AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹ್ಯಾಲಿಪ್ಯಾಡ್ ನಿರ್ಮಾಣ ಹೆಸರಿನಲ್ಲಿ ಚಿಕ್ಕಮಗಳೂರು ಅಧಿಕಾರಿಗಳಿಂದ ಮೋಸ, ಸುಳ್ಳು ದಾಖಲೆ ತೋರಿಸಿ ಸರ್ಕಾರಕ್ಕೆ ವಂಚನೆ

ರಸ್ತೆ ಮಾಡಿದ್ದೀವಿ, ಹೆಲಿಪ್ಯಾಡ್ ಮಾಡಿದ್ದೀವಿ, ಎಂದು 20ಲಕ್ಷಕ್ಕೂ ಅಧಿಕ ಹಣವನ್ನ ಎಲ್ಲರೂ ಸೇರಿಕೊಂಡು ಗುಳುಂ ಮಾಡಿರುವುದು ದಾಖಲೆ ಸಹಿತ ಬಹಿರಂಗವಾಗಿದೆ. ಹೀಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹಣ ಹೊಡೆಯಲು ಜನಪ್ರತಿನಿಧಿಗಳು ಕೂಡ ಸಾಥ್ ಕೊಟ್ಟಿದ್ದಾರೆ ಎನ್ನುವುದು ಸದ್ಯ ಸಾರ್ವಜನಿಕರ ಆರೋಪ.

ಹ್ಯಾಲಿಪ್ಯಾಡ್ ನಿರ್ಮಾಣ ಹೆಸರಿನಲ್ಲಿ ಚಿಕ್ಕಮಗಳೂರು ಅಧಿಕಾರಿಗಳಿಂದ ಮೋಸ, ಸುಳ್ಳು ದಾಖಲೆ ತೋರಿಸಿ ಸರ್ಕಾರಕ್ಕೆ ವಂಚನೆ
ಹ್ಯಾಲಿಪ್ಯಾಡ್ ನಿರ್ಮಾಣದ ಹೆಸರಿನಲ್ಲಿ ವಂಚನೆ
preethi shettigar
| Updated By: ಸಾಧು ಶ್ರೀನಾಥ್​|

Updated on: Feb 23, 2021 | 2:59 PM

Share

ಚಿಕ್ಕಮಗಳೂರು: ಕಳಪೆ ಕಾಮಗಾರಿ ಮಾಡಿ ಹಣವನ್ನು ಲೂಟಿ ಮಾಡಿದವರನ್ನ ನಾವು ನೋಡಿದ್ದೇವೆ. ಆದರೆ ಯಾವುದೇ ಕೆಲಸ ಮಾಡದೆ ಹೆಲಿಪ್ಯಾಡ್ ನಿರ್ಮಾಣ ಮಾಡಿದ್ದೀವಿ, ರೋಡ್ ಮಾಡಿದ್ದೀವಿ ಎಂದು ಸರ್ಕಾರವನ್ನೇ ಯಮಾರಿಸಿ ಹಣವನ್ನು ಲೂಟಿ ಮಾಡಿದ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ನಡೆದಿದೆ. ಹೀಗೆ ಹೆಲಿಪ್ಯಾಡ್​ನಿಂದ ಇಳಿದು ವಿಐಪಿಗಳು ಓಡಾಡುವ ರೋಡ್, ಶೌಚಾಲಯ ಹಾಗೂ ಜನಸಾಮಾನ್ಯರು ಹೆಲಿಪ್ಯಾಡ್​ಗೆ ಬಂದ ಗಣ್ಯರನ್ನ ಮೀಟ್ ಮಾಡದಂತೆ ತಡೆಯುವ ಬ್ಯಾರಿಕೇಡ್ ಎಲ್ಲವನ್ನೂ ನಿರ್ಮಾಣ ಮಾಡಿದ್ದೇವೆ ಎಂದು ಖಾಲಿ ಜಾಗವನ್ನ ತೋರಿಸಿ ಬಿಲ್ ಮಾಡಿಕೊಂಡಿರುವುದು ಕಾಫಿನಾಡಿನ ಅಧಿಕಾರಿಗಳು ಹಾಗೂ ಗುತ್ತಿಗೆದಾರರು.

ಸರ್ಕಾರವನ್ನ ಯಾಮಾರಿಸಿ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಹಣವನ್ನ ಜೇಬಿಗಿಳಿಸಿಕೊಂಡಿರುವ ಈ ಅಧಿಕಾರಿಗಳು ಚಿಕ್ಕಮಗಳೂರು ನಗರದ ಐಡಿಎಸ್​ಜಿ ಕಾಲೇಜಿನ ಹಿಂಭಾಗದಲ್ಲಿ ಹೆಲಿಪ್ಯಾಡ್, ರೋಡ್, ಶೌಚಾಲಯ, ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ. ಇನ್ನು ಯಾರಾದರೂ ಈ ಬಗ್ಗೆ ದಾಖಲೆ ನೋಡಿಕೊಂಡು ಇಲ್ಲಿ ಬಂದರೆ ಬಿಳಿ ಬಣ್ಣದಲ್ಲಿ ರೌಂಡ್ ಮಾರ್ಕ್ ಹಾಗೂ ಹೆಚ್ ಮಾರ್ಕ್ ಹಾಕಿರುವುದನ್ನು ಬಿಟ್ಟರೆ ಬೇರೇನೂ ಸಿಗುವುದಿಲ್ಲ

halipad dhoka

ದಾಖಲೆಗಳ ಪ್ರತಿಗಳು

halipad dhoka

ಸುಳ್ಳು ದಾಖಲೆ ಸೃಷ್ಟಿಸಿ ವಂಚನೆ

ದಾಖಲೆಗಳಲ್ಲಿ ಹೈಟೆಕ್ ಹೆಲಿಪ್ಯಾಡ್ ಮಾಡಿದ್ದೀವಿ ಎಂದು ನಮೂದಿಸಿದಾಗ ಒಂದು ಕ್ಷಣ ಅವಕ್ಕಾದ ಸಾರ್ವಜನಿಕರೊಬ್ಬರು ಅರ್ಜಿ ಹಾಕಿ ಮಾಹಿತಿ ಹಕ್ಕಿನಲ್ಲಿ ಕೇಳಿದ್ದಾರೆ. ಆಗ ತಾವು ಕೇಳಿದ ವಿಚಾರ ಸತ್ಯ ಎನ್ನುವುದು ತಿಳಿದಿದೆ. ಅದಲ್ಲದೇ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಲ್ಲೂ ನಿಮ್ಮ ಕಾಲೇಜು ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಾಣವಾಗಿದ್ಯಾ ಎಂದು ಮಾಹಿತಿ ಕೇಳಿದ ಸಾರ್ವಜನಿಕರಿಗೆ ಅವರು ಕೂಡ ಇಲ್ಲಿ ಯಾವುದೇ ಹೆಲಿಪ್ಯಾಡ್ ಆಗಲಿ, ರಸ್ತೆಯಾಗಲಿ, ಶೌಚಾಲಯವಾಗಲಿ ನಿರ್ಮಾಣವಾಗಿಲ್ಲ ಎನ್ನುವುದನ್ನು ಲಿಖಿತ ರೂಪದಲ್ಲಿ ಅಂದರೆ ಪತ್ರದ ಮುಖೇನ ಉತ್ತರಿಸಿದ್ದಾರೆ.

helipad dhoka

ಚಿಕ್ಕಮಗಳೂರು ನಗರದ ಐಡಿಎಸ್​ಜಿ ಕಾಲೇಜಿನ ಹಿಂಭಾಗದ ದೃಶ್ಯ

ಸದ್ಯ ರಸ್ತೆ ಮಾಡಿದ್ದೀವಿ, ಹೆಲಿಪ್ಯಾಡ್ ಮಾಡಿದ್ದೀವಿ ಎಂದು 20 ಲಕ್ಷಕ್ಕೂ ಅಧಿಕ ಹಣವನ್ನ ಎಲ್ಲರೂ ಸೇರಿಕೊಂಡು ಗುಳುಂ ಮಾಡಿರುವುದು ದಾಖಲೆ ಸಹಿತ ಬಹಿರಂಗವಾಗಿದೆ. ಹೀಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹಣ ಹೊಡೆಯಲು ಜನಪ್ರತಿನಿಧಿಗಳು ಕೂಡ ಸಾಥ್ ಕೊಟ್ಟಿದ್ದಾರೆ ಎನ್ನುವುದು ಸದ್ಯ ಸಾರ್ವಜನಿಕರ ಆರೋಪ.

ಒಟ್ಟಿನಲ್ಲಿ ಏನೂ ಮಾಡದೇ ಎಲ್ಲಾ ಮಾಡಿದ್ದೀವಿ ಎಂದು ಜನರ ತೆರಿಗೆ ಹಣವನ್ನ ತಿಂದು ತೇಗಿರುವ ಭ್ರಷ್ಟರಿಗೆ ಏನು ಹೇಳಬೇಕು ತಿಳಿಯುವುದಿಲ್ಲ. ಇನ್ನಾದರೂ ಸಂಬಂಧಪಟ್ಟವರು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು, ದಾಖಲೆಯಲ್ಲಿ ಮಾತ್ರ ಇರುವ ಕೆಲಸವನ್ನು ವಾಸ್ತವವಾಗಿಯೂ ಮಾಡಿಸುವುದಕ್ಕೆ ಮುಂದಾಗಬೇಕಿದೆ.

ಇದನ್ನೂ ಓದಿ: Tv9 Digital Live | ಪೆಟ್ರೋಲ್, ಡೀಸೆಲ್ ಬೆಲೆಗಳು ಏಕೆ ಒಂದೇ ಸಮನೆ ಏರುತ್ತಿವೆ?

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ