
ಚಿಕ್ಕಬಳ್ಳಾಪುರ, ಮಾರ್ಚ್ 05: ಈ ಪ್ರಕರಣದಲ್ಲಿ ಬೇಲಿಯೇ ಎದ್ದು ಹೊಲ ಮೇದಂತಾಗಿದೆ. ದರೋಡೆಕೋರರನ್ನು ಹೆಡೆಮುರಿ ಕಟ್ಟಬೇಕಾಗಿದ್ದ ಪೊಲೀಸ್ ದರೋಡೆಗೆ ತರಬೇತಿ ನೀಡುತ್ತಿದ್ದನು ಎಂಬ ಪ್ರಕರಣ ಬೆಳಕಿಗೆ ಬಂದಿದೆ. ಹೆಣ್ಣೂರು (Hennur) ಟ್ರಾಫಿಕ್ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಇಲಿಯಾಜ್ (Police Head Constable) ರೌಡಿಶೀಟರ್ ಹಾಗೂ ಇತರರಿಗೆ ಮನೆ ದರೋಡೆಗೆ ತರಬೇತಿ ನೀಡುತ್ತಿದ್ದನು. ತರಬೇತಿ ನೀಡಿದ ಬಳಿಕ ಅವರನ್ನು ಮನೆ ದರೋಡಗೆ ಕಳುಹಿಸುತ್ತಿದ್ದನು.
ಗೌರಿಬಿದನೂರು ನಗರದ ಕರೇಕಲ್ಲಹಳ್ಳಿಯ ಶ್ರೀನಿವಾಸ್ ಎಂಬುವರ ಮನೆಯಲ್ಲಿ 2 ಕೋಟಿ ಹಣ ಕೆಜಿಗಟ್ಟಲೇ ಚಿನ್ನ ಇರುವ ಮಾಹಿತಿಯನ್ನು ದರೋಡೆಕೋರರು ಕಲೆಹಾಕಿದ್ದರು. ಫೆಬ್ರವರಿ 17 ರಂದು ದರೋಡಗೆ ಪ್ಲಾನ್ ಮಾಡಿದ್ದಾರೆ. ಬಳಿಕ, ಫೆಬ್ರವರಿ 20 ರಂದು ಮನೆಗೆ ನುಗ್ಗಿ ಮನೆಯವರನ್ನ ಬೆದರಿಸಿ ದರೋಡಗೆ ಪ್ರಯತ್ನಿಸಿದ್ದಾರೆ.
ಆದರೆ, ಶ್ರೀನಿವಾಸ್ ಅವರ ಮನೆಯಲ್ಲಿ ಸಿಕ್ಕಿದ್ದು ಕೇವಲ ಒಂದು ಉಂಗುರ, 14 ಹರಳುಗಳು, ಎರಡು ಹರಳದ ಕಲ್ಲುಗಳು. ದರೋಡೆ ಪ್ರಕರಣ ದಾಖಲಿಸಿಕೊಂಡ ಗೌರಿಬಿದನೂರು ಪೊಲೀಸರು ತನಿಖೆ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ವೇಳೆ ದರೋಡೆಕೋರರಿಗೆ ತರಬೇತಿ ನೀಡುತ್ತಿದ್ದು, ಪೊಲೀಸ್ ಹೆಡ್ ಕಾನ್ಸ್ಟೇಬಲ್ ಇಲಿಯಾಜ್ ಎಂದು ತಿಳಿದು ಬಂದಿದೆ.
ಹೆಣ್ಣೂರು ಸಂಚಾರಿ ಠಾಣೆಯ ಹೆಡ್ ಕಾನ್ಸ್ಟೇಬಲ್ ಇಲಿಯಾಜ್, ಡಿಜೆಹಳ್ಳಿ ಪೊಲೀಸ್ ಠಾಣೆಯ ನಟೋರಿಯಸ್ ರೌಡಿಶೀಟರ್ ತನ್ವಿರ್ ಆಲಿಯಾಸ್ ಮೆಂಟಲ್ ತನು, ಸಾಬೀರ್, ಫೈರೋಜ್,ಬಷೀರ್ ಅಹಮದ್, ಇರ್ಫಾನ್ ಪಾಷಾ, ಬಾಬಾಜಾನ್, ಅಮೀನ್ ಬಂಧಿತರು.
ಇದನ್ನೂ ಓದಿ: ಸಾಲ ತೀರಿಸೋಕೆ ಬುರ್ಖಾ ತೊಟ್ಟು ವೃದ್ದೆಯ ಚಿನ್ನಾಭರಣ ಕದ್ದ ಖತರ್ನಾಕ್ ಮಹಿಳೆಯರು
ಬೆಳಗಾವಿ: ರಾಮದುರ್ಗ ಪಟ್ಟಣದ ಚಿನ್ನದ ವ್ಯಾಪಾರಿ ವಿರೇಶ್ ಫತ್ತೇಪುರ ಎಂಬುವರ ಮನೆಯಲ್ಲಿನ ಸುಮಾರು 1 ಕೋಟಿ ರೂ. ಮೌಲ್ಯದ 1.200 ಕೆಜಿ ಚಿನ್ನಾಭರಣ ಕಳ್ಳತನವಾಗಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಖದೀಮರು ಬಾಗಿಲು ಮುರಿದು ಮನೆಯೊಳಗೆ ನುಗ್ಗಿ ಚಿನ್ನಾಭರಣ ಕದ್ದಿದ್ದಾರೆ. ಸ್ಥಳಕ್ಕೆ ಬೆರಳಚ್ಚು ಮತ್ತು ಶ್ವಾನದಳದ ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸಿದ್ದಾರೆ. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 2:49 pm, Wed, 5 March 25