AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನ ತೋರಿಸಲು ಮನೆ ಕರೆಯಿಸಿದ ಮಾಲೀಕ, ಬಾತ್​ ರೂಮ್​ಗೆ ಹೋಗಿ ಬರುವಷ್ಟರಲ್ಲೇ ವ್ಯಕ್ತಿ ಚಿನ್ನದೊಂದಿಗೆ ಪರಾರಿ

ಗೋಲ್ಡ್ ಡಿಸೈನರ್ ಆಗಿರುವ ಮೋಹನ್ ಲಾಲ್​ ಚಿನ್ನದ ವ್ಯಾಪಾರಿ ರಾಮ್ ಲಾಲ್ ಮನೆಯಲ್ಲಿ 84 ಲಕ್ಷ ಬೆಲೆ ಬಾಳುವ 1.399 ಕೆಜಿ ಚಿನ್ನವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ . ಸದ್ಯ ಸಂಪಂಗಿರಾಮನಗರ ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿ ಆರೋಪಿಯನ್ನು ಬಂಧಿಸಿದ್ದಾರೆ. ಹಾಗೂ ಆರೋಪಿಯಿಂದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಚಿನ್ನ ತೋರಿಸಲು ಮನೆ ಕರೆಯಿಸಿದ ಮಾಲೀಕ, ಬಾತ್​ ರೂಮ್​ಗೆ ಹೋಗಿ ಬರುವಷ್ಟರಲ್ಲೇ ವ್ಯಕ್ತಿ ಚಿನ್ನದೊಂದಿಗೆ ಪರಾರಿ
ಸಂಪಂಗಿರಾಮನಗರ ಪೊಲೀಸ್ ಠಾಣೆ
ಜಗದೀಶ ಬಿ.
| Edited By: ಆಯೇಷಾ ಬಾನು|

Updated on: Nov 07, 2023 | 1:22 PM

Share

ಬೆಂಗಳೂರು, ನ.07: ಸಂಪಂಗಿರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (Sampangi Rama Nagar Police Station) ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೋಹನ್ ಲಾಲ್ ಬಂಧಿತ ಆರೋಪಿ. ಗೋಲ್ಡ್ ಡಿಸೈನರ್ ಆಗಿರುವ ಮೋಹನ್ ಲಾಲ್​ ಚಿನ್ನದ ವ್ಯಾಪಾರಿ ರಾಮ್ ಲಾಲ್ ಮನೆಯಲ್ಲಿ 84 ಲಕ್ಷ ಬೆಲೆ ಬಾಳುವ 1.399 ಕೆಜಿ ಚಿನ್ನವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ (Gold Theft). ಸದ್ಯ ಸಂಪಂಗಿರಾಮನಗರ ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿ ಆರೋಪಿಯನ್ನು ಬಂಧಿಸಿದ್ದಾರೆ. ಹಾಗೂ ಆರೋಪಿಯಿಂದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಗೋಲ್ಡ್ ಡಿಸೈನರ್ ಆಗಿರುವ ಮೋಹನ್ ಲಾಲ್​ಗೂ​ ಚಿನ್ನದ ವ್ಯಾಪಾರಿ ರಾಮ್ ಲಾಲ್​ ನಡುವೆ ಹಲವು ವರ್ಷಗಳಿಂದಲೂ ವ್ಯವಹಾರ ನಡೆಯುತ್ತಿತ್ತು. ಚಿನ್ನದ ವ್ಯಾಪಾರಿ ರಾಮ್ ಲಾಲ್ ಗಟ್ಟಿ ಚಿನ್ನವನ್ನು ನೀಡಿ ಡಿಸೈನ್ ಮಾಡಲು ಮೋಹನ್ ಲಾಲ್​ಗೆ ಹೇಳುತ್ತಿದ್ದರು. ಅದರಂತೆ ರಾಮ್ ಲಾಲ್ ಅವರು ಈ ಹಿಂದೆ ಮೋಹನ್ ಲಾಲ್​ಗೆ ನೀಡಿದ್ದ 2.931 ಕೆಜಿ ಚಿನ್ನದ ಬಗ್ಗೆ ಮಾತನಾಡುವ ವಿಚಾರವಾಗಿ ಮನೆಗೆ ಕರೆಸಿದ್ದರು. ಈ ವೇಳೆ ರಾಮ್​ ಲಾಲ್ ಬಾತ್ ರೂಂಗೆ ಹೋಗಿದ್ದು ಸಮಯ ನೋಡಿಕೊಂಡು ಮೋಹನ್ ಲಾಲ್ ಮನೆಯಲ್ಲಿದ್ದ 84 ಲಕ್ಷ ಬೆಲೆ ಬಾಳುವ 1.399 ಕೆ.ಜಿ. ಚಿನ್ನವನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಬಾತ್ ರೂಂನಿಂದ ಹೊರಗೆ ಬಂದು ನೋಡಿದ ರಾಮ್​ ಲಾಲ್​ ಶಾಕ್ ಆಗಿದ್ದು ನಂಬಿಕೆ ದ್ರೋಹ ಮಾಡಿದ ಮೋಹನ್ ವಿರುದ್ಧ ಸಂಪಂಗಿರಾಮನಗರದಲ್ಲಿ ದೂರು ದಾಖಲಿಸಿದ್ದರು. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ 1.399 ಕೆಜಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಜಿಂಕೆ ಕೊಂಬು, ಆನೆ ದಂತ, ಎರಡು ತಲೆ ಹಾವು ಸೇಲ್​ ಮಾಡುತ್ತಿದ್ದ ಐವರು ಅರೆಸ್ಟ್

ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಅರೆಸ್ಟ್

ತುಮಕೂರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಇಎನ್​ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಮನ್, ಮುದಾಸೀರ್ ಅಹ್ಮದ್ ಷರೀಫ್, ಪ್ರಶಾಂತ್​, ಮುಬಾರಕ್ ಪಾಷಾ ಬಂಧಿತರು. ಆರೋಪಿಗಳಿಂದ 1.20 ಲಕ್ಷ ಮೌಲ್ಯದ 4 ಕೆಜಿ 330 ಗ್ರಾಂ ಒಣಗಿದ  ಗಾಂಜಾ ಹಾಗೂ ಒಂದು ಕಾರು ವಶಕ್ಕೆ ಪಡೆಯಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!