AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವನ್ನು ಅಟ್ಟಾಡಿಸಿ ತಿಂದ ಸಾಕು ಬೆಕ್ಕು; ಇದು ಮೊದಲೇನಲ್ಲ

ಕೆಲಕಾಲ ಬೆಕ್ಕು ಹಾಗೂ ಹಾವಿನ ಮಧ್ಯೆ ಘೋರ ಕಾಳಗವೆ ನಡೆದಿದೆ. ಆದರೆ ಹಾವು ಬೆಕ್ಕಿನ ರೋಷವನ್ನು ಕಂಡು ತಪ್ಪಿಸಿಕೊಳ್ಳಲು ಯೋಚಿಸಿತ್ತು. ಆದರೆ ಬೆಕ್ಕು ಹಾವನ್ನು ಹೋಗಲು ಬಿಟ್ಟಿಲ್ಲ. ಹಾವನ್ನು ಹಿಡಿದು ತನ್ನ ಬಾಯಿಯಿಂದ ಮೂರು ತುಂಡು ಮಾಡಿದೆ.

ಹಾವನ್ನು ಅಟ್ಟಾಡಿಸಿ ತಿಂದ ಸಾಕು ಬೆಕ್ಕು; ಇದು ಮೊದಲೇನಲ್ಲ
ಹಾವನ್ನು ತಿಂದ ಬೆಕ್ಕು
TV9 Web
| Edited By: |

Updated on:Jul 07, 2021 | 2:26 PM

Share

ಚಿಕ್ಕಬಳ್ಳಾಪುರ: ಸಾಕುಪ್ರಾಣಿಗಳು ಮಕ್ಕಳಿಗಿಂತಲೂ ಹೆಚ್ಚು ನಿಯತ್ತಾಗಿರುತ್ತವೆ ಎನ್ನುವ ಮಾತಿಗೆ ಬೆಕ್ಕೊಂದು ಸಾಕ್ಷಿಯಾಗಿದೆ. ತನ್ನ ಒಡೆಯನ ಮನೆ ಬಳಿ ಬಂದ ಹಾವಿನ ಮೇಲೆ ಬೆಕ್ಕು ದಾಳಿ ನಡೆಸಿದ ಆಶ್ಚರ್ಯಕರ ಘಟನೆಯೊಂದು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅರಿಕೇರೆ ಗ್ರಾಮದ ದೊಡ್ಡಮುನಿಯಪ್ಪ ಎನ್ನುವವರ ಮನೆಯಲ್ಲಿ ನಡೆದಿದೆ. ದೊಡ್ಡಮುನಿಯಪ್ಪನ ಮನೆ ಬಳಿ ಇಂದು (ಜುಲೈ 7) ಹಾವೊಂದು ಬಂದಿದೆ. ಅದನ್ನು ಗಮನಿಸಿದ ಬೆಕ್ಕು, ತಕ್ಷಣ ಹಾವಿನ ಮೇಲೆ ಹಾರಿ ದಾಳಿ ನಡೆಸಿದೆ.

ಕೆಲಕಾಲ ಬೆಕ್ಕು ಹಾಗೂ ಹಾವಿನ ಮಧ್ಯೆ ಘೋರ ಕಾಳಗವೆ ನಡೆದಿದೆ. ಆದರೆ ಹಾವು ಬೆಕ್ಕಿನ ರೋಷವನ್ನು ಕಂಡು ತಪ್ಪಿಸಿಕೊಳ್ಳಲು ಯೋಚಿಸಿತ್ತು. ಆದರೆ ಬೆಕ್ಕು ಹಾವನ್ನು ಹೋಗಲು ಬಿಟ್ಟಿಲ್ಲ. ಹಾವನ್ನು ಹಿಡಿದು ತನ್ನ ಬಾಯಿಯಿಂದ ಮೂರು ತುಂಡು ಮಾಡಿದೆ. ನಂತರ ಸತ್ತ ಹಾವನ್ನು ಅಲ್ಪ ಸ್ವಲ್ಪ ಬೆಕ್ಕು ತಿಂದಿದೆ. ಈ ಅಪರೂಪದ ಕ್ಷಣಗಳನ್ನು ದೊಡ್ಡಮುನಿಯಪ್ಪನ ಮಗ ಮುನಿರಾಜು ಎಂಬುವವರು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿದ್ದಾನೆ.

ಬೆಕ್ಕು ಹಾವನ್ನು ತಿಂದಿದ್ದು ಇದೆ ಮೊದಲೇನಲ್ಲ ದೊಡ್ಡಮುನಿಯಪ್ಪ ಸಾಕಿದ ಬೆಕ್ಕು ಇದೆ ಮೊದಲ ಭಾರಿಗೆ ಹಾವನ್ನು ಕೊಂದು, ತಿಂದಿಲ್ಲ. ಇದಕ್ಕೂ ಮೊದಲು ತೋಟದ ಬಳಿ ಬಂದ ನಾಗರಹಾವನ್ನು ಇದೆ ರೀತಿ ಕಚ್ಚಿ ಕಚ್ಚಿ ಗಾಯಗೊಳಿಸಿ, ನಂತರ ನಾಗರಹಾವನ್ನೇ ಸ್ವಾಹ ಮಾಡಿತ್ತು.

ಬೆಕ್ಕು ಮೊಲವನ್ನೂ ತಿಂದಿತ್ತು ಬೆಕ್ಕು ಕಳೆದ ಎರಡು ತಿಂಗಳ ಹಿಂದೆ ಅರಿಕೇರೆ ಗ್ರಾಮದ ದೊಡ್ಡಮುನಿಯಪ್ಪನ ಜಮೀನಿನ ಬಳಿ ಬಂದ ಮೊಲವನ್ನು ಅಟ್ಟಾಡಿಸಿ ಹಿಡಿದು ನಂತರ ಅದನ್ನು ತಿಂದು ಹಾಕಿತ್ತು ಎಂದು ಮುನಿರಾಜು ತಿಳಿಸಿದರು.

ಇದನ್ನೂ ಓದಿ

World Chocolate Day 2021 : ಸುಪ್ರಿಯಾ ‘ಫೆರೆರೋಧಾರೆ’ಯೊಂದಿಗೆ ‘ಪಿಂಕಿ’ಯ ಟ್ಯಾಂಗೋ ಜುಗಲಬಂದಿ

Viral Video: ಜೀಪು ವೇಗವಾಗಿ ಚಲಿಸುತ್ತಿರುವಾಗಲೇ ರಸ್ತೆಗಿಳಿಯುವ ದುಸ್ಸಾಹಸ! ಶಾಂಕಿಂಗ್​ ವಿಡಿಯೋ ನೋಡಿ

(cat has bitten and eat the snake at Chikkaballapur)

Published On - 2:09 pm, Wed, 7 July 21

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ