ಇದ್ದ ನಿರೀಕ್ಷೆಯೇ ಒಂದು, ಹೈಕಮಾಂಡ್​ ಹೇಳಿದ್ದೇ ಮತ್ತೊಂದು: ಸಿದ್ದರಾಮಯ್ಯಗೆ ಭರ್ಜರಿ ಶಾಕ್​​ ಕೊಟ್ಟ ರಾಹುಲ್​​ ಗಾಂಧಿ

ಹೈಕಮಾಂಡ್​​ ಬುಲಾವ್​​ ಹಿನ್ನೆಲೆ ಸಚಿವ ಸಂಪುಟ ಪುನಾರಚನೆ ಮತ್ತು ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ ಸಂಬಂಧ ಚರ್ಚೆಗೆ ತಯಾರಿಯಲ್ಲಿ ತೆರಳಿದ್ದ ಸಿಎಂ ಸಿದ್ದರಾಮಯ್ಯನವರಿಗೆ ಹೈಕಮಾಂಡ್​​ ಭರ್ಜರಿ ಶಾಕ್​​ ಕೊಟ್ಟಿದೆ. ನೀವು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಹುಲ್​​ ಗಾಂಧಿ ಖಡಕ್​​ ಆಗಿ ತಿಳಿಸಿದ್ದು, ಸಿದ್ದರಾಮಯ್ಯ ಅವರ ಯಾವುದೇ ಮನವೊಲಿಕೆಗೂ ಅವರು ಒಪ್ಪಿಲ್ಲ ಎನ್ನಲಾಗಿದೆ.

ಇದ್ದ ನಿರೀಕ್ಷೆಯೇ ಒಂದು, ಹೈಕಮಾಂಡ್​ ಹೇಳಿದ್ದೇ ಮತ್ತೊಂದು: ಸಿದ್ದರಾಮಯ್ಯಗೆ ಭರ್ಜರಿ ಶಾಕ್​​ ಕೊಟ್ಟ ರಾಹುಲ್​​ ಗಾಂಧಿ
ಸಿದ್ದರಾಮಯ್ಯ
Image Credit source: PTI
Edited By:

Updated on: May 27, 2026 | 4:59 PM

ಬೆಂಗಳೂರು, ಮೇ 27: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡವಂತೆ ಹೈಕಮಾಂಡ್​​ ಸೂಚನೆ ನೀಡಿರುವ ಬಗ್ಗೆ ಸಿದ್ದರಾಮಯ್ಯ (Siddaramaiah) ಆಪ್ತರ ಬಳಿ ಹೇಳಿಕೊಂಡಿರುವ ನಡುವೆಯೇ ರಾಹುಲ್​​ ಗಾಂಧಿ ಜೊತೆಗಿನ ಒನ್​​ ಟು ಒನ್​​ ಮೀಟಿಂಗ್​​ ವೇಳೆ ಚರ್ಚೆಯಾಗಿದ್ದೇನು ಎಂಬ ವಿಚಾರ ಬಹಿರಂಗಗೊಂಡಿದೆ. ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಮಾತುಕತೆಯ ನಿರೀಕ್ಷೆಯಲ್ಲಿದ್ದ ಸಿದ್ದರಾಮಯ್ಯಗೆ ರಾಹುಲ್​​ ಶಾಕ್​​ ಕೊಟ್ಟಿದ್ದು, ವರಿಷ್ಠ ನಾಯಕನ ಮಾತು ಕೇಳಿ ಸಿಎಂ ಅಕ್ಷರಶಃ ಶಾಕ್​​ ಆಗಿದ್ದಾರೆ ಎನ್ನಲಾಗಿದೆ.

ಮುಖ್ಯಾಂಶಗಳು

  • ಸಚಿವ ಸಂಪುಟ ವಿಚಾರವಾಗಿ ಚರ್ಚೆ ನಿರೀಕ್ಷೆಯಲ್ಲಿದ್ದ ಸಿಎಂ
  • ರಾಹುಲ್​​ ಗಾಂಧಿ ಮಾತು ಕೇಳೆ ಸಿಎಂ ಸಿದ್ದರಾಮಯ್ಯಗೆ ಶಾಕ್
  • ಮೀಟಿಂಗ್​​ ವೇಳೆ ರಾಹುಲ್​​ ಗಾಂಧಿಯಿಂದ ಖ​​ಡಕ್​ ಸೂಚನೆ

ಸಿದ್ದರಾಮಯ್ಯಗೆ ರಾಹುಲ್​​ ಗಾಂಧಿ ಹೇಳಿದ್ದೇನು?

ಸಂಪುಟ ಪುನಾರಚನೆ ಮತ್ತು ನೂತನ ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಬಗ್ಗೆ ರಾಹುಲ್​​ ಗಾಂಧಿ ಮುಂದೆ ಪ್ರಸ್ತಾಪ ಮಾಡಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದರು. ಇದೇ ವಿಚಾರವಾಗಿ ಮಾತುಕತೆಯ ಆರಂಭದಲ್ಲಿ ರಾಹುಲ್ ಎದುರು ಆರಂಭಿಕ ಪ್ರಸ್ತಾವನೆಯನ್ನೂ ಇಟ್ಟಿದ್ದರು. ಆದರೆ ಈ ವೇಳೆ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ನಿರ್ಧಾರ ಏನೆಂಬುದನ್ನು ರಾಹುಲ್ ಗಾಂಧಿ ನೇರವಾಗಿ ತಿಳಿಸಿದ್ದಾರೆ. ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಇದು ಪಕ್ಷದ ಹೈಕಮಾಂಡ್ ನ ನಿರ್ಧಾರ ಎಂದು ರಾಹುಲ್​​ ಹೇಳಿದ್ದಾರೆ. ರಾಹುಲ್ ಗಾಂಧಿ ಈ ಮಾತುಗಳನ್ನು ಕೇಳಿ ಸಿದ್ದರಾಮಯ್ಯ ಅರೆಕ್ಷಣ ಗರಬಡಿದವರಂತಾಗಿದ್ದಾರೆ.

ಇದನ್ನೂ ಓದಿ: ಸಿಎಂ ಕುರ್ಚಿ ಬಿಡಲು ಸಿದ್ದರಾಮಯ್ಯ ಕೊನೆಗೂ ಒಪ್ಪಿದ್ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್​​ ಮಾಹಿತಿ

ಮನವೊಲಿಕೆಗೂ ಜಗ್ಗದ ರಾಹುಲ್​​ ಗಾಂಧಿ

ಕೆಲ ಕ್ಷಣಗಳ ಬಳಿಕ ಈ ಸಂಬಂಧ ರಾಹುಲ್ ಮನವೊಲಿಕೆ ಸಿದ್ದರಾಮಯ್ಯ ಯತ್ನಿಸಿದ್ದು, ಚಿಂತನೆಗೆ ಕಾಲವಕಾಶ ನೀಡಿ ಎಂಬ ಮನವಿ ಮುಂದಿಟ್ಟಿದ್ದಾರೆ. ಕನಿಷ್ಠ 15 ದಿನಗಳ ಕಾಲ ಅವಕಾಶ ನೀಡಿ ಎಂದು ಕೇಳಿದ್ದು, ಜಾತಿ ಗಣತಿ ವರದಿ ಅನುಷ್ಠಾನ‌ ನನ್ನ ಕನಸು. ಹೀಗಾಗಿ ವರದಿ ಸ್ವೀಕರಿಸಲು ಅವಕಾಶ ಕೊಡುವಂತೆ ಕೇಳಿಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯ ಮನವಿ ನಿರಾಕರಸಿರುವ ರಾಹುಲ್ ಗಾಂಧಿ, ಹೆಚ್ಚಿನ ಸಮಯ ನೀಡಲು ಸಾಧ್ಯವಿಲ್ಲ. ಎರಡು ದಿನಗಳ ಒಳಗೆ ರಾಜೀನಾಮೆ ನೀಡಿ ಎಂದು ಖಡಕ್ ಆಗಿ ಹೇಳಿದ್ದಾರೆ. ಈ ವೇಳೆ ರಾಹುಲ್ ಮಾತಿಗೆ ಸಿದ್ದರಾಮಯ್ಯ ಕೂಡ ಸಮ್ಮತಿ ಸೂಚಿಸಿ ಬಂದಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us