AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರೇ ಗಮನಿಸಿ: ಮೆಜೆಸ್ಟಿಕ್​ ರೈಲು ನಿಲ್ದಾಣಕ್ಕೆ ಈ ರೈಲುಗಳು ಬರೋದಿಲ್ಲ, ಕೆಲ ರೈಲುಗಳು ರದ್ದು

IRCTC: ಕ್ರಾಸಿಂಗ್, ಹಳಿಗಳ ನಿರ್ವಹಣೆ ಹಿನ್ನೆಲೆ ಬೆಂಗಳೂರು ನೈಋತ್ಯ ರೈಲ್ವೆ ವಿಭಾಗದ ಕೆಲವು ರೈಲುಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮೇ 25ರಿಂದ 27ರ ವರೆಗೆ ಅನೇಕ ರೈಲುಗಳು ರದ್ದಾಗಿವೆ.

ಪ್ರಯಾಣಿಕರೇ ಗಮನಿಸಿ: ಮೆಜೆಸ್ಟಿಕ್​ ರೈಲು ನಿಲ್ದಾಣಕ್ಕೆ ಈ ರೈಲುಗಳು ಬರೋದಿಲ್ಲ, ಕೆಲ ರೈಲುಗಳು ರದ್ದು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: May 25, 2023 | 12:20 PM

Share

ಬೆಂಗಳೂರು: ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ(Indian Railway) ಕಹಿ ಸುದ್ದಿ ನೀಡಿದೆ. ರೈಲ್ವೆ ಹಳಿ ಮತ್ತು ಬ್ರಿಡ್ಜ್ ಸೇರಿದಂತೆ ಇನ್ನಿತರ ಕಾಮಗಾರಿಗಳ ಕಾರಣದಿಂದಾಗಿ ವಿವಿಧ ಮಾರ್ಗಗಳಿಗೆ ಹೊರಡುವ ರೈಲುಗಳ ಸಂಚಾರವನ್ನು ಮೇ 25 ರಿಂದ ಮೇ 27ರವರೆಗೆ ರದ್ದು ಮಾಡಲಾಗಿದೆ. ಈ ಸಂಬಂಧ ರೈಲ್ವೆ ಇಲಾಖೆ ಟ್ವೀಟ್ ಮಾಡಿದೆ.

ಕ್ರಾಸಿಂಗ್, ಹಳಿಗಳ ನಿರ್ವಹಣೆ ಹಿನ್ನೆಲೆ ಬೆಂಗಳೂರು ನೈಋತ್ಯ ರೈಲ್ವೆ ವಿಭಾಗದ ಕೆಲವು ರೈಲುಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಲ್ಲಿ ತುಮಕೂರು ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳ ಮಾರ್ಗವಾಗಿ ತೆರಳುವ ರೈಲುಗಳ ಪ್ರಮಾಣಿಕರು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಬೇಕಿದೆ.

ರದ್ದಾದ ರೈಲುಗಳು

    • ಚಿಕ್ಕಮಗಳೂರುನಿಂದ ಯಶವಂತಪುರಕ್ಕೆ ಹೊರಡುವ 16239 ಸಂಖ್ಯೆಯ ರೈಲನ್ನು ಮೇ 25 ಮತ್ತು ಮೇ 27ರಂದು ರದ್ದು ಮಾಡಲಾಗಿದೆ.
    • ಯಶವಂಪುರದಿಂದ ಚಿಕ್ಕಮಗಳೂರು ಗಾಡಿ ಸಂಖ್ಯೆ -16240 ಸಂಖ್ಯೆಯ ರೈಲು ಮೇ 25 ಮತ್ತು ಮೇ 27ರಂದು ಸಂಚಾರ ರದ್ದು ಮಾಡಲಾಗಿದೆ.
    • ಕೆಎಸ್‌ಆರ್‌-ಬೆಂಗಳೂರಿನ ರೈಲು ಸಂಖ್ಯೆ 12614 ಸಂಖ್ಯೆಯ ರೈಲು ಮೇ 25 ಮತ್ತು ಮೇ 27ರಂದು ಸಂಚಾರ ಸ್ಥಗಿತಗೊಳಿಸಲಾಗಿದೆ.

    ಸಂಗೊಳ್ಳಿ ರೈಲು ನಿಲ್ದಾಣಕ್ಕೆ ಬರದ ಲೈಲುಗಳ ಪಟ್ಟಿ

    • ಮೇ 24ರಂದು ಮಾತ್ರ ವಾಸ್ಕೋಡಿಗಾಮ ಯಶವಂತಪುರ ರೈಲು 17310 ಸಂಖ್ಯೆಯ ರೈಲು ಕೊನೆಯ ನಿಲ್ದಾಣ ಅರಸಿಕೆರೆಯಾಗಿರಲಿದೆ.
    • ಮೇ 25 ರಂದು ಮಾತ್ರ ಯಶವಂತಪುರ- ವಾಸ್ಕೋ 17309 ಸಂಖ್ಯೆಯ ರೈಲು ಸಂಚಾರ ಸ್ಥಗಿತಗೊಳ್ಳಲಿದೆ.
    • ಮೇ 25 ಮತ್ತು 27ರಂದು ಬೆಂಗಳೂರು ಕೆಎಸ್‌ಆರ್‌ನಿಂದ ತುಮಕೂರು ತೆರಳುವ 06571 ಸಂಖ್ಯೆಯ ರೈಲು ಸಂಚಾರ ಬಂದ್ ಆಗಿದೆ.
    • ಮೇ 25 ಮತ್ತು 27ರಂದು ತುಮಕೂರು-ಬೆಂಗಳೂರು – ರೈಲು ಸಂಖ್ಯೆ 06576 ತಾತ್ಕಾಲಿಕವಾಗಿ ಸ್ಥಗಿತವಾಗಿದೆ.
    • ಮೇ 25 ಮತ್ತು 27ರಂದು ತಾಳಗುಪ್ಪದಿಂದ ಬೆಂಗಳೂರಿಗೆ ಹೊರಡುವ 20652 ಸಂಖ್ಯೆಯ ರೈಲು ಸ್ಥಿಗಿತ.
    • ಮೇ 25 ಮತ್ತು 27ರಂದು ಕೆಎಸ್‌ಆರ್‌-ಧಾರವಾಡ (12725) ಸಂಚಾರ ಬಂದ್.
    • ಮೇ 25 ಮತ್ತು 27ರಂದು ಧಾರವಾಡ- ಬೆಂಗಳೂರು (12726) ಬಂದ್.
    • ಮೇ 25 ಮತ್ತು 27ರಂದು ಯಶವಂತಪುರ- ಶಿವಮೊಗ್ಗ ನಗರ (16579) ಮಾರ್ಗದ ರೈಲು ಸೇವೆ ವ್ಯತ್ಯಯ.

    ಈ ರೈಲುಗಳು ಮಾರ್ಗ ಬದಲಾವಣೆ

    • ಮೇ 25 ರಂದು ಮೈಸೂರು- ವಾರಣಾಸಿ (22687) ರೈಲು ಯಶವಂತಪುರ, ನೆಲಮಂಗಲ, ಹಾಸನ ಮತ್ತು ಅರಸಿಕೆರೆ ಮೂಲಕ ಸಂಚಾರ ನಡೆಸಲಿದೆ.
    • ಮೇ 25 ರಂದು ಮೈಸೂರು-ಬೆಳಗಾವಿ (17326) ರೈಲು ಮೈಸೂರು, ಕೃಷ್ಣರಾಜ ನಗರ, ಹಾಸನ, ಅರಸಿಕೆರೆ ಕಡೆಯಿಂದ ಸಂಚರಿಸಲಿದೆ.

    ಈ ರೈಲುಗಳ ಸಮಯ ಬದಲಾವಣೆ

    • ಮೇ 27ರಂದು ಯಶವಂತಪುರ-ವಾಸ್ಕೋ (17309) ರೈಲನ್ನು 60 ನಿಮಿಷ ಮರು ನಿಗಧಿ ಮಾಡಲಾಗಿದೆ.
    • ಮೇ 25 ಮತ್ತು 27ರಂದು ತುಮಕೂರು-ಚಾಮರಾಜನಗರ ರೈಲು (07346) ರೈಲನ್ನು 90 ಮತ್ತು 45 ನಿಮಿಷ ಮರು ನಿಗಧಿ ಮಾಡಲಾಗಿದೆ.
    • ಮೇ 25ರಂದು ಯಶವಂತಪುರ-ಜೈಪುರ(82653) ರೈಲನ್ನು 120 ನಿಮಿಷ ಮರು ನಿಗಧಿ ಮಾಡಲಾಗಿದೆ.
    • ಮೇ 27ರಂದು ಹುಬ್ಬಳ್ಳಿ-ರಾಮೇಶ್ವರಂ (07355) ಸಂಖ್ಯೆಯ ರೈಲನ್ನು ಮರು ನಿಗಧಿ ಮಾಡಲಾಗಿದೆ.
    • ಮೇ 26 ವಾಸ್ಕೋ- ಬೆಂಗಳೂರು ಯಶವಂತಪುರ (17310) 100 ನಿಮಿಷ ಮರು ನಿಗಧಿ ಮಾಡಲಾಗಿದೆ.

    ಈ ರೀತಿ ರೈಲುಗಳ ಸೇವೆಯಲ್ಲಿ ತಾತ್ಕಾಲಿಕವಾಗಿ ವ್ಯತ್ಯಯವಾಗಲಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.

    ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ