AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Orchid International School: ಬೆಂಗಳೂರಿನಲ್ಲಿ 17 ಆರ್ಕಿಡ್ ಶಾಲೆಗಳಿಗೆ CBSE ಮಾನ್ಯತೆ ಇಲ್ಲ, ಶಾಲೆಗಳ ಪಟ್ಟಿ ಬಹಿರಂಗ, ಪೋಷಕರ ಆಕ್ರೋಶ ಸ್ಫೋಟ

ಸಿಬಿಎಸ್​ಇ ಅನುಮೋದನೆ ಪಡೆಯದಿದ್ದರೂ ಪೋಷಕರಿಂದ ಹಣ ಸುಲಿಗೆ ಮಾಡಲಾಗುತ್ತಿದೆ. ಮಕ್ಕಳ ಪ್ರವೇಶಾತಿ ವೇಳೆ CBSE ಪಠ್ಯಕ್ರಮವೆಂದು ಹೆಚ್ಚಿನ ಶುಲ್ಕ ಸಂಗ್ರಹಿಸಿದ್ದಾರೆ.

Orchid International School: ಬೆಂಗಳೂರಿನಲ್ಲಿ 17 ಆರ್ಕಿಡ್ ಶಾಲೆಗಳಿಗೆ  CBSE ಮಾನ್ಯತೆ ಇಲ್ಲ, ಶಾಲೆಗಳ ಪಟ್ಟಿ ಬಹಿರಂಗ, ಪೋಷಕರ ಆಕ್ರೋಶ ಸ್ಫೋಟ
ಆರ್ಕಿಡ್ ಶಾಲೆ ಮುಂದೆ ಪೋಷಕರ ಆಕ್ರೋಶ
TV9 Web
| Edited By: |

Updated on:Jan 30, 2023 | 10:35 AM

Share

ಬೆಂಗಳೂರು: ಆರ್ಕಿಡ್ ಶಾಲೆ ವಿರುದ್ಧ(Orchid International School) ಸಾಲು ಸಾಲು ಆರೋಪಗಳು ಕೇಳಿ ಬರುತ್ತಿವೆ. ಸಿಬಿಎಸ್​ಇ ಸಿಲಬಸ್​ ಹೆಸರಿನಲ್ಲಿ ವಂಚಿಸಿದ್ದ ಆರ್ಕಿಡ್ ಇಂಟರ್​ನ್ಯಾಷನಲ್​ ಶಾಲೆ ವಿರುದ್ಧ ಪೋಷಕರು ಪ್ರತಿಭಟನೆ(Parents Protest) ನಡೆಸಿದ್ದಾರೆ. ಅನ್ನಪೂರ್ಣೇಶ್ವರಿನಗರ, ಬೆಳ್ಳಂದೂರು ಬಳಿಕ ಮಹಾಲಕ್ಷ್ಮೀ ಲೇಔಟ್​ನ ಆರ್ಕಿಡ್ ಶಾಲೆ ಎದುರು ಪೋಷಕರ ಗಲಾಟೆ ಜೋರಾಗಿದೆ.

ಸಿಬಿಎಸ್​ಇ ಅನುಮೋದನೆ ಪಡೆಯದಿದ್ದರೂ ಪೋಷಕರಿಂದ ಹಣ ಸುಲಿಗೆ ಮಾಡಲಾಗುತ್ತಿದೆ. ಮಕ್ಕಳ ಪ್ರವೇಶಾತಿ ವೇಳೆ CBSE ಪಠ್ಯಕ್ರಮವೆಂದು ಹೆಚ್ಚಿನ ಶುಲ್ಕ ಸಂಗ್ರಹಿಸಿದ್ದಾರೆ. ಈಗ ಸ್ಟೇಟ್ ಸಿಲಬಸ್​​ನಲ್ಲೇ ಪರೀಕ್ಷೆ ಬರೆಸಲು ಶಾಲೆ ಮುಂದಾಗಿದೆ. ಸ್ಟೇಟ್ ಸಿಲಬಸ್​ನಲ್ಲೇ ಪರೀಕ್ಷೆ ಬರೆಯುವಂತಿದ್ದರೆ ಯಾಕೆ ಫೀಸ್​ ಕಟ್ಬೇಕು. ನಾವ್ಯಾಕೆ ಲಕ್ಷ ಲಕ್ಷ ಫೀಸ್​ ಕಟ್ಟಬೇಕೆಂದು ಶಾಲೆ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ದಿನದಿಂದ ದಿನಕ್ಕೆ ಆರ್ಕಿಡ್ ಇಂಟರ್​ನ್ಯಾಷನಲ್ ಶಾಲೆ​ಯ ಕಳ್ಳಾಟ ಬಯಲಾಗುತ್ತಿದೆ. ಬೆಂಗಳೂರಿನ 17 ಆರ್ಕಿಡ್ ಶಾಲೆಗಳಿಗೆ ಸಿಬಿಎಸ್​ಇ ಮಾನ್ಯತೆ ಇಲ್ಲ.

ಇದನ್ನೂ ಓದಿ: ಸಿಬಿಎಸ್​ಸಿ ಸಿಲೆಬಸ್ ಪಾಠ ಮಾಡಿ, ಈಗ ರಾಜ್ಯ ಪಠ್ಯಕ್ರಮಕ್ಕೆ ಎಕ್ಸಾಂ: ಆರ್ಕಿಡ್ ಶಾಲೆ ವಿರುದ್ಧ ಪೋಷಕರ ಆಕ್ರೋಶ

ಮಕ್ಕಳಿಗೆ ಎಲ್‌ಕೆಜಿಯಿಂದ 12th ಸ್ಟ್ಯಾಂಡರ್ಡ್‌ವರೆಗೂ ಬೆಸ್ಟ್ ಎಜುಕೇಷನ್ ಕೊಡ್ತೀವಿ ಅಂತಾ ಅನ್ನಪೂರ್ಣೇಶ್ವರಿ ಲೇಔಟ್‌ನಲ್ಲಿರೋ ಆರ್ಕಿಡ್ ಇಂಟರ್‌ ನ್ಯಾಷನಲ್ ಶಾಲೆ ಪುಂಗಿ ಬಿಟ್ಟಿತ್ತು. ಆದ್ರೆ ಸರ್ಕಾರ ಐದು ಮತ್ತು 8ನೇ ತರಗತಿಗೆ ಪಬ್ಲಿಕ್ ಎಕ್ಸಾಂ ಮಾಡ್ತೀವಿ ಅಂತಿದ್ದಂಗೆ ಈ ಶಾಲೆಯ ಬಣ್ಣ ಬಯಲಾಗಿದೆ. ಈ ಶಾಲೆಯಲ್ಲಿರೋದು ಸಿಬಿಎಸ್‌ಇ ಅಲ್ಲ. ಸ್ಟೇಟ್ ಸಿಲೆಬಸ್ ಅಂತಾ ಅನ್ನೋದು ಜಗಜ್ಜಾಹೀರಾಗಿದೆ. ಇದರಿಂದ ಕೆರಳಿದ ಪೋಷಕರು ಶಾಲೆ ಮುಂದೆ ಪ್ರತಿಭಟನೆ ನಡೆಸಿದ್ರು. ಆದ್ರಿಗ ಈ ಒಂದು ಶಾಲೆಯಲ್ಲ. ಇದೀಗ 17 ಶಾಲೆಗಳ ನಿಜ ಬಣ್ಣ ಪೋಷಕರ ನಿದ್ದೆಗೆಡಿಸಿದೆ.

ಬಿಟಿಎಂ ಲೇಔಟ್, ಮಹಾಲಕ್ಷ್ಮೀಲೇಔಟ್, ನಾಗರಭಾವಿ ಸೇರಿದಂತೆ ಬೆಂಗಳೂರಿನಲ್ಲಿ 21 ಆರ್ಕಿಡ್ ಇಂಟರ್‌ನ್ಯಾಷನಲ್ ಸ್ಕೂಲ್‌ಗಳಿವೆ. ಆದ್ರೆ ಈ 21 ಶಾಲೆಗಳ ಪೈಕಿ ಕೇವಲ 4 ಶಾಲೆಗಳಿಗೆ ಅಂದ್ರೆ ಸಿ.ವಿ ರಾಮನ್ ನಗರ, ಜಾಲಹಳ್ಳಿ , ಮೈಸೂರು ರೋಡ್ ಹಾಗೂ ಸರ್ಜಾಪುರದಲ್ಲಿರೋ ಆರ್ಕಿಡ್ ಶಾಲೆಗಳಿಗೆ ಮಾತ್ರ CBSE ಮಾನ್ಯತೆ ಸಿಕ್ಕಿದೆ. ಇನ್ನುಳಿದ 17 ಶಾಲೆಗಳಿಗೆ CBSE ಮಾನ್ಯತೆಯೇ ಸಿಕ್ಕಿಲ್ಲ. ಆದ್ರೂ ಶಾಲಾ ಆಡಳಿತ ಮಂಡಳಿ CBSE ಪಠ್ಯಕ್ರಮ ಅಂತಾ ಹೇಳಿ ಪೋಷಕರಿಂದ ಲಕ್ಷ ಲಕ್ಷ ಫೀಸ್ ವಸೂಲಿ ಮಾಡಿ, ಅವರಿಗೆಲ್ಲಾ ಮಕ್ಮಲ್ ಟೋಪಿ ಹಾಕಿರೋದು ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ CBSC ಮಾನ್ಯತೆ ಇಲ್ಲದ ಆರ್ಕಿಡ್ ಶಾಲೆಗಳು

  1. ಆರ್ಕಿಡ್ ಬನ್ನೇರುಘಟ – Non-Affiliated
  2. ಆರ್ಕಿಡ್ ಬಿಟಿಎಮ್ ಲೇಔಟ್
  3. ಆರ್ಕಿಡ್ ಹರಳೂರು
  4. ಆರ್ಕಿಡ್ ಹೆಣ್ಣುರು
  5. ಆರ್ಕಿಡ್ ಹೊರಮಾವು
  6. ಜೆ ಪಿ ನಗರ ಆರ್ಕಿಡ್
  7. ಆರ್ಕಿಡ್ ಕಾಡುಗೋಡಿ
  8. ಆರ್ಕಿಡ್ ಮಹಾಲಕ್ಷ್ಮಿ ಲೇಔಟ್
  9. ಆರ್ಕಿಡ್ ಮೆಜೆಸ್ಟಿಕ್
  10. ಆರ್ಕಿಡ್ ಮಾಗಡಿ ರೋಡ್
  11. ಆರ್ಕಿಡ್ ಕನಕಪುರ ರೋಡ್
  12. ಆರ್ಕಿಡ್ ನಾಗರಬಾವಿ
  13. ಆರ್ಕಿಡ್ ಪಣತೂರ
  14. ಆರ್ಕಿಡ್ ರಾಜಾಜಿನಗರ
  15. ಆರ್ಕಿಡ್ ಸಹಕಾರ ನಗರ
  16. ಆರ್ಕಿಡ್ ವಿಜಯನಗರ
  17. ಆರ್ಕಿಡ್ ಯಲಹಂಕ

CBSC ಮಾನ್ಯತೆ ಹೊಂದಿರುವ 4 ಆರ್ಕಿಡ್ ಶಾಲೆಗಳು

  1. ಆರ್ಕಿಡ್ ಸಿವಿ ರಾಮನ್ ನಗರ – Affiliated with CBSE
  2. ಆರ್ಕಿಡ್ ಜಾಲಹಳ್ಳಿ
  3. ಆರ್ಕಿಡ್ ಮೈಸೂರು ರೋಡ್
  4. ಆರ್ಕಿಡ್ ಸರ್ಜಾಪುರಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:31 am, Mon, 30 January 23

Follow Us
Web contact
Web contact

TV9 Kannada

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ