Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನ ತೋರಿಸಲು ಮನೆ ಕರೆಯಿಸಿದ ಮಾಲೀಕ, ಬಾತ್​ ರೂಮ್​ಗೆ ಹೋಗಿ ಬರುವಷ್ಟರಲ್ಲೇ ವ್ಯಕ್ತಿ ಚಿನ್ನದೊಂದಿಗೆ ಪರಾರಿ

ಗೋಲ್ಡ್ ಡಿಸೈನರ್ ಆಗಿರುವ ಮೋಹನ್ ಲಾಲ್​ ಚಿನ್ನದ ವ್ಯಾಪಾರಿ ರಾಮ್ ಲಾಲ್ ಮನೆಯಲ್ಲಿ 84 ಲಕ್ಷ ಬೆಲೆ ಬಾಳುವ 1.399 ಕೆಜಿ ಚಿನ್ನವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ . ಸದ್ಯ ಸಂಪಂಗಿರಾಮನಗರ ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿ ಆರೋಪಿಯನ್ನು ಬಂಧಿಸಿದ್ದಾರೆ. ಹಾಗೂ ಆರೋಪಿಯಿಂದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಚಿನ್ನ ತೋರಿಸಲು ಮನೆ ಕರೆಯಿಸಿದ ಮಾಲೀಕ, ಬಾತ್​ ರೂಮ್​ಗೆ ಹೋಗಿ ಬರುವಷ್ಟರಲ್ಲೇ ವ್ಯಕ್ತಿ ಚಿನ್ನದೊಂದಿಗೆ ಪರಾರಿ
ಸಂಪಂಗಿರಾಮನಗರ ಪೊಲೀಸ್ ಠಾಣೆ
Follow us
Jagadisha B
| Updated By: ಆಯೇಷಾ ಬಾನು

Updated on: Nov 07, 2023 | 1:22 PM

ಬೆಂಗಳೂರು, ನ.07: ಸಂಪಂಗಿರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (Sampangi Rama Nagar Police Station) ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೋಹನ್ ಲಾಲ್ ಬಂಧಿತ ಆರೋಪಿ. ಗೋಲ್ಡ್ ಡಿಸೈನರ್ ಆಗಿರುವ ಮೋಹನ್ ಲಾಲ್​ ಚಿನ್ನದ ವ್ಯಾಪಾರಿ ರಾಮ್ ಲಾಲ್ ಮನೆಯಲ್ಲಿ 84 ಲಕ್ಷ ಬೆಲೆ ಬಾಳುವ 1.399 ಕೆಜಿ ಚಿನ್ನವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ (Gold Theft). ಸದ್ಯ ಸಂಪಂಗಿರಾಮನಗರ ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿ ಆರೋಪಿಯನ್ನು ಬಂಧಿಸಿದ್ದಾರೆ. ಹಾಗೂ ಆರೋಪಿಯಿಂದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಗೋಲ್ಡ್ ಡಿಸೈನರ್ ಆಗಿರುವ ಮೋಹನ್ ಲಾಲ್​ಗೂ​ ಚಿನ್ನದ ವ್ಯಾಪಾರಿ ರಾಮ್ ಲಾಲ್​ ನಡುವೆ ಹಲವು ವರ್ಷಗಳಿಂದಲೂ ವ್ಯವಹಾರ ನಡೆಯುತ್ತಿತ್ತು. ಚಿನ್ನದ ವ್ಯಾಪಾರಿ ರಾಮ್ ಲಾಲ್ ಗಟ್ಟಿ ಚಿನ್ನವನ್ನು ನೀಡಿ ಡಿಸೈನ್ ಮಾಡಲು ಮೋಹನ್ ಲಾಲ್​ಗೆ ಹೇಳುತ್ತಿದ್ದರು. ಅದರಂತೆ ರಾಮ್ ಲಾಲ್ ಅವರು ಈ ಹಿಂದೆ ಮೋಹನ್ ಲಾಲ್​ಗೆ ನೀಡಿದ್ದ 2.931 ಕೆಜಿ ಚಿನ್ನದ ಬಗ್ಗೆ ಮಾತನಾಡುವ ವಿಚಾರವಾಗಿ ಮನೆಗೆ ಕರೆಸಿದ್ದರು. ಈ ವೇಳೆ ರಾಮ್​ ಲಾಲ್ ಬಾತ್ ರೂಂಗೆ ಹೋಗಿದ್ದು ಸಮಯ ನೋಡಿಕೊಂಡು ಮೋಹನ್ ಲಾಲ್ ಮನೆಯಲ್ಲಿದ್ದ 84 ಲಕ್ಷ ಬೆಲೆ ಬಾಳುವ 1.399 ಕೆ.ಜಿ. ಚಿನ್ನವನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಬಾತ್ ರೂಂನಿಂದ ಹೊರಗೆ ಬಂದು ನೋಡಿದ ರಾಮ್​ ಲಾಲ್​ ಶಾಕ್ ಆಗಿದ್ದು ನಂಬಿಕೆ ದ್ರೋಹ ಮಾಡಿದ ಮೋಹನ್ ವಿರುದ್ಧ ಸಂಪಂಗಿರಾಮನಗರದಲ್ಲಿ ದೂರು ದಾಖಲಿಸಿದ್ದರು. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ 1.399 ಕೆಜಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಜಿಂಕೆ ಕೊಂಬು, ಆನೆ ದಂತ, ಎರಡು ತಲೆ ಹಾವು ಸೇಲ್​ ಮಾಡುತ್ತಿದ್ದ ಐವರು ಅರೆಸ್ಟ್

ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಅರೆಸ್ಟ್

ತುಮಕೂರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಇಎನ್​ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಮನ್, ಮುದಾಸೀರ್ ಅಹ್ಮದ್ ಷರೀಫ್, ಪ್ರಶಾಂತ್​, ಮುಬಾರಕ್ ಪಾಷಾ ಬಂಧಿತರು. ಆರೋಪಿಗಳಿಂದ 1.20 ಲಕ್ಷ ಮೌಲ್ಯದ 4 ಕೆಜಿ 330 ಗ್ರಾಂ ಒಣಗಿದ  ಗಾಂಜಾ ಹಾಗೂ ಒಂದು ಕಾರು ವಶಕ್ಕೆ ಪಡೆಯಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​