ಬೆಂಗಳೂರು: ಅಡುಗೆಗೆ ಹೆಚ್ಚಾಗಿ ಬಳಸುವ ಟೊಮ್ಯಾಟೋ ಬೆಲೆ(Tomato Rate Hike) ತಲೆ ಸುತ್ತುವಂತಿದೆ. ಕೇವಲ ಒಂದೇ ವಾರದಲ್ಲಿ ತರಕಾರಿ ಬೆಲೆ ದಿಢೀರನೆ ಏರಿಕೆ ಕಂಡಿದ್ದು ಮಾರುಕಟ್ಟೆಗಳಲ್ಲಿ ಕೆಜಿ ಟೊಮ್ಯಾಟೋವನ್ನು 100 ರಿಂದ 120 ರೂ.ಗೆ ಮಾರಾಟವಾಗುತ್ತಿದೆ. ಅದರಲ್ಲೂ ಬಕ್ರೀದ್ ಹಬ್ಬಕ್ಕೇ(Bakrid) ಎರಡು ಮೂರು ದಿನಗಳು ಮಾತ್ರ ಬಾಕಿ ಇದೆ. ಹಬ್ಬದ ಹೊಸ್ತಿಲ್ಲಲಿ ಬೆಲೆ ಏರಿಕೆ ಭಾರೀ ಹೊಡೆತ ಕೊಟ್ಟಿದೆ. ಮಾಂಸದ ಅಡುಗೆ, ಬಿರಿಯಾನಿ, ಪಲಾವ್, ಸಾಂಬಾರು ಹೀಗೆ ಏನೇ ಮಾಡಿದರೂ ಟೊಮ್ಯಾಟೋ ಬಳಸಲೇ ಬೇಕು. ಅಡುಗೆಯ ರುಚಿ ಹೆಚ್ಚಿಸುವುದೇ ತರಕಾರಿಗಳು. ಹೀಗಾಗಿ ಗೃಹಿಣಿಯರೆಲ್ಲ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗ್ಯಾರೆಂಟಿ ಯೋಜನೆಗಳ ಖುಷಿಯಲ್ಲಿರುವಾಗ್ಲೆ ಜನರಿಗೆ ದರ ಏರಿಕೆ ಬಿಸಿ ತಟ್ಟಿದೆ. ಯಶವಂತಪುರ ಎಪಿಎಮ್ಸಿ ಮಾರುಕಟ್ಟೆಯಲ್ಲ ತರಕಾರಿಯನ್ನು ಕೇಳೋರೆ ಇಲ್ಲದಂತಾಗಿದೆ. ತರಕಾರಿ ಗಗನಕ್ಕೆರಿರುವ ಹಿನ್ನೆಲೆ ವ್ಯಾಪಾರ ಕಡಿಮೆ ಎಂದು ವ್ಯಾಪರಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಇದೆಲ್ಲಾ ಬಿಟ್ಟಿ ಭಾಗ್ಯದ ಕೃಪೆ. ಹೆಣ್ಣು ಮಕ್ಕಳು ಮನೇಲಿ ಇದ್ರೆ ತಾನೇ ತರಕಾರಿ ತಗೋಳೊಕೆ ಬರೋದು. ಎಲ್ಲ ಬಸ್ ನಲ್ಲಿದ್ದಾರೆ. ಬಡವರು, ಕೂಲಿ ಕಾರ್ಮಿಕರು ಹೇಗೆ ಬದುಕಬೇಕು ಎಂದು ಸರ್ಕಾರದ ವಿರುದ್ಧ ವ್ಯಾಪಾರಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
#WATCH | Price of Tomato crosses Rs 100 per kg in Bengaluru (26/06) pic.twitter.com/vSG2qO4Ec2
— ANI (@ANI) June 26, 2023
ಇನ್ನು ರಾಯಚೂರು ಜಿಲ್ಲೆಯಲ್ಲೂ ಜನ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ. ತರಕಾರಿ ರೇಟ್ ದುಪ್ಪಟ್ಟಾದ ಹಿನ್ನೆಲೆ ಗ್ರಾಹಕರ ಸಂಖ್ಯೆ ಇಳಿಮುಖವಾಗಿದೆ. ರಾಯಚೂರು ನಗರದ ಉಸ್ಮಾನಿಯಾ ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ವಿರಳವಾಗಿದೆ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನಸಾಮಾನ್ಯರು ಕಿಡಿಕಾರಿದ್ದಾರೆ. ಬಸ್ನಲ್ಲಿ ಹೆಣ್ಮಕ್ಕಳಿಗೆ ಫ್ರೀ. ಗಂಡು ಮಕ್ಕಳಾದ ನಾವೇ ದುಡಿಯಬೇಕು. ನಾವೇ ಕಾಯಿಪಲ್ಲೆ ತರಬೇಕು. ತರಕಾರಿ ಕೊಂಡು ಕೊಳ್ಳೊಕೆ ಆಗ್ತಿಲ್ಲ. ಸಿದ್ದರಾಮಯ್ಯ ಬಂದು ಲಾಭ ಇಲ್ಲ. ಕರೆಂಟ್ ಬಿಲ್ ಜಾಸ್ತಿ ಆಗಿದೆ. ತರಕಾರಿ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ಅಕ್ಕಿ ಹಾಕಿದರೇ ಹೇಗೆ? ಕಾಯಿಪಲ್ಲೆನೂ ಬೇಕು ಅಂತ ಸರ್ಕಾರದ ವಿರುದ್ಧ ರಾಕೇಶ್ ಎಂಬ ಗ್ರಾಹಕ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಗ್ಯಾರಂಟಿ ಖುಷಿ ನಡುವೆ ಜನರಿಗೆ ಬೆಲೆ ಏರಿಕೆ ಬರೆ: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿನ ತರಕಾರಿ ದರ ವಿವರ ಇಲ್ಲಿದೆ
ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಹೋಲ್ ಸೇಲ್ ದರದಲ್ಲಿ ಖರೀದಿ ಮಾಡಲು ವರ್ತಕರು ಮುಗಿಬಿದ್ದಿದ್ದು, ಬೇಕಾಗುಷ್ಟು ಟೊಮ್ಯಾಟೋ ದೊರೆಯುತ್ತಿಲ್ಲ. ಇದ್ರಿಂದ ರೈತರು ಹೇಳಿದಷ್ಟು ಹಣ ಕೊಟ್ಟು ವರ್ತಕರು ಟೊಮ್ಯಾಟೋ ಖರೀದಿ ಮಾಡ್ತಿದ್ದಾರೆ.
ಟೊಮ್ಯಾಟೋ ಬೆಲೆಯಲ್ಲಿ ಭಾರಿ ಏರಿಕೆ ಹಿನ್ನಲೆ ಚಿಕ್ಕಬಳ್ಳಾಪುರದ ಮಾರುಕಟ್ಟೆಯಲ್ಲಿ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಯಾವಾಗಲು ಟೊಮ್ಯಾಟೋಗೆ ಬೆಲೆ ಬರಲ್ಲ. ಈ ಭಾರಿ ತುಂಬಾ ಬಿಸಿಲು ಇದೆ. ಬಹುತೇಕ ಕಡೆ ಟೊಮ್ಯಾಟೊಗೆ ಕಾಯಿಲೆ ಬಂದಿದೆ. ನಾಟಿ ಹಂತದಲ್ಲಿ ಟೊಮ್ಯಾಟೋ ಸರಿಯಾಗಿ ಬೆಳೆದಿಲ್ಲ. ಎಲ್ಲಿಯೂ ಟೊಮ್ಯಾಟೋ ತೋಟಗಳು ಕಾಣಿಸ್ತಿಲ್ಲ. 80 ಸಾವಿರ ರೂಪಾಯಿ ಖರ್ಚು ಮಾಡಿ ಒಂದೂವರೆ ಎಕರೆ ಟೊಮ್ಯಾಟೋ ಬೆಳೆದಿದ್ದೇನೆ. ಇಂದು ಒಂದು ಟನ್ ಟೊಮ್ಯಾಟೋ ಮಾರುಕಕಟ್ಟೆಗೆ ತಂದಿದ್ದೇನೆ. 14 ಕೆಜಿಯ ತಲಾ ಬಾಕ್ಸ್ ಗೆ ಸಾವಿರ ರೂಪಾಯಿ ಬೀಟ್ ಆಗಿದೆ. ಟೊಮ್ಯಾಟೋಗೆ ಈಗ ಉತ್ತಮ ಬೆಲೆ ಬಂದಿದೆ. ಟೊಮ್ಯಾಟೋದಿಂದ ಈಗ ಕಾಸು ನೋಡುತ್ತಿದ್ದೇನೆ ಎಂದು ಟಿವಿ9ಗೆ ರೈತ ಸದಾಶಿವ ರೆಡ್ಡಿ ತಿಳಿಸಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:52 am, Tue, 27 June 23