AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಗಾಪುರ ಕೆರೆಯ ತೂಬುಕಾಲುವೆ ಒತ್ತುವರಿ ತೆರವು ಕಾರ್ಯ: ಬಿಬಿಎಂಪಿ ಮಾಜಿ ಸದ್ಯಸೆ ​ಪತಿಯಿಂದ ಗಲಾಟೆ

ರಾಜಧಾನಿಯಲ್ಲಿ ಕೆರೆ, ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಭರಪೂರದಿಂದ ಸಾಗುತ್ತಿದ್ದು, ಬೆಂಗಳೂರಿನ ಸಿಂಗಾಪುರ ಕೆರೆಯ ತೂಬುಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಲಾದ ಕಟ್ಟಡವನ್ನು ತೆರವು ಕಾರ್ಯ ವೇಳೆ ಹೈಡ್ರಾಮಾ ನಡೆದಿದೆ.

ಸಿಂಗಾಪುರ ಕೆರೆಯ ತೂಬುಕಾಲುವೆ ಒತ್ತುವರಿ ತೆರವು ಕಾರ್ಯ: ಬಿಬಿಎಂಪಿ ಮಾಜಿ ಸದ್ಯಸೆ ​ಪತಿಯಿಂದ ಗಲಾಟೆ
ಒತ್ತುವರಿ ತೆರವು ಕಾರ್ಯಾಚರಣೆ
TV9 Web
| Updated By: ವಿವೇಕ ಬಿರಾದಾರ|

Updated on:Sep 14, 2022 | 4:38 PM

Share

ಬೆಂಗಳೂರು: ರಾಜಧಾನಿಯಲ್ಲಿ ಕೆರೆ, ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಭರಪೂರದಿಂದ ಸಾಗುತ್ತಿದ್ದು, ಬೆಂಗಳೂರಿನ ಸಿಂಗಾಪುರ ಕೆರೆಯ ತೂಬುಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಲಾದ ಕಟ್ಟಡವನ್ನು ತೆರವು ಕಾರ್ಯ ವೇಳೆ ಹೈಡ್ರಾಮಾ ನಡೆದಿದೆ. ತೂಬುಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಲ್ಯಾಂಡ್ ಮಾರ್ಕ್ ಡ್ರೀಮ್ ಅಪಾರ್ಟ್​ಮೆಂಟ್ ಕಟ್ಟಲಾಗಿತ್ತು.

ಹೀಗಾಗಿ ಬಿಬಿಎಂಪಿ ಸಿಬ್ಬಂದಿಯಿಂದ ಒತ್ತುವರಿಯಾದ 2.4 ಮೀಟರ್​​ 7 ಅಡಿ ಜಾಗವನ್ನು ತೆರವು ಮಾಡಲಾಗುತ್ತಿತ್ತು. ಈ ಲ್ಯಾಂಡ್ ಮಾರ್ಕ್ ಡ್ರೀಮ್ ಅಪಾರ್ಟ್​ಮೆಂಟ್ ಮಹಾನಗರಪಾಲಿಕೆ ಮಾಜಿ ಸದಸ್ಯೆ ನಂದಿನಿ ಪತಿ ಶ್ರೀನಿವಾಸ್​ಗೆ ಸೇರಿದ್ದಾಗಿದೆ. ಹಾಗಾಗಿ ತೂಬುಕಾಲುವೆ ತೆರವು ಕಾರ್ಯಾಚರಣೆ ವೇಳೆ ಶ್ರೀನಿವಾಸ್ ಗಲಾಟೆ ಮಾಡಿದ್ದಾನೆ. ಯಾಕೆ ಹೊಡೆಯುತ್ತಿದ್ದೀರಿ ಎಂದು ರಂಪಾಟ ಮಾಡಿದ್ದಲ್ಲದೇ ಮಾದ್ಯಮಗಳ ಜೊತೆ ಗಲಾಟೆ ಮಾಡಿದ್ದಾರೆ.

ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳನ್ನು ನೋಯ್ಡಾ ಟವರ್​​ನ್ನು ನೆಲಸಮ ಮಾಡಿದಂತೆ ಮಾಡಲಾಗುವುದು: ಸಚಿವ ಆರ್ ಅಶೋಕ

ಬೆಂಗಳೂರು: ಭಾರಿ ಮಳೆ ಮತ್ತು ಪ್ರವಾಹ ಬೆಂಗಳೂರಿನ ಮೇಲೆ ಭಾರೀ ಪರಿಣಾಮ ಬೀರಿದೆ. ಈ ಹೊತ್ತಲ್ಲಿ ಅಕ್ರಮ ನಿರ್ಮಾಣಗಳನ್ನು ನೋಯ್ಡಾ ಅವಳಿ ಟವರ್​​ಗಳಂತೆ ನೆಲಸಮ ಮಾಡಲಾಗುವುದು ಎಂದು ಕರ್ನಾಟಕದ ಕಂದಾಯ ಸಚಿವ ಆರ್ ಅಶೋಕ ಎಚ್ಚರಿಸಿದ್ದಾರೆ. ಬೆಂಗಳೂರಿನ ನಾಗರಿಕ ಸಂಸ್ಥೆಗಳು 700 ಅತಿಕ್ರಮಣಗಳನ್ನು ಗುರುತಿಸಿವೆ, ಅದು ನಗರದಾದ್ಯಂತ ಮಳೆನೀರಿನ ಚರಂಡಿಗಳಿಗೆ ಅಡ್ಡಿಯಾಗಿದೆ ಎಂದು ಹೇಳಲಾಗುತ್ತಿದೆ.

ಇದರಿಂದಲೇ ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಐಟಿ ನಗರದಲ್ಲಿ ಭಾರಿ ಪ್ರವಾಹಕ್ಕೆ ಕಾರಣವಾಯಿತು. ಒತ್ತುವರಿ ತೆರವುಗೊಳ್ಳುವವರೆಗೂ ಕೆಡವುವ ಕಾರ್ಯ ಮುಂದುವರಿಯಲಿದೆ ಎಂದು ಆರ್ ಅಶೋಕ ಹೇಳಿದ್ದಾರೆ.  ಅಕ್ರಮವಾಗಿ ನಿರ್ಮಿಸಲಾದ  ಕಟ್ಟಡಗಳನ್ನು ಕೆಡವಲು ನಿಯಂತ್ರಿತ ಸ್ಫೋಟ ಬಳಸುತ್ತೇವೆ ಎಂದ ಅವರು ನೋಯ್ಡದಲ್ಲಿ ಇತ್ತೀಚೆಗೆ ಕೆಡವಲಾದ ಅವಳಿ ಗೋಪುರಗಳ ಮಾದರಿಯಲ್ಲಿ ನಾವು ಅಕ್ರಮ ನಿರ್ಮಾಣಗಳನ್ನು ನೆಲಸಮ ಮಾಡುತ್ತೇವೆ ಎಂದಿದ್ದಾರೆ.

ಕುತುಬ್ ಮಿನಾರ್‌ಗಿಂತಲೂ ಎತ್ತರದ ಕಟ್ಟಡವಾಗಿದ್ದ ನೋಯ್ಡಾದ ಅವಳಿ ಕಟ್ಟಡಗಳನ್ನು 3,700 ಕೆಜಿ ಸ್ಫೋಟಕಗಳನ್ನು ಸಿಡಿಸಿ ಸೆಕೆಂಡುಗಳಲ್ಲಿ ನೆಲಸಮ ಮಾಡಲಾಯಿತು.ಅದೇ ವೇಳೆ ಅಕ್ರಮಕ್ಕೆ ಅನುಮತಿ ನೀಡಿದ ಬಿಲ್ಡರ್‌ಗಳು ಮತ್ತು ಅಧಿಕಾರಿಗಳ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ” ಎಂದು ಅಶೋಕ ಹೇಳಿದ್ದಾರೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:55 pm, Wed, 14 September 22