ಕದ್ದ ಚಿನ್ನ ಖರೀದಿಸಿದ ಚಿತ್ರದುರ್ಗದ ಚಿನ್ನದ ವ್ಯಾಪಾರಿ ಸಿಸಿಬಿ ವಶಕ್ಕೆ!

ಚಿನ್ನಗಳ್ಳರು ನೀಡಿದ ಮಾಹಿತಿ ಮೇರೆಗೆ ಚಿನ್ನ ರಿಕವರಿಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಿವಿಧ ಜ್ಯುವೆಲ್ಲರಿ ಅಂಗಡಿಗಳವರು ಕಳ್ಳರ ಜತೆಗೆ ನಂಟು ಹೊಂದಿದ್ದು, ಪೊಲೀಸರ ತನಿಖೆಯಿಂದ ಸತ್ಯಾಂಶ ಬಯಲಾಗಬೇಕಿದೆ.

ಕದ್ದ ಚಿನ್ನ ಖರೀದಿಸಿದ ಚಿತ್ರದುರ್ಗದ ಚಿನ್ನದ ವ್ಯಾಪಾರಿ ಸಿಸಿಬಿ ವಶಕ್ಕೆ!
ವ್ಯಾಪಾರಿ ವಿನಯ್ನನ್ನ ವಶಕ್ಕೆ ಪಡೆದ ಸಿಸಿಬಿ ಪೊಲೀಸರು
Edited By: sandhya thejappa

Updated on: Aug 12, 2021 | 10:34 AM

ಚಿತ್ರದುರ್ಗ: ಬೆಂಗಳೂರಿನ ಸಿಸಿಬಿ (CCB) ಪೊಲೀಸರು ಕಾರ್ಯಾಚರಣೆ ನಡೆಸಿ ಕದ್ದ ಚಿನ್ನ ಖರೀದಿಸಿದ್ದ ಜ್ಯುವೆಲ್ಲರಿ ವ್ಯಾಪಾರಿಯನ್ನು ವಶಕ್ಕೆ ಪಡೆದ ಘಟನೆ ಹಿರಿಯೂರು ಪಟ್ಟಣದಲ್ಲಿ ನಡೆದಿದೆ. ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿ ಆಗಿರುವ ಕಳ್ಳರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಹಿರಿಯೂರಿಗೆ ಆಗಮಿಸಿದ್ದರು. ಹಿರಿಯೂರು ಪಟ್ಟಣದ ಮುಖ್ಯ ರಸ್ತೆಯಲ್ಲಿನ ತೇರುಮಲ್ಲೇಶ್ವರ ದೇಗುಲ ಕ್ರಾಸ್​ನಲ್ಲಿರುವ ವಾಸವಿ ಜ್ಯುವೆಲ್ಲರಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿ ವೇಳೆ ವಾಸವಿ ಜ್ಯುವೆಲ್ಲರಿ ಮಾಲೀಕ ಶ್ರೇಯಸ್ ನಾಪತ್ತೆ ಆಗಿದ್ದು, ಅಂಗಡಿಯಲ್ಲಿದ್ದ ಶ್ರೇಯಸ್ ಸಂಬಂಧಿ ವಿನಯ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಆರೋಪಿ ವಿನಯ್​ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ತೆರಳಿದ್ದಾರೆ. ಆದರೆ ಸಿಸಿಬಿ ಪೊಲೀಸರ ವಶದಲ್ಲಿರುವ ಕಳ್ಳತನದ ಆರೋಪಿಗಳು ಯಾರು? ಅವರಿಂದ ಹೊರ ಬಿದ್ದ ಮಾಹಿತಿ ಏನು? ಎಷ್ಟೆಲ್ಲಾ ಮೌಲ್ಯದ ಕದ್ದ ಚಿನ್ನಾಭರಣ ವಾಸವಿ ಜ್ಯುವೆಲ್ಲರಿಗೆ ನೀಡಿದ್ದರು ಎಂಬುದು ಸಿಸಿಬಿ ಪೊಲೀಸರಿಂದ ತಿಳಿದು ಬರಬೇಕಿದೆ.

ಚಿನ್ನಗಳ್ಳರು ನೀಡಿದ ಮಾಹಿತಿ ಮೇರೆಗೆ ಚಿನ್ನ ರಿಕವರಿಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಿವಿಧ ಜ್ಯುವೆಲ್ಲರಿ ಅಂಗಡಿಗಳವರು ಕಳ್ಳರ ಜತೆಗೆ ನಂಟು ಹೊಂದಿದ್ದು, ಪೊಲೀಸರ ತನಿಖೆಯಿಂದ ಸತ್ಯಾಂಶ ಬಯಲಾಗಬೇಕಿದೆ.

ಇದನ್ನೂ ಓದಿ

Kinnaur Landslide: ಹಿಮಾಚಲ ಪ್ರದೇಶದ ಭೂಕುಸಿತದಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿಕೆ; ಮಣ್ಣಿನಡಿ ಸಿಲುಕಿರುವ ಬಸ್​

ಲಕ್ಷ ರೂ ಲಂಚ ಕೇಳಿದ ಪೊಲೀಸರು, ಯುವಕ ಆತ್ಮಹತ್ಯೆ: ಪೊಲೀಸ್​ ಕಾನ್ಸ್​​ಟೇಬಲ್, ಎಸ್​ಐ ಸಸ್ಪೆಂಡ್​

(CCB police have arrested a gold dealer who Purchased the stolen gold at Chitradurga)

Web contact

TV9 Kannada

Read More
Follow Us