AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಗ್ರಾಮದ ಜನರ ಒಂದು ಐಡಿಯಾದಿಂದ ಅಲ್ಲಿ ಜಲಕ್ರಾಂತಿಯಾಗಿದೆ!

ಬೀದರ್: ಈ ಗ್ರಾಮದ ಜನರು ಕೊಟ್ಟ ಒಂದೇ ಒಂದು ಐಡಿಯಾದಿಂದ ಈಗ ಅಲ್ಲಿ ಜಲಕ್ರಾಂತಿಯಾಗಿದೆ. ಒಂದು ಚಿಕ್ಕ ಬ್ಯಾರೇಜ್ ನೀರು ಹತ್ತಾರು ಹಳ್ಳಿಗಳಿಗೆ ನೀರು ಕೊಡುತ್ತಿದೆ. ಮೆಳೆಯಿಲ್ಲದೆ ಭೂಮಿಯಲ್ಲಿ ಬೆಳೆ ಬೆಳೆಯಲಾಗದ ಸ್ಥಿತಿಯಲ್ಲಿದ್ದ ರೈತರು ಭರಪೂರ ನೀರು ಕಂಡು ಸಂತಸ ಪಡುವಂತಾಗಿದೆ. ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಸಾಯೆಗಾಂವ್ ಗ್ರಾಮದ ಜನ ಕೊಟ್ಟ ಒಂದು ಐಡಿಯಾ ಗ್ರಾಮಕ್ಕೆ ಗ್ರಾಮವೇ ಹಸಿರಿನಿಂದ ಕಂಗೊಳಿಸುವಂತೆ ಮಾಡಿದೆ. ನೀರಿನಿಂದ ತುಂಬಿ ತುಳುಕುವಂತೆ ಮಾಡಿದೆ. ಆ ಗ್ರಾಮದಲ್ಲಿ ಚಿಕ್ಕ […]

ಆ ಗ್ರಾಮದ ಜನರ ಒಂದು ಐಡಿಯಾದಿಂದ ಅಲ್ಲಿ ಜಲಕ್ರಾಂತಿಯಾಗಿದೆ!
ಸಾಧು ಶ್ರೀನಾಥ್​
|

Updated on:Nov 20, 2019 | 9:00 AM

Share

ಬೀದರ್: ಈ ಗ್ರಾಮದ ಜನರು ಕೊಟ್ಟ ಒಂದೇ ಒಂದು ಐಡಿಯಾದಿಂದ ಈಗ ಅಲ್ಲಿ ಜಲಕ್ರಾಂತಿಯಾಗಿದೆ. ಒಂದು ಚಿಕ್ಕ ಬ್ಯಾರೇಜ್ ನೀರು ಹತ್ತಾರು ಹಳ್ಳಿಗಳಿಗೆ ನೀರು ಕೊಡುತ್ತಿದೆ. ಮೆಳೆಯಿಲ್ಲದೆ ಭೂಮಿಯಲ್ಲಿ ಬೆಳೆ ಬೆಳೆಯಲಾಗದ ಸ್ಥಿತಿಯಲ್ಲಿದ್ದ ರೈತರು ಭರಪೂರ ನೀರು ಕಂಡು ಸಂತಸ ಪಡುವಂತಾಗಿದೆ.

ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಸಾಯೆಗಾಂವ್ ಗ್ರಾಮದ ಜನ ಕೊಟ್ಟ ಒಂದು ಐಡಿಯಾ ಗ್ರಾಮಕ್ಕೆ ಗ್ರಾಮವೇ ಹಸಿರಿನಿಂದ ಕಂಗೊಳಿಸುವಂತೆ ಮಾಡಿದೆ. ನೀರಿನಿಂದ ತುಂಬಿ ತುಳುಕುವಂತೆ ಮಾಡಿದೆ. ಆ ಗ್ರಾಮದಲ್ಲಿ ಚಿಕ್ಕ ಸೇತುವೆ ಇತ್ತು. ಪ್ರತಿ ಮಳೆಗಾಲದಲ್ಲಿ ಈ ಸೇತುವೆಗೆ ನೀರು ಜಾಸ್ತಿ ಬಂದೂ ಸೇತುವೆ ಮುಳಗಡೆಯಾಗುತ್ತಿತ್ತು.

ಹೀಗಾಗಿ, ಈ ಗ್ರಾಮದ ಜನರ ಮನವಿ ಮೇರೆಗೆ ಸರ್ಕಾರ ಈ ಗ್ರಾಮಕ್ಕೆ ದೊಡ್ಡದಾದ ಒಂದು ಸೇತುವೆ ನಿರ್ಮಾಣ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಅದರಂತೆ ಕೆಲಸವೂ ಆರಂಭವಾಯಿತು. ಆದ್ರೆ, ಇದ್ದ ಸೇತುವೆಯನ್ನ ನೆಲಸಮ ಮಾಡಲು ಒಂದು ಕೋಟಿ ರೂ ಅನುದಾನ ಮೀಸಲಿಟ್ಟು, ಸೇತುವೆ ನೆಲಸಮ ಮಾಡುವ ಕಾರ್ಯ ಆರಂಭವಾಯ್ತು.

ಆದ್ರೆ, ಇದಕ್ಕೆ ಗ್ರಾಮಸ್ಥರು ಒಪ್ಪಿಗೆ ಕೊಡಲಿಲ್ಲ . ಬ್ರಿಟಿಷರ ಕಾಲದ ಹಳೇ ಸೇತುವೆ ನೆಲ ಸಮಮಾಡುವ ಖರ್ಚಿನಲ್ಲೇ ಇದರ ಪಕ್ಕದಲ್ಲೇ ಹೊಸ ಸೇತುವೆ ಮಾಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ರು. ಇದ್ರಿಂದ ಇಲ್ಲಿ ಗೇಟ್ ಅಳವಡಿಸಲಾಗಿದ್ದು, ಬ್ಯಾರೇಜ್‌ನಲ್ಲಿ ಭರಪೂರ ನೀರು ನಿಲ್ಲವಂತಾಗಿದೆ.

ಗ್ರಾಮಸ್ಥರ ಈ ಐಡಿಯಾ ತಕ್ಷಣ ಒಪ್ಪಿಕೊಂಡು ಇಲ್ಲಿನ ಅಧಿಕಾರಿಗಳು ಹಳೇ ಸೇತುವೆಗೆ 25 ಗೇಟ್ ಗಳನ್ನ ಅಳವಡಿಸಿದ್ದಾರೆ. ಹೀಗಾಗಿ, ಬ್ಯಾರೇಜ್ ನಲ್ಲಿ ಸುಮಾರು ನಾಲ್ಕು ಕಿಲೋಮೀಟರ್ ಗಟ್ಟಲೇ ನೀರು ನಿಂತಿದ್ದು, ಗ್ರಾಮಸ್ಥರಿಗೆ ರೈತರಿಗೆ ಪ್ರಾಣಿ ಪಕ್ಷಿಗಳಿ ನೀರಿನ ಸಮಸ್ಯೆ ಇಲ್ಲದಂತಾಗಿದೆ.

Published On - 7:29 am, Wed, 20 November 19

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ