AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್ ವಿಮಾನ ನಿಲ್ದಾಣಕ್ಕೆ ಹೆಸರಿನದ್ದೇ ಸಮಸ್ಯೆ, ನಾಮಕರಣಕ್ಕಾಗಿ ಪರ ವಿರೋಧ ಚರ್ಚೆ

ಬೀದರ್: ದಶಕಗಳ ಕನಸು ನನಸಾಗಿದೆ. ಲೋಹದ ಹಕ್ಕಿಗಳು ಕಲರವ. ನಮ್ಮೂರಿಗೊಂದು ಏರ್​​ಪೋರ್ಟ್ ಬೇಕು. ಫ್ಲೈಟಲ್ಲಿ ಒಂದ್ ರೌಂಡ್ಸ್ ಹಾಕ್ಬೇಕು ಅನ್ನೋ ಮಹದಾಸೆ ಈಡೇರಿದೆ. ಬೀದರ್ ಜಿಲ್ಲೆಯಲ್ಲಿ ವಿಮಾನಗಳು ಗುಯ್ ಗುಯ್ ಸೌಂಡ್​ ಮಾಡ್ತಿದೆ. ಆದ್ರೀಗ ನನಸಾಗಿರೋ ಕನಸಿನ ಮೇಲೆ ಕರಿನೆರಳು ಆವರಿಸಿದೆ. ವಿಮಾನ ನಿಲ್ದಾಣಕ್ಕೆ ನಾಮಕರಣದ ವಿಚಾರದಲ್ಲಿ ಲಾಬಿ! ಯೆಸ್​.. ಗಡಿನಾಡು ಬೀದರ್ ಜಿಲ್ಲೆಯಲ್ಲಿ ಫೆಬ್ರವರಿ 7ರಂದು ಏರ್​​ಪೋರ್ಟ್ ಟರ್ಮಿನಲ್ ಉದ್ಘಾಟನೆ ಏನೋ ಆಯ್ತು. ಸಿಎಂ ಬಿ.ಎಸ್.ಯಡಿಯೂರಪ್ಪ ವಿಮಾನಯಾನ ಸೇವೆಗೆ ಗ್ರೀನ್​ ಸಿಗ್ನಲ್ ಕೂಡ ನೀಡಿದ್ರು. ಆದ್ರೀಗ […]

ಬೀದರ್ ವಿಮಾನ ನಿಲ್ದಾಣಕ್ಕೆ ಹೆಸರಿನದ್ದೇ ಸಮಸ್ಯೆ, ನಾಮಕರಣಕ್ಕಾಗಿ ಪರ ವಿರೋಧ ಚರ್ಚೆ
ಸಾಧು ಶ್ರೀನಾಥ್​
|

Updated on: Feb 23, 2020 | 9:13 AM

Share

ಬೀದರ್: ದಶಕಗಳ ಕನಸು ನನಸಾಗಿದೆ. ಲೋಹದ ಹಕ್ಕಿಗಳು ಕಲರವ. ನಮ್ಮೂರಿಗೊಂದು ಏರ್​​ಪೋರ್ಟ್ ಬೇಕು. ಫ್ಲೈಟಲ್ಲಿ ಒಂದ್ ರೌಂಡ್ಸ್ ಹಾಕ್ಬೇಕು ಅನ್ನೋ ಮಹದಾಸೆ ಈಡೇರಿದೆ. ಬೀದರ್ ಜಿಲ್ಲೆಯಲ್ಲಿ ವಿಮಾನಗಳು ಗುಯ್ ಗುಯ್ ಸೌಂಡ್​ ಮಾಡ್ತಿದೆ. ಆದ್ರೀಗ ನನಸಾಗಿರೋ ಕನಸಿನ ಮೇಲೆ ಕರಿನೆರಳು ಆವರಿಸಿದೆ.

ವಿಮಾನ ನಿಲ್ದಾಣಕ್ಕೆ ನಾಮಕರಣದ ವಿಚಾರದಲ್ಲಿ ಲಾಬಿ! ಯೆಸ್​.. ಗಡಿನಾಡು ಬೀದರ್ ಜಿಲ್ಲೆಯಲ್ಲಿ ಫೆಬ್ರವರಿ 7ರಂದು ಏರ್​​ಪೋರ್ಟ್ ಟರ್ಮಿನಲ್ ಉದ್ಘಾಟನೆ ಏನೋ ಆಯ್ತು. ಸಿಎಂ ಬಿ.ಎಸ್.ಯಡಿಯೂರಪ್ಪ ವಿಮಾನಯಾನ ಸೇವೆಗೆ ಗ್ರೀನ್​ ಸಿಗ್ನಲ್ ಕೂಡ ನೀಡಿದ್ರು. ಆದ್ರೀಗ ವಿಮಾನ ನಿಲ್ದಾಣಕ್ಕೆ ನಾಮಕರಣದ ಕೂಗೂ ಸದ್ದು ಮಾಡಿದೆ.

ಏರ್​ಪೋರ್ಟ್​ ಆಗಮನಕ್ಕೆ ಮಹಾತ್ಮರ ಕೊಡುಗೆ ಹೆಚ್ಚಿದ್ದು ಅವರ ಹೆಸರಿಡೋಕೆ ಕೆಲವರು ಒತ್ತಡ ಹೇರ್ತಿದ್ದಾರೆ. ಇತ್ತ, ಆಯಾ ಸಮಾಜದವರು ತಮ್ಮ ಗುರುಗಳ ಹೆಸರನ್ನು ನಾಮಕರಣ ಮಾಡುವಂತೆ ಲಾಬಿ ಮಾಡ್ತಿದ್ದಾರೆ. ಇದೀಗ ಫೇಸ್​ಬುಕ್, ವಾಟ್ಸಪ್​​​​​ ಸೇರಿದಂತೆ ಸಾಮಾಜಿಕ ಜಾಲತಾಣದ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಗ್ತಿದೆ. ರಾಜಕೀಯ ನಾಯಕರ ಮೂಲಕವೂ ಒತ್ತಡ ತಂತ್ರವನ್ನ ಅನುಸರಿಸಲಾಗ್ತಿದೆ.

ಇನ್ನು, ಬೀದರ್ ಜಿಲ್ಲೆಯಲ್ಲಿ ಕುರುಬ ಸಮುದಾಯದ ಮತಗಳು ಹೆಚ್ಚಿದೆ. ಹೀಗಾಗಿ ವಿಮಾನ ನಿಲ್ದಾಣಕ್ಕೆ ಬೊಮ್ಮಗೊಂಡೇಶ್ವರ ಹೆಸರು ನಾಮಕರಣಕ್ಕಾಗಿ ಬೊಮ್ಮಗೊಂಡೇಶ್ವರ ಯೂತ್‌ ಬ್ರಿಗೇಡ್‌ ಒತ್ತಾಯಿಸಿದೆ. ಇನ್ನೊಂದೆಡೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಛತ್ರಪತಿ ಶಿವಾಜಿ ಸೇನೆ ಬೇಡಿಕೆ ಇಟ್ಟಿದೆ.

ಅಲ್ಲದೇ ಶ್ರೀ ಬಸವೇಶ್ವರರ ಹೆಸರನ್ನು ಬೀದರ್ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವಂತೆ ಲಿಂಗಾಯತ, ವೀರಶೈವ ಲಿಂಗಾಯತ ಸಂಘಟನೆ ಒತ್ತಾಯಿಸಿವೆ. ಇದೆಲ್ಲದರ ನಡುವೆ ಡಾ ಬಿ.ಆರ್​.ಅಂಬೇಡ್ಕರ್ ಅವರ ಹೆಸರನ್ನ ಏರ್​​ಪೋರ್ಟ್​​ಗೆ ನಾಮಕರಣ ಮಾಡಿ ಅನ್ನೋ ಕೂಗು ಕೇಳಿ ಬಂದಿದೆ.

ಒಟ್ನಲ್ಲಿ ಹಲವಾರು ವಿಘ್ನ. ಹಲವು ಅಡೆತಡೆಗಳನ್ನ ಎದುರಿಸಿ ಗಡಿನಾಡಲ್ಲೊಂದು ಏರ್​​​ಪೋರ್ಟ್ ತಲೆ ಎತ್ತಿದೆ. ಆದ್ರೀಗ, ವಿಮಾನ ನಿಲ್ದಾಣಕ್ಕೆ ನಾಮಕರಣ ವಿಚಾರದಲ್ಲಿ ರಾಜಕೀಯದ ಜೊತೆಗೆ ಲಾಬಿ ನಡೀತಿದೆ. ಇದೀಗ ವಿಮಾನ ನಿಲ್ದಾಣ ಉದ್ಘಾಟನೆಯಾಗಿದ್ರೂ ಸರ್ಕಾರಕ್ಕೆ ಹೊಸ ಸವಾಲ್​ ಒಂದು ಎದುರಾಗಿದೆ. ಅದೇನೆ ಇರ್ಲಿ ಬೀದರ್ ವಿಮಾನ ನಿಲ್ದಾಣಕ್ಕೆ ಯಾರ ಹೆಸರು ಇಡ್ತಾರೆ ಅನ್ನೋದು ಸದ್ಯದ ಕುತೂಹಲ.

ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ