AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Customer Alert: ಭಾರತದ ಬ್ಯಾಂಕ್ ಗ್ರಾಹಕರ ವಂಚಿಸುತ್ತಿರುವ ಸೈಬರ್ ದಾಳಿಕೋರರ ಬಗ್ಗೆ ಎಚ್ಚರಿಕೆಯಿಂದ ಇರಲು ಸೂಚನೆ

ಸೈಬರ್ ದಾಳಿಕೋರರು ಹೊಸ ಬಗೆಯಲ್ಲಿ ಭಾರತೀಯ ಬ್ಯಾಂಕಿಂಗ್ ಗ್ರಾಹಕರ ವಂಚನೆಯಲ್ಲಿ ತೊಡಗಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ.

Customer Alert: ಭಾರತದ ಬ್ಯಾಂಕ್ ಗ್ರಾಹಕರ ವಂಚಿಸುತ್ತಿರುವ ಸೈಬರ್ ದಾಳಿಕೋರರ ಬಗ್ಗೆ ಎಚ್ಚರಿಕೆಯಿಂದ ಇರಲು ಸೂಚನೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Aug 11, 2021 | 10:23 PM

Share

ಬ್ಯಾಂಕ್​ ಗ್ರಾಹಕರೇ ಎಚ್ಚರ! ಭಾರತದ ಬ್ಯಾಂಕ್​ ಗ್ರಾಹಕರನ್ನು ವಂಚಿಸುವ ಗುರಿಯೊಂದಿಗೆ ಮೋಸಗಾರರು ಹೊಸ ತಂತ್ರದೊಂದಿಗೆ ಅಖಾಡಕ್ಕೆ ಇಳಿದಿದ್ದಾರೆ. ಇಂಟರ್​ನೆಟ್ ಬ್ಯಾಂಕಿಂಗ್ ಕ್ರೆಡೆನ್ಷಿಯಲ್ಸ್​, ಮೊಬೈಲ್ ಸಂಖ್ಯೆ ಮತ್ತು ಒಟಿಪಿಯಂಥ ಸೂಕ್ಷ್ಮ ಮಾಹಿತಿಯನ್ನು ಕಲೆಹಾಕಲು ವಂಚನೆಯ ವಹಿವಾಟುಗಳನ್ನು ನಡೆಸುತ್ತಿದ್ದಾರೆ ಎಂದು ಸೈಬರ್ ಭದ್ರತಾ ದಳದಿಂದ ಎಚ್ಚರಿಕೆಯನ್ನು ನೀಡಲಾಗಿದೆ. ವಿಶಿಷ್ಟ ವೆಬ್​ ಅಪ್ಲಿಕೇಷನ್​ ಬಳಸಿಕೊಂಡು, ವಂಚಕ ಪ್ಲಾಟ್​ಫಾರ್ಮ್​ ಮೂಲಕ ಈ ದುಷ್ಟ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. “ಭಾರತೀಯ ಬ್ಯಾಂಕಿಂಗ್ ಗ್ರಾಹಕರನ್ನು ಗುರಿ ಮಾಡಿಕೊಂಡು, ngrok ಪ್ಲಾಟ್​ಫಾರ್ಮ್​ ಬಳಸಿ, ಹೊಸ ಬಗೆಯ ವಂಚನೆ ದಾಳಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ.” ಭಾರತೀಯ ಬ್ಯಾಂಕ್​ಗಳ ಇಂಟರ್​ನೆಟ್​ ಬ್ಯಾಂಕಿಂಗ್​ ಪೋರ್ಟಲ್​ಗಳಂತೆ ವೆಬ್​ಸೈಟ್​ಗಳನ್ನು ಮಾಡಿ, ngrok ಪ್ಲಾಟ್​ಫಾರ್ಮ್​ ಮೂಲಕ ದುಷ್ಕರ್ಮಿಗಳು ಬೆದರಿಕೆಯೊಡ್ಡುತ್ತಿದ್ದಾರೆ ಎಂಬುದು CERT- In ಮಂಗಳವಾರದಂದು ಹೊರಡಿಸಿದ ಎಚ್ಚರಿಕೆಯಿಂದ ತಿಳಿದುಬಂದಿದೆ.

ಸೈಬರ್ ದಾಳಿ ಹಾಗೂ ಹ್ಯಾಕಿಂಗ್ ವಿರುದ್ಧ ರಕ್ಷಣೆ ಮಾಡುವ ಸರ್ಕಾರದ ಅಂಗ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ಟೀಮ್ ಅಥವಾ CERT-In. ಫಿಶಿಂಗ್ ಅಂದರೆ ನಂಬಿಕಸ್ತ ಸಂಸ್ಥೆ ಎಂಬ ರೀತಿ ಬಿಂಬಿಸಿಕೊಂಡು, ದಾಳಿಕೋರರು ವಂಚನೆ ಮಾಡುತ್ತಾರೆ. ಸಂತ್ರಸ್ತರು ಲಿಂಕ್​ ಮೇಲೆ ಕ್ಲಿಕ್ ಮಾಡುವಂತೆ ನೋಡಿಕೊಂಡು, ಪಾಸ್​ವರ್ಡ್​ಗಳು, ಲಾಗ್​ಇನ್, ಕ್ರೆಡೆನ್ಷಿಯಲ್ಸ್​, ಒನ್​-ಟೈಮ್ ಪಾಸ್​ವರ್ಡ್​ಗಳಿಗೆ ಕನ್ನ ಹಾಕಲಾಗುತ್ತದೆ. ಆದ್ದರಿಂದ ತಜ್ಞರು ನೀಡುವ ಸಲಹೆ ಏನೆಂದರೆ, ಅನುಮಾನ ಮೂಡಿಸುವಂಥ ಮೊಬೈಲ್ ಸಂಖ್ಯೆಗಳಿಂದ ಯಾವುದಾದರೂ ಎಸ್ಸೆಮ್ಮೆಸ್ ಬಂದಲ್ಲಿ ಅದರೊಳಗಿನ ಲಿಂಕ್ ಕ್ಲಿಕ್ ಮಾಡಬಾರದು. ಸರಿಯಾಗಿ ಬ್ಯಾಂಕ್​ನಿಂದಲೇ ಬಂದಂಥ ಎಸ್ಸೆಮ್ಮೆಸ್​ಗಳಿಗೆ ಕಳುಹಿಸಿದವರ ಐ.ಡಿ. (ಬ್ಯಾಂಕ್​ನ ಹೆಸರು ಚಿಕ್ಕದಾಗಿಯಾದರೂ) ಇರುತ್ತದೆ. ಇನ್ನೂ ಮುಂದುವರಿದು, ವೆಬ್​ಸೈಟ್ ಡೊಮೈನ್ ಸ್ಪಷ್ಟವಾಗಿ ಇದ್ದಲ್ಲಿ ಮಾತ್ರ ಯುಆರ್​ಎಲ್​ ಮೇಲೆ ಕ್ಲಿಕ್ ಮಾಡುವಂತೆ ಸಲಹೆ ನೀಡಲಾಗುತ್ತಿದೆ. ಒಂದು ವೇಳೆ ಅನುಮಾನ ಬಂದಲ್ಲಿ ಆ ಸಂಸ್ಥೆಯ ವೆಬ್​ಸೈಟ್ ಅನ್ನು ಸರ್ಚ್​ ಎಂಜಿನ್​ನಲ್ಲಿ ಹುಡುಕುವುದು ಉತ್ತಮ.

bit.ly ಹಾಗೂ ಸಣ್ಣ ಯುಆರ್​ಎಲ್​ಗಳು ಇದ್ದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು. ಇನ್ನು ವೆಬ್​ಸೈಟ್​ಗಳನ್ನು ಬ್ರೌಸ್​ ಮಾಡುವಾಗ ಅವುಗಳ ಅಕ್ಷರಗಳನ್ನು ಸರಿಯಾಗಿ ಗಮನಿಸಬೇಕು. ತಪ್ಪಾದ ಅಕ್ಷರಗಳು ಅಥವಾ ಯುಆರ್​ಎಲ್​ನ ಅಕ್ಷರಗಳಲ್ಲಿ ತಪ್ಪಾಗಿರುವುದು… ಇಂಥವುಗಳ ಬಗ್ಗೆ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಇನ್ನು ಯಾವಾಗಲೂ ಹೇಳುವ ಮಾತೆಂದರೆ, ಇಂಟರ್​ನೆಟ್ ಸಂಪರ್ಕ ಬಳಸುವಾಗ, ಬ್ರೌಸ್​ ಮಾಡುವಾಗ ಸುರಕ್ಷತೆಗೆ ಆದ್ಯತೆ ನೀಡಬೇಕು. ಆ್ಯಂಟಿ-ವೈರಸ್, ಆ್ಯಂಟಿ-ಸ್ಪೈವೇರ್​ ಸಾಫ್ಟ್​ವೇರ್​ಗಳನ್ನು ಅಪ್​ಡೇಟ್​ ಮಾಡಿಕೊಳ್ಳಬೇಕು. ಒಂದು ವೇಳೆ ಗ್ರಾಹಕರಿಗೆ ತಮ್ಮ ಖಾತೆಯಲ್ಲಿ ಅನುಮಾನಾಸ್ಪದವಾದ ಚಟುವಟಿಕೆ ನಡೆಯುತ್ತಿದೆ ಎಂದಾದಲ್ಲಿ ಕೂಡಲೇ ಆಯಾ ಬ್ಯಾಂಕ್​ಗೆ ಮಾಹಿತಿ ನೀಡಬೇಕು.

ಇದನ್ನೂ ಓದಿ: How To: ಕೊರೊನಾ ಕಾಲದಲ್ಲಿ ಹೆಚ್ಚುತ್ತಿದೆ ಸೈಬರ್ ದಾಳಿ; ಸುರಕ್ಷಿತ ಆನ್​ಲೈನ್ ಶಾಪಿಂಗ್ ಹೇಗೆ?

ಇದನ್ನೂ ಓದಿ: ಸೈಬರ್ ಕ್ರೈಂ ತಡೆಯಲು ಬೆಂಗಳೂರು ಪೊಲೀಸರು ಯಶಸ್ವಿ; ವಂಚಕರ ಖಾತೆಗೆ ಹೋಗಬೇಕಿದ್ದ 48 ಕೋಟಿ ರೂಪಾಯಿ ವಾಪಸ್!

(Customer Alert: About New Way Of Phishing Attack On Indian Banking Customers)

Published On - 10:15 pm, Wed, 11 August 21

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ