AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರಕಾರದ ಕೆಲಸಕ್ಕೆ ಸಮಯ ಅಲ್ಲ, ನಾನು ಚುನಾವಣೆಗೆ ಬಂದಿದ್ದೇನೆ ಎಂದ ತಹಶೀಲ್ದಾರ್​ವಿರುದ್ಧ ಜನರ ಆಕ್ರೋಶ

94ಸಿ ಹಕ್ಕು ಪತ್ರ ನೀಡಲು ಸ್ಥಳೀಯರೊಬ್ಬರು ಮೂಡಿಗೆರೆ ತಹಶೀಲ್ದಾರ್​ಗೆ ಮನವಿ ಮಾಡಿದ್ದು, ಈ ವೇಳೆ ‘ನಾನು ಚುನಾವಣೆಯ ಕೆಲಸಕ್ಕೆ ಬಂದಿದ್ದೇನೆ ಎಂದು ತಹಶೀಲ್ದಾರ್ ಗರಂ ಆಗಿದ್ದಾರೆ. ತಹಶೀಲ್ದಾರ್ ಈ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರದ ಕೆಲಸಕ್ಕೆ ಸಮಯ ಅಲ್ಲ, ನಾನು ಚುನಾವಣೆಗೆ ಬಂದಿದ್ದೇನೆ ಎಂದ ತಹಶೀಲ್ದಾರ್​ವಿರುದ್ಧ ಜನರ ಆಕ್ರೋಶ
ಮೂಡಿಗೆರೆ ತಹಶೀಲ್ದಾರ್​
Follow us
ಕಿರಣ್ ಹನುಮಂತ್​ ಮಾದಾರ್
|

Updated on:Mar 24, 2023 | 2:34 PM

ಚಿಕ್ಕಮಗಳೂರು: 94ಸಿ ಹಕ್ಕು ಪತ್ರ ನೀಡಲು ಸ್ಥಳೀಯರೊಬ್ಬರು ಮೂಡಿಗೆರೆ ತಹಶೀಲ್ದಾರ್​ಗೆ ಮನವಿ ಮಾಡಿದ್ದಾರೆ. ಈ ವೇಳೆ ‘ನಾನು ಚುನಾವಣೆಯ ಕೆಲಸಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಬಳಿಕ ಸ್ಥಳೀಯರು ಹಾಗೇ ಹೇಳಬೇಡಿ ಎಂದಿದ್ದು, ಇದಕ್ಕೆ ತಹಶೀಲ್ದಾರ್ ಫುಲ್ ಗರಂ ಆಗಿದ್ದಾರೆ. ಈ ವಿಷಯಕ್ಕೆ ಮೂಡಿಗೆರೆ ತಹಶೀಲ್ದಾರ್ ವಿರುದ್ದ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ನಂತರ ಫೈಲ್​ಗೆ ಸಹಿ ಹಾಕಿದ್ದಾರೆ. ಇನ್ನು ಈ ತಹಶೀಲ್ದಾರ್​ ವಿರುದ್ದ ಚುನಾವಣೆ ಕಾರಣ ಫೈಲ್​ಗಳು ಪೇಂಡಿಂಗ್ ಇರುವ ಹಾಗೂ 94ಸಿ ಹಕ್ಕು ಪತ್ರ ನೀಡಲು ಅಲೆದಾಡಿಸುತ್ತಿರುವ ಆರೋಪ ಕೇಳಿಬಂದಿದೆ. ಈ ಕಾರಣಕ್ಕೆ ತಹಶೀಲ್ದಾರ್ ವರ್ಗಾವಣೆಗೆ ಸ್ಥಳಿಯರು ಆಗ್ರಹಿಸಿದ್ದಾರೆ.

ಸೋಲಾರ್ ಅಳವಡಿಸಿಕೊಡುವುದಾಗಿ ನಾಲ್ಕು ಮುಕ್ಕಾಲು ಕೋಟಿ ವಂಚನೆ

ಬೆಂಗಳೂರು: ಸೋಲಾರ್ ಅಳವಡಿಸಿಕೊಡುವುದಾಗಿ ನಾಲ್ಕು ಮುಕ್ಕಾಲು ಕೋಟಿ ವಂಚನೆ ಮಾಡಿರುವ ಆರೋಪ ಪ್ರಮೋದ್ ಪ್ರಕಾಶ್ ರಾವ್ ಎಂಬಾತನ ಮೇಲೆ ಕೇಳಿಬಂದಿದೆ. ಸಮೃದ್ಧಿ ರಿನವಬಲ್ಸ್ ಸಲ್ಯೂಷನ್ ನಿರ್ದೇಶಕ ಎಂದು ಹೇಳಿ ಉದ್ಯಮಿ ಗುಲ್ಲು ತಲರೇಜಾ ಎಂಬುವವರಿಗೆ ವಂಚಿಸಲಾಗಿದೆ. ಜೆಮಿನಿ ಡೈಯಿಂಗ್ ಅಂಡ್ ಪ್ರಿಂಟಿಂಗ್ ಮಿಲ್ಸ್ ಪ್ರೈ.ಲಿ ಮಾಲೀಕರಾಗಿರುವ ಗುಲ್ಲು. ತಮ್ಮ ಕಂಪನಿಗೆ ಸೋಲಾರ್ ಅಳವಡಿಸಿ ಕೊಡುವುದಾಗಿ ಬಂದಿದ್ದ ಪ್ರಮೋದ್ ಪ್ರಕಾಶ್. ಈ ಹಿಂದೆ ಕೆಲಸ ಮಾಡಿರೋದಾಗಿ ನಕಲಿ ಫೋಟೊ ತೋರಿಸಿದ್ದನಂತೆ. ಅಲ್ಲದೇ ನಕಲಿ ದಾಖಲೆ ತೋರಿಸಿ 5 ಕೋಟಿ 70 ಲಕ್ಷಕ್ಕೆ 1,500 ಕೆವಿಪಿ ಸೋಲಾರ್ ಅಳವಡಿಸಿ ಕೊಡೋದಾಗಿ ಒಪ್ಪಿಸಿ. ಮುಂಗಡವಾಗಿ 4 ಕೋಟಿ 75 ಲಕ್ಷ ಹಣ ಪಡೆದು, ಕೇವಲ ಕ್ಲಾಂಪ್ ಅಳವಡಿಸಿ ಕಳ್ಳಾಟವಾಡಿದ್ದಾನೆ.

ಇದನ್ನೂ ಓದಿ:Samosa Shop: 30 ಲಕ್ಷ ಸಂಬಳದ ಕೆಲಸ ಬಿಟ್ಟು, ಮನೆ ಮಾರಿ ಸಮೋಸಾ ಮಾರುತ್ತಿರುವ ಬೆಂಗಳೂರಿನ ದಂಪತಿ; ಇವರ ಸಂಪಾದನೆ ಕೇಳಿದರೆ ಶಾಕ್ ಆಗುತ್ತೀರಿ…

ಮಷಿನ್​ಗಳು ಬರ್ತಿವೆ ಎಂದು ಹೇಳಿಕೊಂಡು ಬಂದಿದ್ದ ಇತ, ಹೀಗೆ ಎರಡು ವರ್ಷದಿಂದ ಕಳ್ಳಾಟ ಆಡುತ್ತಿದ್ದನಂತೆ. ಮಷಿನ್​ಗಳು ಲೋಡ್ ಮಾಡಿದ ರೀತಿಯ ಫೋಟೊ ವಾಟ್ಸ್ ಆ್ಯಪ್ ನಲ್ಲಿ‌ ಕಳಿಸಿ ಹಣ ಪೀಕಿದ್ದಾನೆ. ಆದರೆ ಎರಡು ವರ್ಷದಿಂದ ಹೀಗೆ ಯಾಮಾರಿಸಿದ್ದ ಆರೋಪಿಯ ವಿರುದ್ದ ಇದೀಗ ಹಣ ಕಳೆದುಕೊಂಡ ಗುಲ್ಲು ತಲರೇಜಾ ಎಂಬಾತ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ್ವಯ ಆರೋಪಿ ಪ್ರಮೋದ್ ಪ್ರಕಾಶ್​ನನ್ನ ಬಂಧಿಸಲಾಗಿದ್ದು, ತನಿಖೆ ವೇಳೆ ಆರೋಪಿ ಹಲವರಿಗೆ ಇದೇ ರೀತಿ ವಂಚಿಸಿರೋದು ಬೆಳಕಿಗೆ ಬಂದಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:33 pm, Fri, 24 March 23

ಅಣ್ಣಾವ್ರ ಸಿನಿಮಾದ ಹಾಡು ಹಾಡಿದ ಬಾಲಿವುಡ್ ಸ್ಟಾರ್ ನಟ: ವಿಡಿಯೋ ನೋಡಿ
ಅಣ್ಣಾವ್ರ ಸಿನಿಮಾದ ಹಾಡು ಹಾಡಿದ ಬಾಲಿವುಡ್ ಸ್ಟಾರ್ ನಟ: ವಿಡಿಯೋ ನೋಡಿ
ಮಂದ್ಸೌರ್ ಹೆದ್ದಾರಿಯಲ್ಲಿ ಕಾರನ್ನು 100 ಮೀಟರ್ ದೂರ ಎಳೆದೊಯ್ದ ಟ್ರಕ್
ಮಂದ್ಸೌರ್ ಹೆದ್ದಾರಿಯಲ್ಲಿ ಕಾರನ್ನು 100 ಮೀಟರ್ ದೂರ ಎಳೆದೊಯ್ದ ಟ್ರಕ್
ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಈ ಯೋಗಗಳು ಒಳ್ಳೆಯದು
ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಈ ಯೋಗಗಳು ಒಳ್ಳೆಯದು
ಸಿದ್ದೇಶ್ವರ ಬಂಡಾಯ ಬಿಜೆಪಿ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ!
ಸಿದ್ದೇಶ್ವರ ಬಂಡಾಯ ಬಿಜೆಪಿ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ!
ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ
ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ
ವಸತಿ ಯೋಜನೆ ಮೀಸಲಾತಿ, ಸದನದಲ್ಲಿ ಪ್ರಶ್ನೆ ಕೇಳಲಿ, ಉತ್ತರಿಸುವೆ: ಶಿವಕುಮಾರ್
ವಸತಿ ಯೋಜನೆ ಮೀಸಲಾತಿ, ಸದನದಲ್ಲಿ ಪ್ರಶ್ನೆ ಕೇಳಲಿ, ಉತ್ತರಿಸುವೆ: ಶಿವಕುಮಾರ್
ದೆಹಲಿ ಮೆಟ್ರೋದೊಳಗೆ ಬಂದಿತ್ತೇ ಹಾವು?
ದೆಹಲಿ ಮೆಟ್ರೋದೊಳಗೆ ಬಂದಿತ್ತೇ ಹಾವು?
ಜಂಗಲ್​​ರಾಜ್​ಗೆ ಬಿಹಾರ ಜನತೆ ಅಂತ್ಯ ಹಾಡಿದ್ದಾರೆ: ಮೋದಿ
ಜಂಗಲ್​​ರಾಜ್​ಗೆ ಬಿಹಾರ ಜನತೆ ಅಂತ್ಯ ಹಾಡಿದ್ದಾರೆ: ಮೋದಿ
ಜನ ನನಗೆ ಬಟ್ಟೆ ಕೊಡುತ್ತಾರೆ, ಪಾಪದ ಹಣದ ಬಟ್ಟೆ ಯಾರಿಗೆ ಬೇಕು? ಕುಮಾರಸ್ವಾಮಿ
ಜನ ನನಗೆ ಬಟ್ಟೆ ಕೊಡುತ್ತಾರೆ, ಪಾಪದ ಹಣದ ಬಟ್ಟೆ ಯಾರಿಗೆ ಬೇಕು? ಕುಮಾರಸ್ವಾಮಿ
ಉಡುಪಿ ಜನ ಶಾಂತಿಪ್ರಿಯರು, ಅದನ್ನು ಕದಡುವ ಪ್ರಯತ್ನ ಬೇಡ: ಹೆಬ್ಬಾಳ್ಕರ್
ಉಡುಪಿ ಜನ ಶಾಂತಿಪ್ರಿಯರು, ಅದನ್ನು ಕದಡುವ ಪ್ರಯತ್ನ ಬೇಡ: ಹೆಬ್ಬಾಳ್ಕರ್