AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶದಲ್ಲಿ ಕೂತು ಖಾಸಗಿ ಫೈನಾನ್ಸ್​ ಅಕೌಂಟ್​ ಹ್ಯಾಕ್​: 2.5 ಗಂಟೆಯಲ್ಲಿ ದೋಚಿದ್ದು ಕೋಟಿ ಕೋಟಿ!

ವಿದೇಶದಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್​ ಕಂಪನಿಯ ಅಕೌಂಟ್​ ಹ್ಯಾಕ್​ ಮಾಡಿ ಖದೀಮರು ಕೋಟಿ ಕೋಟಿ ಹಣ ದೋಚಿರುವ ಆಘಾತಕಾರಿ ಘಟನೆ ನಡೆದಿದೆ. ವಿಪಿಎನ್ ನೆಟ್​ವರ್ಕ್ ಬಳಸಿ ಅಕೌಂಟ್ ಹ್ಯಾಕ್ ಮಾಡಿರೋದು ಗೊತ್ತಾಗಿತ್ತು, ದೋಚಿದ ಹಣವನ್ನ 653 ನಕಲಿ ಅಕೌಂಟ್​ಗೆ ಟ್ರಾನ್ಸ್​ಫರ್​ ಮಾಡಲಾಗಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳು ಲಾಕ್​ ಆಗಿದ್ದಾರೆ.

ವಿದೇಶದಲ್ಲಿ ಕೂತು ಖಾಸಗಿ ಫೈನಾನ್ಸ್​ ಅಕೌಂಟ್​ ಹ್ಯಾಕ್​: 2.5 ಗಂಟೆಯಲ್ಲಿ ದೋಚಿದ್ದು ಕೋಟಿ ಕೋಟಿ!
ಸಾಂದರ್ಭಿಕ ಚಿತ್ರ
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Oct 27, 2025 | 12:20 PM

Share

ಬೆಂಗಳೂರು, ಅಕ್ಟೋಬರ್​ 27: ವಿದೇಶದಲ್ಲಿ ಕುಳಿತು ಬೆಂಗಳೂರಿನ (Bengaluru) ಫೈನಾನ್ಸ್​ ಕಂಪನಿಯ ಅಕೌಂಟ್​ ಹ್ಯಾಕ್​ ಮಾಡಿ ಬರೋಬ್ಬರಿ 49 ಕೋಟಿ ರೂಪಾಯಿ ದೋಚಿರುವ ಆಘಾತಕಾರಿ ಘಟನೆ ನಡೆದಿದೆ. ವಿಪಿನ್ ನೆಟ್​ವರ್ಕ್​ ಬಳಸಿ ವಿಸ್ಡಮ್ ಫೈನಾನ್ಸ್ ಎಂಬ ಕಂಪನಿಯ ಹಣ ಎಗರಿಸಿದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಬೆಳಗಾವಿ ಮೂಲದ ಇಸ್ಮಾಯಿಲ್ ಅತ್ತರ್ ಮತ್ತು ಪಟೇಲ್ ಎಂಬವರನ್ನು ಬೆಂಗಳೂರು ಸೈಬರ್​ ಅಪರಾಧ ವಿಭಾಗದ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಆಗಸ್ಟ್ 7ರಂದು ಮಾರತಹಳ್ಳಿಯಲ್ಲಿನ ವಿಸ್ಡಮ್ ಫೈನಾನ್ಸ್ ಕಂಪನಿ ಅಕೌಂಟ್ ಹ್ಯಾಕ್ ಆಗಿದ್ದು, ಈ ಬಗ್ಗೆ ಆ. 9ರಂದು ಫೈನಾನ್ಸ್​ನ ಮ್ಯಾನೇಜರ್ ಪ್ರಕಾಶ್ ದೂರು ನೀಡಿದ್ದರು. ಈ ಆಧಾರದಲ್ಲಿ ಸಿಸಿಬಿ ಸೈಬರ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ರಾಜ್ಯ ಹಾಗೂ ಹೈದರಾಬಾದ್​ನಲ್ಲಿ ಆರೋಪಿಗಳಿಗೆ ಹುಡುಕಾಟ ನಡೆಸಿದ್ದರು. ತನಿಖೆ ವೇಳೆ ಆರೋಪಿಗಳು ವಿದೇಶದಲ್ಲಿ ಕುಳಿತು ವಿಪಿಎನ್ ನೆಟ್​ವರ್ಕ್ ಬಳಸಿ ಅಕೌಂಟ್ ಹ್ಯಾಕ್ ಮಾಡಿರೋದು ಗೊತ್ತಾಗಿತ್ತು. ದೋಚಿದ ಹಣವನ್ನ 653 ನಕಲಿ ಅಕೌಂಟ್​ಗೆ ಟ್ರಾನ್ಸ್​ಫರ್​ ಮಾಡಿದ್ದರು. ವಿಸ್ಡಮ್ ಫೈನಾನ್ಸ್​ನ ಎರಡು ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿರೋದು ತನಿಖೆ ವೇಳೆ ಪತ್ತೆಯಾಗಿತ್ತು.

ಇದನ್ನೂ ಓದಿ: ಕೋಟಿ ಕೋಟಿ ಲಪಟಾಯಿಸಿದ ಹಾಸನದ ಟೈಲರಮ್ಮನ ಕಥೆ: 16 ಲಕ್ಷದ ಕಾರು, ಕೋಟಿ ಬೆಲೆ ಬಾಳುವ ಮನೆ! ಇಷ್ಟೆಲ್ಲ ಸಂಪಾದಿಸಿದ್ದೇಗೆ!?

ಆರೋಪಿಗಳ ಪ್ಲ್ಯಾನ್​ ಹೇಗಿತ್ತು?

ವಿಸ್ಡಮ್ ಫೈನಾನ್ಸ್ ಅವರದ್ದು ಮನಿವೀವ್ ಎಂಬ ಆ್ಯಪ್​ ಇದ್ದು, ಇದರ ಮೂಲಕವೇ ಸಾರ್ವಜನಿಕರಿಗೆ ಲೋನ್​ ನೀಡಲಾಗುತ್ತಿತ್ತು. ಖದೀಮರು ಹಾಂಕಾಂಗ್ ಮತ್ತು ಫಿಲಿಫೈನ್ಸ್​ನಲ್ಲಿ ಕುಳಿತು ಫ್ರಾನ್ಸ್ ಐಪಿ ಅಡ್ರೆಸ್​ ಬಳಸಿ ಇದೇ ಆ್ಯಪ್​ನ ಕೀಯನ್ನು ಹ್ಯಾಕ್​ ಮಾಡಿದ್ದಾರೆ. ಆಮೂಲಕ ಫೈನಾನ್ಸ್​ನ ಎರಡು ಅಕೌಂಟ್​ಗಳನ್ನ ತಮ್ಮ ಹಿಡಿತಕ್ಕೆ ಪಡೆದುಕೊಂಡಿದ್ದರು. ಬಳಿಕ ಅಲ್ಲಿಂದ ಎಪಿಐ ಕೀ ಹ್ಯಾಕ್​ ಮಾಡಿ 653 ಅಕೌಂಟ್ ಗೆ 49 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ. ಇಲ್ಲೂ ಆರೋಪಿಗಳು ಚಾಣಾಕ್ಷತೆ ಪ್ರದರ್ಶಿಸಿದ್ದು, ಕದ್ದ ಹಣದ ಒಂದು ಭಾಗವನ್ನ ಸಾರ್ವಜನಿಕರ ಅಕೌಂಟ್​ಗಳಿಗೂ ವರ್ಗಾಯಿಸಿದ್ದಾರೆ. ಪೊಲೀಸರ ತನಿಖೆ ದಿಕ್ಕು ತಪ್ಪಿಸುವ ಉದ್ದೇಶ ಇವರದ್ದಾಗಿತ್ತು ಎನ್ನಲಾಗಿದೆ.

ಬಂಧಿತ ಪೈಕಿ ಇಸ್ಮಾಯಿಲ್​ ದುಬೈನಲ್ಲಿ ಕುಳಿತು ಹ್ಯಾಕ್ ಮಾಡುವ ತಂಡದ ಜೊತೆಗೆ ಸಂಬಂಧ ಹೊಂದಿದ್ದ. ಇನ್ನು ಬಂಧಿತ ಮತ್ತೋರ್ವ ಆರೋಪಿ ಪಟೇಲ್​ ಅಕೌಂಟ್​ಗೆ 27,39,000 ರೂ, ಹಣ ವರ್ಗಾವಣೆ ಆಗಿತ್ತು. ಜೊತೆಗೆ ಹೈದರಾಬಾದ್​ನ Echelon Science Tech Pvt. Ltd. ಕಂಪನಿ ಖಾತೆಗೆ 5.5 ಕೋಟಿ ರೂ. ಹಣ ವರ್ಗಾವಣೆ ಆಗಿರುವುದೂ ಪತ್ತೆಯಾಗಿದೆ. ಕೇವಲ ಎರಡೂವರೆ ಗಂಟೆಗಳಲ್ಲಿ 49 ಕೋಟಿ ಹಣವನ್ನ ಗ್ಯಾಂಗ್​ ದೋಚಿದ್ದು, ಒಟ್ಟು 1,782 ಟ್ರಾನ್ಸಾಕ್ಷನ್ ನಡೆಸಲಾಗಿತ್ತು. ಬಂಧಿತ ಆರೋಪಿಗಳಿಂದ ಲ್ಯಾಪ್​ಟಾಪ್ , ಪೆನ್ ಡ್ರೈವ್ ವಶಕ್ಕೆ ಪಡೆಯಲಾಗಿದೆ. ನಾಪತ್ತೆಯಾಗಿರುವ ಉಳಿದ 5 ಆರೋಪಿಗಳಿಗೆ ಹುಡುಕಾಟ ಮುಂದುವರಿದಿದೆ. ಮಾಹಿತಿ ಪ್ರಕಾರ ಮೂವರು ದುಬೈನಲ್ಲಿದ್ದಾರೆ. ಇನ್ನು ಇಬ್ಬರು ಹಾಂಕಾಂಗ್​ನಲ್ಲಿ ಇದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು
ಬೆಂಗಳೂರಲ್ಲಿ ಟನಲ್ ರೋಡ್‌ಗೆ ಶಂಕುಸ್ಥಾಪನೆ: ಟೋಲ್ ಫ್ರೀ ಎಂದ ಸಿಎಂ!
ಬೆಂಗಳೂರಲ್ಲಿ ಟನಲ್ ರೋಡ್‌ಗೆ ಶಂಕುಸ್ಥಾಪನೆ: ಟೋಲ್ ಫ್ರೀ ಎಂದ ಸಿಎಂ!