AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pratap Simha: ಪಾದರಸದಂತಹ ರಸ್ತೆಯಲ್ಲಿ ನೂರಾರು ಕಿಮೀ ವೇಗದಲ್ಲಿ ಸಾಗುವ ವಾಹನಗಳ ಮಧ್ಯೆ ಬೈಕ್-ಆಟೋಗೆ ಅವಕಾಶ ನೀಡಬೇಕಾ!?

Pratap Simha: ವಾಸ್ತವ ನೋಡುವುದಾದರೆ ಈ ದಶಪಥ ಹೆದ್ದಾರಿಯಲ್ಲಿ ನೂರಾರು ಕಿ.ಮೀ. ವೇಗದಲ್ಲಿ ಹೋದರಷ್ಟೇ ಈ ರಸ್ತೆಯ ಸುಖ ಅನುಭವಿಸಲು ಸಾಧ್ಯ. ಅದು ನಾಲ್ಕು ಚಕ್ರ ವಾಹನದಾರರಿಗೆ ಹೇಳಿಮಾಡಿಸಿದಂತಹ ರಸ್ತೆಯೇ ಸರಿ. ಅದು ಬಿಟ್ಟು ಅವರ ಮಧ್ಯೆ ಬೈಕು ಆಟೋದಾರರು ಅಲುಗಾಡುತ್ತಾ ಹೋದರೆ...

Pratap Simha: ಪಾದರಸದಂತಹ ರಸ್ತೆಯಲ್ಲಿ ನೂರಾರು ಕಿಮೀ ವೇಗದಲ್ಲಿ ಸಾಗುವ ವಾಹನಗಳ ಮಧ್ಯೆ ಬೈಕ್-ಆಟೋಗೆ ಅವಕಾಶ ನೀಡಬೇಕಾ!?
ಪಾದರಸದಂತಹ ರಸ್ತೆಯಲ್ಲಿ ನೂರಾರು ಕಿಮೀ ವೇಗದಲ್ಲಿ ಸಾಗುವ ವಾಹನಗಳ ಮಧ್ಯೆ ಬೈಕ್-ಆಟೋಗೆ ಅವಕಾಶ ನೀಡಬೇಕಾ!?
TV9 Web
| Updated By: ಸಾಧು ಶ್ರೀನಾಥ್​|

Updated on:Jan 07, 2023 | 11:51 AM

Share

ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​​ ಹೈವೇ (Bengaluru Mysuru Expressway) ಕೇವಲ ಮೈಸೂರು, ಬೆಂಗಳೂರಿಗರ ಕನಸಷ್ಟೇ ಅಲ್ಲ. ಸುತ್ತಮುತ್ತಲ ಭಾಗದ ಜನರ ಕನಸೂ ಹೌದು. ಅದು ನನಸಾಗುತ್ತಾ ಬಂದಿದೆ. ಈ ಮಧ್ಯೆ ಅದು ಉಳ್ಳವರ ಅಂದರೆ ನಾಲ್ಕು ಚಕ್ರ ವಾಹನದಾರರಿಗಷ್ಟೇ ಅಲ್ಲ, ಸಾಮಾನ್ಯ ದ್ವಿಚಕ್ರ/ತ್ರಿಚಕ್ರ ವಾಹನ ಸವಾರರಿಗೂ ಸಲ್ಲುವಂತಾಗಬೇಕು ಎಂಬ ಆಸೆಯೂ ಇದೆ. ಅದಿನ್ನೇನು ಫೆಬ್ರವರಿ ಅಂತ್ಯಕ್ಕೆ ಲೋಕಾರ್ಪಣೆಯಾಗಲಿದೆ. ಆದ್ರೆ ಹಾವಿನಂತೆ ಬಳಕುತ್ತಾ ಸಾಗುವ ಈ ಎಕ್ಸ್​​ಪ್ರೆಸ್ ಹೆದ್ದಾರಿಯಲ್ಲಿ ಬೈಕರ್‌ಗಳಿಗೆ ಅವಕಾಶ ಇಲ್ಲವಾಗಿದೆ. ಇನ್ನು, ಆಟೋದಂತಹ ತ್ರಿಚಕ್ರ ವಾಹನಗಳಿಗೂ ಅಲ್ಲಿ ಎಂಟ್ರಿ ಇಲ್ಲವಾಗಿದೆ. ಇದರಿಂದ ಸಹಜವಾಗಿಯೇ ಬೈಕರ್‌ಗಳು ಮತ್ತು ಆಟೋದಾರರು ಆಕ್ರೋಶಗೊಂಡಿದ್ದಾರೆ. ಆದರೆ ವಾಸ್ತವ ಮತ್ತು ಹೆದ್ದಾರಿ ನಿಯಮಗಳು ಬೇರೆಯದ್ದನ್ನೇ ಹೇಳುತ್ತಿದೆ. ವಾಹನದಾರರ ಹಿತದೃಷ್ಟಿ, ಸುರಕ್ಷತೆ ಕಾಪಾಡಲು ಇದು ಅನಿವಾರ್ಯ ಎಂಬ ಒಂದು ಸಾಲಿನ ಸಮಜಾಯಿಷಿ ಕೇಳಿಬರುತ್ತಿದೆ.

ಅದು ಮೈಸೂರು-ಬೆಂಗಳೂರು ದಶಫಥ ರಸ್ತೆ. ರಾಜ್ಯದಲ್ಲಿ ಸದ್ಯಕ್ಕೆ ಅದು ಅತ್ಯುತ್ತಮ ರಸ್ತೆ. ಎಂದಿನಂತೆ ಕಿತ್ತೋಗಿರೋ ರಸ್ತೆಗಳಲ್ಲಿ/ ಟ್ರಾಫಿಕ್​ ಜಾಮುಗಳ ಮಧ್ಯೆ ಸಂಚರಿಸಿ, ಬಸವಳಿದಿರುವ ವಾಹನ ಸವಾರರಿಗೆ ಈ ರಸ್ತೆಯಲ್ಲಿ‌ ಹೋಗೋದೆ ಒಂದು ರೀತಿಯ ದಿವ್ಯ ಅನುಭವ ಕೊಡುವಂತಿದೆ. ಸಾವಿರ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಮೈಸೂರು ಬೆಂಗಳೂರು ರಸ್ತೆ ಎರಡು‌ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಅರ್ಧದಷ್ಟು‌ ಕಡಿಮೆ ಮಾಡಲಿದೆ.

ಮೂರು ಗಂಟೆಯ ಪ್ರಯಾಣ ಬರೋಬ್ಬರಿ ಒಂದು ಗಂಟೆಗೆ ಇಳಿಯಲಿದೆ. ನಿನ್ನೆ ಶುಕ್ರವಾರವಷ್ಟೇ ಖುದ್ದು ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ (Nitin Gadkari) ಈ ದಶಪಥ ರಸ್ತೆಯ ವೀಕ್ಷಣೆ ಮಾಡಿ, ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ಇದರ ಬೆನ್ನಿಗೆ ಸ್ಥಳೀಯ ಸಂಸದ ಪ್ರತಾಪ್​ ಸಿಂಹ (Pratap Simha) ಬಾಂಬ್ ಶಾಕ್ ಕೊಟ್ಟಿದ್ದು, ಈ ರಸ್ತೆಯಲ್ಲಿ ನಿಮ್ಮನ್ನು ಅಂದರೆ ಬೈಕ್ -ಆಟೋದಾರರನ್ನು (Bike -Auto Rickshaw) ಬಿಡುವುದಿಲ್ಲ ಎಂದಿದ್ದಾರೆ.

No room for bike and autos on Bangalore Mysore Expressway clarifies MP Pratap Simha 1

ಹೌದು ಹೊಸದಾಗಿ ನಿರ್ಮಾಣವಾಗಿರುವ ಮೈಸೂರು ಬೆಂಗಳೂರು ರಸ್ತೆಯಲ್ಲಿ ಬೈಕ್ ಹಾಗೂ ತ್ರಿಚಕ್ರ ವಾಹನಗಳಿಗೆ ಅವಕಾಶವಿಲ್ಲವಂತೆ. ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಸ್ತೆ ಪೂರ್ಣ ಆಗುವವರೆಗೂ ಮಾತ್ರ ಬೈಕ್‌ಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಒಮ್ಮೆ ರಸ್ತೆ ಕಾಮಗಾರಿ ಪೂರ್ಣಗೊಂಡರೆ ಬೈಕ್‌ಗಳಿಗೆ ಅವಕಾಶ ಇಲ್ಲ ಅಂತಾ ಪ್ರತಾಪ್ ಸಿಂಹ ಕಡ್ಡಿಮುರಿದಂತೆ ಹೇಳಿಬಿಟ್ಟಿದ್ದಾರೆ. ಅದು ಹೆದ್ದಾರಿ ಪ್ರೋಟೋಕಾಲ್​ ಅನುಸಾರವೇ ಸಂಸದ ಪ್ರತಾಪ್ ಈ ಮಾತನ್ನು ಹೇಳಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.

Also Read:

ಮೈಸೂರು ಎಕ್ಸ್‌ಪ್ರೆಸ್‌ ವೇ ಕಾಮಗಾರಿ ಪರಿಶೀಲನೆಗೆ ದಶಪಥ ಹೆದ್ದಾರಿಯಲ್ಲೆ ಹೆಲಿಕಾಪ್ಟರ್ ಇಳಿಸಲಿದ್ದಾರೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ

ಇನ್ನು ವಾಸ್ತವ ನೋಡುವುದಾದರೆ ಈ ದಶಪಥ ಹೆದ್ದಾರಿಯಲ್ಲಿ ನೂರು ಕಿ.ಮೀ. ಗಿಂತ ಹೆಚ್ಚು ವೇಗದಲ್ಲಿ ಹೋದರಷ್ಟೇ ಈ ರಸ್ತೆಯ ಸುಖ ಅನುಭವಿಸಲು ಸಾಧ್ಯ. ಅದು ನಾಲ್ಕು ಚಕ್ರ ವಾನಹದಾರರಿಗೆ ಹೇಳಿಮಾಡಿಸಿದಂತಹ ರಸ್ತೆಯೇ ಸರಿ. ಪಾದರಸದಂತಹ ರಸ್ತೆಯಲ್ಲಿ ನೂರಾರು ಕಿಮೀ ವೇಗದಲ್ಲಿ ಮುಂದೆ ಸಾಗಲು ಅವರಿಗಷ್ಟೇ ಸಾಧ್ಯವಾದೀತು. ಅದು ಬಿಟ್ಟು ಅವರ ಮಧ್ಯೆ ಬೈಕು ಆಟೋದಾರರು ಅಲುಗಾಡುತ್ತಾ ಹೋದರೆ… ಆ ಯಮನಿಗಷ್ಟೇ ಅದು ಪ್ರೀತಿ ತಂದೀತು.

ನಾವೇನು ತೆರಿಗೆ ಕಟ್ಟಲ್ವಾ? ನಮ್ಮಿಂದ ಮಾತ್ರ ಅಪಘಾತ ಆಗುತ್ತಾ?

ಆದರೂ ಬೈಕ್ ಆಟೋಗೆ ನೋ ಎಂಟ್ರಿ ಎನ್ನುವ ಸಂಸದ ಪ್ರತಾಪ್ ಮಾತು ಸಹಜವಾಗಿ ಆ ಸವಾರರನ್ನು ಕೆರಳಿಸಿದೆ. ನಾವೇನು ತೆರಿಗೆ ಕಟ್ಟಲ್ವಾ? ನಮ್ಮಿಂದ ಮಾತ್ರ ಅಪಘಾತ ಆಗುತ್ತಾ? ಪೂನಾ ದೆಹಲಿ ಮುಂಬೈ ಹೈವೆಗೆ ಇಲ್ಲದ ನಿರ್ಬಂಧ ಇಲ್ಲಿ ಮಾತ್ರ ಏಕೆ ಅಂತೆಲ್ಲ ಕಿಡಿಕಾರಿದ್ದಾರೆ. ಆದರೂ ವಾಹನ ಸವಾರರು ವಾಸ್ತವವನ್ನು ಒಪ್ಪಿಕೊಳ್ಳುವುದು ಒಳಿತು/ ಎಲ್ಲರಿಗೂ ಕ್ಷೇಮಕರ ಎಂದು ಪ್ರಾಜ್ಞರು ಹೇಳುತ್ತಿದ್ದಾರೆ.

ದಶಪಥ ಹೆದ್ದಾರಿ ನಿರ್ಮಾಣದ ವೇಳೆ ಹತ್ತಾರು ವಿಘ್ನಗಳು ಎದುರಾದಂತೆ ಇದೀಗ ಹೈಟೆಕ್ ರಸ್ತೆ ನಿರ್ಮಾಣವಾದ ಮೇಲೂ ಅದು ಮತ್ತೊಂದು ಸಂಘರ್ಷಕ್ಕೆ ದಾರಿಯಾಗುತ್ತದಾ? ಕಾದು ನೋಡಬೇಕಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:48 am, Sat, 7 January 23

ಇಸ್ಕಾನ್​​ನ ಸಸ್ಯಾಹಾರಿ ಹೋಟೆಲ್ ಒಳಗೆ ಚಿಕನ್ ತಿಂದ ಯುವಕ
ಇಸ್ಕಾನ್​​ನ ಸಸ್ಯಾಹಾರಿ ಹೋಟೆಲ್ ಒಳಗೆ ಚಿಕನ್ ತಿಂದ ಯುವಕ
‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ