AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಸಿನಿಮಾ‌ ಸ್ಟೈಲ್ ನಲ್ಲಿ ನಕಲಿ ನೋಟು ಜಾಲ: ನಾಲ್ವರು ಅರೆಸ್ಟ್

ಹಣದ ವಿಷಯ ಬಂದಾಗ ನಂಬುವವರಿದ್ದರೆ, ಹೇಗಾದರೂ ಮಾಡಿ ನಂಬಿಸಿ ಮೋಸ ಮಾಡುತ್ತಾರೆ. ಮತ್ತೆ ಕೆಲವರು ಮೋಸ ಹೋಗಿದೀವಿ ಎಂದು ಗೊತ್ತಾಗಿಯೂ ತಾವೂ ಇನ್ನೊಬ್ಬರಿಗೆ ಮೋಸ ಮಾಡಲು ಮುಂದಾಗುತ್ತಾರೆ. ಹೀಗೆ ಮೋಸ  ಹೋದವನೊಬ್ಬ ತಾನೂ ಮೋಸ ಮಾಡುವುದಕ್ಕೆ ಹೋಗಿ, ಈ ಹಿಂದೆ ವಂಚಿಸಿದವರ ಸಮೇತ ಅರೆಸ್ಟ್ ಆಗಿದ್ದಾನೆ. ಅರೆ ಏನಿದು ಮೋಸ ಹೋಗಿದ್ದು, ಮೋಸ ಮಾಡಿದ್ದ ಸ್ಟೋರಿ ಅಂತೀರಾ? ಇದನ್ನು ಓದಿ.

ಬೆಂಗಳೂರಿನಲ್ಲಿ ಸಿನಿಮಾ‌ ಸ್ಟೈಲ್ ನಲ್ಲಿ ನಕಲಿ ನೋಟು ಜಾಲ: ನಾಲ್ವರು ಅರೆಸ್ಟ್
ಬೆಂಗಳೂರಿನಲ್ಲಿ ಸಿನಿಮಾ‌ ಸ್ಟೈಲ್ ನಲ್ಲಿ ನಕಲಿ ನೋಟು ಜಾಲ ಪತ್ತೆ, ನಾಲ್ವರು ಅರೆಸ್ಟ್
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: ಕಿರಣ್ ಹನುಮಂತ್​ ಮಾದಾರ್|

Updated on: Oct 10, 2024 | 10:35 PM

Share

ಬೆಂಗಳೂರು, ಅ.10: ಈ ದುಡ್ಡು ಎನ್ನುವ ವಿಷಯ ಬಂದರೆ, ಮನುಷ್ಯ ಏನಾದರೂ ಮಾಡಲು ಮುಂದಾಗುತ್ತಾನೆ ಎಂಬುದಕ್ಕೆ ಈ ಸ್ಟೋರಿ ಉದಾಹರಣೆಯಾಗಿದೆ. ಹೌದು, ಹೀಗೆ ದುಡ್ಡಿನ ಹಿಂದೆ ಬಿದ್ದು ನಕಲಿ ನೋಟು ತಯಾರಿಸಿ, ವಂಚನೆ ಮಾಡುತ್ತಿದ್ದ ಜಾಲವನ್ನ ಬೆಂಗಳೂರಿನ ಹಲಸೂರು ಗೇಟ್ ಪೊಲೀಸರು(Halasuru Gate Police)ಅರೆಸ್ಟ್ ಮಾಡಿದ್ದಾರೆ. ನಕಲಿ ನೋಟ್ ಮುದ್ರಿಸುತ್ತಿದ್ದ ಮೂವರು ಹಾಗೂ ಅದನ್ನು ಆರ್​ಬಿಐಗೆ ಕೊಟ್ಟು ಎಕ್ಸ್​ಚೇಂಜ್​ಗೆ ಹೋಗಿದ್ದವನನ್ನ ಸೇರಿ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಬ್ದುಲ್, ಪ್ರಸೀತ್, ಮೊಹಮ್ಮದ್ ಅಪ್ನಾಸ್ ಹಾಗೂ ನೂರುದ್ದೀನ್ ಅಲಿಯಾಸ್​ ಅನ್ವರ್ ಬಂಧಿತ ಆರೋಪಿಗಳು.

ಘಟನೆ ವಿವರ

ಇನ್ನು ಈ ನಾಲ್ಕು ಜನರಲ್ಲಿ ಎ1 ಆರೋಪಿ ಅಬ್ದುಲ್ ಬಿಟ್ಟು ಮೂರು ಆರೋಪಿಗಳು ಕೇರಳ ಮೂಲದವರಾಗಿದ್ದು, ಎಲ್ಲರೂ ನಕಲಿ ನೋಟು​ ಪ್ರಿಂಟ್ ಮಾಡಿ ಅದನ್ನ ಬ್ಯುಸಿನೆಸ್ ನೆಪದಲ್ಲಿ ನೀಡಿ ಮೋಸ ಮಾಡುತ್ತಿದ್ದರು. ಹೀಗಿದ್ದಾಗ ಇವರ ಕೈಗೆ ಅಬ್ದುಲ್ ಸಿಕ್ಕಿದ್ದ. ಪ್ರಸೀತ್​ಗೆ ಗ್ರಾನೈಟ್ ಸೇಲ್ ಮಾಡಿದ್ದ ಅಬ್ದುಲ್​ಗೆ ಪ್ರಸೀತ್ ಸುಮಾರು 40 ರಿಂದ 45 ಲಕ್ಷ ರೂ. ಕೊಡಬೇಕಿತ್ತು. ಪದೇ ಪದೇ ಹಣ ಕೇಳುತ್ತಿದ್ದ ಅಬ್ದುಲ್​ಗೆ ‘ನೊಡಪ್ಪಾ ನನ್ ಹತ್ರ‌ 2 ಸಾವಿರ ಮುಖ ಬೆಲೆಯ ನೋಟುಗಳಿದ್ದು, ಒಟ್ಟು 25ಲಕ್ಷ ರೂ. ಇದೆ. ಆದರೆ, ಈಗ ಬ್ಯಾನ್ ಆಗಿದೆ. ಬೇಕಾದರೆ ಆರ್​ಬಿಐಗೆ ಕೊಟ್ಟು ಎಕ್ಸ್​ಚೇಂಜ್​ ಮಾಡಿಕೋ ಎಂದು ಕೊಟ್ಟಿದ್ದ.

ಇದನ್ನೂ ಓದಿ:ನಕಲಿ ನೋಟು ಮುದ್ರಣ ಜಾಲ ಪತ್ತೆಗೆ ಮದರಸಾಗೆ ನುಗ್ಗಿದ್ದ ಅಧಿಕಾರಿಗಳಿಗೆ ಸಿಕ್ಕಿದ್ದು ಆರ್​ಎಸ್​ಎಸ್​ ಕುರಿತ ವಿವಾದಾತ್ಮಕ ಪುಸ್ತಕ

ಹೆಂಗೋ ದುಡ್ಡು ಬಂತು ಎಂದು 25 ಲಕ್ಷ ರೂ. ನಕಲಿ ನೋಟು ತೆಗದುಕೊಂಡಿದ್ದ ಅಬ್ದುಲ್, ಅದನ್ನ ಆರ್​ಬಿಐಗೆ ಕೊಟ್ಟು ಎಕ್ಸ್​ಚೇಂಜ್​ ಮಾಡೋಕೆ ಹೋಗಿದ್ದ. ಅದಕ್ಕೂ ಮುಂಚೆ ಮಷೀನ್​ವೊಂದರಲ್ಲಿ ಹಣ ಚೆಕ್ ಮಾಡಿದ್ದ. ಚೇಕಿಂಗ್ ವೇಳೆ ಎಲ್ಲವೂ ಕೋಟಾ ನೋಟು ಎಂದು ಗೊತ್ತಾಗಿದೆ. ಆಗಲೇ ಎಚ್ಚೆತ್ತುಕ್ಕೊಳ್ಳಬೇಕಿದ್ದ ಅಬ್ದುಲ್, ಆರ್​ಬಿಐಗೆ ಕೊಟ್ಟು ಹಣ ಪಡೆದರಾಯಿತು ಎಂದು ಹೋಗಿದ್ದ. ಆದ್ರೆ, ಆರ್​ಬಿಐ ಅಧಿಕಾರಿಗಳು ಕೋಟಾ ನೋಟು ಎಂದು ಗೊತ್ತಾಗಿ 25ಲಕ್ಷ ರೂಪಾಯಿಯನ್ನು ಸೀಜ್ ಮಾಡಿ ಹಲಸೂರ್ ಗೇಟ್ ಪೊಲೀಸರಿಗೆ ಮಾಹಿತಿ ನೀಡಿದರು.

ಇನ್ನು ಕೂಡಲೇ ಆರೋಪಿ ಅಬ್ದುಲ್​ನನ್ನ ಅರೆಸ್ಟ್ ಮಾಡಿದ್ದ ಹಲಸೂರ್ ಗೇಟ್ ಪೊಲೀಸರು, ತನಿಖೆ ನಡೆಸಿದಾಗ ಇಡೀ ಜಾಲ ಪತ್ತೆಯಾಗಿದೆ. ಕೇರಳದಲ್ಲಿ ಇವರು ನೋಟ್ ಪ್ರಿಂಟ್ ಮಾಡಿ ವಂಚನೆ ಮಾಡುತ್ತಿರುವುದು ಎಂದು ಗೊತ್ತಾಗಿದೆ. ಈ ಮುಂಚೆ ಮಂಗಳೂರಿನಲ್ಲೂ ಆರೋಪಿಗಳು ಚೀಟಿಂಗ್ ಮಾಡಿ ಅರೆಸ್ಟ್ ಆಗಿದ್ದರು. ಸದ್ಯ ಆರೋಪಿಗಳನ್ನ ಬಂಧಿಸಿ ಸುಮಾರು 45ಲಕ್ಷ ರೂ. 2 ಸಾವಿರ ಮುಖ ಬೆಲೆಯ ನಕಲಿ ನೋಟು ಸೀಜ್ ಮಾಡಿದ್ದಾರೆ. ಪೊಲೀಸರು ಎಲ್ಲರನ್ನೂ ಜೈಲಿಗೆ ಕಳಿಸಿದ್ದಾರೆ. ಈತರ ನೋಟು ಎಕ್ಸ್​ಚೇಂಜ್​ ಎಂದು ಯಾರಾದರೂ ನಿಮ್ಮ ಬಳಿಯೂ ಬರಬಹುದು ಹುಷಾರಾಗಿರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ