AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕೇಕೆ! ಇಂದಿನಿಂದ 15 ದಿನ ಶಾಲೆ-ಕಾಲೇಜು ಬಂದ್: ಖಾಸಗಿ ಶಾಲಾ ಒಕ್ಕೂಟ ಕಿಡಿ, ಪಾಳಿಯಲ್ಲಿ ಶಾಲೆ ನಡೆಸಲು ಮನವಿ

ಕೊರೊನಾ ಮೊದಲ ಮತ್ತು ಎರಡನೇ ಅಲೆಯಲ್ಲಿ 2 ವರ್ಷ ಶಾಲೆಗಳು ಕ್ಲೋಸ್ ಆಗಿದ್ದವು. ನಾಲ್ಕು ತಿಂಗಳು.. ಜಸ್ಟ್ ನಾಲ್ಕು ತಿಂಗಳ ಹಿಂದಷ್ಟೇ ಆನ್ಲೈನ್ ಕ್ಲಾಸ್ಗೆ ಬೈ ಹೇಳಿ ಶಾಲೆಗೆ ಬರೋಕೆ ಶುರು ಮಾಡಿದ್ರು. ಆದ್ರೀಗ, ಶಾಲೆಗಳ ಮೇಲೆ ಮತ್ತೆ ಕೊರೊನಾ, ಒಮಿಕ್ರಾನ್ ಕರಿನೆರಳು ಬಿದ್ದಿದೆ. ಮಕ್ಕಳು ಮನೆಯಲ್ಲೇ ಇರ್ಬೇಕಾದ ಪರಿಸ್ಥಿತಿ ಬಂದಿದೆ.

ಕೊರೊನಾ ಕೇಕೆ! ಇಂದಿನಿಂದ 15 ದಿನ ಶಾಲೆ-ಕಾಲೇಜು ಬಂದ್: ಖಾಸಗಿ ಶಾಲಾ ಒಕ್ಕೂಟ ಕಿಡಿ, ಪಾಳಿಯಲ್ಲಿ ಶಾಲೆ ನಡೆಸಲು ಮನವಿ
ಪ್ರಾತಿನಿಧಿಕ ಚಿತ್ರ
TV9 Web
| Updated By: ಸಾಧು ಶ್ರೀನಾಥ್​|

Updated on:Jan 06, 2022 | 10:06 AM

Share

ಬೆಂಗಳೂರು: ಮಹಾಮಾರಿ ಕೊರೊನಾ ಒಮಿಕ್ರಾನ್ ಆತಂಕ ಹಿನ್ನೆಲೆ ಬೆಂಗಳೂರಿನಲ್ಲಿ ನೈಟ್ಕರ್ಫ್ಯೂ, ವೀಕೆಂಡ್ ಕರ್ಫ್ಯೂ, 50:50 ರೂಲ್ಸ್ ಜೊತೆಗೆ ಇಂದಿನಿಂದ ಇನ್ನೆರಡು ವಾರ ಎಲ್ಲಾ ಶಾಲಾ ಕಾಲೇಜುಗಳು ಬಂದ್ ಆಗಲಿವೆ. LKG & UKG, 1 ರಿಂದ 9ನೇ ತರಗತಿ ಸೇರಿದಂತೆ ಎಲ್ಲಾ ಪದವಿ ತರಗತಿಗಳು ಕ್ಲೋಸ್ ಆಗಲಿದ್ದು 2 ವಾರಗಳವರೆಗೆ ಈ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಪಾಠ ನಡೆಯಲಿದೆ. ಆದ್ರೆ, 10ನೇ ತರಗತಿ ಹಾಗೂ ಪ್ರಥಮ, ದ್ವಿತೀಯ ಪಿಯುಸಿ ಕ್ಲಾಸ್ ನಡೆಯುತ್ತೆ. ಅದ್ರಂತೆ ಮೆಡಿಕಲ್, ಪ್ಯಾರಾ ಮೆಡಿಕಲ್ ಕಾಲೇಜುಗಳ ಕ್ಲಾಸ್ ನಡೆಯುತ್ತೆ. ಸದ್ಯ ಸರ್ಕಾರದ ವಿರುದ್ಧ ಖಾಸಗಿ ಶಾಲಾ ಒಕ್ಕೂಟ ಗರಂ ಆಗಿದೆ.

ಕೊರೊನಾ ಮೊದಲ ಮತ್ತು ಎರಡನೇ ಅಲೆಯಲ್ಲಿ 2 ವರ್ಷ ಶಾಲೆಗಳು ಕ್ಲೋಸ್ ಆಗಿದ್ದವು. ನಾಲ್ಕು ತಿಂಗಳು.. ಜಸ್ಟ್ ನಾಲ್ಕು ತಿಂಗಳ ಹಿಂದಷ್ಟೇ ಆನ್ಲೈನ್ ಕ್ಲಾಸ್ಗೆ ಬೈ ಹೇಳಿ ಶಾಲೆಗೆ ಬರೋಕೆ ಶುರು ಮಾಡಿದ್ರು. ಆದ್ರೀಗ, ಶಾಲೆಗಳ ಮೇಲೆ ಮತ್ತೆ ಕೊರೊನಾ, ಒಮಿಕ್ರಾನ್ ಕರಿನೆರಳು ಬಿದ್ದಿದೆ. ಮಕ್ಕಳು ಮನೆಯಲ್ಲೇ ಇರ್ಬೇಕಾದ ಪರಿಸ್ಥಿತಿ ಬಂದಿದೆ.

ಮೊದಲ ಹಂತದಲ್ಲಿ 2021 ಆ.23 ರಿಂದ 9,10 ಮತ್ತು ಪಿಯುಸಿ ತರಗತಿಗಳನ್ನ ಶಿಕ್ಷಣ ಇಲಾಖೆ ಆರಂಭಿಸಿತ್ತು. ಎರಡನೇ ಹಂತದಲ್ಲಿ 2021 ಸೆ.6ರಿಂದ 6,7 ಮತ್ತು 8ನೇ ತರಗತಿ ಆರಂಭಗೊಂಡಿತ್ತು. ಮೂರನೇ ಹಂತದಲ್ಲಿ 2021 ಅ.18ರಿಂದ 1 ರಿಂದ 5ನೇ ತರಗತಿ ಆರಂಭವಾಗಿತ್ತು. ಇದೀಗ ಮತ್ತೆ ಇಂದಿನಿಂದ 1 ರಿಂದ 9ನೇ ತರಗತಿ ಬಂದ್ ಆಗಿದೆ. 2 ವಾರಗಳ ಕಾಲ ಎಲ್ಲ ಸರ್ಕಾರಿ, ಖಾಸಗಿ ಮತ್ತು ಅನುದಾನರಹಿತ ಶಾಲೆಗಳು ಕ್ಲೋಸ್ ಆಗಲಿವೆ. ಒಂದು ವೇಳೆ ಸೋಂಕು ಹೆಚ್ಚಾದ್ರೆ ಮತ್ತಷ್ಟು ದಿನ ಶಾಲೆ ಕ್ಲೋಸ್ ಆಗುವ ಸಾಧ್ಯತೆ ಇದೆ. ಇತರೆ ಜಿಲ್ಲೆಗಳಲ್ಲೂ ಪಾಸಿಟಿವಿ ರೇಟ್ 2ಕ್ಕಿಂತ ಜಾಸ್ತಿಯಾದ್ರೆ ಅಲ್ಲೂ ಇದೇ ಅಸ್ತ್ರ ಪ್ರಯೋಗವಾಗಲಿದೆ.

ಸರ್ಕಾರದ ವಿರುದ್ಧ ಖಾಸಗಿ ಶಾಲಾ ಒಕ್ಕೂಟ ಗರಂ ಇಂದಿನಿಂದ 15 ದಿನ ಶಾಲೆ ಬಂದ್ ಆಗ್ತಿರೋದಕ್ಕೆ ಖಾಸಗಿ ಶಾಲಾ ಒಕ್ಕೂಟ ಆಕ್ರೋಶ ಹೊರ ಹಾಕಿದೆ. ಶಾಲೆ ಓಪನ್ ಆಗಿ 4 ತಿಂಗಳಾಗಿದೆ. ಈಗ ಮತ್ತೆ ಶಾಲಾ ಬಾಗಿಲು ಮುಚ್ಚಿಸಿದ್ರೆ ಕಲಿಕೆಗೆ ತೊಂದರೆ ಆಗುತ್ತೆ. ಎಲ್ಲ ಶಾಲೆಗಳನ್ನ ಬಂದ್ ಮಾಡುವ ಬದಲಿಗೆ, ಸೋಂಕು ಕಾಣಿಸಿಕೊಂಡ ಶಾಲೆಗಳನ್ನ ಮಾತ್ರ ಕ್ಲೋಸ್ ಮಾಡಬೇಕು. ಆನ್ಲೈನ್ ಶಿಕ್ಷಣ ಸಮರ್ಪಕವಾದ ವ್ಯವಸ್ಥೆ ಅಲ್ಲ ಅಂತಾ ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಕಿಡಿಕಾರಿದ್ದಾರೆ.

ಬಂದ್ ಬದಲಿಗೆ ಪರ್ಯಾಯ ಮಾರ್ಗ ಬಳಸುವಂತೆ ಒತ್ತಾಯಿಸಿದ್ದಾರೆ. ಪಾಳಿ ಪದ್ದತಿಯಲ್ಲಿ ಶಾಲೆ ಓಪನ್ಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಸಂಪೂರ್ಣ ಬಂದ್ ನಿಂದ ಶೈಕ್ಷಣಿಕ ವ್ಯವಸ್ಥೆಗೆ ಮಾರಕ. ಹೀಗಾಗಿ ಪಾಳಿ ಪದ್ದತಿಯನ್ನು ಅನುಸರಿಸೊಕೆ ಸರ್ಕಾರಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ಸಲಹೆ ನೀಡಿದೆ. ಇಂದು ಈ ಬಗ್ಗೆ ಮಾತನಾಡಲು ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮುಖ್ಯ ಮಂತ್ರಿಗಳನ್ನ ಭೇಟಿಯಾಗಲಿದ್ದಾರೆ. ಈಗಾಗಲೇ ಶಿಕ್ಷಣ ಸಚಿವರಿಗೂ ಪತ್ರ ಬರೆಯಲಾಗಿದೆ.

ಇತ್ತ ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣ, ಗೋವಾ ರಾಜ್ಯಗಳು ಶಾಲೆಗಳನ್ನ ಬಂದ್ ಮಾಡಿವೆ. ಇವೆಲ್ಲ ಅಂಶಗಳನ್ನ ಗಮನದಲ್ಲಿಟ್ಟುಕೊಂಡು, ಪಾಸಿಟಿವ್ ದರ ಆಧರಿಸಿ ಸಿಲಿಕಾನ್ ಸಿಟಿಯಲ್ಲಿ ಸರ್ಕಾರ ಶಾಲೆಗಳನ್ನ ಬಂದ್ ಮಾಡಿದೆ. ಆದ್ರೆ ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳ ಪಾಸಿಟಿವ್ ರೇಟ್ ಶೇಕಡಾ 2ಕ್ಕಿಂತ ಜಾಸ್ತಿಯಾದ್ರೆ ಅಲ್ಲಿನ ಶಾಲೆಗಳು ಸಹ ಬಂದ್ ಆಗೋ ಎಲ್ಲಾ ಸಾಧ್ಯತೆ ಇದೆ.

ಇದನ್ನೂ ಓದಿ: Chaturvimsati Namas: ಕೇಶವನ 24 ರೂಪಗಳನ್ನು ಅವನ ಆಯುಧಗಳಿಂದ ಗುರುತಿಸಲಾಗುವುದು, ಹೇಗೆ ಗೊತ್ತಾ?

Schools-Colleges Shut In Bengaluru | ಇಂದಿನಿಂದ ಬೆಂಗಳೂರಲ್ಲಿ ಶಾಲಾ-ಕಾಲೇಜು ಬಂದ್

Published On - 7:24 am, Thu, 6 January 22

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?