು ಬೆಂಗಳೂರು ನಗರ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
  • ನೈಸ್ ರಸ್ತೆಯ ಹೊಸಕೆರೆ ಹಳ್ಳಿ ಟೋಲ್ ನಾಯಂಡಹಳ್ಳಿ ಜಂಕ್ಷನ್ ಮುಖಾಂತರ ಬೆಂಗಳೂರು ನಗರಕ್ಕೆ ಪ್ರವೇಶಿಸುವ ವಾಹನಗಳನ್ನು ನಿಷೇಧಿಸಲಾಗಿದೆ.
  • ಔಟರ್​ ರಿಂಗ್ ರಸ್ತೆಯ ನಾಗರಭಾವಿ ಸರ್ಕಲ್ ನಿಂದ ಗಾಯಂಡಹಳ್ಳಿ ಜಂಕ್ಷನ್ ಮುಖಾಂತರ ಬೆಂಗಳೂರು ನಗರಕ್ಕೆ ಪ್ರವೇಶಿಸುವ ವಾಹನಗಳನ್ನು ನಿಷೇಧಿಸಲಾಗಿದೆ.
  • ಮಾಗಡಿ ಮುಖ್ಯರಸ್ತೆಯ ಮುಖಾಂತರ ಹುಣಸೇಮರ ಜಂಕ್ಷನ್ ಯಿಂದ ಸಿರ್ಸಿ ಪ್ರಸ್ತದ ಕಡೆಗೆ ಬರುವ ವಾಹನಗಳನ್ನು ನಿಷೇಧಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ