ಒಕ್ಕಲಿಗ, ಲಿಂಗಾಯತ ಸಮುದಾಯಕ್ಕೆ ಮೀಸಲಾತಿಗೆ ತಂದ ತಡೆಯಾಜ್ಞೆ ಕೆಲವೇ ದಿನಗಳಲ್ಲಿ ತೆರವು: ಸುಧಾಕರ್

|

Updated on: Mar 15, 2023 | 5:26 PM

ಸುಧಾಕರ್‌ ಬುದ್ಧಿವಂತ, ವಿದ್ಯಾವಂತ ವಿನೂತನ ಶೈಲಿಯಲ್ಲಿ ಕೆಲಸ ಮಾಡುತ್ತಾರೆ. ಇವರು ಮತ್ತಷ್ಟು ಎತ್ತರಕ್ಕೆ ಬೆಳೆದು ಕೀರ್ತಿ ತರಲಿ ಎಂದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಶ್ರೀಗಳು ಸಚಿವರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದರು.

ಒಕ್ಕಲಿಗ, ಲಿಂಗಾಯತ ಸಮುದಾಯಕ್ಕೆ ಮೀಸಲಾತಿಗೆ ತಂದ ತಡೆಯಾಜ್ಞೆ ಕೆಲವೇ ದಿನಗಳಲ್ಲಿ ತೆರವು: ಸುಧಾಕರ್
ಆರೋಗ್ಯ ಸಚಿವ ಡಾ.ಕೆ.ಸುಧಾಕರ್
Follow us on

ಚಿಕ್ಕಬಳ್ಳಾಪುರ: ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ವಿರೋಧಿಸಿ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಆದರೆ ಈ ತಡೆಯಾಜ್ಞೆ ಕೆಲವೇ ದಿನಗಳಲ್ಲಿ ತೆರವು ಆಗಲಿದೆ. ಈ ಸಂಬಂಧ ಸರ್ಕಾರ ಕಾನೂನು ತಜ್ಞರ ಅಭಿಪ್ರಾಯ ಪಡೆದಿದೆ. ಮೀಸಲಾತಿ ಕುರಿತು ಯಾವುದೇ ಆತಂಕ ಬೇಡ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Dr. K. Sudhakar) ಭರವಸೆ ನೀಡಿದರು. ಜಿಲ್ಲೆಯಲ್ಲಿ ನಿರ್ಮಿಸಲಾದ 14 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿ (Kempegowda statue unveiled At Chikkaballapura) ಮಾತನಾಡಿದ ಅವರು, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾದ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ (Dr. Nirmalanandanatha Swamiji) ಮುಖ್ಯಮಂತ್ರಿಗಳು, ಮಂತ್ರಿಗಳಿಗಿಂತ ಬ್ಯೂಜಿ. ಇವರು ಅತ್ಯಂತ ಕ್ರೀಯಾಶೀಲ ಸಮಾಜಮುಖಿ ಸ್ವಾಮೀಜಿಯಾಗಿದ್ದಾರೆ. ರಾಜ್ಯ ದೇಶ ವಿದೇಶಗಳಲ್ಲಿಯೂ ಮಠದ ಬೆಳವಣಿಗೆ ಮಾಡಿದ್ದಾರೆ. ದೇಶ ವಿದೇಶದಲ್ಲಿಯೂ ಶೈಕ್ಷಣಿಕ ಕ್ರಾಂತಿ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.

ಚಿಕ್ಕಬಳ್ಳಾಪುರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದ ಬಳಿ ಒಕ್ಕಲಿಗರ ಸಂಘದಿಂದ ಸ್ಥಾಪಿಸಲಾದ ಕೋಟೆ ಸಹಿತ 14 ಅಡಿಗಳ ಎತ್ತರದ ಕೆಂಪೇಗೌಡರ ಪ್ರತಿಮೆಯನ್ನು ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಅನಾವರಣಗೊಳಿಸಿದರು. 2750 ಕೆ.ಜಿ ಕಂಚಿನ ಪ್ರತಿಮೆ ಇದಾಗಿದ್ದು, 14 ಅಡಿ ಎತ್ತರ, 16 ಅಡಿ ಉದ್ದ, 4 ಅಡಿ ಅಗಲದ ಹೊಂದಿದೆ.

ಇದನ್ನೂ ಓದಿ: ಚಿಂತಾಮಣಿ ರಾಮ ರಾಜ್ಯವಾಗಲು ಬಿಜೆಪಿ ಗೆಲ್ಲಬೇಕು: ಸಚಿವ ಸುಧಾಕರ್

ಸುಧಾಕರ್‌ ಬುದ್ಧಿವಂತ, ವಿನೂತನ ಶೈಲಿಯ ಕೆಲಸಗಾರ: ಡಾ.ನಿರ್ಮಲಾನಂದನಾಥ ಶ್ರೀ

ಸಚಿವ ಸುಧಾಕರ್‌ ಬುದ್ಧಿವಂತ, ವಿದ್ಯಾವಂತ ಆಗಿದ್ದು, ವಿನೂತನ ಶೈಲಿಯಲ್ಲಿ ಕೆಲಸ ಮಾಡುತ್ತಾರೆ ಎಂದು ಡಾ. ನಿರ್ಮಲಾನಂದನಾಥ ಶ್ರೀಗಳು ಪ್ರಶಂಸಿದರು. ಆರೋಗ್ಯ ಸಚಿವ ಸುಧಾಕರ್‌ ಅವರಿಗೆ ಇನ್ನೂ ಎತ್ತರಕ್ಕೆ ಬೆಳೆಯುವ ಸಾಮರ್ಥ್ಯವಿದೆ. ಎತ್ತರಕ್ಕೆ ಬೆಳೆದು ಕೀರ್ತಿ ತರಲಿ ಎಂದು ಆಶಿರ್ವಾದ ಮಾಡಿದರು.

ಒಕ್ಕಲಿಗರ ಸಂಘ ಇರುವುದೇ ಸಮುದಾಯದ ಅಭಿವೃದ್ಧಿಗಾಗಿ. ಒಕ್ಕಲಿಗ ಸಮುದಾಯ ಹಾಗೂ ಸಂಘಟನೆಯ ದಿಕ್ಕು ತಪ್ಪಿಸಬೇಡಿ. ಒಕ್ಕಲಿಗ ಸಮುದಾಯದಲ್ಲಿ ಸಾಕಷ್ಟು ಬಡವರು ಇದ್ದಾರೆ. ಇವರಿಗೆ ನ್ಯಾಯ ದೊರಕಿಸಬೇಕಿದೆ. ಸಮುದಾಯದ ಬಡ ಮಕ್ಕಳಿಗೆ ಮೀಸಲಾತಿ ದೊರೆಯಬೇಕಿದೆ. ಒಕ್ಕಲಿಗರಿಗೆ ಮೀಸಲಾತಿ ದೊರೆಯಲು ಡಾ.ಸುಧಾಕರ್ ಶ್ರಮಿಸಿದ್ದಾರೆ ಎಂದು ಶ್ರೀಗಳು ಹೇಳಿದರು.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:23 pm, Wed, 15 March 23