AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸೌಧದ ಪೂರ್ವ, ಪಶ್ಚಿಮ ದ್ವಾರಗಳಿಗೆ ವಿಶೇಷ ವಾಸ್ತುಶಿಲ್ಪ ಕೆತ್ತಿಸಲು ಮುಂದಾದ ಸ್ಪೀಕರ್ ಯುಟಿ ಖಾದರ್

ಐತಿಹಾಸಿಕ ಹಿನ್ನೆಲೆಯುಳ್ಳ ವಿಧಾನಸೌಧದ ಪೂರ್ವದ್ವಾರ, ಪಶ್ಚಿಮ ದ್ವಾರಗಳಿಗೆ ಹೊರ ಮೆರುಗು ಬರಲಿದೆ. ಎರಡು ದ್ವಾರಗಳಲ್ಲಿ ವಿಶೇಷ ವಾಸ್ತುಶಿಲ್ಪ ಕೆತ್ತಿಸಲು ಸ್ಪೀಕರ್ ಯುಟಿ ಖಾದರ್ ಮುಂದಾಗಿದ್ದು, ವಿಧಾನಸೌಧದ ಇತಿಹಾಸದ ವಾಸ್ತುಶಿಲ್ಪದ ಕೆತ್ತನೆಗೆ ಸಿದ್ಧತೆ ನಡೆಸಲಾಗುತ್ತಿದೆ.

ವಿಧಾನಸೌಧದ ಪೂರ್ವ, ಪಶ್ಚಿಮ ದ್ವಾರಗಳಿಗೆ ವಿಶೇಷ ವಾಸ್ತುಶಿಲ್ಪ ಕೆತ್ತಿಸಲು ಮುಂದಾದ ಸ್ಪೀಕರ್ ಯುಟಿ ಖಾದರ್
ವಿಧಾನಸೌಧImage Credit source: commons.wikimedia.org
TV9 Web
| Edited By: Rakesh Nayak Manchi|

Updated on: Sep 22, 2023 | 3:50 PM

Share

ಬೆಂಗಳೂರು, ಸೆ.22: ನಗರದಲ್ಲಿರುವ ವಿಧಾನಸೌಧದ (Vidhana Soudha) ಪೂರ್ವದ್ವಾರ, ಪಶ್ಚಿಮ ದ್ವಾರಗಳಿಗೆ ಹೊರ ಮೆರುಗು ಬರಲಿದೆ. ಎರಡು ದ್ವಾರಗಳಲ್ಲಿ ವಿಶೇಷ ವಾಸ್ತುಶಿಲ್ಪ ಕೆತ್ತಿಸಲು ಸ್ಪೀಕರ್ ಯುಟಿ ಖಾದರ್ (U.T. Khader) ಮುಂದಾಗಿದ್ದು, ವಿಧಾನಸೌಧದ ಇತಿಹಾಸದ ವಾಸ್ತುಶಿಲ್ಪದ ಕೆತ್ತನೆಗೆ ಸಿದ್ಧತೆ ನಡೆಸಲಾಗುತ್ತಿದೆ.

ಸದ್ಯ ಯುಟಿ ಖಾದರ್ ಅವರು ವಾಸ್ತುಶಿಲ್ಪಿಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಐತಿಹಾಸಿಕ ಹಿನ್ನೆಲೆ ಉಳ್ಳ ವಿಧಾನಸೌದ ವೀಕ್ಷಣೆಗೆ ಲಕ್ಷಾಂತರ ಜನರು ಆಗಮಿಸುತ್ತಾರೆ. ಹೀಗಾಗಿ ವಿಧಾನಸೌಧದ ಕಬ್ಬಿಣಗಳಿಂದ ನಿರ್ಮಿಸಲಾಗಿರುವ ಪ್ರಮುಖ ಬಾಗಿಲುಗಳಾದ ಪೂರ್ವ ಮತ್ತು ಪಶ್ಚಿಮದ ಹೆಬ್ಬಾಗಿಲುಗಳನ್ನು ಮತ್ತಷ್ಟು ಸುಂದರವಾಗಿರಿಸಲು ಕಬ್ಬಿಣದ ಬದಲು ವಿಶೇಷ ವಾಸ್ತುಶಿಲ್ಪ ಕೆತ್ತನೆ ಮಾಡಲು ಚಿಂತಿಸಲಾಗಿದೆ.

ಇದನ್ನೂ ಓದಿ: ತಮಿಳುನಾಡಿಗೆ ನೀರು ಹರಿಸಲು ಕೋರ್ಟ್ ಆದೇಶ: ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ, ವಿಧಾನಸೌಧ ಮುತ್ತಿಗೆ ಹಾಕಲು ಕರವೇ ನಿರ್ಧಾರ

ಸಂವಿಧಾನದ ಪೀಠಿಕೆ, ವಿಧಾನಸೌಧದ ಇತಿಹಾಸ, ಸಂಸ್ಕೃತಿ, ನಾಡು, ನುಡಿ ಬಿಂಬಿಸುವ ವಾಸ್ತುಶಿಲ್ಪ ಕೆತ್ತಿಸಲು ಸಿದ್ಧತೆ ಮಾಡಲಾಗುತ್ತಿದೆ. ವಿವಿಧ ವಾಸ್ತುಶಿಲ್ಪಗಳನ್ನ ಕರೆಸಿ ಹೆಬ್ಬಾಗಿಲುಗಳನ್ನ ತೋರಿಸಲಾಗಿದೆ. ಶೀಘ್ರವೇ ಈ‌ ಬಗ್ಗೆ ಅಂತಿಮ ನಿರ್ಧಾರ ಮಾಡಲಾಗುತ್ತದೆ.

ಯಾವ ವಾಸ್ತುಶಿಲ್ಪ ಕೆತ್ತಿಸಬೇಕು, ಯಾವ ಯಾವ ವಿಚಾರ ಇರಬೇಕು, ವಾಸ್ತುಶಿಲ್ಪದ ಮಾದರಿ ಹೇಗೆ ಇರಬೇಕು ಹೀಗೆ ಎಲ್ಲಾ ಅಂಶಗಳು ಸಿದ್ಧತೆ ಆದ ಮೇಲೆ ಕಾರ್ಯ ಪ್ರಾರಂಭ ಮಾಡಲು ನಿರ್ಧಾರ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!