AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್​: ಕೊರೊನಾ ಲಾಕ್​ಡೌನ್ ಸದುಪಯೋಗ ಮಾಡಿಕೊಂಡ ಮಹಿಳೆಯ ಬಾಳಿಗೆ ಬೆಳಕು ಕೊಟ್ಟ ಎಲ್​ಇಡಿ ಬಲ್ಬ್​​ ತಯಾರಿಸುವ ಕಲೆ

ಕಮಲನಗರ ತಾಲೂಕಿನ ಕೋರೆಕಲ್ ಗ್ರಾಮದ ಅಂಬಿಕಾ ಎಂಬ ಮಹಿಳೆಯು ಲಾಕ್​ಡೌನ್ ಸಮಯದಲ್ಲಿ ಆನ್​ಲೈನ್ ಮೂಲಕ ಎಲ್​.ಇ.ಡಿ ಬಲ್ಬ್​​ ತಯಾರಿಸುವುದನ್ನ ಕಲಿತುಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.

ಬೀದರ್​: ಕೊರೊನಾ ಲಾಕ್​ಡೌನ್ ಸದುಪಯೋಗ ಮಾಡಿಕೊಂಡ ಮಹಿಳೆಯ ಬಾಳಿಗೆ ಬೆಳಕು ಕೊಟ್ಟ ಎಲ್​ಇಡಿ ಬಲ್ಬ್​​ ತಯಾರಿಸುವ ಕಲೆ
ಅಂಬಿಕಾ
TV9 Web
| Edited By: |

Updated on:Dec 03, 2022 | 9:05 AM

Share

ಬೀದರ್​: ಜಿಲ್ಲೆಯ ಕಮಲನಗರ ತಾಲೂಕಿನ ಕೋರೆಕಲ್ ಗ್ರಾಮದ ಅಂಬಿಕಾ(Ambika)ಎಂಬ ಮಹಿಳೆಯು ಲಾಕ್​ಡೌನ್ ಸಂದರ್ಭದಲ್ಲಿ ಆನ್ ಲೈನ್ ಮೂಲಕ ಎಲ್.ಇ.ಡಿ ಬಲ್ಬ್​ ತರಬೇತಿ ಪಡೆದು ಮನೆಯಲ್ಲಿಯೇ ಬಲ್ಬ್ ತಯಾರಿಸಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವ ಮೂಲಕ ಗ್ರಾಮದ ಯುವಕ ಯುವತಿಯರಿಗೂ ಕೆಲಸವನ್ನು ನೀಡಿದ್ದಾರೆ.

ಈ ಹಿಂದೆ ದೇಶದಲ್ಲಿ ಕೋರೋನಾ ಮಹಾಮಾರಿಯಿಂದ ಇಡೀ ದೇಶ ನಿಶಬ್ದವಾಗಿತ್ತು, ಕೋವಿಡ್ ನಿಯಂತ್ರಣಕ್ಕೆ ದೇಶದಲ್ಲಿ ಲಾಕ್​ಡೌನ್ ಹೇರಿದ ಪರಿಣಾಮವಾಗಿ ಅದೆಷ್ಟೋ ಜನರು ಕೆಲಸವನ್ನು ಕಳೆದುಕೊಂಡು ಮನೆ ಸೇರಿದ್ದಾರೆ. ಈ ಸಮಯವನ್ನು ಚೆನ್ನಾಗಿ ಬಳಸಿಕೊಂಡ ಅಂಬಿಕಾ ಅವರು ಆನ್​ಲೈನ್​ನಲ್ಲಿ ಎಲ್ಇಡಿ ಬಲ್ಬ್ ತಯಾರಿಕೆ ಬಗ್ಗೆ ತರಬೇತಿ ಪಡೆದುಕೊಂಡರು, ತಾವು ಬಲ್ಬ್​ ತಯಾರಿಸುತ್ತೇನೆಂದು ಖಚಿತವಾದ ಬಳಿಕ ಸ್ವತಃ ತಾವೇ ಒಂದು ಸಣ್ಣ ಅಂಗಡಿ ಇಟ್ಟಕೊಂಡು ಎಲ್ಇಡಿ ಬಲ್ಬ್​ ತಯಾರಿ ಮಾಡುತ್ತಿದ್ದಾರೆ. ಹೀಗೆ ಛಲ ಬಿಡದೆ ಎಲ್ಇಡಿ ಬಲ್ಬ್ ತಯಾರಿಸುತ್ತಿರುವ ಅಂಬಿಕಾ ಅವರು 9 ವ್ಯಾಟ್,12 ವ್ಯಾಟ್ ಬಲ್ಪ್ ಸೇರಿ 18 ವ್ಯಾಟ್ ಬಲ್ಬ್​​ಗಳನ್ನು ಮನೆಯಲ್ಲಿಯೇ ತಯಾರಿಸುತ್ತಿದ್ದಾರೆ.

ಇನ್ನು ಇವರು ತಯಾರಿಸುವ ಎಲ್ಇಡಿ ಬಲ್ಬ್​​ಗಳು ಬೀದರ್, ಔರಾದ್ ಮತ್ತು ಭಾಲ್ಕಿ ತಾಲೂಕು ಸೇರಿದಂತೆ ವಿವಿಧೆಡೆ ಮಾರಾಟ ಮಾಡಲಾಗುತ್ತಿದೆ. ಒಂದು ಬಲ್ಬ್​ಗೆ  70 ರಿಂದ 140 ರೂಪಾಯಿಯವರೆಗೆ ಮಾರಾಟ ಮಾಡಿ ಬಂದ ಹಣದಿಂದ ಇಡೀ ಕುಟುಂಬವನ್ನು ಸಾಕುತ್ತಿದ್ದಾರೆ. ಇನ್ನು ಇವರು ತಯಾರಿಸುವ ಬಲ್ಬ್​ಗಳು ಗುಣಮಟ್ಟದಿಂದ ಕೂಡಿದ್ದು, ಗ್ರಾಹಕರಿಗೂ ಬಲ್ಬ್​​ಗಳು ಹಿಡಿಸಿದ್ದು ಹೆಚ್ಚು ದಿನಗಳ ಕಾಲ ಬಾಳಿಕೆ ಕೂಡಾ ಬರುತ್ತಿದೆ. ಹೀಗಾಗಿ ಕೆಲವು ಅಂಗಡಿಯವರು ನೂರು ಇನ್ನೂರು ಬಲ್ಬ್​ಗಳನ್ನು ಇವರಿಂದ ಆರ್ಡರ್ ಕೊಟ್ಟು ತೆಗೆದುಕೊಂಡು ಹೋಗುತ್ತಿದ್ದಾರೆ.

ಜೊತೆಗೆ ಇನ್ನು ಕೆಲವು ಗ್ರಾಮ ಪಂಚಾಯತ್​ನವರು ಕೂಡಾ ಈ ಮಹಿಳೆಗೆ ಪ್ರೋತ್ಸಾಹಿಸುವ ಸಲುವಾಗಿ ಇವರಿಂದ ಬಲ್ಬ್​ಗಳನ್ನು ಖರಿದೀಸಿಕೊಂಡು ಹೋಗುತ್ತಿದ್ದಾರೆ. ಲಾಕ್​ಡೌನ್​ನಲ್ಲಿ ಕಲಿತ ವಿದ್ಯೆಯು ಈ ಮಹಿಳೆ ಬದುಕಿಗೆ ಆಸರೆಯಾಗಿ ನಿಂತಿದೆ. ಅಲ್ಲದೆ ಎಲ್ಇಡಿ ಬಲ್ಬ್​ಗೆ ಬೇಕಾದ ಕಚ್ಚಾ ವಸ್ತುಗಳನ್ನು ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಂದ ತರೆಸಿಕೊಂಡು ತಾವೇ ಖುದ್ದು ಎಲ್ಇಡಿ ಬಲ್ಬ್​​ಗಳನ್ನು ತಯಾರಿಸುತ್ತಿದ್ದಾರೆ. ಅಲ್ಲದೆ ಕೆಲಸ ಸಿಗದೆ ಊರು ಅಲೆಯುತ್ತಿದ್ದ ಗಂಡ ವೇಂಕಟ್​ಗೂ ಕೆಲಸ ನಿಡಿದ್ದಾಳೆ. ಹೀಗೆ ಹೋಸ ಪ್ರಯೋಗದ ಮೂಲಕ ಎಲ್ಇಡಿ ಬಲ್ಬ್​ ತಯಾರಿಸಿದ ಬಲ್ಬ್​​ಗಳಿಗೆ ಜಿಲ್ಲೆಯಲ್ಲಿ ಭಾರಿ ಬೇಡಿಕೆಯಾಗಿದೆ. ಅಷ್ಟೇ ಅಲ್ಲದೆ ತಮ್ಮ ಕುಟುಂಬಕ್ಕೂ ಕೆಲಸ ನೀಡಿದ್ದಲ್ಲದೆ ಗ್ರಾಮದ ಯುವಕ ಯುವತಿಯರಿಗೆ ಕೆಲಸ ನೀಡಿ ಇತರರಿಗೂ ಸ್ವಾವಲಂಬಿ ಬದುಕು ರೂಪಿಸುತ್ತಿದ್ದಾಳೆ ಎನ್ನುತ್ತಿದ್ದಾರೆ ಗ್ರಾಮದ ಮುಖಂಡರು.

ಇದನ್ನೂ ಓದಿ:ಬೀದರ್​: ಕಡಿಮೆ ನೀರು, ಕಡಿಮೆ ಕರ್ಚು, ಕಡಿಮೆ ಜಮೀನಿನಲ್ಲಿ ಹಿರೇಕಾಯಿ ಬೆಳೆ ಬೆಳೆದು ತಿಂಗಳಿಗೆ ಮೂರು ಲಕ್ಷ ಲಾಭ ಪಡೆಯುವ ರೈತ

ದೇಶದಲ್ಲಿ ಕರೋನಾ ಮಹಾಮಾರಿಯಿಂದ ಅದೇಷ್ಟೋ ಜನ ಪ್ರಾಣ ಕಳೆದುಕೊಂಡರು, ಲಾಕ್​ಡೌನ್ ಹೇರಿದ್ದರಿಂದ ಅದೇಷ್ಟೊ ಯುವಕ ಯುವತಿಯರು ಉದ್ಯೋಗ ಕಳೆದುಕೊಂಡು ಕಂಗಾಲಾಗಿದ್ದರು. ಆದರೆ ಅಂಬಿಕಾ ಅವರು ಲಾಕ್ ಡೌನ್ ಸಮಯದಲ್ಲಿ ಸಮಯ ವ್ಯರ್ಥ ಮಾಡದೆ ಎಲ್ಇಡಿ ಬಲ್ಬ್​ ತಯಾರಿಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಲ್ಲದೆ ಇತರ ಯುವತಿ ಯುವಕರಿಗೆ ಕೆಲಸ ನಿಡಿದ್ದು, ಗ್ರಾಮಸ್ಥರು ಅಂಬಿಕಾ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವರದಿ: ಸುರೇಶ್ ನಾಯಕ್ ಟಿವಿ9 ಬೀದರ್

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:05 am, Sat, 3 December 22

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?