AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಖ್ಯಮಂತ್ರಿ ಯಡಿಯೂರಪ್ಪನವರದ್ದು ಅಭಿವೃದ್ಧಿ ಪರವಾದ ರಾಜಕಾರಣ; ಮುರುಘಾ ಮಠದ ಸ್ವಾಮೀಜಿ

ಕರ್ನಾಟಕದಲ್ಲಿ ನಾಯಕತ್ವದ ಬಿಕ್ಕಟ್ಟು ಆಗಿದೆ. ಮುಂದಿನ ನಾಯಕರ ಬಗ್ಗೆ ಸ್ಪಷ್ಟತೆ ಕಂಡು ಬರುತ್ತಿಲ್ಲ. ಇದನ್ನು ಎಲ್ಲ ಶಾಸಕರು ನಿರ್ಧಾರ ಮಾಡುತ್ತಾರೆ. ಈಗಿನ ಸಮಸ್ಯೆ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು. ಇದು ಒಂದು ರೀತಿಯ ಬಿಸಿ ತುಪ್ಪವಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪನವರದ್ದು ಅಭಿವೃದ್ಧಿ ಪರವಾದ ರಾಜಕಾರಣ; ಮುರುಘಾ ಮಠದ ಸ್ವಾಮೀಜಿ
ಮುರುಘಾ ಮಠದ ಸ್ವಾಮೀಜಿ
TV9 Web
| Updated By: sandhya thejappa|

Updated on:Jul 25, 2021 | 3:03 PM

Share

ಬೆಂಗಳೂರು: ತನಗೆ 70 ವರ್ಷವಾಗಿದ್ದರೂ ಪ್ರಧಾನಿ ಮೋದಿ (Narendra Modi), ಅಮಿತ್ ಶಾ (Amit Shah) ಅವಕಾಶ ನೀಡಿದ್ದಾರೆ ಅಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa)ಆಗಾಗ ಹೇಳುತ್ತಿರುತ್ತಾರೆ. ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎನ್ನುತ್ತಿದ್ದರು. ಆದರೆ ಮುಂದೆ ಏನು ಎಂಬುದೇ ಈಗ ವಿಚಾರವಾಗಿದೆ. ಯಡಿಯೂರಪ್ಪನವರ ಒಳಗಡೆ ಒಂದಷ್ಟು ಶಕ್ತಿಯಿದೆ. ಅದರಿಂದಲೇ ಅವರು ಎಲ್ಲ ಸಮಸ್ಯೆಗಳಿಂದ ಪಾರಾದರು. ರಾಜ್ಯಕ್ಕೂ ಕೂಡ ಉತ್ತಮವಾದ ಯೋಜನೆ ಕೊಟ್ಟಿದ್ದಾರೆ. ಸಿಎಂ ಬಿಎಸ್ವೈರದ್ದು ಅಭಿವೃದ್ಧಿ ಪರವಾದ ರಾಜಕಾರಣ. ಈ ವೇಳೆ ಒಂದಷ್ಟು ಸಮಸ್ಯೆ ಉಂಟಾಯಿತು. ಇದಕ್ಕೆ ಸೂಕ್ತವಾದ ಪರಿಹಾರ ಕಂಡುಕೊಳ್ಳುತ್ತಾರೆ ಎಂದು ಮುರುಘಾ ಮಠದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದಲ್ಲಿ ನಾಯಕತ್ವದ ಬಿಕ್ಕಟ್ಟು ಆಗಿದೆ. ಮುಂದಿನ ನಾಯಕರ ಬಗ್ಗೆ ಸ್ಪಷ್ಟತೆ ಕಂಡು ಬರುತ್ತಿಲ್ಲ. ಇದನ್ನು ಎಲ್ಲ ಶಾಸಕರು ನಿರ್ಧಾರ ಮಾಡುತ್ತಾರೆ. ಈಗಿನ ಸಮಸ್ಯೆ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು. ಇದು ಒಂದು ರೀತಿಯ ಬಿಸಿ ತುಪ್ಪವಾಗಿದೆ. ಎಲ್ಲಾ ಜಾತಿಯ ಮಠಾಧೀಶರನ್ನ ಸೇರಿಸಿಕೊಂಡು ಒಂದು ಶಕ್ತಿಯುತವಾದ ಸಂಘಟನೆ ಮಾಡಬೇಕಿದೆ ಅಂತಾ ಮುರುಘಾ ಶ್ರೀಗಳು ಸಭೆಯಲ್ಲಿ ಕರೆ ನೀಡಿದರು.

ಒಂದು ಕಡೆ ಪ್ರಕೃತಿ ವಿಕೋಪ, ಇನ್ನೊಂದು ಕಡೆ ಕೊರೊನಾ ಕೋಪ. ಇವೆರೆಡು ಸೇರಿ ಮಾನವನ ಜೀವನದ ಒಳಗೆ ತಾಪ ಸೃಷ್ಟಿ ಮಾಡಿದೆ. ಪರಿತಾಪವನ್ನು ಸೃಷ್ಟಿ ಮಾಡಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಇದ್ದೇವೆ. ಕೊರೊನಾ ಬಂದ ವೇಳೆ ಮಂದಿರ, ಮಸೀದಿ, ಚರ್ಚ್ಗಳು ಮುಚ್ಚಿ ಹೋದವು. ಅಂಥಹ ಸಂದರ್ಭದಲ್ಲಿ ಮಠಗಳು ಸಹಾಯ ಮಾಡಿದವು. ಹತ್ತಾರು ಜನರಿಗೆ ಆಹಾರ ಕಿಟ್ ವಿತರಿಸಿದ್ದೆವು ಎಂದು ಸ್ವಾಮೀಜಿ ತಿಳಿಸಿದರು.

ಸ್ವಾಮೀಜಿಗಳೆಲ್ಲಾ ಜಾತಿ ವಾದಿಗಳೆಂಬ ಭಾವನೆ ತಾಳಬಾರದು. ಸಂವಿಧಾನದ ಪ್ರಕಾರ ಪಕ್ಷಾತೀತ, ಜಾತ್ಯತೀತ ನಮ್ಮ ನಿಲುವು. ಮಠಾಧೀಶರೆಲ್ಲರೂ ಜಾತಿ ಒಳಗಿದ್ದು ಜಾತಿಯನ್ನು ಮೀರುವ ಕೆಲಸ ಮಾಡುತ್ತೇವೆ. 7 ವರ್ಷಗಳ ಹಿಂದೆ ಅಹಿಂದ ಚಳವಳಿಯನ್ನು ಬೆಂಬಲಿಸಿದ್ದೆವು. ಜಾತಿ ಭೇದ ಮರೆತು ನಾನು ಸಿದ್ದರಾಮಯ್ಯನವರಿಗೆ ಬೆಂಬಲಿಸಿದ್ದೆ. ಮಠಾಧೀಶರಿಗೆ ಅಭಿಮಾನಕ್ಕಿಂತ ಜಾತ್ಯತೀತವೇ ಮುಖ್ಯ. ಇಂದಿನ ಸ್ವಾಮೀಜಿಗಳ ಸಮಾವೇಶ ಒಂದು ದಿನಕ್ಕೆ ಅಲ್ಲ. ಮುಂಬರುವ ದಿನಗಳಲ್ಲಿ ಬಲಿಷ್ಠ ಸಂಘಟನೆ ಮಾಡಬೇಕು ಅಂತ ಮುರುಘಾ ಶ್ರೀ ಹೇಳಿದರು.

ಇದನ್ನೂ ಓದಿ

6 ತಿಂಗಳಾದರೂ ಸಿಎಂ ಬಿಎಸ್‌ ಯಡಿಯೂರಪ್ಪರನ್ನು ಮುಂದುವರಿಸಿ, ಮಠಾಧೀಶರ ಮಾತಿಗೆ ಬೆಲೆ ಕೊಡಿ -ನಿಡುಮಾಮಿಡಿ ಸ್ವಾಮೀಜಿ ಮನವಿ

ಯಡಿಯೂರಪ್ಪ ಕೈಬಿಟ್ಟರೆ 6 ತಿಂಗಳಲ್ಲಿ ಸರ್ಕಾರ ಪತನ ಗ್ಯಾರಂಟಿ, ಬಿಜೆಪಿಗೆ ದೊಡ್ಡ ಪೆಟ್ಟು: ಮುರುಘಾ ಮಠದ ಸ್ವಾಮೀಜಿ ಎಚ್ಚರಿಕೆ

(Swamiji of Muruga Math says Chief Minister Yediyurappa’s development politics)

Published On - 2:42 pm, Sun, 25 July 21