AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಟಿ ಬಿಟಿ ಸಿಬ್ಬಂದಿಗಳ ವರ್ಕ್ ಫ್ರಮ್ ಹೋಮ್​ಗೆ ಶೀಘ್ರದಲ್ಲೇ ಫುಲ್ ಸ್ಟಾಪ್; ಬೆಂಗಳೂರಿನತ್ತ ಆಗಮಿಸುತ್ತಾರೆ 40 ಲಕ್ಷಕ್ಕೂ ಹೆಚ್ಚು ಜನ

Work From Home: ಈಗಾಗಲೇ ಬಂದ್ ಆಗಿದ್ದ ಕಂಪನಿಗಳನ್ನು ಪುನರಾರಂಭಿಸಲು ಸಿದ್ಧತೆ ನಡೆಯುತ್ತಿದ್ದು, ಮುಂದಿನ ತಿಂಗಳಿನಿಂದ ಹಂತ ಹಂತವಾಗಿ ಐಟಿ ಕಂಪನಿಗಳು ಓಪನ್ ಆಗಲಿವೆ.

ಐಟಿ ಬಿಟಿ ಸಿಬ್ಬಂದಿಗಳ ವರ್ಕ್ ಫ್ರಮ್ ಹೋಮ್​ಗೆ ಶೀಘ್ರದಲ್ಲೇ ಫುಲ್ ಸ್ಟಾಪ್; ಬೆಂಗಳೂರಿನತ್ತ ಆಗಮಿಸುತ್ತಾರೆ 40 ಲಕ್ಷಕ್ಕೂ ಹೆಚ್ಚು ಜನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: sandhya thejappa

Updated on: Aug 25, 2021 | 9:03 AM

ಬೆಂಗಳೂರು: ಮಹಾಮಾರಿ ಕೊರೊನಾ (Coronavirus) ಸೋಂಕನ್ನು ನಿಯಂತ್ರಿಸಲು ಕಳೆದ ಒಂದೂವರೆ ವರ್ಷದಿಂದ ಐಟಿ ಬಿಟಿ ಕಂಪನಿಗಳ (IT BT Company) ಸಿಬ್ಬಂದಿಗಳಿಗೆ ವರ್ಕ್ ಫ್ರಮ್ ಹೋಮ್ (Work From Home) ನೀಡಿದ್ದರು. ಆದರೆ ಸದ್ಯದಲ್ಲೆ ವರ್ಕ್ ಫ್ರಮ್ ಹೋಮ್​ಗೆ ಫುಲ್ ಸ್ಟಾಪ್ ಬೀಳುತ್ತದೆ ಎಂದು ತಿಳಿದುಬಂದಿದೆ. ಐಟಿ ಬಿಟಿ ಕಂಪನಿಗಳ ಸಿಬ್ಬಂದಿಗಳಿಗೆ ವರ್ಕ್ ಫ್ರಮ್ ಹೋಮ್ ರದ್ದಾದರೆ ಸುಮಾರು 25 ಲಕ್ಷ ಜನ ಬೆಂಗಳೂರಿಗೆ ಲಗ್ಗೆ ಇಡಲಿದ್ದಾರೆ. 25 ಲಕ್ಷ ಐಟಿ ಸಿಬ್ಬಂದಿ ಜೊತೆಗೆ ಅವರ ಕುಟುಂಬಸ್ಥರು ವಾಪಸ್ ಆಗುತ್ತಾರೆ. ಅಂದಾಜು 40 ಲಕ್ಷಕ್ಕೂ ಹೆಚ್ಚು ಜನ ಬೆಂಗಳೂರಿನತ್ತ ಆಗಮಿಸಲಿದ್ದಾರೆ.

ಕೊರೊನಾ ಕಾರಣದಿಂದ ಸಿಬ್ಬಂದಿಗಳಿಗೆ ಅನಿವಾರ್ಯವಾಗಿ ಐಟಿ ಬಿಟಿ ಕಂಪನಿಗಳು ವರ್ಕ್ ಫ್ರಮ್ ಹೋಮ್​ಗೆ ಮಾನ್ಯತೆ ನೀಡಿತ್ತು. ಹೀಗಾಗಿ ಬೆಂಗಳೂರಿನಲ್ಲಿದ್ದವರು ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದ್ದರು. ಒಂದೂವರೆ ವರ್ಷದಿಂದ ಅವರವರ ಊರುಗಳಿಂದ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಕೊರೊನಾ ಆರ್ಭಟ ಸದ್ಯ ತಗ್ಗಿದೆ. ಹೀಗಾಗಿ ವರ್ಕ್ ಫ್ರಮ್ ಹೋಂನಲ್ಲಿದ್ದ ಐಟಿ ಬಿಟಿ ಕಂಪನಿಗಳ ಸಿಬ್ಬಂದಿಗಳು ಬೆಂಗಳೂರಿನತ್ತ ಆಗಮಿಸಲಿದ್ದಾರೆ.

ಈಗಾಗಲೇ ಬಂದ್ ಆಗಿದ್ದ ಕಂಪನಿಗಳನ್ನು ಪುನರಾರಂಭಿಸಲು ಸಿದ್ಧತೆ ನಡೆಯುತ್ತಿದ್ದು, ಮುಂದಿನ ತಿಂಗಳಿನಿಂದ ಹಂತ ಹಂತವಾಗಿ ಐಟಿ ಕಂಪನಿಗಳು ಓಪನ್ ಆಗಲಿವೆ. ಮತ್ತೆ ಮರಳಿ ಬೆಂಗಳೂರಿಗೆ ಬರುವುದರಿಂದ ಬೆಂಗಳೂರಿನ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ವರ್ಕ್ ಫ್ರಮ್ ಹೋಮ್​ನಿಂದ ಹೋಟೆಲ್ ಉದ್ಯಮ, ಬಾಡಿಗೆ ಮನೆ, ಪಿಜಿ, ಕ್ಯಾಬ್, ಟ್ಯಾಕ್ಸಿಗಳಿಗೆ ದೊಡ್ಡ ಹೊಡೆತ ಆಗಿತ್ತು. ಜನ ಮತ್ತೆ ಬೆಂಗಳೂರಿನತ್ತ ಆಗಮಿಸಿದರೆ ರಾಜ್ಯದ ರಾಜಧಾನಿಯ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ವರ್ಕ್ ಫ್ರಮ್ ಹೋಂನಲ್ಲಿ ಕೆಲಸ ನಿರ್ವಹಿಸುವವರಿಗೆ ಕಛೇರಿಗೆ ಬಂದು ಕೆಲಸ ಮಾಡಿದಷ್ಟು ತೃಪ್ತಿ ಸಿಗುತ್ತಿಲ್ಲ. ಹಲವರಿಗೆ ನೆಟ್​ವರ್ಕ್ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಕಛೇರಿಗೆ ಬಂದು ಕೆಲಸ ಮಾಡುವುದೇ ಸೂಕ್ತ ಎನ್ನುತ್ತಾರೆ. ಇನ್ನು ಕೆಲವರು ಬೆಂಗಳೂರಿಗೆ ಬಂದರೆ ಅಲ್ಲಿನ ಮನೆ ಬಾಡಿಗೆ, ಖರ್ಚು- ವೆಚ್ಚ, ಓಡಾಟ ಇವೆಲ್ಲ ನೋಡಿದರೆ ಊರಿಂದ ಕೆಲಸ ಮಾಡುವುದು ಉತ್ತಮ ಅಂತಾರೆ.

ಇದನ್ನೂ ಓದಿ

Work From Home: ವರ್ಕ್​ ಫ್ರಮ್ ಹೋಮ್ ಮುಗಿದು ಮತ್ತೆ ಕೆಲಸಕ್ಕೆ ಹೋಗವಂತಾಗುತ್ತದೆಯೇ? ಯಾರು ಏನಂತಾರೆ?

ಕೊವಿಡ್​ನಿಂದ ‘ವರ್ಕ್ ಫ್ರಮ್ ಹೋಮ್’ ಮಾತ್ರವಲ್ಲ.. ಹೆಚ್ಚಿದೆ ‘ಹೋಮ್ ಹೆಲ್ತ್ ಕೇರ್’ ಸೇವೆ

(work from home of IT BT staff will soon be over so More than 40 lakh people arrive in Bangalore)

ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಭೂಮಿಕ್ ಸಾಕುತ್ತಿದ್ದ ನಾಯಿ ಅನ್ನ-ನೀರು ಬಿಟ್ಟು ರೋದಿಸುತ್ತಿದೆ: ಅಶೋಕ
ಭೂಮಿಕ್ ಸಾಕುತ್ತಿದ್ದ ನಾಯಿ ಅನ್ನ-ನೀರು ಬಿಟ್ಟು ರೋದಿಸುತ್ತಿದೆ: ಅಶೋಕ
ಪುನಾರಚನೆ ಬಗ್ಗೆ ಗೊತ್ತಿಲ್ಲ, ನನಗೆ ಸಚಿವನಾಗುವ ಆಕಾಂಕ್ಷೆ ಇಲ್ಲ: ರಾಜು ಕಾಗೆ
ಪುನಾರಚನೆ ಬಗ್ಗೆ ಗೊತ್ತಿಲ್ಲ, ನನಗೆ ಸಚಿವನಾಗುವ ಆಕಾಂಕ್ಷೆ ಇಲ್ಲ: ರಾಜು ಕಾಗೆ
ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಯಲು ಶಿವಕುಮಾರ್ ಕಾರಣ: ವಿಜಯೇಂದ್ರ
ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಯಲು ಶಿವಕುಮಾರ್ ಕಾರಣ: ವಿಜಯೇಂದ್ರ
11 ವರ್ಷ ಒಟ್ಟಾಗಿ ಕಳೆದ ನಯನತಾರಾ-ವಿಘ್ನೇಶ್​ಗೆ ವಿವಾಹ ವಾರ್ಷಿಕೋತ್ಸವ
11 ವರ್ಷ ಒಟ್ಟಾಗಿ ಕಳೆದ ನಯನತಾರಾ-ವಿಘ್ನೇಶ್​ಗೆ ವಿವಾಹ ವಾರ್ಷಿಕೋತ್ಸವ
ಕಾಲ್ತುಳಿತ ಪ್ರಕರಣಕ್ಕೆ ಕಾರಣ ವರದಿಯ ಬಂದ ನಂತರ ಗೊತ್ತಾಗುತ್ತೆ: ಜಾರಕಿಹೊಳಿ
ಕಾಲ್ತುಳಿತ ಪ್ರಕರಣಕ್ಕೆ ಕಾರಣ ವರದಿಯ ಬಂದ ನಂತರ ಗೊತ್ತಾಗುತ್ತೆ: ಜಾರಕಿಹೊಳಿ
ಬಸ್​ನಲ್ಲಿ ಕಂಡಕ್ಟರ್ ಮೊಬೈಲ್​​ನ್ನೇ ಕದ್ದ ಚಾಲಾಕಿ ಕಳ್ಳ
ಬಸ್​ನಲ್ಲಿ ಕಂಡಕ್ಟರ್ ಮೊಬೈಲ್​​ನ್ನೇ ಕದ್ದ ಚಾಲಾಕಿ ಕಳ್ಳ
ದಕ್ಷತೆಯಿಂದ ಗುಮಾಸ್ತ ಕೆಲಸ ಮಾಡುತ್ತಿದ್ದ: ಪ್ರಾದೇಶಿಕ ಸಾರಿಗೆ ಅಧಿಕಾರಿ
ದಕ್ಷತೆಯಿಂದ ಗುಮಾಸ್ತ ಕೆಲಸ ಮಾಡುತ್ತಿದ್ದ: ಪ್ರಾದೇಶಿಕ ಸಾರಿಗೆ ಅಧಿಕಾರಿ