AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆ ಇಲ್ಲದಿದ್ದರೂ ಮೆಕ್ಕೆಜೋಳ, ಸೂರ್ಯಕಾಂತಿ ಬಂಪರ್ ಫಸಲು; ಸಾವಯವ ಕೃಷಿ ಮಾಡಿ ಸೈ ಎನಿಸಿಕೊಂಡ ರೈತ

ಕೃಷಿ ಮಳೆಯ ಜೊತೆಗಿನ ಜೂಜಾಟ ಅಂತಾರೆ. ಆದ್ರೆ ಇಲ್ಲೊಬ್ಬ ರೈತ ಮಳೆ ಕೈಕೊಟ್ರೂ ಸಾಂಪ್ರದಾಯಿಕ ಪದ್ಧತಿ ಮೂಲಕ ಖೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಬರದ ನಾಡಲ್ಲೂ ಬಂಪರ್ ಬೆಳೆ ಬೆಳೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಮಳೆ ಇಲ್ಲದಿದ್ದರೂ ಮೆಕ್ಕೆಜೋಳ, ಸೂರ್ಯಕಾಂತಿ ಬಂಪರ್ ಫಸಲು; ಸಾವಯವ ಕೃಷಿ ಮಾಡಿ ಸೈ ಎನಿಸಿಕೊಂಡ ರೈತ
ರೈತ ಕೊಂಚೆ ಶಿವರುದ್ರಪ್ಪ ಬರದ ನಾಡಲ್ಲೂ ಬಂಪರ್ ಬೆಳೆ ಬೆಳೆದು ಸಾಹಸ ಮೆರೆದಿದ್ದಾರೆ
TV9 Web
| Updated By: ಆಯೇಷಾ ಬಾನು|

Updated on: Sep 02, 2021 | 9:37 AM

Share

ಚಿತ್ರದುರ್ಗ: ಜಿಲ್ಲೆಯ ಕೂನಬೇವು ಗ್ರಾಮ ರೈತ ಕೊಂಚೆ ಶಿವರುದ್ರಪ್ಪ ಬರದ ನಾಡಲ್ಲೂ ಬಂಪರ್ ಬೆಳೆ ಬೆಳೆದು ಸಾಹಸ ಮೆರೆದಿದ್ದಾರೆ. ಶಿವರುದ್ರಪ್ಪ ಅನೇಕ ಬಾರಿ ಕೃಷಿಯಲ್ಲಿ ಕೈಸುಟ್ಟುಕೊಂಡಿದ್ದರು. ಆದ್ರೆ, ಈ ಬಾರಿ ಸಾವಯವ ಕೃಷಿಯ ಮೊರೆ ಹೋಗಲು ತೀರ್ಮಾನಿಸಿದ್ರು. ಇದರ ಪರಿಣಾಮ ಪೆಪ್ಸಿ ಲಿಕ್ವಿಡ್, ಗೋಮೂತ್ರ ಮತ್ತು‌ ಬೇವಿನ ಎಣ್ಣೆ ಬಳಸಿ ಸೂರ್ಯಕಾಂತಿ ಮತ್ತು ಮೆಕ್ಕೆಜೋಳ ಬೆಳೆದಿದ್ದಾರೆ. ಪರಿಣಾಮ ಮಳೆ, ನೀರಿನ ಸಮಸ್ಯೆ ಆದರೂ ಬೆಳೆ ಕೈಕೊಟ್ಟಿಲ್ಲ. ಯಾವುದೇ ಕೀಟ ಬಾಧೆ‌ ಆವರಿಸಿಲ್ಲ. ಸದ್ಯ ಬಂಪರ್ ಬೆಳೆ‌ಬಂದಿದ್ದು ನಿರೀಕ್ಷೆಗೆ ಮೀರಿ ಎರಡು ಪಟ್ಟು‌ ಫಸಲು ಬಂದಿದೆ.

ರೈತನ ಈ ಯಶಸ್ವಿ ಸಾವಯವ ಪ್ರಯೋಗವನ್ನು ನೋಡಲು ದೂರದ ಊರುಗಳಿಂದ ರೈತರು‌ ಬರ್ತಿದ್ದಾರೆ. ಅಲ್ಲದೆ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸುಮಾರು ಮೂವತ್ತು‌ ಎಕರೆ ಜಮೀನಿನಲ್ಲಿ ಹದಿನೈದು ಎಕರೆ ಮೆಕ್ಕೆಜೋಳ, ಹದಿನೈದು ಎಕರೆ ಸೂರ್ಯಕಾಂತಿ ಬೆಳೆ ಬೆಳೆಯಲಾಗಿದೆ. ಕೃಷಿ ಇಲಾಖೆ ಮಾರ್ಗದರ್ಶನ ಪಡೆದು ಉತ್ತಮ ನಿರ್ವಹಣೆ ಮಾಡಿದ ಕಾರಣ ಒಳ್ಳೆಯ ಫಸಲು ಬಂದಿದೆ. ಅನೇಕ ಕಡೆ ವಿವಿಧ ಕಾರಣಕ್ಕೆ ಬೆಳೆ ಹಾಳಾಗಿದ್ದರೂ ಶಿವರುದ್ರಪ್ಪ ಜಮೀನಿನಲ್ಲಿ ಮಾತ್ರ ಬೆಳೆಗಳು ನಳನಳಿಸ್ತಿವೆ. ಹೀಗಾಗಿ ರೈತರು ಕೃಷಿ ಅಧಿಕಾರಿಗಳು ಮಾದರಿ ರೈತರ ಮಾರ್ಗದರ್ಶನ ಪಡೆಯಬೇಕು ಅಂತಾರೆ ಕೃಷಿ ಇಲಾಖೆ ಅಧಿಕಾರಿ ಚಂದ್ರಕುಮಾರ್.

ಒಟ್ನಲ್ಲಿ ಕೋಟೆನಾಡು ಚಿತ್ರದುರ್ಗದ ಕೂನಬೇವು ಗ್ರಾಮದ‌ ರೈತ ಕೊಂಚೆ ಶಿವರುದ್ರಪ್ಪ ಸಾವಯವ ಪದ್ಧತಿ ಮೂಲಕ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದ್ದಾರೆ. ಮಾದರಿ ಕೃಷಿ ಕಾಯಕದ ಮೂಲಕ ಬರದನಾಡಿನ ರೈತಾಪಿ ವರ್ಗದ ಗಮನ ಸೆಳೆದಿದ್ದಾರೆ.

chitradurga Organic farming 4

ಮೆಕ್ಕೆಜೋಳ ಫಸಲು

chitradurga Organic farming 4

ರೈತನ ಈ ಯಶಸ್ವಿ ಸಾವಯವ ಪ್ರಯೋಗವನ್ನು ನೋಡಲು ದೂರದ ಊರುಗಳಿಂದ ರೈತರು‌ ಬರ್ತಿದ್ದಾರೆ. ಅಲ್ಲದೆ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ

chitradurga Organic farming 4

ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ

ಇದನ್ನೂ ಓದಿ: ಸಾವಯವ ಕೃಷಿ ಮೂಲಕ ಸೊಪ್ಪು ಬೆಳೆದು ಸ್ವಾವಲಂಬಿ ಬದುಕು ಕಟ್ಟಿಕೊಂಡ ದಾವಣಗೆರೆ ರೈತ; ಸುಡು ಬಿಸಿಲಿನಲ್ಲಿ ಸೊಪ್ಪಿನ ಸಂತೆ

‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ