AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ ಈಶಾ ಫೌಂಡೇಷನ್ ಎಫೆಕ್ಟ್ – ಆವಲಗುರ್ಕಿ ಗ್ರಾಮದಲ್ಲಿ ಭೂಮಿ ಬೆಲೆ ಗಗನಕ್ಕೆ, ಆದರೂ ಒಂದಿಂಚೂ ಮಾರೋಲ್ಲ ಅಂತಿದ್ದಾರೆ ರೈತರು

Chikkaballapur Isha Foundation Effect: ರಾಷ್ಟ್ರೀಯ ಹೆದ್ದಾರಿ-44 ರಿಂದ ವಡ್ರೇಪಾಳ್ಯ ಗೇಟ್, ಗೇಟ್‍ನಿಂದ ಈಶಾ ಫೌಂಡೇಷನ್‍ವರೆಗೂ ಭೂಮಿಗೆ ಚಿನ್ನದ ಬೆಲೆ ಬಂದಿದ್ದು, ಪ್ರತಿದಿನ ರಿಯಲ್ ಎಸ್ಟೇಟ್ ಉದ್ಯಮಿಗಳು ಆಗಮಿಸಿ ಜಮೀನು ಕೊಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಕೊನೆ ಪಕ್ಷ ಜಾಯಿಂಟ್ ವೆಂಚರ್, ಬಾಡಿಗೆಗಾದರೂ ನೀಡಿ, ನೀವು ಕೇಳಿದಷ್ಟು ಹಣ ನೀಡುವುದಾಗಿ ರೈತರಿಗೆ ಮನವಿ ಮಾಡುತ್ತಿದ್ದಾರಂತೆ.

ಚಿಕ್ಕಬಳ್ಳಾಪುರ ಈಶಾ ಫೌಂಡೇಷನ್ ಎಫೆಕ್ಟ್ - ಆವಲಗುರ್ಕಿ ಗ್ರಾಮದಲ್ಲಿ ಭೂಮಿ ಬೆಲೆ ಗಗನಕ್ಕೆ, ಆದರೂ ಒಂದಿಂಚೂ ಮಾರೋಲ್ಲ ಅಂತಿದ್ದಾರೆ ರೈತರು
ಚಿಕ್ಕಬಳ್ಳಾಪುರ ಈಶಾ ಫೌಂಡೇಷನ್ ಎಫೆಕ್ಟ್ - ಆವಲಗುರ್ಕಿ ಗ್ರಾಮದಲ್ಲಿ ಭೂಮಿ ಬೆಲೆ ಗಗನಕ್ಕೆ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​

Updated on: Oct 18, 2023 | 1:08 PM

ಆ ಪ್ರದೇಶ ಮೊದಲೇ ಕಾಡು, ಮೇಡು, ಗುಡ್ಡಗಾಡುಗಳಿಂದ ಕೂಡಿತ್ತು. ಅಲ್ಲಿ ಜಮೀನುಗಳನ್ನು ಕಡಿಮೆ ಬೆಲೆಗೆ ಕೊಡ್ತಿವಿ ಎಂದರೂ ಯಾರು ಕೊಂಡುಕೊಳ್ಳುತ್ತಿರಲಿಲ್ಲ. ಆದರೆ ಇತ್ತೀಚೆಗೆ ಆ ಭಾಗದಲ್ಲಿ ಈಶಾ ಫೌಂಡೇಶನ್‍ನಿಂದ (Isha Foundation) 112 ಅಡಿಗಳ ಆದಿಯೋಗಿ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದೇ ತಡ ಭೂಮಿ ಬೆಲೆ (Land price) ಗಗನಕ್ಕೇರಿದೆ. 5-6 ಲಕ್ಷ ರೂಪಾಯಿ ಇದ್ದ ಎಕರೆ ಜಮೀನಿನ ಬೆಲೆ ಈಗ ಕೋಟಿ ರೂಪಾಯಿ ಕೊಟ್ಟರೂ ಸಿಗುತ್ತಿಲ್ಲ. ಈ ಕುರಿತು ಒಂದು ವರದಿ…

ಚಿಕ್ಕಬಳ್ಳಾಪುರ ತಾಲ್ಲೂಕು (Chikkaballapur) ಆವಲಗುರ್ಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ (Avalagurki rural areas) ಹನುಮಂತಪುರ ಗ್ರಾಮದ ಬಳಿ ಆಧ್ಯಾತ್ಮ ಗುರು, ಯೋಗ ಗುರು ಜಗ್ಗಿ ವಾಸುದೇವ್ ಈಶಾ ಫೌಂಡೇಷನ್‍ನಿಂದ 112 ಆದಿಯೋಗಿ ಪ್ರತಿಮೆ ಅನಾವರಣ ಮಾಡಿದ್ದೇ ತಡ ಪ್ರತಿದಿನ ಸಾವಿರಾರು ಜನ ಭಕ್ತರು, ಪ್ರವಾಸಿಗರು ಆಗಮಿಸುತ್ತಿದ್ದು, ಆದಿಯೋಗಿ ಕ್ಷೇತ್ರ ಧಾರ್ಮಿಕ ಪ್ರವಾಸಿ ತಾಣವಾಗಿದೆ. ಇದರಿಂದ ಆದಿಯೋಗಿ ಸುತ್ತಮುತ್ತ 5-6 ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಆದಿಯೋಗಿ ಬೃಹತ್​​ ಮೂರ್ತಿ ಅನಾವರಣಕ್ಕೂ ಮುನ್ನ ಇಲ್ಲಿ 1 ಎಕರೆ ಜಮೀನು ಬೆಲೆ 5-6 ಲಕ್ಷ ರೂಪಾಯಿ ಇತ್ತು. ಆದರೆ ಈಗ ಎಕರೆ ಜಮೀನಿಗೆ ಕೋಟಿ ರೂಪಾಯಿ ಬೆಲೆಗೂ ಅಧಿಕವಾಗಿದೆ ಎನ್ನುತ್ತಾರೆ ಸ್ಥಳೀಯರಾದ ವೆಂಕಟರಮಣಪ್ಪ.

ಇನ್ನು ರಾಷ್ಟ್ರೀಯ ಹೆದ್ದಾರಿ-44 ರಿಂದ ವಡ್ರೇಪಾಳ್ಯ ಗೇಟ್, ಗೇಟ್‍ನಿಂದ ಈಶಾ ಫೌಂಡೇಷನ್‍ವರೆಗೂ ಭೂಮಿಗೆ ಚಿನ್ನದ ಬೆಲೆ ಬಂದಿದ್ದು, ಪ್ರತಿದಿನ ರಿಯಲ್ ಎಸ್ಟೇಟ್ ಉದ್ಯಮಿಗಳು ಆಗಮಿಸಿ ಜಮೀನು ಕೊಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಕೊನೆ ಪಕ್ಷ ಜಾಯಿಂಟ್ ವೆಂಚರ್, ಬಾಡಿಗೆಗಾದರೂ ನೀಡಿ, ನೀವು ಕೇಳಿದಷ್ಟು ಹಣ ನೀಡುವುದಾಗಿ ರೈತರಿಗೆ ಮನವಿ ಮಾಡುತ್ತಿದ್ದಾರಂತೆ.

ಈಶಾ ಫೌಂಡೇಶನ್‍ನ ಆದಿಯೋಗಿ ಪ್ರತಿಮೆ ಅನಾವರಣಗೊಳ್ಳುವುದಕ್ಕೂ ಮುನ್ನ ಅಲ್ಲಿಯ ಜಮೀನನ್ನು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಕೋಟಿ ಕೊಡ್ತೀನಿ ಕೊಡಿ ಎಂದರೂ ಯಾರೂ ಭೂಮಿಯನ್ನು ಮಾರುವವರಿಲ್ಲ. ಮಾರುವ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಇದೆಲ್ಲಾ ಆದಿಯೋಗಿ ಆಶೀರ್ವಾದ ಎನ್ನುತ್ತಾರೆ ಸುತ್ತಮುತ್ತಲ ರೈತರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ