AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Stampede; ಸ್ಟೇಡಿಯಂ ಬಳಿ ಕಾಲ್ತುಳಿತದ ಘಟನೆ ಮಾಧ್ಯಮದ ಮೂಲಕ ಗೊತ್ತಾಗಿದ್ದು: ಡಿಕೆ ಶಿವಕುಮಾರ್

Bengaluru Stampede; ಸ್ಟೇಡಿಯಂ ಬಳಿ ಕಾಲ್ತುಳಿತದ ಘಟನೆ ಮಾಧ್ಯಮದ ಮೂಲಕ ಗೊತ್ತಾಗಿದ್ದು: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 05, 2025 | 1:45 PM

ಪೊಲೀಸ್ ಕಮೀಶನರ್ ತನಗೆ ಫೋನ್ ಮಾಡಿ ಕಾಲ್ತುಳಿತದ ಘಟನೆ ನಡೆದಿದೆ, ಎರಡು ಮೂರು ಜನ ಸತ್ತಿರುವಂತಿದೆ ಎಂದು ಹೇಳಿ ಅದಷ್ಟು ಬೇಗ ಕಾರ್ಯಕ್ರಮ ಮುಗಿಸಲು ಹೇಳಿದರು. ಹಾಗಾಗೇ, ತಾವು ಯಾರಿಗೂ ಭಾಷಣ ಮಾಡುವ ಅವಕಾಶ ನೀಡದೆ, ಯಾವ ಘೋಷಣೆಗಳನ್ನೂ ಮಾಡದೆ ಕೇವಲ ಹತ್ತು-ಹದಿನೈದು ನಿಮಿಷಗಳಲ್ಲಿ ಅಟಗಾರರ ಸತ್ಕಾರ ಸಮಾರಂಭವನ್ನು ಮುಗಿಸಿದ್ದು ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು, ಜೂನ್ 5: ಬುಧವಾರ ಸಾಯಂಕಾಲ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy stadium) ಬಳಿ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ದುರ್ಘಟನೆಯಲ್ಲಿ ಜನ ಸತ್ತಿರುವ ವಿಷಯ ತನಗೆ ಗೊತ್ತೇ ಇರಲಿಲ್ಲ, ಮೀಡಿಯಾದವರ ಮೂಲಕವೇ ಗೊತ್ತಾಗಿದ್ದು, ಅದಾದ ಬಳಿಕವೇ ನಗರ ಪೊಲೀಸ್ ಕಮೀಷನರ್ ತನಗೆ ಫೋನ್ ಮಾಡಿ ವಿಷಯ ತಿಳಿಸಿದರು ಎಂದು ಹೇಳಿದರು. ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗುವ ಪ್ಲ್ಯಾನ್ ಸಹ ತನಗೆ ಇರಲಿಲ್ಲ, ಕೆಎಸ್​ಸಿಎ ಪದಾಧಿಕಾರಿಗಳು ಒತ್ತಾಯ ಮಾಡಿದ್ದಕ್ಕಾಗಿ ಹೋಗಬೇಕಾಯಿತು, ಅದರ ಕೆಲ ಅಧಿಕಾರಿಗಳು ತನ್ನ ಜೊತೆಯಲ್ಲೇ ಕಾರಲ್ಲಿದ್ದರು ಎಂದು ಹೇಳಿದ ಶಿವಕುಮಾರ್ ಹೇಳಿದರು.

ಇದನ್ನೂ ಓದಿ:  Bengaluru RCB Celebration: ಕೊಹ್ಲಿ ಆ್ಯಂಡ್​ ಟೀಂಗೆ ಕನ್ನಡ ಧ್ವಜ ನೀಡಿ ಸ್ವಾಗತಿಸಿದ ಡಿಕೆ ಶಿವಕುಮಾರ್: ವಿಡಿಯೋ ನೋಡಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ