ಚಿಕ್ಕಬಳ್ಳಾಪುರ: ಮೋಜು-ಮಸ್ತಿಗಾಗಿ ರೈತರ ನಿದ್ದೆ ಕೆಡೆಸಿದ್ದ ದಾಳಿಂಬೆ ಕಳ್ಳರು, ಟಿವಿ9 ಡಿಜಿಟಲ್ ವರದಿಯಿಂದ ಎಚ್ಚೆತ್ತ ಪೊಲೀಸರು!

Chikkaballapur Pomegranate Thieves Arrested; ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಕ್ರಾಸ್, ಚದಲಪುರ, ಅಜ್ಜವರ, ಸಾದೇನಹಳ್ಳಿ, ನಾಯನಹಳ್ಳಿ, ಪಟ್ರೇನಹಳ್ಳಿ ಸೇರಿದಂತೆ ವಿವಿದೆಡೆ 10ಕ್ಕೂ ಹೆಚ್ಚು ತೋಟಗಳಲ್ಲಿ ದಾಳಿಂಬೆ ಕಳ್ಳತನ ಮಾಡಲಾಗಿತ್ತು.ಕೊನೆಗೂ ಪೊಲೀಸರು ದಾಳಿಂಬೆ ಕಳ್ಳರನ್ನು ಬಂಧಿಸಿದ್ದಾರೆ. ಬರೀ ಮೋಜು, ಮಸ್ತಿಗಾಗಿ ದಾಳಿಂಬೆ ಕದಿಯುತ್ತಿದ್ದ ಪ್ರಕರಣ ಬಯಲಾಗಿದೆ.

ಚಿಕ್ಕಬಳ್ಳಾಪುರ: ಮೋಜು-ಮಸ್ತಿಗಾಗಿ ರೈತರ ನಿದ್ದೆ ಕೆಡೆಸಿದ್ದ ದಾಳಿಂಬೆ ಕಳ್ಳರು, ಟಿವಿ9 ಡಿಜಿಟಲ್ ವರದಿಯಿಂದ ಎಚ್ಚೆತ್ತ ಪೊಲೀಸರು!
ಶ್ರೀಕಾಂತ್ ಅಲಿಯಾಸ್ ಕೆಂಪ & ರಾಜು ಕೆ.ಬಿ. ಅಲಿಯಾಸ್ ಚಿಕ್ಕಭೈರಪ್ಪ
Follow us
| Updated By: ಗಣಪತಿ ಶರ್ಮ

Updated on: Sep 21, 2023 | 5:54 PM

ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 21: ಗುಣಮಟ್ಟದ ದಾಳಿಂಬೆ (Pomegranate) ಹಣ್ಣಿಗೆ ಒಂದು ಕೆಜಿಗೆ 200 ರೂಪಾಯಿ ಬೆಲೆ ಇದೆ. ಇದ್ರಿಂದ ಕಳ್ಳರ (Thieves) ಕಣ್ಣು ರೈತರು ಬೆಳೆದಿದ್ದ ದಾಳಿಂಬೆ ತೋಟಗಳ ಮೇಲೆ ಬಿದ್ದಿತ್ತು. ರಾತ್ರೋರಾತ್ರಿ ಪ್ರತಿದಿನ ಒಂದಿಲ್ಲೊಂದು ಕಡೆ ದಾಳಿಂಬೆ ಕದ್ದು, ರೈತರ ನಿದ್ದೆಗೆಡಿಸಿದ್ದರು. ಕೊನೆಗೂ ಪೊಲೀಸರು ದಾಳಿಂಬೆ ಕಳ್ಳರನ್ನು ಬಂಧಿಸಿದ್ದಾರೆ. ಬರೀ ಮೋಜು, ಮಸ್ತಿಗಾಗಿ ದಾಳಿಂಬೆ ಕದಿಯುತ್ತಿದ್ದ ಪ್ರಕರಣ ಬಯಲಾಗಿದೆ.

ದಾಳಿಂಬೆ ಕಳ್ಳರು ಯಾರು?

ಬಂಧಿತ ಆರೋಪಿಗಳ ವಿವರ ಇಲ್ಲಿದೆ. ಒಬ್ಬ ಆರೋಪಿಯ ಹೆಸರು ಶ್ರೀಕಾಂತ್ ಅಲಿಯಾಸ್ ಕೆಂಪ. ಈಗ ತಾನೇ 19 ವರ್ಷ. ಚಿಕ್ಕಬಳ್ಳಾಪುರ ತಾಲ್ಲೂಕಿನ ಕುರ‍್ಲಹಳ್ಳಿ ಗ್ರಾಮದ ನಿವಾಸಿ. ಮತ್ತೊಬ್ಬನ ಹೆಸರು ರಾಜು ಕೆ.ಬಿ. ಅಲಿಯಾಸ್ ಚಿಕ್ಕಭೈರಪ್ಪ ಅಲಿಯಾಸ್ ಭೈರ. 23 ವರ್ಷ ವಯಸ್ಸು. ಚಿಕ್ಕಬಳ್ಳಾಪುರ ತಾಲ್ಲೂಕಿನ ಕರ‍್ಲಹಳ್ಳಿ ಗ್ರಾಮದ ನಿವಾಸಿ. ದುಡಿದು ತಿನ್ನುವ ವಯಸ್ಸಿನಲ್ಲಿ ಮೋಜು-ಮಸ್ತಿ ಹಿಂದೆ ಬಿದ್ದಿದ್ದರು. ದುಡಿದು ತಿನ್ನುವುದರ ಬದಲು ರೈತರು ಬೆಳೆದಿದ್ದ ದಾಳಿಂಬೆ ತೋಟಕ್ಕೆ ನುಗ್ಗಿ, ದಾಳಿಂಬೆ ಕಳ್ಳತನ ಮಾಡುತ್ತಿದ್ದರು. ಆದರೆ ಈಗ ಇವರ ನಸೀಬು ಕೆಟ್ಟಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾಗಿ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್. ನಾಗೇಶ್ ಮಾಹಿತಿ ನೀಡಿದ್ದಾರೆ.

ಎಲ್ಲೆಲ್ಲಿ ಕಳ್ಳತನವಾಗಿತ್ತು?

ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಕ್ರಾಸ್, ಚದಲಪುರ, ಅಜ್ಜವರ, ಸಾದೇನಹಳ್ಳಿ, ನಾಯನಹಳ್ಳಿ, ಪಟ್ರೇನಹಳ್ಳಿ ಸೇರಿದಂತೆ ವಿವಿದೆಡೆ 10ಕ್ಕೂ ಹೆಚ್ಚು ತೋಟಗಳಲ್ಲಿ ದಾಳಿಂಬೆ ಕಳ್ಳತನ ಮಾಡಲಾಗಿತ್ತು.

ಕದ್ದ ದಾಳಿಂಬೆ ಮಾರಾಟ ಮಾಡಿದ್ದಕ್ಕೆ ವ್ಯಾಪಾರಿಗಳಿಗೂ ನ್ಯಾಯಂಗ ಬಂಧನ

ರೈತರ ತೋಟದಿಂದ ಕದ್ದಿದ್ದ ದಾಳಿಂಬೆಯನ್ನು ಚಿಕ್ಕಬಳ್ಳಾಪುರದ ಹಣ್ಣಿನ ವ್ಯಾಪಾರಿಗಳಾದ ನಂಜುಂಡಪ್ಪ ಹಾಗೂ ಸೈಯದ್ ಮನ್ಸೂರ್ ಖರೀದಿ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದರು. ಇದರಿಂದ ಅವರನ್ನೂ ಸಹಾ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಬರಗಾಲಕ್ಕೆ ಕಂಗಲಾದ ಚಿಕ್ಕಬಳ್ಳಾಪುರ; ಕೆಲವು ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ

ಟಿವಿ9 ಡಿಜಿಟಲ್ ವರದಿಯಿಂದ ಎಚ್ಚೆತ್ತ ಪೊಲೀಸರು

ಚಿಕ್ಕಬಳ್ಳಾಪುರ ತಾಲ್ಲೂಕಿನ ವಿವಿಧ ದಾಳಿಂಬೆ ತೋಟಗಳಲ್ಲಿ ಕಳ್ಳರು, ಕಳ್ಳತನ ಮಾಡಿ ರೈತರ ನೆಮ್ಮದಿ ಹಾಳು ಮಾಡಿದ್ದರ ಬಗ್ಗೆ ಟಿವಿ 9 ಡಿಜಿಟಲ್ ನಿರಂತರ ವರದಿ ಪ್ರಸಾರ ಮಾಡಿತ್ತು. ಇದರಿಂದ ಅಲರ್ಟ್ ಆಗಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರ ಮೇಲೆ ಒತ್ತಡ ಹೇರಿ ಆರೋಪಿಗಳ ಬಂಧನಕ್ಕೆ ಸೂಚಿಸಿದರು. ಪೊಲೀಸರ ಕಾರ್ಯವೈಖರಿಗೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ