AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವನ್ನು ಅಟ್ಟಾಡಿಸಿ ತಿಂದ ಸಾಕು ಬೆಕ್ಕು; ಇದು ಮೊದಲೇನಲ್ಲ

ಕೆಲಕಾಲ ಬೆಕ್ಕು ಹಾಗೂ ಹಾವಿನ ಮಧ್ಯೆ ಘೋರ ಕಾಳಗವೆ ನಡೆದಿದೆ. ಆದರೆ ಹಾವು ಬೆಕ್ಕಿನ ರೋಷವನ್ನು ಕಂಡು ತಪ್ಪಿಸಿಕೊಳ್ಳಲು ಯೋಚಿಸಿತ್ತು. ಆದರೆ ಬೆಕ್ಕು ಹಾವನ್ನು ಹೋಗಲು ಬಿಟ್ಟಿಲ್ಲ. ಹಾವನ್ನು ಹಿಡಿದು ತನ್ನ ಬಾಯಿಯಿಂದ ಮೂರು ತುಂಡು ಮಾಡಿದೆ.

ಹಾವನ್ನು ಅಟ್ಟಾಡಿಸಿ ತಿಂದ ಸಾಕು ಬೆಕ್ಕು; ಇದು ಮೊದಲೇನಲ್ಲ
ಹಾವನ್ನು ತಿಂದ ಬೆಕ್ಕು
TV9 Web
| Edited By: |

Updated on:Jul 07, 2021 | 2:26 PM

Share

ಚಿಕ್ಕಬಳ್ಳಾಪುರ: ಸಾಕುಪ್ರಾಣಿಗಳು ಮಕ್ಕಳಿಗಿಂತಲೂ ಹೆಚ್ಚು ನಿಯತ್ತಾಗಿರುತ್ತವೆ ಎನ್ನುವ ಮಾತಿಗೆ ಬೆಕ್ಕೊಂದು ಸಾಕ್ಷಿಯಾಗಿದೆ. ತನ್ನ ಒಡೆಯನ ಮನೆ ಬಳಿ ಬಂದ ಹಾವಿನ ಮೇಲೆ ಬೆಕ್ಕು ದಾಳಿ ನಡೆಸಿದ ಆಶ್ಚರ್ಯಕರ ಘಟನೆಯೊಂದು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅರಿಕೇರೆ ಗ್ರಾಮದ ದೊಡ್ಡಮುನಿಯಪ್ಪ ಎನ್ನುವವರ ಮನೆಯಲ್ಲಿ ನಡೆದಿದೆ. ದೊಡ್ಡಮುನಿಯಪ್ಪನ ಮನೆ ಬಳಿ ಇಂದು (ಜುಲೈ 7) ಹಾವೊಂದು ಬಂದಿದೆ. ಅದನ್ನು ಗಮನಿಸಿದ ಬೆಕ್ಕು, ತಕ್ಷಣ ಹಾವಿನ ಮೇಲೆ ಹಾರಿ ದಾಳಿ ನಡೆಸಿದೆ.

ಕೆಲಕಾಲ ಬೆಕ್ಕು ಹಾಗೂ ಹಾವಿನ ಮಧ್ಯೆ ಘೋರ ಕಾಳಗವೆ ನಡೆದಿದೆ. ಆದರೆ ಹಾವು ಬೆಕ್ಕಿನ ರೋಷವನ್ನು ಕಂಡು ತಪ್ಪಿಸಿಕೊಳ್ಳಲು ಯೋಚಿಸಿತ್ತು. ಆದರೆ ಬೆಕ್ಕು ಹಾವನ್ನು ಹೋಗಲು ಬಿಟ್ಟಿಲ್ಲ. ಹಾವನ್ನು ಹಿಡಿದು ತನ್ನ ಬಾಯಿಯಿಂದ ಮೂರು ತುಂಡು ಮಾಡಿದೆ. ನಂತರ ಸತ್ತ ಹಾವನ್ನು ಅಲ್ಪ ಸ್ವಲ್ಪ ಬೆಕ್ಕು ತಿಂದಿದೆ. ಈ ಅಪರೂಪದ ಕ್ಷಣಗಳನ್ನು ದೊಡ್ಡಮುನಿಯಪ್ಪನ ಮಗ ಮುನಿರಾಜು ಎಂಬುವವರು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿದ್ದಾನೆ.

ಬೆಕ್ಕು ಹಾವನ್ನು ತಿಂದಿದ್ದು ಇದೆ ಮೊದಲೇನಲ್ಲ ದೊಡ್ಡಮುನಿಯಪ್ಪ ಸಾಕಿದ ಬೆಕ್ಕು ಇದೆ ಮೊದಲ ಭಾರಿಗೆ ಹಾವನ್ನು ಕೊಂದು, ತಿಂದಿಲ್ಲ. ಇದಕ್ಕೂ ಮೊದಲು ತೋಟದ ಬಳಿ ಬಂದ ನಾಗರಹಾವನ್ನು ಇದೆ ರೀತಿ ಕಚ್ಚಿ ಕಚ್ಚಿ ಗಾಯಗೊಳಿಸಿ, ನಂತರ ನಾಗರಹಾವನ್ನೇ ಸ್ವಾಹ ಮಾಡಿತ್ತು.

ಬೆಕ್ಕು ಮೊಲವನ್ನೂ ತಿಂದಿತ್ತು ಬೆಕ್ಕು ಕಳೆದ ಎರಡು ತಿಂಗಳ ಹಿಂದೆ ಅರಿಕೇರೆ ಗ್ರಾಮದ ದೊಡ್ಡಮುನಿಯಪ್ಪನ ಜಮೀನಿನ ಬಳಿ ಬಂದ ಮೊಲವನ್ನು ಅಟ್ಟಾಡಿಸಿ ಹಿಡಿದು ನಂತರ ಅದನ್ನು ತಿಂದು ಹಾಕಿತ್ತು ಎಂದು ಮುನಿರಾಜು ತಿಳಿಸಿದರು.

ಇದನ್ನೂ ಓದಿ

World Chocolate Day 2021 : ಸುಪ್ರಿಯಾ ‘ಫೆರೆರೋಧಾರೆ’ಯೊಂದಿಗೆ ‘ಪಿಂಕಿ’ಯ ಟ್ಯಾಂಗೋ ಜುಗಲಬಂದಿ

Viral Video: ಜೀಪು ವೇಗವಾಗಿ ಚಲಿಸುತ್ತಿರುವಾಗಲೇ ರಸ್ತೆಗಿಳಿಯುವ ದುಸ್ಸಾಹಸ! ಶಾಂಕಿಂಗ್​ ವಿಡಿಯೋ ನೋಡಿ

(cat has bitten and eat the snake at Chikkaballapur)

Published On - 2:09 pm, Wed, 7 July 21

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!