ವಿಶ್ವಕಪ್​ ಪೈನಲ್ ಪಂದ್ಯ; ವಿಶ್ವವಿಖ್ಯಾತ ಪ್ರವಾಸಿ ತಾಣ ನಂದಿಗಿರಿಧಾಮ ಖಾಲಿ ಖಾಲಿ

ಇಂಡಿಯಾ ಆಸ್ಟೇಲಿಯಾ ಹೈವೊಲ್ಟೇಜ್ ಪೈನಲ್ ಕ್ರಿಕೆಟ್ ಪಂದ್ಯ ನಡೆಯುತ್ತಿರುವ ಹಿನ್ನಲೆ ವಿಶ್ವವಿಖ್ಯಾತ ಪ್ರವಾಸಿ ತಾಣವೊಂದು ಪ್ರವಾಸಿಗರು ಇಲ್ಲದೆ ಬೀಕೊ ಎನ್ನುತ್ತಿದೆ. ಅಷ್ಟಕ್ಕೂ ಅದ್ಯಾವ ತಾಣ ಅಂತೀರಾ? ಇಲ್ಲಿದೆ ನೋಡಿ

ವಿಶ್ವಕಪ್​ ಪೈನಲ್ ಪಂದ್ಯ; ವಿಶ್ವವಿಖ್ಯಾತ ಪ್ರವಾಸಿ ತಾಣ ನಂದಿಗಿರಿಧಾಮ ಖಾಲಿ ಖಾಲಿ
ನಂದಿಗಿರಿಧಾಮ ಖಾಲಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 19, 2023 | 3:34 PM

ಚಿಕ್ಕಬಳ್ಳಾಪುರ, ನ.19: ಪ್ರತಿದಿನ ಪ್ರೇಮಿಗಳು, ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಚಿಕ್ಕಬಳ್ಳಾಪುರ(Chikkaballapur) ತಾಲೂಕಿನ ವಿಶ್ವವಿಖ್ಯಾತ ಪ್ರವಾಸಿ ತಾಣ  ನಂದಿಗಿರಿಧಾಮ, ಇಂದು ಪ್ರೇಮಿಗಳು, ಪ್ರವಾಸಿಗರು (Tourists), ಪರಿಸರ ಪ್ರೇಮಿಗಳು ಇಲ್ಲದೆ ಬೀಕೊ ಎನ್ನುತ್ತಿದೆ. ಇಂದು ಭಾನುವಾರದ ರಜೆ ಇದ್ದರೂ ಪ್ರವಾಸಿಗರು ಗಿರಿಧಾಮದತ್ತ ಸುಳಿದಿಲ್ಲ. ಅದಕ್ಕೆ ಕಾರಣ ಇಂಡಿಯಾ-ಆಸ್ಟೇಲಿಯಾ ಹೈವೊಲ್ಟೇಜ್ ಫೈನಲ್ ಕ್ರಿಕೆಟ್ ಪಂದ್ಯ. ಜನರು ಪ್ರವಾಸ, ಪಿಕ್ನಿಕ್​ಗೆ ಇಂದು ಗುಡ್ ಬಾಯ್ ಹೇಳಿ, ಮನೆಗಳ ಟಿವಿಗಳ ಮುಂದೆ ಕುಳಿತು ಕ್ರಿಕೆಟ್ ವಿಕ್ಷಣೆ ಮಾಡುತ್ತಿದ್ದಾರೆ.

ಲೀಗ್​ ಪಂದ್ಯಗಳಲ್ಲಿ ಯಾವುದೇ ಸೋಲನ್ನು ಕಾಣದೇ ಭಾರತ ತಂಡ ಫೈನಲ್ ತಲುಪಿದೆ. ಇಂದು ನಡೆಯುವ ಪಂದ್ಯದಲ್ಲಿ ಗೆಲುವು ಸಾಧಿಸುವ​ ಎಲ್ಲರ ಫೇವರೇಟ್​ ತಂಡವಾಗಿರುವ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಮ್ಯಾಚ್​ ನೋಡಲು ಎಲ್ಲರೂ ಮನೆಯಲ್ಲಿ ಇದ್ದಾರೆ. ಹೌದು, ಫೈನಲ್​ ಪಂದ್ಯವನ್ನು ಕಣ್ತುಂಬಿಕೊಳ್ಳಿಸಲು ಪ್ರವಾಸಿಗರು ಮನೆಯಲ್ಲಿ ಇದ್ದು, ಇಂಡಿಯಾ ಗೆಲ್ಲಲು ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ:ಪ್ರೇಮಿಗಳ ದಿನದಂದು ನಂದಿಗಿರಿಧಾಮದ ಕುಳಿರ್ಗಾಳಿಯಲ್ಲಿ ಪ್ರೇಮಿಗಳ ಪ್ರೇಮ ನಿವೇದನೆ, ಪಿಸುಮಾತು ಮತ್ತು ಬಿಸಿಯಪ್ಪುಗೆ!

ವೀಕೆಂಡ್ ಬಂದರೆ ಸಾಕು ನಂದಿ ಗಿರಿಧಾಮದಲ್ಲಿ ಜನರು ಹಾಗೂ ವಾಹನಗಳ ಜನಸಂದಣಿ ಕಾಣುತ್ತಿತ್ತು. ಆದ್ರೆ, ಇಂದು(ನ.19) ವಾಹನಗಳು, ಜನ ಸಂದಣಿ ಕಾಣಲಿಲ್ಲ, ಅಲ್ಲೊಬ್ಬರು ಇಲ್ಲೊಬ್ಬರು ಪ್ರವಾಸಿಗರು ಆಗಮಿಸಿ ಪ್ರಕೃತಿ ಸೊಬಗು ಸವಿಯುತ್ತಿದ್ದಾರೆ. ಪ್ರತಿದಿನ ಪ್ರತಿಕ್ಷಣ ಜನರು ಹಾಗೂ ವಾಹನಗಳಿಂದ ಗಿಜಿಗಿಡುತ್ತಿದ್ದ ನಂದಿಗಿರಿಧಾಮ, ಇಂದು ಪ್ರವಾಸಿಗರು ಹಾಗೂ ವಾಹನಗಳು ಇಲ್ಲದೆ ನಿಶಬ್ದವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ
ಕೊಣ್ಣೂರು ಕುಡುಕ ನದಿಗೆ ಹಾರುವ ಅಪಾಯಕಾರಿ ಸ್ಟಂಟ್ ಮಾಡಿಯೂ ಬಚಾವಾದ!
ಕೊಣ್ಣೂರು ಕುಡುಕ ನದಿಗೆ ಹಾರುವ ಅಪಾಯಕಾರಿ ಸ್ಟಂಟ್ ಮಾಡಿಯೂ ಬಚಾವಾದ!