ಬೆಂಗಳೂರಿಗರಿಗೆ ಬಿಗ್ ರಿಲೀಫ್: ಬಂತು ನಂಬಿಕೆ ನಕ್ಷೆ 2.0’ತಂತ್ರಾಂಶ, 30 ನಿಮಿಷದಲ್ಲೇ ಸಿಗುತ್ತೆ ಕಟ್ಟಡ ನಕ್ಷೆ ಮಂಜೂರಾತಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವತಿಯಿಂದ ಕಟ್ಟಡ ನಕ್ಷೆ ಮಂಜೂರಾತಿಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವ ‘ನಂಬಿಕೆ ನಕ್ಷೆ 2.0’ ಸುಧಾರಿತ ತಂತ್ರಾಂಶವನ್ನು ಲೋಕಾರ್ಪಣೆಗೊಳಿಸಲಾಗಿದೆ. ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಈ ನೂತನ ತಂತ್ರಾಂಶಕ್ಕೆ ಚಾಲನೆ ನೀಡಿದ್ದು, ಇನ್ಮುಂದೆ ಕೇವಲ ಅರ್ಧ ಗಂಟೆಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಸಿಗಲಿದೆ.

ಬೆಂಗಳೂರಿಗರಿಗೆ ಬಿಗ್ ರಿಲೀಫ್: ಬಂತು ನಂಬಿಕೆ ನಕ್ಷೆ 2.0ತಂತ್ರಾಂಶ, 30 ನಿಮಿಷದಲ್ಲೇ ಸಿಗುತ್ತೆ ಕಟ್ಟಡ ನಕ್ಷೆ ಮಂಜೂರಾತಿ
Nambike Nakshe 2.0
Edited By:

Updated on: Sep 20, 2026 | 7:01 AM

ಬೆಂಗಳೂರು, (ಸೆಪ್ಟೆಂಬರ್ 20): ರಾಜಧಾನಿ ಬೆಂಗಳೂರಿನಲ್ಲಿ ಮನೆ ಅಥವಾ ಕಟ್ಟಡ ನಿರ್ಮಿಸಲು ಪ್ಲಾನ್ ಅಪ್ರೂವಲ್ ಪಡೆಯಲು ಅಲೆದಾಡುವುದಕ್ಕೆ ಹಾಗೂ ಮಧ್ಯವರ್ತಿಗಳ ಹಾವಳಿಗೆ ಮುಕ್ತಿ ನೀಡಲು ಸರ್ಕಾರ ಮುಂದಾಗಿದೆ. ಹೌದು..ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯಲ್ಲಿ 50×80 ವಿಸ್ಥೀರ್ಣದ ನಿವೇಶನದಲ್ಲಿ ನಾಲ್ಕು ಅಂತಸ್ತಿನ ವಸತಿ ಕಟ್ಟಡಗಳ ನಿರ್ಮಾಣ 30 ನಿಮಿಷದಲ್ಲಿ ನಕ್ಷೆಯನ್ನು ಆನ್​​​ಲೈನ್​​ಲ್ಲಿ ನೀಡುವ ನಂಬಿಕೆ ನಕ್ಷೆ 2.0 ವ್ಯವಸ್ಥೆ ಕಾರ್ತಾರಂಭಿಸಿದೆ. ಹೌದು…ಗ್ರೇಟರ್ ಬೆಂಗಳೂರು ಪ್ರಾಧಿಕಾರ ವತಿಯಿಂದ ಅಭಿವೃದ್ಧಿಪಡಿಸಲಾದ ಸುಧಾರಿತ ‘ನಂಬಿಕೆ ನಕ್ಷೆ 2.0’ ತಂತ್ರಾಂಶವನ್ನು ಜಾರಿಗೆ ತರಲಾಗಿದ್ದು, ಇದನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ವ ಕೃಷ್ಣ ಬೈರೇಗೌಡ ಲೋಕಾರ್ಪಣೆಗೊಳಿಸಿದ್ದಾರೆ.

30 ನಿಮಿಷಗಳಲ್ಲಿ ಪ್ಲಾನ್ ಅಪ್ರೂವಲ್

2024 ರಲ್ಲಿ ಜಾರಿಗೆ ಬಂದಿದ್ದ ನಂಬಿಕೆ ನಕ್ಷೆ ಯೋಜನೆಯನ್ನು ಸಿಎಂ ಸೂಚನೆಯಂತೆ ಇನ್ನಷ್ಟು ಸುಧಾರಣೆಗೊಳಿಸಿ 2.0 ಆವೃತ್ತಿಯನ್ನು ತರಲಾಗಿದೆ. ಯಾವುದೇ ಸರ್ಕಾರಿ ಅಧಿಕಾರಿ ಅಥವಾ ಮಧ್ಯವರ್ತಿಯನ್ನು ಸಂಪರ್ಕಿಸುವ ಅಗತ್ಯವಿಲ್ಲ. 50×80 ವಸತಿ ನಿವೇಶನಗಳಲ್ಲಿ 4 ಘಟಕಗಳವರೆಗಿನ ಕಟ್ಟಡಗಳಿಗೆ ಅನ್ವಯವಾಗಲಿದ್ದು, ಸದ್ಯ 4,000 ಚದರ ಅಡಿವರೆಗಿನ ಕಟ್ಟಡ ನಕ್ಷೆಗಳಿಗೆ ಸಂಪೂರ್ಣ ಆಟೋಮೇಟೆಡ್ ಮಂಜೂರಾತಿ ನೀಡಲಿದೆ. ಸರ್ಕಾರದ ನಿಯಮಾವಳಿಗಳಿಗೆ ಅನುಗುಣವಾಗಿ ನಕ್ಷೆ ಸಲ್ಲಿಕೆಯಾದರೆ, ಸಾಫ್ಟ್‌ವೇರ್ ಸ್ವಯಂಚಾಲಿತವಾಗಿ ಪರಿಶೀಲನೆ ನಡೆಸಿ ಕೇವಲ 30 ನಿಮಿಷಗಳಲ್ಲಿ ಪ್ಲಾನ್ ಅಪ್ರೂವಲ್ ನೀಡಲಿದೆ. ಇದರಿಂದ ಭ್ರಷ್ಟಾಚಾರಕ್ಕೆ ಪೂರ್ಣ ವಿರಾಮ ಬೀಳಲಿದೆ.

ಇದನ್ನೂ ಓದಿ: ಕರ್ನಾಟಕದ ಹವಾಮಾನ ಮುನ್ಸೂಚನೆ: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ! 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ನಿಯಮ ಉಲ್ಲಂಘನೆಗೆ ದಂಡ!

ನಂಬಿಕೆ ನಕ್ಷೆ 2.0 ಸಂಪೂರ್ಣವಾಗಿ ಸಾರ್ವಜನಿಕರ ಮೇಲಿನ ನಂಬಿಕೆಯ ಮೇಲೆ ಆಧಾರಿತವಾಗಿದೆ. ಕಾನೂನುಬದ್ಧವಾಗಿ ಮನೆ ಕಟ್ಟುವವರಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಆದರೆ ಈ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡು ತಪ್ಪು ಮಾಹಿತಿ ನೀಡಿದರೆ ಅಥವಾ ನಿಯಮ ಉಲ್ಲಂಘಿಸಿದರೆ ದುಪ್ಪಟ್ಟು ದಂಡದ ಜೊತೆಗೆ ಕಾನೂನು ಕ್ರಮ ಜರುಗಿಸುವುದಾಗಿ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಸಿದ್ದಾರೆ.


ಸದ್ಯ ಬೆಂಗಳೂರಿನ ನಿರ್ದಿಷ್ಟ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಆರಂಭವಾಗಿರುವ ಈ ಸುಧಾರಿತ ವ್ಯವಸ್ಥೆ, ಮುಂದಿನ ದಿನಗಳಲ್ಲಿ ಸಂಪೂರ್ಣ ನಗರಕ್ಕೂ ವಿಸ್ತರಣೆಯಾಗಲಿದ್ದು, ದೊಡ್ಡ ಪ್ರಮಾಣದ ಕಟ್ಟಡಗಳ ನಕ್ಷೆ ಮಂಜೂರಾತಿಗೂ ಅನ್ವಯವಾಗಲಿದೆ.

Loading...
Unable to load recommendations.
Follow Us