Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ – ಕಲ್ಯಾಣ ಮಂಟಪದಲ್ಲಿ ಮದುವೆ ಮುಯ್ಯಿ ಹಣವಿದ್ದ ಬ್ಯಾಗ್ ಕದ್ದ ಚೋರರು, ಸಿಸಿಟಿವಿ ಆಫ್​​ ಮಾಡಿ ಕಳ್ಳತನ

ದಿನಾಂಕ 18-02-2024 ರಂದು ಅದ್ದೂರಿ ಆರತಕ್ಷತೆ ನಡೆದಿತ್ತು. ಆರತಕ್ಷತೆ ಸಂದರ್ಭದಲ್ಲಿ ಬಂಧು-ಬಳಗ, ನೆಂಟರಿಷ್ಟರು ಸೇರಿದಂತೆ ಗಣ್ಯರು ವರನಿಗೆ ಸುಮಾರು 4 ಲಕ್ಷ ರೂಪಾಯಿಯಷ್ಟು ಹಣವನ್ನು ಮುಯ್ಯಿ ರೂಪದಲ್ಲಿ ಹಾಕಿದ್ದರು. ಆದರೆ ಕಲ್ಯಾಣ ಮಂಟಪದ ಒಳಗೆ ಹೋಗಿ ಹೊರಗೆ ಬರುವಷ್ಟರಲ್ಲಿ ಕಾರಿನಲ್ಲಿದ್ದ ಮುಯ್ಯಿ ಹಣದ ಬ್ಯಾಗ್ ಕಳ್ಳತನವಾಗಿತ್ತು.

ಚಿಕ್ಕಬಳ್ಳಾಪುರ - ಕಲ್ಯಾಣ ಮಂಟಪದಲ್ಲಿ ಮದುವೆ ಮುಯ್ಯಿ ಹಣವಿದ್ದ ಬ್ಯಾಗ್ ಕದ್ದ ಚೋರರು, ಸಿಸಿಟಿವಿ ಆಫ್​​ ಮಾಡಿ ಕಳ್ಳತನ
ಕಲ್ಯಾಣ ಮಂಟಪದಲ್ಲಿ ಮದುವೆ ಮುಯ್ಯಿ ಹಣವಿದ್ದ ಬ್ಯಾಗ್ ಕದ್ದ ಚೋರರು
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​

Updated on: Mar 11, 2024 | 1:14 PM

ಚಿಕ್ಕಬಳ್ಳಾಪುರ: ಮದುವೆಗಳಲ್ಲಿ ವಧು ಹಾಗೂ ವರನ ಕಡೆ ಪ್ರತ್ಯೇಕವಾಗಿ ಮುಯ್ಯಿ ಬಾಬತ್ತು ಹಣ ಹಾಗೂ ಗಿಫ್ಟ್​​ಗಳನ್ನು ನೀಡಿ ಶುಭ ಹಾರೈಸುವುದು ಸಂಪ್ರದಾಯ. ಬಡವರಿಂದ ದೊಡ್ಡ-ದೊಡ್ಡ ಶ್ರೀಮಂತರವರೆಗೂ ಮದುವೆ ಸಂದರ್ಭದಲ್ಲಿ ಮುಯ್ಯಿ ಹಾಕುವುದು ಸರ್ವೆ ಸಾಮಾನ್ಯ. ಹೀಗೆ ಪ್ರತಿಷ್ಠಿತ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀಮಂತ ಕುಟುಂಬವೊಂದರ ಮದುವೆ ಕಾರ್ಯಕ್ರಮದಲ್ಲಿ ವರನ ಮುಯ್ಯಿ ಬಾಬತ್ತು ಹಣಕ್ಕೆ ಕಣ್ಣು ಹಾಕಿದ ಖದೀಮರು ಮುಯ್ಯಿ ಹಣವಿದ್ದ ಬ್ಯಾಗ್ ಅನ್ನೇ ಕದ್ದು ಹೋಗಿರುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ತಾಲ್ಲೂಕು, ಚದಲಪುರ ಗ್ರಾಮದ ಪ್ರಗತಿಪರ ರೈತ ಮುನಿರಾಜು ಎನ್ನುವವರು ಕಳೆದ ಫೆಭ್ರವರಿ 18-19 ರಂದು ಚಿಕ್ಕಬಳ್ಳಾಪುರ ನಗರದ ಬಿ.ಬಿ. ರಸ್ತೆಯಲ್ಲಿರುವ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ ಪ್ರತಿಷ್ಠಿತ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ತಮ್ಮ ಮಗನ ಅದ್ದೂರಿ ಮದುವೆ ಮಾಡಿದ್ದರು.

ಆರತಕ್ಷತೆಯ ಮುಯ್ಯಿ ಹಣವಿದ್ದ ಬ್ಯಾಗ್ ಕಳ್ಳತನ! ದಿನಾಂಕ 18-02-2024 ರಂದು ಅದ್ದೂರಿ ಆರತಕ್ಷತೆ ನಡೆದಿತ್ತು. ಆರತಕ್ಷತೆ ಸಂದರ್ಭದಲ್ಲಿ ಬಂಧು-ಬಳಗ, ನೆಂಟರಿಷ್ಟರು ಸೇರಿದಂತೆ ಗಣ್ಯರು ವರನಿಗೆ ಸುಮಾರು 4 ಲಕ್ಷ ರೂಪಾಯಿಯಷ್ಟು ಹಣವನ್ನು ಮುಯ್ಯಿ ರೂಪದಲ್ಲಿ ಹಾಕಿದ್ದರು. ಮುಯ್ಯಿ ಹಣವಿದ್ದ ಬ್ಯಾಗ್‍ನ್ನು ವರನ ತಂದೆ ಮುನಿರಾಜು ಫೆಬ್ರವರಿ 19 ರಂದು ಬೆಳಿಗ್ಗೆ 6.20ರ ಸಮಯದಲ್ಲಿ ಹಣದ ಬ್ಯಾಗ್‍ನ್ನು ಮನೆಗೆ ಕೊಂಡೊಯ್ಯಲು ಕಲ್ಯಾಣ ಮಂಟಪದಿಂದ ಹೊರಗೆ ಬಂದು ತಮ್ಮ ಕಾರಿನಲ್ಲಿಟ್ಟಿದ್ದರು. ಆದರೆ ಮನೆಯ ಬೀಗ ಅವರ ಪತ್ನಿಯ ಬಳಿ ಇದ್ದ ಕಾರಣ ಬೀಗದ ಕೀ ತೆಗೆದುಕೊಂಡು ಬರಲು ಒಳಗೆ ಹೋಗಿ ಹೊರಗೆ ಬಂದಿದ್ದಾರೆ. ಅಷ್ಟರಲ್ಲಿ ಹಣವಿದ್ದ ಬ್ಯಾಗ್ ಕಳ್ಳತನವಾಗಿತ್ತು! ಆದರೆ ಕಾರಿನ ಡೋರ್ ಲಾಕ್ ಆಗಿರಲಿಲ್ಲವಂತೆ.

ಕಲ್ಯಾಣ ಮಂಟಪದ ವ್ಯವಸ್ಥಾಪಕನ ಮೇಲೆ ಅನುಮಾನ: ಕಲ್ಯಾಣ ಮಂಟಪದ ಒಳಗೆ ಹೋಗಿ ಹೊರಗೆ ಬರುವಷ್ಟರಲ್ಲಿ ಕಾರಿನಲ್ಲಿದ್ದ ಮುಯ್ಯಿ ಹಣದ ಬ್ಯಾಗ್ ಕಳ್ಳತನವಾಗಿತ್ತು. ಮತ್ತೊಂದಡೆ ಅತ್ತ ವಧು-ವರ ಮದುವೆ ಮುಹೂರ್ತಕ್ಕೆ ಸಿದ್ದಗೊಳ್ಳುತ್ತಿದ್ದರು. ಇದರಿಂದ ಗಾಬರಿಗೊಂಡ ಮುನಿರಾಜು ಹರ್ಷೋದಯ ಕಲ್ಯಾಣ ಮಂಟಪದ ವ್ಯವಸ್ಥಾಪಕ ಹಾಗೂ ಉಸ್ತುವಾರಿ ಬೈರೇಗೌಡ ಎನ್ನುವವರಿಗೆ ದೂರವಾಣಿ ಮೂಲಕ ಕರೆ ಮಾಡಿ ಕಳ್ಳತನದ ವಿಚಾರವನ್ನು ತಿಳಿಸಿದ್ದಾರೆ. ಕಾರ್ಯನಿಮಿತ್ತ ಮುನಿರಾಜು ಚದಲಪುರದ ಮನೆಗೆ ಹೋಗಿ ವಾಪಸ್ಸು ಕಲ್ಯಾಣಮಂಟಪದ ಬಳಿ ಉಸ್ತುವಾರಿ ಕೊಠಡಿಗೆ ಆಗಮಿಸಿದ್ದಾರೆ. ಅಷ್ಟೊತ್ತಿಗೆ ಬೈರೇಗೌಡ ಎನ್ನುವವರು ಸಿಸಿ ಟಿವಿ ರೂಂನಲ್ಲಿದ್ದರಂತೆ.

ಸಿ.ಸಿ. ಟಿವಿ ಕ್ಯಾಮೆರಾ ಆಫ್​​ ಮಾಡಿ ಕಳ್ಳತನ ಶಂಕೆ! ಹಣ ಕಳೆದುಕೊಂಡ ಮುನಿರಾಜು ಸಿಸಿ ಟಿವಿ ದೃಶ್ಯ ತೋರಿಸುವಂತೆ ಕಲ್ಯಾಣ ಮಂಟಪದ ಉಸ್ತುವಾರಿ ಭೈರೇಗೌಡರವರಿಗೆ ಮನವಿ ಮಾಡಿದ್ದಾರೆ. ಆದರೆ ಕಾರು ನಿಂತಿದ್ದ ಭಾಗದಲ್ಲಿ ಕ್ಯಾಮರಾವು ಕಳ್ಳತನ ನಡೆದಿರುವ 5 ನಿಮಿಷಗಳ ಕಾಲ ಬಂದ್ ಆಗಿದೆ. ಬೈರೇಗೌಡ ಬೇಕಾಬಿಟ್ಟಿ ಉತ್ತರಿಸಿದ್ದಾನೆ. ಇದರಿಂದ ಬೈರೇಗೌಡ ಹಾಗೂ ಸಿಬ್ಬಂದಿ ಮೇಲೆ ಕಳ್ಳತನದ ಅನುಮಾನ ಮೂಡಿದೆ.

ಕಲ್ಯಾಣ ಮಂಟಪ ಉಸ್ತುವಾರಿ ಹಾಗೂ ಸಿಬ್ಬಂದಿ ಮೇಲೆ ಪ್ರಕರಣ ದಾಖಲು! ಹರ್ಷೋದಯ ಕಲ್ಯಾಣ ಮಂಟಪದ ಉಸ್ತುವಾರಿ ಬೈರೇಗೌಡ ಹಾಗೂ ಕಲ್ಯಾಣಮಂಟಪದ ಕೆಲವು ಸಿಬ್ಬಂದಿ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿರುವ ಹಿನ್ನೆಲೆ, ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ಬೈರೇಗೌಡ ಹಾಗೂ ಸಿಬ್ಬಂದಿ ಮೇಲೆ ಕಳ್ಳತನ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಮತ್ತೊಂದೆಡೆ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಹಣ, ಚಿನ್ನಾಭರಣ, ಪರ್ಸ್ ಕಳ್ಳತನ ಪ್ರಕರಣಗಳು ಪದೇಪದೇ ಮರುಕಳಿಸುತ್ತಿವೆ ಎಂಬುದು ಖೇದಕರ ಸಂಗತಿ.

ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ