AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರಿಗೆ ಸಚಿವ ರಾಮುಲು ಪ್ರತಿನಿಧಿಸುವ ಗ್ರಾಮದಲ್ಲಿ ಇಲ್ಲ ಬಸ್ ಸೇವೆ; ನಾಲ್ಕಾರು ಕಿಮೀ ನಟರಾಜ ಸರ್ವಿಸ್, ಸರ್ಕಾರದ ವಿರುದ್ಧ ಗ್ರಾಮಸ್ಥರ ಆಕ್ರೋಶ

ಫೆಬ್ರವರಿ 20ರಂದು ಡಿಸಿ ಕವಿತಾ ಮನ್ನಿಕೇರಿ ಗ್ರಾಮ ವಾಸ್ತವ್ಯ ಹೂಡಿದ್ದರು. ಡಿಸಿ ಸೂಚನೆ ಮೇರೆಗೆ ಆಗ ಕೆಲ ದಿನ ಮಾತ್ರ ಬಸ್ ಸಂಚಾರ ಮಾಡ್ತು. ಈಗ ಅದೇ ರಾಗ ಅದೇ ತಾಳದಂತೆ ಬಸ್ ಸೇವೆ ಬಂದ್ ಆಗಿದೆ.

ಸಾರಿಗೆ ಸಚಿವ ರಾಮುಲು ಪ್ರತಿನಿಧಿಸುವ ಗ್ರಾಮದಲ್ಲಿ ಇಲ್ಲ ಬಸ್ ಸೇವೆ; ನಾಲ್ಕಾರು ಕಿಮೀ ನಟರಾಜ ಸರ್ವಿಸ್, ಸರ್ಕಾರದ ವಿರುದ್ಧ ಗ್ರಾಮಸ್ಥರ ಆಕ್ರೋಶ
ಮಕ್ಕಳು, ಜನ ಸಾಮಾನ್ಯರು ಬಸ್ ಗಳಿಲ್ಲದೆ ನಾಲ್ಕಾರು ಕಿ.ಮೀ ನಡೆಯುವ ದುಸ್ಥಿತಿ
TV9 Web
| Edited By: |

Updated on:Sep 22, 2021 | 8:35 AM

Share

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕಣಕುಪ್ಪೆ ಗ್ರಾಮಕ್ಕೆ ಸಾರಿಗೆ ಬಸ್ಗಳ ವ್ಯವಸ್ಥೆಯಿಲ್ಲದೆ ಜನ ಹೈರಾಣಾಗಿದ್ದಾರೆ. ಮೊಳಕಾಲ್ಮೂರನ್ನು ಸಾರಿಗೆ ಸಚಿವ ಶ್ರೀರಾಮುಲು ಪ್ರತಿನಿಧಿಸುತ್ತಾರೆ. ಆದ್ರೆ ಸಾರಿಗೆ ಸಚಿವರ ಕ್ಷೇತ್ರದ ಗ್ರಾಮವೊಂದರಲ್ಲಿ ಬಸ್ ಸೇವೆಯೇ ಇಲ್ಲ. ಈಗಲೂ ಮಕ್ಕಳು, ಜನ ಸಾಮಾನ್ಯರು ಬಸ್ ಗಳಿಲ್ಲದೆ ನಾಲ್ಕಾರು ಕಿ.ಮೀ ನಡೆಯುವ ದುಸ್ಥಿತಿ ಇದೆ.

ಕಣಕುಪ್ಪೆ ಗ್ರಾಮಕ್ಕೆ ಸಾರಿಗೆ ಬಸ್ಗಳ ವ್ಯವಸ್ಥೆ ಇಲ್ಲ. ಹೀಗಾಗಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳು ಮುಂಜಾನೆಯೇ ಮನೆ ಬಿಡಬೇಕು. ಆಗಲೇ ಸರಿಯಾದ ಸಮಯಕ್ಕೆ ಶಾಲೆ ಸೇರಲು ಆಗುವುದು. ಇನ್ನು ಬಸ್ ಇಲ್ಲದ ಕಾರಣ ಶಾಲಾ, ಕಾಲೇಜು ವಿದ್ಯಾರ್ಥಿಗಳು ಆಟೋಗಳ ಟಾಪ್ ಮೇಲೆ ಕುಳಿತು ಪ್ರಯಾಣಿಸುತ್ತಾರೆ. ಇದು ಜೀವಕ್ಕೆ ಅಪಾಯವಾದರೂ ಇಲ್ಲಿನ ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ.

ಫೆಬ್ರವರಿ 20ರಂದು ಡಿಸಿ ಕವಿತಾ ಮನ್ನಿಕೇರಿ ಗ್ರಾಮ ವಾಸ್ತವ್ಯ ಹೂಡಿದ್ದರು. ಡಿಸಿ ಸೂಚನೆ ಮೇರೆಗೆ ಆಗ ಕೆಲ ದಿನ ಮಾತ್ರ ಬಸ್ ಸಂಚಾರ ಮಾಡ್ತು. ಈಗ ಅದೇ ರಾಗ ಅದೇ ತಾಳದಂತೆ ಬಸ್ ಸೇವೆ ಬಂದ್ ಆಗಿದೆ. ಶಾಲಾ, ಕಾಲೇಜು ಆರಂಭವಾದರೂ ಸಾರಿಗೆ ಬಸ್ಗಳ ಸುಳಿವು ಮಾತ್ರ ಇಲ್ಲ. ಹೀಗಾಗಿ ಗ್ರಾಮದ ಜನ ಸರ್ಕಾರ, ಸಾರಿಗೆ ಸಚಿವರು, ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಬೇರೆ ಬೇರೆ ಮದುವೆಯಾದರೂ ಒಂದೇ ಮನೆಯಲ್ಲಿ ವಾಸವಿದ್ದ ಇಬ್ಬರ ಸಾವು; ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆ

Published On - 8:28 am, Wed, 22 September 21