AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಫೋರಂ ಮಾಲ್ ಬಳಿ ಅಗ್ನಿ ಅವಘಡ, ಪ್ರಾಣ ಉಳಿಸಿಕೊಳ್ಳಲು 4ನೇ ಮಹಡಿಯಿಂದ ಜಿಗಿದ ವ್ಯಕ್ತಿ

ಬೆಂಗಳೂರಿನ ಕೊರಮಂಗಲದ ಫೋರಂ ಮಾಲ್ ಮುಂಭಾಗದಲ್ಲಿರುವ ಮಾರುತಿ ಕಾರು ಷೋ ರೂಂನ ನಾಲ್ಕನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಪ್ರಜ್ವಲ್​ ಕುಮಾರ್ ಎನ್​ ವೈ
| Updated By: ವಿವೇಕ ಬಿರಾದಾರ|

Updated on:Oct 18, 2023 | 4:32 PM

Share

ಬೆಂಗಳೂರು ಅ.18: ನಗರದ ಕೊರಮಂಗಲದ (Koramangala) ಫೋರಂ ಮಾಲ್ ಮುಂಭಾಗದಲ್ಲಿರುವ ಮಾರುತಿ ಕಾರು ಷೋ ರೂಂನ ನಾಲ್ಕನೇ ಮಹಡಿಯಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿದೆ. ನಾಲ್ಕನೇ ಮಹಡಿಯಲ್ಲಿದ್ದ ಮಡ್ ಪೈಪ್ ಹುಕ್ಕಾ ಕೆಫೆನಲ್ಲಿದ್ದ ಕಟ್ಟಡದಲ್ಲಿದ್ದ 8ರಿಂದ 10 ಸಿಲಿಂಡರ್​ಗಳು  ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಪ್ರಾಣ ಉಳಿಸಿಕೊಳ್ಳಲು ಪ್ರೇಮ್​ ಎಂಬುವರು ನಾಲ್ಕನೇ ಮಹಡಿಯಿಂದ ಗಿಡದ ಮೇಲೆ ಜಿಗಿದಿದ್ದಾರೆ. ಅವರಿಗೆ ಗಾಯಗಳಾಗಿದ್ದು, ನಿಮ್ಹಾನ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.  ಪಕ್ಕದ ಕಟ್ಟಡಕ್ಕೂ ಬೆಂಕಿ ಹರಡಿದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ನಾಲ್ಕು ಮಹಡಿಯ ​ಕಟ್ಟಡದಲ್ಲಿ, ಗ್ರೌಂಡ್ ಮತ್ತು ಮೊದಲ ಮಹಡಿಯಲ್ಲಿ ಕಾರು ಷೋ ರೂಂ ಇದೆ. ಎರಡು ಮತ್ತು ಮೂರನೇ ಮೂರನೇ ಮಹಡಿಯಲ್ಲಿ ಹುಕ್ಕಾ ಬಾರ್ ನಡೆಸಲಾಗುತ್ತಿದೆ. ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಅತ್ತಿಬೆಲೆ ಅಗ್ನಿ ದುರಂತ ಪ್ರಕರಣ: ಮ್ಯಾಜಿಸ್ಟೀರಿಯಲ್ ತನಿಖೆಗೆ ರಾಜ್ಯ ಸರ್ಕಾರ ಆದೇಶ

ಆರನೇ ಮಹಡಿಯಲ್ಲಿ ಬೆಂಕಿ ಹೊತ್ತಿ ಹುರಿತಿತ್ತು. ಬೆಂಕಿ ಐದನೇ ಮಹಡಿಗೂ ಆವರಿಸಿತ್ತು. ಅಲ್ಲಿ ಸದ್ಯ ಯಾರು ಇರಲಿಲ್ಲ. ಒಟ್ಟು ಆರು ಗ್ಯಾಸ್ ಸಿಲಿಂಡರ್​ಗಳಿದ್ದವು. ನಾಲ್ಕು ಬ್ಲಾಸ್ಟ್ ಆಗಿವೆ, ಇನ್ನು ಎರಡು ಸಿಲೆಂಡರ್​​ಗಳು ಬ್ಲಾಸ್ಟ್​ ಆಗದ ಹಾಗೆ ಮಾಡಿದ್ದೇವೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

8-10 ಸಿಲಿಂಡರ್​ಗಳು ಇದ್ದವು. ಬ್ಲಾಸ್ಟ್ ಗೊತ್ತಾಗುತಿದ್ದಂತೆ ಕಟ್ಟಡ ಅಂಚಿಗೆ ಬಂದಿದ್ದಾನೆ. ನಂತರ ಬೆಂಕಿಗೆ ಸುಟ್ಟು ಹೋಗುತ್ತೇನೆ ಎಂದು ಕೆಳಗೆ ಹಾರಿದ್ದಾನೆ. ಹುಕ್ಕಾ ಬಾರ್​ನಲ್ಲಿ ಇದ್ದ ಸಿಲಿಂಡರ್​ನಿಂದ ಇಷ್ಟೆಲ್ಲಾ ದುರಂತ ಆಗಿದೆ. ರೂಫ್ ಟಾಪ್ ಸಂಪೂರ್ಣ ಭಸ್ಮವಾಗಿದೆ. ಫರ್ನಿಚರ್ ಮತ್ತು ಬೆಂಡುಗಳಿಂದ ಡೆಕೋರೆಶನ್ ಮಾಡಲಾಗಿತ್ತು ಹೀಗಾಗಿ ಸಂಪೂರ್ಣ ಸುಟ್ಟು ಹೋಗಿದೆ. ಅಗ್ನಿಶಾಮಕ ಸಿಬ್ಬಂದಿ ಬಂದಾಗ ಪಕ್ಕದ ಕಟ್ಟಡಕ್ಕೆ ಬೆಂಕಿ ಆವರಿಸಿಕೊಳ್ಳುತಿತ್ತು. ಈ ವೇಳೆ ಮೊದಲಿಗೆ ಪಕ್ಕದಕಟ್ಟಡ ಬೆಂಕಿ ನಂದಿಸಿ ನಂತರ ಬೆಂಕಿ ಹೊತ್ತಿದ್ದ ಕಟ್ಟಡ ಬೆಂಕಿಯನ್ನು ಹತೋಟಿಗೆ ಪಡೆದಿದ್ದಾರೆ.

ಅಗ್ನಿ ಅವಘಡದಲ್ಲಿ ಕಟ್ಟಡದ ಓರ್ವ ಸಿಬ್ಬಂದಿಗೆ ಗಾಯವಾಗಿದೆ

ಅಗ್ನಿ ಅವಘಡದಲ್ಲಿ ಕಟ್ಟಡದ ಓರ್ವ ಸಿಬ್ಬಂದಿಗೆ ಗಾಯವಾಗಿದೆ. ಗಾಯಾಳುಗೆ ತಿಲಕ್​​ ನಗರದ ಕೆಜಿಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ರೆಸ್ಟೋರೆಂಟ್​​​ ಇದೆ. ರೆಸ್ಟೋರೆಂಟ್​ನ ಕೊಠಡಿಯಲ್ಲಿ 8-10 ಸಿಲಿಂಡರ್​ ಸಂಗ್ರಹಿಸಲಾಗಿತ್ತು. ಸಿಲಿಂಡರ್​​ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿರುವ ಮಾಹಿತಿ ದೊರೆತಿದೆ ಎಂದು ಅಗ್ನಿಶಾಮಕ ದಳ ಎಡಿಜಿಪಿ ಹರಿಶೇಖರನ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:22 pm, Wed, 18 October 23