ಮದುವೆ ಆಗೋದಾಗಿ ನಂಬಿಸಿ ಯುವಕನಿಗೆ 35 ಲಕ್ಷ ರೂ ವಂಚಿಸಿದ ಯುವತಿ

ಮದುವೆ ಆಗುವ ನೆಪದಲ್ಲಿ ಯುವತಿಯೊಬ್ಬಳು ಯುವಕನಿಗೆ ಬರೋಬ್ಬರಿ 35 ಲಕ್ಷ ರೂ ವಂಚಿಸಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಪರಿಚಯವಾಗಿ, ಕ್ರಿಪ್ಟೋ ಹೂಡಿಕೆಯ ಆಮಿಷವೊಡ್ಡಿ ಹಂತ ಹಂತವಾಗಿ ಹಣ ಪಡೆದು ವಂಚಿಸಿದ್ದಾಳೆ. ಸದ್ಯ ಬೆಂಗಳೂರಿನ ಆಗ್ನೇಯ ವಿಭಾಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆ ಆಗೋದಾಗಿ ನಂಬಿಸಿ ಯುವಕನಿಗೆ 35 ಲಕ್ಷ ರೂ ವಂಚಿಸಿದ ಯುವತಿ
ಪ್ರಾತಿನಿಧಿಕ ಚಿತ್ರ
Image Credit source: Getty Images
Edited By:

Updated on: Jun 07, 2026 | 10:10 AM

ಬೆಂಗಳೂರು, ಜೂನ್​​ 07: ಮದುವೆ ಆಗೋದಾಗಿ ನಂಬಿಸಿ ಯುವಕನೋರ್ವನಿಗೆ ಯುವತಿ (girl) ಬರೋಬ್ಬರಿ 35 ಲಕ್ಷ ರೂ ವಂಚಿಸಿರುವಂತಹ (Fraud) ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಅನಿಲ್ ಎಂಬಾತನಿಗೆ ಲಕ್ಷ್ಮೀ ವಂಚಿಸಿದ್ದಾಳೆ. ಸದ್ಯ ಯುವಕ ನೀಡಿದ ದೂರಿನನ್ವಯ ಬೆಂಗಳೂರಿನ ಆಗ್ನೇಯ ವಿಭಾಗದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • ವಧುವಿನ ಹುಡುಕಾಟದಲ್ಲಿದ್ದ ಯುವಕನಿಗೆ ಮಹಾ ಮೋಸ
  • ಯುವತಿಯಿಂದ ಬರೋಬ್ಬರಿ 35 ಲಕ್ಷ ರೂ ವಂಚನೆ
  • ಬೆಂಗಳೂರಿನ ಆಗ್ನೇಯ ವಿಭಾಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು

ನಡೆದಿದ್ದೇನು?

ಅನಿಲ್​​ ಮ್ಯಾಟ್ರಿಮೋನಿ ವೆಬ್​ಸೈಟ್​​ ಮೂಲಕ ಹುಡುಗಿ ಹುಡುಕುತ್ತಿದ್ದರು. ಈ ವೇಳೆ ಭಾಸ್ಕರ್ ರಾವ್ ಎಂಬಾತ ಅನಿಲ್​ಗೆ ಕರೆ ಮಾಡಿದ್ದರು. ನಿಮ್ಮ ಪ್ರೊಫೈಲ್​ ಇಷ್ಟ ಆಗಿದೆ, ಲಕ್ಷ್ಮೀಗೆ ನಂಬರ್ ನೀಡಿದ್ದೀನಿ‌ ಎಂದಿದ್ದ. ಬಳಿಕ ಖದ್ದು ಲಕ್ಷ್ಮೀ ಅನಿಲ್​ಗೆ ಕರೆ ಮಾಡಿದ್ದಾಳೆ. ಇಬ್ಬರು ಕೆಲ ದಿನ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: ರೋಗಿಯ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡ ವಂಚಕರು: ಚಿಕಿತ್ಸೆ ಕೊಡಿಸುವ ನೆಪದಲ್ಲಿ ವಂಚನೆ

ಇನ್ನು ಭವಿಷ್ಯದ ದೃಷ್ಟಿಯಿಂದ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿರುವುದಾಗಿ ಹೇಳಿದ ಲಕ್ಷ್ಮೀ, ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಆಮಿಷ ಒಡ್ಡಿದ್ದಾಳೆ. ‘ನೀನು ಈಗಲೇ ಹಣ ಹೂಡಿಕೆ ಮಾಡು, ಮದುವೆಯ ನಂತರ ಅದೇ ಲಾಭದ ಹಣದಲ್ಲಿ ಚೆನ್ನಾಗಿ ಸೆಟಲ್ ಆಗೋಣ’ ಎಂದು ನಂಬಿಸಿದ್ದಾಳೆ. ಇದಕ್ಕೆ ಅನಿಲ್ ‘ಈಗ ಬೇಡ, ಮದುವೆಯಾದ ಬಳಿಕ ನೋಡೋಣ’ ಎಂದು ನಿರಾಕರಿಸಿದರೂ ಬಿಡದ ಲಕ್ಷ್ಮೀ, ಹಠಕ್ಕೆ ಬಿದ್ದು ಹಣ ಹೂಡುವಂತೆ ಸತತವಾಗಿ ಪ್ರೇರೇಪಿಸಿದ್ದಾಳೆ.

ಇದನ್ನೂ ಓದಿ: ನಿಮಗೆ 8 ಲಕ್ಷ ರೂ. ಲಾಟರಿ ಹೊಡೆದಿದೆ ಅಂದ್ರೆ ನಂಬಬೇಡಿ!: ಬೆಂಗಳೂರಿನ ಇಬ್ಬರಿಗೆ ಬಿತ್ತು 13.71 ಲಕ್ಷ ರೂ. ನಾಮ; ಹೊಸ ಆನ್‌ಲೈನ್ ಸ್ಕ್ಯಾಮ್

ಕೊನೆಗೆ ಆಕೆಯ ಮಾತು ನಂಬಿದ ಅನಿಲ್, ಹಂತ ಹಂತವಾಗಿ ಬರೋಬ್ಬರಿ 35 ಲಕ್ಷ ರೂ ಹೂಡಿಕೆ ಮಾಡಿದ್ದಾರೆ. ಆದರೆ, ಆ ಬಳಿಕ ಲಾಭದ ಹಣವನ್ನು ಹಿಂಪಡೆಯಲು ಹೋದಾಗ ಕ್ರಿಪ್ಟೋ ಖಾತೆಯೇ ಡಿಲೀಟ್ ಆಗಿರುವುದು ಕಂಡುಬಂದಿದೆ. ಆತಂಕಗೊಂಡ ಅನಿಲ್ ಲಕ್ಷ್ಮೀ ಮೊಬೈಲ್‌ಗೆ ಕರೆ ಮಾಡಿದಾಗ ಆಕೆಯ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಕೊನೆಗೆ ತಾನು ವಂಚನೆಗೆ ಒಳಗಾಗಿರುವುದು ಮನವರಿಕೆಯಾಗುತ್ತಿದ್ದಂತೆ ಅನಿಲ್ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us