ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತ‌ಎಣಿಕೆ: ನಾಪತ್ತೆಯಾಗಿದ್ದ ಮತಗಳು ಪತ್ತೆ; ಹೈರಾಣಾದ ಅಧಿಕಾರಿಗಳು

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಆರಂಭದಲ್ಲಿ 9 ಮತ ಪತ್ರಗಳು ನಾಪತ್ತೆಯಾಗಿ ಗೊಂದಲ ಸೃಷ್ಟಿ ಆಗಿತ್ತು. ಸತತ ಶೋಧದ ಬಳಿಕ ಪತ್ತೆಯಾಗಿವೆ. ಈ ಕಾರಣದಿಂದ ಮರು ಎಣಿಕೆ ಕಾರ್ಯ ನಿಗದಿತ ಸಮಯಕ್ಕಿಂತಲೂ ತೀವ್ರ ವಿಳಂಬವಾಗಿತ್ತು.

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತ‌ಎಣಿಕೆ: ನಾಪತ್ತೆಯಾಗಿದ್ದ ಮತಗಳು ಪತ್ತೆ; ಹೈರಾಣಾದ ಅಧಿಕಾರಿಗಳು
ಮರು ಮತ ಎಣಿಕೆ ಕಾರ್ಯ
Image Credit source: tv9 kannada
Edited By:

Updated on: May 02, 2026 | 3:55 PM

ಚಿಕ್ಕಮಗಳೂರು, ಮೇ 02: ನಗರದ IDSG ಕಾಲೇಜಿನಲ್ಲಿ ಇಂದು ಶೃಂಗೇರಿ ಕ್ಷೇತ್ರದ (Sringeri assembly constituency) ಅಂಚೆ ಮತಗಳ ಮರು ಮತ‌ ಎಣಿಕೆ ನಡೆದಿದೆ. ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಗೆಲುವಿನ ಫೈಟ್ ಶುರುವಾಗಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಮತಗಳ ಮರು ಎಣಿಕೆ ಪ್ರಕ್ರಿಯೆ ವೇಳೆ ಗೊಂದಲ ಉಂಟಾಗಿತ್ತು. ಏಕೆಂದರೆ 279 ತಿರಸ್ಕೃತ ಮತಗಳಲ್ಲಿ 270 ಮತ ಪತ್ರಗಳಷ್ಟೇ ಪತ್ತೆಯಾಗಿದ್ದವು. ಬಾಕಿ 9 ತಿರಸ್ಕೃತ ಮತ ಪತ್ರಗಳು ನಾಪತ್ತೆಯಾಗಿದ್ದು, ಅಧಿಕಾರಿಗಳ ಸತತ ಹುಡುಕಾಟದ ಬಳಿಕ ಕೊನೆಗೂ 9 ಮತಪತ್ರಗಳು ಪತ್ತೆಯಾಗಿವೆ.

ನ್ಯಾಯಾಲಯದ ಆದೇಶದ ಮೇರೆಗೆ ಒಟ್ಟು 1822 ಅಂಚೆ ಮತಗಳ ಮರು ಎಣಿಕೆಗೆ ಅಧಿಕಾರಿಗಳು ಮುಂದಾಗಿದ್ದರೂ, ಇದೀಗ ಮತಪತ್ರಗಳ ಪತ್ತೆ ಕಾರ್ಯವೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ನ್ಯಾಯಾಲಯದ ನಿರ್ದೇಶನದಂತೆ, 2023ರ ಚುನಾವಣೆಯಲ್ಲಿ ಚಲಾವಣೆಯಾಗಿದ್ದ 1822 ಅಂಚೆ ಮತಗಳನ್ನು ಮರು ಎಣಿಕೆ ಮಾಡಬೇಕಿತ್ತು. ಈ ಪೈಕಿ 279 ಮತಗಳನ್ನು ಅಂದು ತಿರಸ್ಕೃತ ಮತಗಳೆಂದು ಪರಿಗಣಿಸಲಾಗಿತ್ತು. ಆದರೆ, ಈಗ ಮರು ಎಣಿಕೆಯ ಸಂದರ್ಭದಲ್ಲಿ 20 ಟ್ರಂಕ್‌ಗಳಲ್ಲಿ ಭದ್ರಪಡಿಸಲಾಗಿದ್ದ ಮತಪತ್ರಗಳನ್ನು ಪರಿಶೀಲಿಸಿದಾಗ, 279 ತಿರಸ್ಕೃತ ಮತಗಳ ಪೈಕಿ ಕೇವಲ 270 ಮತಪತ್ರಗಳು ಮಾತ್ರ ಲಭ್ಯವಾಗಿದ್ದವು. ಉಳಿದ 9 ಮತಪತ್ರಗಳು ನಾಪತ್ತೆಯಾಗಿದ್ದವು. ಸತತ ಹುಡುಕಾಟದ ಬಳಿಕ ಇದೀಗ ಮತಪತ್ರಗಳು ಪತ್ತೆಯಾಗಿವೆ.

ಇದನ್ನೂ ಓದಿ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಗೂ ಮೊದಲೇ ಮತಗಳಿರುವ ಬಾಕ್ಸ್​ ಸೀಲ್ ಓಪನ್ ಆರೋಪ

ಬೆಳಗ್ಗೆಯಿಂದಲೇ ಅಧಿಕಾರಿಗಳು ಈ 9 ನಾಪತ್ತೆಯಾದ ಮತಪತ್ರಗಳಿಗಾಗಿ ತೀವ್ರ ಶೋಧ ನಡೆಸಿದ್ದರು. ಮತಪತ್ರಗಳ ಪತ್ತೆಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದರು, ಇದರಿಂದಾಗಿ ಮರು ಎಣಿಕೆ ಕಾರ್ಯ ನಿಗದಿತ ಸಮಯಕ್ಕಿಂತಲೂ ತೀವ್ರ ವಿಳಂಬವಾಗಿತ್ತು, ಆದರೆ ಇದೀಗ ಪತ್ತೆಯಾಗಿದ್ದು, ಮರು ಮತ ಎಣಿಕೆ ಕಾರ್ಯ ನಡೆಯುತ್ತಿದೆ.

ಶಾಸಕ ಟಿ.ಡಿ.ರಾಜೇಗೌಡ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್​: ತನಿಖಾಧಿಕಾರಿಗೆ ಕೋರ್ಟ್ ತರಾಟೆ

ಟಿ.ಡಿ.ರಾಜೇಗೌಡ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್​​ಗೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲಿ ಇಂದು ವಿಚಾರಣೆ ಮಾಡಲಾಗಿದ್ದು, ತನಿಖಾಧಿಕಾರಿಯ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಪ್ರಕರಣದ ತನಿಖಾ ಸ್ಥಿತಿಗತಿ ವರದಿಯನ್ನು ಸಲ್ಲಿಸಿದ ತನಿಖಾಧಿಕಾರಿ, ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಪರಿಶೀಲನಾ ಹಂತದಲ್ಲಿದೆ. ಅಂತಿಮ ವರದಿ ಸಲ್ಲಿಸಲು ಮೇಲಧಿಕಾರಿಗಳ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಕೋರ್ಟಗೆಎ ತಿಳಿಸಿದರು.

ಇದನ್ನೂ ಓದಿ: ಮೇ 2ರಂದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ: ಹೈಕೋರ್ಟ್​​ ಆದೇಶದ ಬೆನ್ನಲ್ಲೇ ಸಕಲ ಸಿದ್ಧತೆ

ತನಿಖಾಧಿಕಾರಿ ಹೇಳಿಕೆಗೆ ಗರಂ ಆದ ಜಡ್ಜ್ ಸಂತೋಷ್ ಗಜಾನನ ಭಟ್, ತನಿಖೆಯ ಅಂತಿಮ ವರದಿ ಸಲ್ಲಿಸಲೂ ಮೇಲಧಿಕಾರಿಗಳ ಅನುಮತಿ ಬೇಕೇ? ಎಂದು ಪ್ರಶ್ನಿಸಿದರು. ಅಲ್ಲದೆ, ಸಿಆರ್‌ಪಿಸಿಯ ಯಾವ ನಿಯಮ ಅಥವಾ ಕಾನೂನಿನ ಅಡಿಯಲ್ಲಿ ಅಂತಿಮ ವರದಿ ಸಲ್ಲಿಸಲು ಮೇಲಧಿಕಾರಿಗಳ ಅನುಮತಿ ಕಡ್ಡಾಯವಾಗಿದೆ? ಎಂದು ಕೇಳುವ ಮೂಲಕ ತನಿಖಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ನ್ಯಾಯಾಲಯದ ಪ್ರಶ್ನೆಗೆ ಸೂಕ್ತ ವಿವರಣೆ ನೀಡುವಂತೆ ತನಿಖಾಧಿಕಾರಿಗೆ ಸೂಚನೆ ನೀಡಿರುವ ನ್ಯಾಯಪೀಠವು, ಪ್ರಕರಣದ ವಿಚಾರಣೆಯನ್ನು ಮೇ 4ಕ್ಕೆ ಮುಂದೂಡಿದೆ.

ಪ್ರಕರಣ ಹಿನ್ನೆಲೆ 

2023ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೀವರಾಜ್ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ ರಾಜೇಗೌಡ ಎದುರು 201 ಮತಗಳ ಅಂತರದಿಂದ ಸೋತಿದ್ದರು. ಒಟ್ಟು 1822 ಅಂಚೆ ಮತಗಳಲ್ಲಿ 279 ಮತಗಳು ತಿರಸ್ಕೃತವಾಗಿದ್ದವು. ಈ ಫಲಿತಾಂಶವನ್ನು ಪ್ರಶ್ನಿಸಿ ಡಿ.ಎನ್. ಜೀವರಾಜ್ ಮರು ಎಣಿಕೆಗೆ ಮನವಿ ಮಾಡಿದ್ದರು ಕೂಡ ಅಂದಿನ ಜಿಲ್ಲಾ ಚುನಾವಣಾಧಿಕಾರಿ ಅದನ್ನು ಪರಿಗಣಿಸದೆ ಟಿ.ಡಿ. ರಾಜೇಗೌಡರನ್ನು ವಿಜೇತರೆಂದು ಘೋಷಿಸಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅದರಂತೆ ಇಂದು ಮರು ಎಣಿಕೆ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:28 pm, Sat, 2 May 26

Follow Us