AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚನ್ನಪಟ್ಟಣ ಕರಕುಶಲತೆಯಿಂದ ಪ್ರಭಾವಿತನಾಗಿ ಬಂಗಾಳದ ಯುವಕ ತಯಾರಿಸಿದ ‘ಒಲವಿ’ನ ವಾಚ್ ​ನಿನಗಾಗಿ..

ಪಶ್ಚಿಮ ಬಂಗಾಳದ, ಬೆಂಗಳೂರಿನ NFIT ವಿದ್ಯಾರ್ಥಿ ಪೃಥ್ವಿರಾಜ್ ಚೌಧರಿ ಅವರು ಚನ್ನಪಟ್ಟಣದ ಕರಕುಶಲತೆಯಿಂದ ಪ್ರೇರಿತರಾಗಿ ಮರ ಮತ್ತು ಮರುಬಳಕೆಯ ಅಲ್ಯೂಮಿನಿಯಂನಿಂದ ಕೈಗಡಿಯಾರವನ್ನು ತಯಾರಿಸಿದ್ದಾರೆ. ಈ 'ಒಲವು' ಎಂಬ ಗಡಿಯಾರಕ್ಕೆ ಜಾಗತಿಕ ಪೇಟೆಂಟ್ ಪಡೆದುಕೊಂಡಿದ್ದಾರೆ. ಸ್ಮಾರ್ಟ್ ವಾಚ್ ಯುಗದಲ್ಲಿ ಅವರ ಕೈಗಡಿಯಾರಕ್ಕೆ ಭಾರಿ ಬೇಡಿಕೆಯಿದೆ. ಡಿಸಿಎಂ ಅವರ ಕೆಲಸವನ್ನು ಶ್ಲಾಘಿಸಿದ್ದಾರೆ.

ಚನ್ನಪಟ್ಟಣ ಕರಕುಶಲತೆಯಿಂದ ಪ್ರಭಾವಿತನಾಗಿ ಬಂಗಾಳದ ಯುವಕ ತಯಾರಿಸಿದ 'ಒಲವಿ'ನ ವಾಚ್ ​ನಿನಗಾಗಿ..
ಪೃಥ್ವಿರಾಜ್​ ತಯಾರಿಸಿದ ವಾಚ್​
ವಿವೇಕ ಬಿರಾದಾರ
ವಿವೇಕ ಬಿರಾದಾರ|

Updated on:Jul 18, 2025 | 10:17 PM

Share

ಬೆಂಗಳೂರು, ಜುಲೈ 16: ಚನ್ನಪಟ್ಟಣ (Channapattana) ಕರಕುಶಲತೆಯಿಂದ ಪ್ರಭಾವಿತರಾದ ಪಶ್ಚಿಮ ಬಂಗಾಳದ (West Bengal) ಯುವಕ ಪೃಥ್ವಿರಾಜ್​ ಚೌಧರಿ ಅವರು ಮರದ ತುಂಡುಗಳು ಮತ್ತು ಆಟೋಮೊಬೈಲ್ ತ್ಯಾಜ್ಯದಲ್ಲಿನ ಮರುಬಳಕೆಯ ಅಲ್ಯೂಮಿನಿಯಂನಿಂದ ಕೈಗಡಿಯಾರವನ್ನು (Watch) ತಯಾರಿಸಿ, ಜಾಗತಿಕವಾಗಿ ಪೇಟೆಂಟ್ ಪಡೆದಿದ್ದಾರೆ. ಈ ಕೈಗಡಿಯಾರಕ್ಕೆ ಪೃಥ್ವಿರಾಜ್​ ಅವರು ‘ಒಲವು’ ಎಂದು ಹೆಸರಿಟ್ಟಿದ್ದಾರೆ. ಸ್ಮಾರ್ಟ್‌ವಾಚ್‌ ಯುಗದಲ್ಲಿ ಪೃಥ್ವಿರಾಜ್​ ಚೌಧರಿ ಅವರು ತಯಾರಿಸಿದ ಕೈಗಡಿಯಾರಿಕೆಗೆ ಭಾರಿ ಬೇಡಿಕೆ ಬಂದಿದೆ.

ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾದ ಹೊರವಲಯದಲ್ಲಿರುವ ಸಿಂಗೂರ್ ಎಂಬ ಪಟ್ಟಣದ ಪೃಥ್ವಿರಾಜ್​ ಚೌಧರಿ (21 ವರ್ಷ) ಬೆಂಗಳೂರಿನ ಎನ್​ಐಎಫ್​​ಟಿ ಕಾಲೇಜಿನಲ್ಲಿ ಫ್ಯಾಷನ್ ಮತ್ತು ಲೈಫ್​ಸ್ಟೈಲ್​ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಪೃಥ್ವಿರಾಜ್ ತಂದೆ ಬಂಗಾಳಿ ಸಾಹಿತ್ಯ ಪ್ರಾಧ್ಯಾಪಕ ಮತ್ತು ಜಾನಪದ ಸಂಶೋಧಕರಾಗಿದ್ದಾರೆ. ಪೃಥ್ವಿರಾಜ್ ತಂದೆಯಿಂದ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಕಥೆಗಳನ್ನು ಕೇಳುತ್ತಾ ಬೆಳೆದರು.

ಇದನ್ನೂ ಓದಿ: ಚೇತರಿಕೆ ಹಾದಿಯಲ್ಲಿ ಚನ್ನಪಟ್ಟಣದ ಗೊಂಬೆ ವ್ಯಾಪಾರ: ಕಾರ್ಮಿಕರ ಕೊರತೆಯದ್ದೇ ಚಿಂತೆ

ಪೃಥ್ವಿರಾಜ್ ತಮ್ಮ ತರಗತಿಯ ಪ್ರಾಜೆಕ್ಟ್​ ವರ್ಕ್​ಗಾಗಿ ಕರ್ನಾಟಕದ ಪ್ರಾಚೀನ ಸಂಪ್ರದಾಯವಾದ ಚನ್ನಪಟ್ಟಣ ಕರಕುಶಲ ವಸ್ತುಗಳನ್ನು ಆಯ್ಕೆ ಮಾಡಿಕೊಂಡರು. ಈ ಕರಕುಶಲತೆಯ ಬಗ್ಗೆ ಅಧ್ಯಯನ ಮಾಡಲು ಪೃಥ್ವಿರಾಜ್ ಅವರು ಚನ್ನಪಟ್ಟಣಕ್ಕೆ ತೆರಳಿ, ಅಲ್ಲಿ ಕುಶಲಕರ್ಮಿಗಳಿಂದ ಗೊಂಬೆ, ಆಟಿಕೆ ಸಾಮಾನುಗಳನ್ನು ತಯಾರಿಸುವುದನ್ನು ಕಲಿತರು. ಈ ಸಂದರ್ಭದಲ್ಲಿ ಪೃಥ್ವಿರಾಜ್​ ಅವರು ಚನ್ನಪಟ್ಟಣದ ಕರಕುಶಲತೆಯಿಂದ ಸಾಕಷ್ಟು ಪ್ರಭಾವಿತರಾದರು. ಈ ಪ್ರಭಾವದಿಂದಲೇ ಒಲವು ಗಡಿಯಾರ ತಯಾರಿಸಿದ್ದಾರೆ.\

ಪೃಥ್ವಿರಾಜ್​ ಕಾರ್ಯಕ್ಕೆ ಡಿಸಿಎಂ ಶ್ಲಾಘನೆ

“ಚನ್ನಪಟ್ಟಣದ ಪ್ರಾಚೀನ ಕರಕುಶಲತೆಯಿಂದ ಪ್ರಭಾವಿತರಾಗಿ ಗಡಿಯಾರ ವಿನ್ಯಾಸಗೊಳಿಸಿ, ಜಾಗತಿಕವಾಗಿ ಪೇಟೆಂಟ್ ಪಡೆದ NIFT ಬೆಂಗಳೂರಿನ ಪ್ರತಿಭಾನ್ವಿತ ವಿದ್ಯಾರ್ಥಿ ಪೃಥ್ವಿರಾಜ್ ಚೌಧ ಅವರಿಗೆ ಅಭಿನಂದನೆಗಳು. ಕೋಲ್ಕತ್ತಾದವರಾಗಿದ್ದರೂ, ಕರ್ನಾಟಕದ ಪರಂಪರೆ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ನಿಮ್ಮ ಆಳವಾದ ಗೌರವ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ” ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶ್ಲಾಘಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:52 pm, Fri, 18 July 25

Follow Us
Vivek Biradar
Vivek Biradar

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.

ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?