Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರಿ ಮಳೆ: ಬೆಂಗಳೂರಿಗೆ ಬರಬೇಕಿದ್ದ ವಿಮಾನಗಳು ಚನ್ನೈ ಕಡೆಗೆ ಡೈವರ್ಟ್​

ಕಳೆದ 2-3 ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದ ಬಿಸಿಲಿನ ಬೇಗೆಗೆ ಬೆಂದಿದ್ದ ಜನರು ತಂಪಾಗಿದ್ದಾರೆ. ಆದರೆ ಏಕಾಏಕಿ ಗಾಳಿ ಸಹಿತ ಮಳೆಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಬೇಕಾಗಿದ್ದ ವಿಮಾನಗಳನ್ನು ಚೆನ್ನೈ ಕಡೆಗೆ ಡೈವರ್ಟ್​ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಭಾರಿ ಮಳೆ: ಬೆಂಗಳೂರಿಗೆ ಬರಬೇಕಿದ್ದ ವಿಮಾನಗಳು ಚನ್ನೈ ಕಡೆಗೆ ಡೈವರ್ಟ್​
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
Follow us
ವಿವೇಕ ಬಿರಾದಾರ
|

Updated on:May 10, 2024 | 1:10 PM

ಬೆಂಗಳೂರು, ಮೇ 10: ವಿಮಾನ ನಿಲ್ದಾಣ ಪ್ರದೇಶದಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ (Rain)ಸುರಿದಿದೆ. ಹೀಗಾಗಿ 17ಕ್ಕೂ ಹೆಚ್ಚು ವಿಮಾನಗಳನ್ನು (Flight) ಬೇರೆಡೆಗೆ ಡೈವರ್ಟ್ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಗುರುವಾರ (ಮೇ 09)ರ ರಾತ್ರಿ 9:35 ರಿಂದ 10:29ರ ವರೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಪ್ರದೇಶದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಯಿತು. ಈ ಸಮಯದಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರನ್ನು ಹೊತ್ತು ಬರುತ್ತಿದ್ದ 13 ದೇಶಿ, 3 ಅಂತರಾಷ್ಟ್ರೀಯ ವಿಮಾನಗಳು ಮತ್ತು ಒಂದು ಕಾರ್ಗೋ ವಿಮಾನವನ್ನು ಚೈನ್ನೈ ಕಡೆಗೆ ಡೈವರ್ಟ್ ಮಾಡಲಾಯಿತು ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

ದೇಶಿಯ ವಿಮಾನಗಳಾದ ನಾಲ್ಕು ಇಂಡಿಗೋ, ನಾಲ್ಕು ಏರ್​ ಇಂಡಿಯಾ ಎಕ್ಸಪ್ರೆಸ್​​, ಒಂದು ವಿಸ್ತಾರಾ, ಒಂದು ಆಕಾಶ್​ ಏರ್​​, ಒಂದು ಏರ್​ ಇಂಡಿಯಾ ಮತ್ತು ಒಂದು ಸ್ಟಾರ್​ ಏರ್​ ವಿಮಾನವನ್ನು ಚೆನ್ನೈ ಕಡೆಗೆ ಡೈವರ್ಟ್​ ಮಾಡಲಾಗಿದೆ. ಇನ್ನು ಹವಾಮಾನ ವೈಪರಿತ್ಯದಿಂದ ಮೂರು ಅಂತರಾಷ್ಟ್ರೀಯ ಮತ್ತು ಒಂದು ಕಾರ್ಗೊ ವಿಮಾನವನ್ನು ಚೆನ್ನೈ ಕಡೆಗೆ ಡೈವರ್ಟ್​ ಮಾಡಲಾಗಿದೆ.

ಇದನ್ನೂ ಓದಿ: ದೇವನಹಳ್ಳಿ ಸುತ್ತಮುತ್ತ ಭಾರೀ ಮಳೆ, ಕೆಐಎ ಮೇಲ್ಛಾವಣಿ ಸೋರಿಕೆ, ಲಗೇಜ್ ಬೇಗೆ ನುಗ್ಗಿದ ನೀರು!

ಸಿಂಗಾಪುರದಿಂದ ಬರುತ್ತಿದ್ದ ಸಿಂಗಾಪುರ ಏರ್​​ಲೈನ್ಸ್​​, ಅಬುದುಬೈದಿಂದ ಬರುತ್ತಿದ್ದ ಇಹಾದ್​ ವಿಮಾನ ಮತ್ತು ಆಮ್ಸ್ಟರ್ಡ್ಯಾಮ್​ದಿಂದ ಬರುತ್ತಿದ್ದ ಕೆಎಲ್​ಎಮ್​ ವಿಮಾನವನ್ನು ಡೈವರ್ಟ್​ ಮಾಡಲಾಗಿದೆ. ಮತ್ತು ಡಿಹೆಚ್​ಎಲ್​ ಏವಿಯೇಷನ್ ಕಾರ್ಗೋ ES 731 ವಿಮಾನವನ್ನೂ ಕೂಡ ಡೈವರ್ಟ್​ ಮಾಡಲಾಗಿದೆ.

ಇನ್ನು ಮೇ 06 ರಂದು ಬೆಂಗಳೂರು ವಿಮಾನ ನಿಲ್ದಾಣ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದ ಪರಿಣಾಮ ಒಟ್ಟು 8 ವಿಮಾನಗಳನ್ನು ಡೈವರ್ಟ್​ ಮಾಡಲಾಗಿತ್ತು. ಏಳು ವಿಮಾನಗಳನ್ನು ಚೆನ್ನೈ ಕಡೆಗೆ ಮತ್ತು ಒಂದು ವಿಮಾನವನ್ನು ಕೊಯಿಮುತ್ತೂರು ಕಡೆ ಡೈವರ್ಟ್​ ಮಾಡಲಾಗಿತ್ತು.

ಭಾರತೀಯ ಹವಾಮಾನ ವರದಿ ಪ್ರಕಾರ ಗುರುವಾರ ಬೆಳಗ್ಗೆ 8:30 ರಿಂದ ಶುಕ್ರವಾರ ಬೆಳಗ್ಗೆ 8:30ರ ವರೆಗೆ ವಿಮಾನ ನಿಲ್ದಾಣದ ಪ್ರದೇಶದಲ್ಲಿ 72 ಮಿಮೀ ಮಳೆಯಾಗಿದೆ. ಬೆಂಗಳೂರು ನಗರದಲ್ಲಿ 14 ಮಿಮೀ ಮಳೆಯಾಗಿದೆ. ಮತ್ತು ಹೆಚ್​​ಎಎಲ್​​ ವಿಮಾನಿ ನಿಲ್ದಾಣದ ಬಳಿ 6.7 ಮಿಮೀ ಮಳೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:04 pm, Fri, 10 May 24

ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!