AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವಿನ ಮನೆಯಾದ ರಾಷ್ಟ್ರೀಯ ಹೆದ್ದಾರಿಯಲ್ಲಿ 50 ಕಿಮೀ ವ್ಯಾಪ್ತಿಯೊಳಗೆ ಸಾವು, ನೋವುಗಳಿಂದ ಜನ ನರಳುತ್ತಿದ್ದಾರೆ

ಅದು ಎರಡು ಮಹಾನಗರಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ. ಆ ಹೆದ್ದಾರಿ ನೋಡೋಕೆ ನೈಸ್ ಆಗಿದೆಯೆಂದು ನೈಸ್ ಆಗಿ ಡ್ರೈವಿಂಗ್ ಮಾಡಿದರೆ ಅಪಘಾತ ತಪ್ಪಿದ್ದಲ್ಲ. ಆ ರಸ್ತೆಯ 50 ಕಿ.ಮೀ. ವ್ಯಾಪ್ತಿಯೊಳಗೆ ಕಳೆದ 9 ತಿಂಗಳಲ್ಲಿ ಬರೋಬ್ಬರಿ 47 ಜನ ಮೃತಪಟ್ಟು, ನೂರಾರು ಜನ ಗಾಯಗಳಿಂದ ನರಳುತ್ತಿದ್ದಾರೆ. ಆ ರಸ್ತೆಯಲ್ಲಿ ಸಂಚರಿಸಲು ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಅಷ್ಟಕ್ಕೂ ಆ ರಸ್ತೆ ಯಾವುದು ಅಂದರೆ… ಅದು ರಾಷ್ಟ್ರೀಯ ಹೆದ್ದಾರಿ-44 (National Highway 44), ಬೆಂಗಳೂರು-ಹೈದರಾಬಾದ್ ಮಹಾನಗರಗಳಿಗೆ ಸಂಪರ್ಕ […]

ಸಾವಿನ ಮನೆಯಾದ ರಾಷ್ಟ್ರೀಯ ಹೆದ್ದಾರಿಯಲ್ಲಿ 50 ಕಿಮೀ ವ್ಯಾಪ್ತಿಯೊಳಗೆ ಸಾವು, ನೋವುಗಳಿಂದ ಜನ ನರಳುತ್ತಿದ್ದಾರೆ
ಸಾವಿನ ಮನೆಯಾದ ರಾಷ್ಟ್ರೀಯ ಹೆದ್ದಾರಿಯಲ್ಲಿ 50 ಕಿಮೀ ವ್ಯಾಪ್ತಿಯೊಳಗೆ ಸಾವು, ನೋವುಗಳಿಂದ ಜನ ನರಳುತ್ತಿದ್ದಾರೆ
TV9 Web
| Updated By: ಸಾಧು ಶ್ರೀನಾಥ್​|

Updated on: Oct 03, 2022 | 4:08 PM

Share

ಅದು ಎರಡು ಮಹಾನಗರಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ. ಆ ಹೆದ್ದಾರಿ ನೋಡೋಕೆ ನೈಸ್ ಆಗಿದೆಯೆಂದು ನೈಸ್ ಆಗಿ ಡ್ರೈವಿಂಗ್ ಮಾಡಿದರೆ ಅಪಘಾತ ತಪ್ಪಿದ್ದಲ್ಲ. ಆ ರಸ್ತೆಯ 50 ಕಿ.ಮೀ. ವ್ಯಾಪ್ತಿಯೊಳಗೆ ಕಳೆದ 9 ತಿಂಗಳಲ್ಲಿ ಬರೋಬ್ಬರಿ 47 ಜನ ಮೃತಪಟ್ಟು, ನೂರಾರು ಜನ ಗಾಯಗಳಿಂದ ನರಳುತ್ತಿದ್ದಾರೆ. ಆ ರಸ್ತೆಯಲ್ಲಿ ಸಂಚರಿಸಲು ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಅಷ್ಟಕ್ಕೂ ಆ ರಸ್ತೆ ಯಾವುದು ಅಂದರೆ…

ಅದು ರಾಷ್ಟ್ರೀಯ ಹೆದ್ದಾರಿ-44 (National Highway 44), ಬೆಂಗಳೂರು-ಹೈದರಾಬಾದ್ ಮಹಾನಗರಗಳಿಗೆ ಸಂಪರ್ಕ ಕಲ್ಪಿಸುತ್ತೆ. ಇಲ್ಲಿ ರಸ್ತೆಯ ಮಿತಿಗಿಂತ ವಾಹನಗಳು ಹೆಚ್ಚಾಗಿ ಸಂಚರಿಸುತ್ತಿವೆ. ಇದರಿಂದ ಕೇಂದ್ರ ಸರ್ಕಾರ ಈ ರಸ್ತೆಯನ್ನು 8 ಪಥಗಳ ರಸ್ತೆಯನ್ನಾಗಿ ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ. ಆದರೆ ಈ ರಸ್ತೆಯ ನಾಗಾರ್ಜುನ ಕಾಲೇಜಿನಿಂದ ಬಾಗೇಪಲ್ಲಿವರೆಗೂ 50 ಕಿ.ಮೀ. ಉದ್ದವಿದೆ. ಈ ಅಂತರವೇ ಈಗ ಸಾವಿನ ಮನೆಯಾಗಿ ಪರಿಣಮಿಸಿದೆ. ಪ್ರತಿದಿನ ಒಂದಿಲ್ಲ ಒಂದು ಕಡೆ ಅಪಘಾತ, ಸಾವು, ನೋವು ಸಂಭವಿಸುತ್ತಿದೆ. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ (Chikkaballapur) ಪೊಲೀಸರಿಗೆ ಇದೇ ಒಂದು ಕೆಲಸವಾಗಿದೆ.

ಇನ್ನು ಎನ್‌ಹೆಚ್-44 ನಾಗಾರ್ಜುನ ಕಾಲೇಜಿನಿಂದ ಬಾಗೇಪಲ್ಲಿವರೆಗೂ 50 ಕಿ.ಮೀ. ಒಳಗೆ ಕಳೆದ 9 ತಿಂಗಳಲ್ಲಿ 136 ಅಪಘಾತ ಪ್ರಕರಣಗಳು ನಡೆದಿದೆ. ಇದರಲ್ಲಿ 41 ಘೋರ ಅಪಘಾತ ಪ್ರಕರಣಗಳಾಗಿದ್ದು, 95 ಅಪಘಾತ ಪ್ರಕರಣಗಳಾಗಿವೆ. 47 ಜನ ರಸ್ತೆಯಲ್ಲಿ ಮೃತಪಟ್ಟರೆ ನೂರಾರು ಜನ ಕೈ, ಕಾಲು, ದೇಹಕ್ಕೆ ಗಾಯಗಳಾಗಿ ಪರದಾಡುತ್ತಿದ್ದಾರೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸಲು ಬೈಕ್, ಕಾರು ಸವಾರರು ಪ್ರಾಣಭೀತಿಯಲ್ಲಿ ಸಂಚರಿಸುವಂತಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-44 ಅವೈಜ್ಞಾನಿಕವಾಗಿದೆಯಂತೆ. ಅನಿವಾರ್ಯ ಇರುವ ಕಡೆಯೂ ಸರ್ವೀಸ್ ರಸ್ತೆ ಇಲ್ಲ. ಅಂಡರ್‌ಪಾಸ್, ಬ್ರಿಡ್ಜ್ಗಳು ಇಲ್ಲ. ರಸ್ತೆ ಕ್ರಾಸಿಂಗ್‌ಗೆ ಹಂಪ್‌ಗಳಿಲ್ಲ.. ಸಿಗ್ನಲ್‌ಗಳಿಲ್ಲ.. ಯಾರು ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ರಸ್ತೆಯಲ್ಲಿ ನುಗ್ಗಬಹುದು. ಇದರಿಂದ ಪದೇಪದೇ ಅಪಘಾತ, ಸಾವು, ನೋವುಗಳಾಗಿ ಜನ ಸಾಯುತ್ತಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸ್ಥಳೀಯ ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಪ್ರಾಧಿಕಾರ ಇತ್ತ ಕಡೆ ಗಮನಹರಿಸದೇ ಇರುವುದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ –ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಫುರ

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ