AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Customer Alert: ಭಾರತದ ಬ್ಯಾಂಕ್ ಗ್ರಾಹಕರ ವಂಚಿಸುತ್ತಿರುವ ಸೈಬರ್ ದಾಳಿಕೋರರ ಬಗ್ಗೆ ಎಚ್ಚರಿಕೆಯಿಂದ ಇರಲು ಸೂಚನೆ

ಸೈಬರ್ ದಾಳಿಕೋರರು ಹೊಸ ಬಗೆಯಲ್ಲಿ ಭಾರತೀಯ ಬ್ಯಾಂಕಿಂಗ್ ಗ್ರಾಹಕರ ವಂಚನೆಯಲ್ಲಿ ತೊಡಗಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ.

Customer Alert: ಭಾರತದ ಬ್ಯಾಂಕ್ ಗ್ರಾಹಕರ ವಂಚಿಸುತ್ತಿರುವ ಸೈಬರ್ ದಾಳಿಕೋರರ ಬಗ್ಗೆ ಎಚ್ಚರಿಕೆಯಿಂದ ಇರಲು ಸೂಚನೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Aug 11, 2021 | 10:23 PM

Share

ಬ್ಯಾಂಕ್​ ಗ್ರಾಹಕರೇ ಎಚ್ಚರ! ಭಾರತದ ಬ್ಯಾಂಕ್​ ಗ್ರಾಹಕರನ್ನು ವಂಚಿಸುವ ಗುರಿಯೊಂದಿಗೆ ಮೋಸಗಾರರು ಹೊಸ ತಂತ್ರದೊಂದಿಗೆ ಅಖಾಡಕ್ಕೆ ಇಳಿದಿದ್ದಾರೆ. ಇಂಟರ್​ನೆಟ್ ಬ್ಯಾಂಕಿಂಗ್ ಕ್ರೆಡೆನ್ಷಿಯಲ್ಸ್​, ಮೊಬೈಲ್ ಸಂಖ್ಯೆ ಮತ್ತು ಒಟಿಪಿಯಂಥ ಸೂಕ್ಷ್ಮ ಮಾಹಿತಿಯನ್ನು ಕಲೆಹಾಕಲು ವಂಚನೆಯ ವಹಿವಾಟುಗಳನ್ನು ನಡೆಸುತ್ತಿದ್ದಾರೆ ಎಂದು ಸೈಬರ್ ಭದ್ರತಾ ದಳದಿಂದ ಎಚ್ಚರಿಕೆಯನ್ನು ನೀಡಲಾಗಿದೆ. ವಿಶಿಷ್ಟ ವೆಬ್​ ಅಪ್ಲಿಕೇಷನ್​ ಬಳಸಿಕೊಂಡು, ವಂಚಕ ಪ್ಲಾಟ್​ಫಾರ್ಮ್​ ಮೂಲಕ ಈ ದುಷ್ಟ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. “ಭಾರತೀಯ ಬ್ಯಾಂಕಿಂಗ್ ಗ್ರಾಹಕರನ್ನು ಗುರಿ ಮಾಡಿಕೊಂಡು, ngrok ಪ್ಲಾಟ್​ಫಾರ್ಮ್​ ಬಳಸಿ, ಹೊಸ ಬಗೆಯ ವಂಚನೆ ದಾಳಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ.” ಭಾರತೀಯ ಬ್ಯಾಂಕ್​ಗಳ ಇಂಟರ್​ನೆಟ್​ ಬ್ಯಾಂಕಿಂಗ್​ ಪೋರ್ಟಲ್​ಗಳಂತೆ ವೆಬ್​ಸೈಟ್​ಗಳನ್ನು ಮಾಡಿ, ngrok ಪ್ಲಾಟ್​ಫಾರ್ಮ್​ ಮೂಲಕ ದುಷ್ಕರ್ಮಿಗಳು ಬೆದರಿಕೆಯೊಡ್ಡುತ್ತಿದ್ದಾರೆ ಎಂಬುದು CERT- In ಮಂಗಳವಾರದಂದು ಹೊರಡಿಸಿದ ಎಚ್ಚರಿಕೆಯಿಂದ ತಿಳಿದುಬಂದಿದೆ.

ಸೈಬರ್ ದಾಳಿ ಹಾಗೂ ಹ್ಯಾಕಿಂಗ್ ವಿರುದ್ಧ ರಕ್ಷಣೆ ಮಾಡುವ ಸರ್ಕಾರದ ಅಂಗ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ಟೀಮ್ ಅಥವಾ CERT-In. ಫಿಶಿಂಗ್ ಅಂದರೆ ನಂಬಿಕಸ್ತ ಸಂಸ್ಥೆ ಎಂಬ ರೀತಿ ಬಿಂಬಿಸಿಕೊಂಡು, ದಾಳಿಕೋರರು ವಂಚನೆ ಮಾಡುತ್ತಾರೆ. ಸಂತ್ರಸ್ತರು ಲಿಂಕ್​ ಮೇಲೆ ಕ್ಲಿಕ್ ಮಾಡುವಂತೆ ನೋಡಿಕೊಂಡು, ಪಾಸ್​ವರ್ಡ್​ಗಳು, ಲಾಗ್​ಇನ್, ಕ್ರೆಡೆನ್ಷಿಯಲ್ಸ್​, ಒನ್​-ಟೈಮ್ ಪಾಸ್​ವರ್ಡ್​ಗಳಿಗೆ ಕನ್ನ ಹಾಕಲಾಗುತ್ತದೆ. ಆದ್ದರಿಂದ ತಜ್ಞರು ನೀಡುವ ಸಲಹೆ ಏನೆಂದರೆ, ಅನುಮಾನ ಮೂಡಿಸುವಂಥ ಮೊಬೈಲ್ ಸಂಖ್ಯೆಗಳಿಂದ ಯಾವುದಾದರೂ ಎಸ್ಸೆಮ್ಮೆಸ್ ಬಂದಲ್ಲಿ ಅದರೊಳಗಿನ ಲಿಂಕ್ ಕ್ಲಿಕ್ ಮಾಡಬಾರದು. ಸರಿಯಾಗಿ ಬ್ಯಾಂಕ್​ನಿಂದಲೇ ಬಂದಂಥ ಎಸ್ಸೆಮ್ಮೆಸ್​ಗಳಿಗೆ ಕಳುಹಿಸಿದವರ ಐ.ಡಿ. (ಬ್ಯಾಂಕ್​ನ ಹೆಸರು ಚಿಕ್ಕದಾಗಿಯಾದರೂ) ಇರುತ್ತದೆ. ಇನ್ನೂ ಮುಂದುವರಿದು, ವೆಬ್​ಸೈಟ್ ಡೊಮೈನ್ ಸ್ಪಷ್ಟವಾಗಿ ಇದ್ದಲ್ಲಿ ಮಾತ್ರ ಯುಆರ್​ಎಲ್​ ಮೇಲೆ ಕ್ಲಿಕ್ ಮಾಡುವಂತೆ ಸಲಹೆ ನೀಡಲಾಗುತ್ತಿದೆ. ಒಂದು ವೇಳೆ ಅನುಮಾನ ಬಂದಲ್ಲಿ ಆ ಸಂಸ್ಥೆಯ ವೆಬ್​ಸೈಟ್ ಅನ್ನು ಸರ್ಚ್​ ಎಂಜಿನ್​ನಲ್ಲಿ ಹುಡುಕುವುದು ಉತ್ತಮ.

bit.ly ಹಾಗೂ ಸಣ್ಣ ಯುಆರ್​ಎಲ್​ಗಳು ಇದ್ದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು. ಇನ್ನು ವೆಬ್​ಸೈಟ್​ಗಳನ್ನು ಬ್ರೌಸ್​ ಮಾಡುವಾಗ ಅವುಗಳ ಅಕ್ಷರಗಳನ್ನು ಸರಿಯಾಗಿ ಗಮನಿಸಬೇಕು. ತಪ್ಪಾದ ಅಕ್ಷರಗಳು ಅಥವಾ ಯುಆರ್​ಎಲ್​ನ ಅಕ್ಷರಗಳಲ್ಲಿ ತಪ್ಪಾಗಿರುವುದು… ಇಂಥವುಗಳ ಬಗ್ಗೆ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಇನ್ನು ಯಾವಾಗಲೂ ಹೇಳುವ ಮಾತೆಂದರೆ, ಇಂಟರ್​ನೆಟ್ ಸಂಪರ್ಕ ಬಳಸುವಾಗ, ಬ್ರೌಸ್​ ಮಾಡುವಾಗ ಸುರಕ್ಷತೆಗೆ ಆದ್ಯತೆ ನೀಡಬೇಕು. ಆ್ಯಂಟಿ-ವೈರಸ್, ಆ್ಯಂಟಿ-ಸ್ಪೈವೇರ್​ ಸಾಫ್ಟ್​ವೇರ್​ಗಳನ್ನು ಅಪ್​ಡೇಟ್​ ಮಾಡಿಕೊಳ್ಳಬೇಕು. ಒಂದು ವೇಳೆ ಗ್ರಾಹಕರಿಗೆ ತಮ್ಮ ಖಾತೆಯಲ್ಲಿ ಅನುಮಾನಾಸ್ಪದವಾದ ಚಟುವಟಿಕೆ ನಡೆಯುತ್ತಿದೆ ಎಂದಾದಲ್ಲಿ ಕೂಡಲೇ ಆಯಾ ಬ್ಯಾಂಕ್​ಗೆ ಮಾಹಿತಿ ನೀಡಬೇಕು.

ಇದನ್ನೂ ಓದಿ: How To: ಕೊರೊನಾ ಕಾಲದಲ್ಲಿ ಹೆಚ್ಚುತ್ತಿದೆ ಸೈಬರ್ ದಾಳಿ; ಸುರಕ್ಷಿತ ಆನ್​ಲೈನ್ ಶಾಪಿಂಗ್ ಹೇಗೆ?

ಇದನ್ನೂ ಓದಿ: ಸೈಬರ್ ಕ್ರೈಂ ತಡೆಯಲು ಬೆಂಗಳೂರು ಪೊಲೀಸರು ಯಶಸ್ವಿ; ವಂಚಕರ ಖಾತೆಗೆ ಹೋಗಬೇಕಿದ್ದ 48 ಕೋಟಿ ರೂಪಾಯಿ ವಾಪಸ್!

(Customer Alert: About New Way Of Phishing Attack On Indian Banking Customers)

Published On - 10:15 pm, Wed, 11 August 21

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್