ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ: ರಾಜ್ಯದಲ್ಲಿ ಮತ್ತೆ ರಸ್ತೆಗಿಳಿಯಲಿವೆ ಬೈಕ್​ ಆ್ಯಂಬುಲೆನ್ಸ್​​ಗಳು

Bengaluru News: ಬೆಂಗಳೂರಿನ ಟ್ರಾಫಿಕ್ ದಟ್ಟಣೆಯಲ್ಲಿ ತುರ್ತು ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ, ಸ್ಥಗಿತಗೊಂಡಿದ್ದ 'ಬೈಕ್ ಆ್ಯಂಬುಲೆನ್ಸ್' ಯೋಜನೆಯನ್ನು ರಾಜ್ಯದಲ್ಲಿ ಮರುಜಾರಿಗೊಳಿಸಲು ಆರೋಗ್ಯ ಇಲಾಖೆ ಮಹತ್ವದ ಸಿದ್ಧತೆ ನಡೆಸಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಬೈಕ್ ಆ್ಯಂಬುಲೆನ್ಸ್​​ಗಳು ಸೇವೆ ನೀಡುತ್ತಿವೆ. ಹೀಗಾಗಿ ನಮ್ಮಲ್ಲೂ ಈ ಸೇವೆಯನ್ನು ಆದಷ್ಟು ಬೇಗ ಮತ್ತೆ ಆರಂಭಿಸುತ್ತೇವೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್​​ ಮಾಹಿತಿ ನೀಡಿದ್ದಾರೆ.

ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ: ರಾಜ್ಯದಲ್ಲಿ ಮತ್ತೆ ರಸ್ತೆಗಿಳಿಯಲಿವೆ ಬೈಕ್​ ಆ್ಯಂಬುಲೆನ್ಸ್​​ಗಳು
ಆರೋಗ್ಯ ಇಲಾಖೆಯಿಂದ ಮಹತ್ವದ ನಿರ್ಧಾರ
Edited By:

Updated on: Jun 24, 2026 | 5:24 PM

ಮುಖ್ಯಾಂಶಗಳು

  • ಆರೋಗ್ಯ ಇಲಾಖೆಯಿಂದ ಬೆಂಗಳೂರಿಗರಿಗೆ ಗುಡ್​​ ನ್ಯೂಸ್​​
  • ಬೈಕ್​​ ಆ್ಯಂಬುಲೆನ್ಸ್​​ ಸೇವೆ ಪುನರಾರಂಭಕ್ಕೆ ಇಲಾಖೆ ನಿರ್ಧಾರ
  • ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿದ ಸಚಿವ ಖಾದರ್​​

ಬೆಂಗಳೂರು, ಜೂನ್​​ 24: ಟ್ರಾಫಿಕ್​​ ಸಮಸ್ಯೆಯಿಂದ ಸಕಾಲಕ್ಕೆ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವುದು ಕಷ್ಟವಾಗುತ್ತಿರುವ ನಡುವೆ ಆರೋಗ್ಯ ಇಲಾಖೆ ಬೆಂಗಳೂರಿಗರಿಗೆ (Bengaluru) ಗುಡ್​​ ನ್ಯೂಸ್​​ ನೀಡಿದೆ. ಸಿಲಿಕಾನ್ ಸಿಟಿಯಲ್ಲಿ ಬೈಕ್ ಆ್ಯಂಬ್ಯುಲೆನ್ಸ್ ಸೇವೆ ಪುನರಾರಂಭಕ್ಕೆ ಚಿಂತನೆ ನಡೆದಿದ್ದು, ಈ ಬಗ್ಗೆ ಆರೋಗ್ಯ ಸಚಿವ ಯು.ಟಿ. ಖಾದರ್​​ ಕೂಡ ಬಹಳ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಈ ಹಿಂದೆ ಖಾದರ್​​ ಆರೋಗ್ಯ ಸಚಿವರಾಗಿದ್ದ ವೇಳೆಯೇ ರಾಜ್ಯದಲ್ಲಿ ಬೈಕ್​​ ಆ್ಯಂಬುಲೆನ್ಸ್​​ ಸೇವೆ ಪರಿಚಯಿಸಲಾಗಿತ್ತು ಎಂಬುದಿಲ್ಲಿ ಗಮನಾರ್ಹ.

2015ರ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಬೈಕ್ ಆ್ಯಂಬ್ಯುಲೆನ್ಸ್​​ಗಳು ರಸ್ತೆಗಿಳಿದಿದ್ದವು. ರಾಜ್ಯದ್ಯಾಂತ ಒಟ್ಟು 30 ಬೈಕ್ ಆ್ಯಂಬ್ಯುಲೆನ್ಸ್ಗಳನ್ನು ಸೇವೆಗೆ ನಿಯೋಜಿಸಲಾಗಿತ್ತು. ಆದರೆ 8 ವರ್ಷಗಳ ಬಳಿಕ ಬೈಕ್ ರಿಪೇರಿಗೆ ಅನುದಾನದ ಕೊರತೆ, ಸಿಬ್ಬಂದಿ ಸಂಬಳದ ವಿಚಾರ ಸೇರಿ ನಾನಾ ಕಾರಣಗಳಿಂದಾಗಿ ಮಹತ್ವದ ಯೋಜನೆ ನಿಂತಿತ್ತು. ಇದೀಗ ರಾಜ್ಯದ ಆರೋಗ್ಯ ಸಚಿವರಾಗಿ ಯು.ಟಿ. ಖಾದರ್​​ ಮತ್ತೆ ಅಧಿಕಾರ ಸ್ವೀಕಾರದ ಬೆನ್ನಲ್ಲೇ ಈ ಸೇವೆ ಪುನರಾರಂಭಕ್ಕೆ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಸಚಿವರು ಅಧಿಕಾರಿಗಳ ಸಭೆ ಕೂಡ ನಡೆಸಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಬಹಳ ಸುಲಭವಾಗಿ ಸಿಗಲಿದೆ ಸರ್ಕಾರಿ ಆ್ಯಂಬುಲೆನ್ಸ್ ಸೇವೆ! ದೇಶದಲ್ಲೇ ಪ್ರಥಮ ವಿನೂತನ ಕಮಾಂಡ್ ಸೆಂಟರ್ ಲೋಕಾರ್ಪಣೆ

ಬೈಕ್​​ ಆ್ಯಂಬುಲೆನ್ಸ್​​ಗಳ ವಿಶೇಷತೆ ಏನು?

  • ರೋಗಿಗಳಿಗೆ ಸುಲಭವಾಗಿ ತಕ್ಷಣ ಚಿಕಿತ್ಸೆ ಒದಗಿಸಲು ಸಾಧ್ಯ
  • ಟ್ರಾಫಿಕ್ ಸಮಯದಲ್ಲಿಯೂ ರೋಗಿಯ ಬಳಿ ಸುಲಭವಾಗಿ ತಲುಪಬಹುದು
  • ಆ್ಯಂಬುಲೆನ್ಸ್​​ಗಳ ಮಾದರಿಯಲ್ಲೇ ಇವು ಆಕ್ಸಿಜನ್ ಸಿಲಿಂಡರ್, ಫಸ್ಟ್ ಏಡ್ ಕಿಟ್, ಲೈಫ್ ಸೇವಿಂಗ್ ಮೆಡಿಸಿನ್, ಆಕ್ಸಿಮೀಟರ್, ಗ್ಲೂಕೋಮೀಟರ್, ಡ್ರೆಸಿಂಗ್ ಸಾಮಗ್ರಿಗಳನ್ನು ಹೊಂದಿರಲಿವೆ
  • ಕೆಲ ಬೈಕ್​​ಗಳಲ್ಲಿ ಸೈಡ್ ಕ್ಯಾರೇಜ್ ಅಳವಡಿಸುವ ಕಾರಣ ರೋಗಿ ಮಲಗಲು ಅನುಕೂಲ ಮಾಡುವ ವ್ಯವಸ್ಥೆಯೂ ಇರಲಿದೆ

ಯು.ಟಿ. ಖಾದರ್​​ ಮಾಹಿತಿ

ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ಯು.ಟಿ. ಖಾದರ್​​, 108 ಆ್ಯಂಬುಲೆನ್ಸ್ ಹಾಗೂ ಬೈಕ್ ಆ್ಯಂಬುಲೆನ್ಸ್ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಬೇರೆ ಬೇರೆ ರಾಜ್ಯಗಳಲ್ಲಿ ಬೈಕ್ ಆ್ಯಂಬುಲೆನ್ಸ್​​ಗಳು ಸೇವೆ ನೀಡುತ್ತಿವೆ. ಹೀಗಾಗಿ ನಮ್ಮಲ್ಲೂ ಈ ಸೇವೆಯನ್ನು ಆದಷ್ಟು ಬೇಗ ಮತ್ತೆ ಆರಂಭಿಸುತ್ತೇವೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:19 pm, Wed, 24 June 26

Follow Us