ಆದಾಗ್ಯೂ ಶನಿ ವಿಗ್ರಹವನ್ನೇ ಕದ್ದಿದ್ದಕ್ಕೆ ಕಾರಣವೇನು ಎಂಬುದು ಗೊತ್ತಾಗಿಲ್ಲ. ಎಲ್ಲ ಬಿಟ್ಟು ಶನಿ ವಿಗ್ರಹವನ್ನೇ ಯಾಕೆ ಹೊತ್ತೊಯ್ದ ಎಂಬುದು ನಿಜಕ್ಕೂ ನಿಗೂಢವಾಗಿದೆ. ಈ ಕುರಿತು ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶನಿ ವಿಗ್ರಹ ಹೊತ್ತೊಯ್ಯುವಾಗ ಪಾದದ ಸ್ವಲ್ಪ ಭಾಗವು ಕಟ್ಟೆ ಭಾಗದಲ್ಲಿಯೇ ಉಳಿದಿದೆ. ಸಂಪೂರ್ಣ ವಿಗ್ರಹ ಕಳವು ಮಾಡಲು ಬಂದು ಮುಕ್ಕಾದ ಶನಿ ವಿಗ್ರಹವನ್ನು ಹೊತ್ತೊಯ್ದಿದ್ದಾನೆ ಎಂಬುದು ಸ್ಪಷ್ಟವಾಗಿದೆ. ಶನಿ ದೇವನ ವಿಗ್ರಹದ ಪಾದದ ಭಾಗ ಕಟ್ಟೆಯಲ್ಲಿಯೇ ಉಳಿದುಕೊಂಡಿದೆ.
ಸಿಸಿಟಿವಿ ಕಂಡಂತೆ.. ಹೇಗಾಯ್ತು ಈ ವಿಗ್ರಹದ ವಿಚಿತ್ರ ಕಳ್ಳತನ?
ಮೊನ್ನೆ ಸೋಮವಾರ ರಾತ್ರಿ 10 ಗಂಟೆಗೆ ಆಟೋದಲ್ಲಿ ಓರ್ವ ವ್ಯಕ್ತಿ ಆಗಮನವಾಗುತ್ತದೆ. ಆಟೋದಿಂದ ಇಳಿಯುವ ಮುನ್ನ ಸುತ್ತಮುತ್ತಲೂ ಪರಿಶೀಲನೆ ನಡೆಸುತ್ತಾನೆ. ಮುಂದೆ.. ಅಶ್ವತ್ಥ ಕಟ್ಟೆ ದೇಗುಲದ ಒಳಗಿರುವ ನವಗ್ರಹ ಕಟ್ಟೆಯತ್ತ ಸಾಗುತ್ತಾನೆ. ಅಲ್ಲಿ ಮತ್ತೊಮ್ಮೆ ಸುತ್ತಮುತ್ತ ಒಮ್ಮೆ ಕಣ್ಣಾಡಿಸಿ, ಕಳ್ಳತನಕ್ಕೆ ಇಳಿಯುತ್ತಾನೆ. ನೇರವಾಗಿ ಶನಿ ವಿಗ್ರಹ ಮಾತ್ರ ಕಿತ್ತುಕೊಳ್ಳುತ್ತಾನೆ. ಅಲ್ಲಿಂದ ಶನಿ ವಿಗ್ರಹವನ್ನು ತಂದು ಆಟೋದಲ್ಲಿಟ್ಟುಕೊಂಡು ಮುಂದೆ ಸಾಗುತ್ತಾನೆ ಈ ವಿಚಿತ್ರ ಆಸಾಮಿ!
ಸಿಲಿಕಾನ್ ಸಿಟಿ ಬೆಂಗಳೂರಲ್ಲಿದ್ದಾನೆ ಖತರ್ನಾಕ್ ಖದೀಮ
Also Read:
ಕೊವಿಡ್ ಮಾರ್ಗಸೂಚಿ ಸಡಿಲಗೊಳಿಸುವುದೋ, ಬಿಗಿಯೋ?: ಗೊಂದಲಾಪುರದಲ್ಲಿ ಬೊಮ್ಮಾಯಿ ಸರ್ಕಾರ, ದಾರಿ ಯಾವುದು?