AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣೆದುರೇ ಅಪಘಾತವಾದರೂ ಹೊಯ್ಸಳ ನಿಲ್ಲಿಸಿದೆ ಹೋದ ಪೊಲೀಸ್ರು, ಒದ್ದಾಡಿ ಪ್ರಾಣ ಬಿಟ್ಟ ಆಟೋ ಚಾಲಕ

ಬೆಂಗಳೂರಿನ ಕುರುಬರಹಳ್ಳಿ(Kurubarahalli)ಯಲ್ಲಿ ನಿನ್ನೆ(ಜು.5) ರಾತ್ರಿ ಆಟೋವೊಂದು ನಿಯಂತ್ರಣ ತಪ್ಪಿ ನಿಂತಿದ್ದ ಒಮ್ನಿ ಕಾರಿಗೆ ಡಿಕ್ಕಿ ಹೊಡೆದಿತ್ತು.ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದ. ಈ ಕುರಿತು ಇದೀಗ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದ್ದು, ಪೊಲೀಸರ ನಿರ್ಲಕ್ಷ್ಯ ಕಾಣುತ್ತಿದೆ.

ಕಣ್ಣೆದುರೇ ಅಪಘಾತವಾದರೂ ಹೊಯ್ಸಳ ನಿಲ್ಲಿಸಿದೆ ಹೋದ ಪೊಲೀಸ್ರು, ಒದ್ದಾಡಿ ಪ್ರಾಣ ಬಿಟ್ಟ ಆಟೋ ಚಾಲಕ
ಆಟೋ ಅಪಘಾತ
Jagadisha B
| Edited By: |

Updated on: Jul 07, 2023 | 8:39 AM

Share

ಬೆಂಗಳೂರು: ಮಹಾನಗರದ ಕುರುಬರಹಳ್ಳಿ(Kurubarahalli)ಯಲ್ಲಿ ನಿನ್ನೆ(ಜು.5) ರಾತ್ರಿ ಆಟೋವೊಂದು ನಿಯಂತ್ರಣ ತಪ್ಪಿ ನಿಂತಿದ್ದ ಒಮ್ನಿ ಕಾರಿಗೆ ಡಿಕ್ಕಿ ಹೊಡೆದಿತ್ತು. ಆಟೋ ಗುದ್ದಿದ್ದ ರಭಸಕ್ಕೆ ಆಟೋ ಚಾಲಕ ರಂಗನಾಥ(40) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದ. ಈ ಕುರಿತು ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದ್ದು, ಪೊಲೀಸ್​ ವಾಹನದ ಮುಂದೆಯೇ ಆ್ಯಕ್ಸಿಡೆಂಟ್​ ಆದರೂ ಪೊಲೀಸರು ನಿಲ್ಲಿಸದೆ ನೋಡಿಕೊಂಡು ಹೋಗಿದ್ದು ಬೆಳಕಿಗೆ ಬಂದಿದೆ.

ಮಾನವೀಯತೆ ಮರೆತರಾ ಸಿಲಿಕಾನ್ ಸಿಟಿ ಪೋಲಿಸರು

ಇನ್ನು ಅಪಘಾತವಾಗಿ ಸಹಾಯ ಸಿಗದೆ ಆಟೋ ಚಾಲಕ ರಂಗನಾಥ್ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಕಣ್ಣೆದುರೇ ಅಪಘಾತವಾದರೂ ಗಾಡಿ ನಿಲ್ಲಿಸದ ಪೊಲೀಸರು, ಕಂಡು ಕಾಣದಂತೆ ಹೊರಟರಾ ಎಂಬ ಪ್ರಶ್ನೆ ಮೂಡಿದೆ. ಇದೀಗ ಮಹಾಲಕ್ಷ್ಮಿ ಲೇಔಟ್ ಹೊಯ್ಸಳ ಬೀಟ್ ಪೊಲೀಸರ ನಿರ್ಲಕ್ಷ್ಯಕ್ಕೆ ಆಟೋ ಚಾಲಕ ಕೊನೆಯುಸಿರೆಳೆದಿದ್ದಾನೆ.

ಇದನ್ನೂ ಓದಿ:Bengaluru-Mysuru Expressway: ಉದ್ಘಾಟನೆಯಾದಗಿನಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಸಂಭವಿಸಿದ ಅಪಘಾತಗಳೆಷ್ಟು? ಇಲ್ಲಿದೆ ಅಂಕಿ-ಅಂಶ

ರಾತ್ರಿ 10.30 ಆದರೂ ಹೋಟೆಲ್​ ಮುಚ್ಚಿಲ್ಲವೆಂದು ಕ್ಯಾಷಿಯರ್ ಮೇಲೇ ಪೊಲೀಸರ ಹಲ್ಲೆ ಆರೋಪ

ಮೈಸೂರು: ರಾತ್ರಿ 10.30 ಆದರೂ ಹೋಟೆಲ್​ ಮುಚ್ಚಿಲ್ಲ ಎಂದು ಕ್ಯಾಷಿಯರ್​​ ಮೇಲೆ ಪೊಲೀಸರು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಮೈಸೂರಿನ ಬನ್ನಿಮಂಟಪದಲ್ಲಿರುವ ಹೋಟೆಲ್​​ ಮುಂದೆ ಈ ಘಟನೆ ನಡೆದಿದೆ. ಬಳಿಕ ಠಾಣೆಗೆ ಕರೆದೊಯ್ದು ಅಲ್ಲಿಯೂ ಹಲ್ಲೆ ನಡೆಸಿದ್ದಾರೆಂದು ಮಂಡಿ ಠಾಣೆ ಪೊಲೀಸರ ವಿರುದ್ಧ ಹೋಟೆಲ್ ಕ್ಯಾಷಿಯರ್ ಆರೋಪ ಮಾಡಿದ್ದಾರೆ. ಕ್ಯಾಷಿಯರ್​​ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನಷ್ಟು ಅಪಘಾತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ