Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ರಾಜ್ಯದ ಶೇ 80ರಷ್ಟು ಮಂದಿ ಬಡವರೇ? ಸಿಎಂ ಸಿದ್ದರಾಮಯ್ಯ ಹೀಗೆ ಪ್ರಶ್ನಿಸಲು ಇದೆ ಕಾರಣ!

ಕರ್ನಾಟಕದಲ್ಲಿ 2021ರಿಂದಲೇ ಬೋಗಸ್ ಬಿಪಿಎಲ್ ಕಾರ್ಡ್​​ಗಳ ವಿರುದ್ಧ ಆಹಾರ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಆದಾಗ್ಯೂ ಇನ್ನೂ ಶೇ 80ರಷ್ಟು ನಾಗರಿಕರು ಬಿಪಿಎಲ್ ಕಾರ್ಡ್​ ಹೊಂದಿದ್ದಾರೆ! ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅಚ್ಚರಿ ವ್ಯಕ್ತಪಡಿಸಿದ್ದು, ಅಧಿಕಾರಿಗಳಿಗೆ ಖಡನ್ ಸೂಚನೆ ನೀಡಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ಕರ್ನಾಟಕ ರಾಜ್ಯದ ಶೇ 80ರಷ್ಟು ಮಂದಿ ಬಡವರೇ? ಸಿಎಂ ಸಿದ್ದರಾಮಯ್ಯ ಹೀಗೆ ಪ್ರಶ್ನಿಸಲು ಇದೆ ಕಾರಣ!
ಸಿಎಂ ಸಿದ್ದರಾಮಯ್ಯ
Follow us
Ganapathi Sharma
|

Updated on: Jul 11, 2024 | 12:15 PM

ಬೆಂಗಳೂರು, ಜುಲೈ 11: ಕರ್ನಾಟಕದಲ್ಲಿ ಶೇ 80 ರಷ್ಟು ನಾಗರೀಕರು ಬಡತನ ರೇಖೆಗಿಂತ ಕೆಳಗಿರುವುದು ಹೇಗೆ? ಇದು ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಅಧಿಕಾರಿಗಳ ಜತೆ ಸಭೆ ನಡೆಸಿದಾಗ ಕೇಳಿದ ಪ್ರಶ್ನೆ. ರಾಜ್ಯದಲ್ಲಿ ಹೆಚ್ಚಾಗಿರುವ ಬೋಗಸ್ ಬಿಪಿಎಲ್ ಕಾರ್ಡ್​​​ಗಳ ಬಗ್ಗೆ ಮುಖ್ಯಮಂತ್ರಿಗಳು ಕಳವಳ ವ್ಯಕ್ತಪಡಿಸಿದ್ದು, ಅಧಿಕಾರಿಗಳ ಬಳಿ ಈ ರೀತಿ ಪ್ರಶ್ನೆ ಕೇಳುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ಬೋಗಸ್ ಬಿಪಿಎಲ್ ಕಾರ್ಡ್​​​ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ತಮಿಳುನಾಡಿನಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರ ಪ್ರಮಾಣ ಶೇಕಡಾ 40 ರಷ್ಟಿದೆ ಎಂದು ಉಲ್ಲೇಖಿಸಿದ ಸಿದ್ದರಾಮಯ್ಯ, ನೀತಿ ಆಯೋಗದ ಪ್ರಕಾರ ಕರ್ನಾಟಕದಲ್ಲಿ ಕೇವಲ ಶೇಕಡಾ 5.67 ರಷ್ಟು ನಾಗರಿಕರು ಬಿಪಿಎಲ್ ಆಗಿರಬೇಕು ಎಂದಿದ್ದಾರೆ. ಆದಾಗ್ಯೂ, 4.67 ಕೋಟಿ ಜನರನ್ನು ಹೊಂದಿರುವ 1.47 ಕೋಟಿ ಕುಟುಂಬಗಳು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿವೆ ಎಂದು ಅವರು ಉಲ್ಲೇಖಿಸಿದ್ದಾರೆ.

ನಿಜವಾದ ಬಡವರಿಗೆ ಹೊಸ ಬಿಪಿಎಲ್ ಕಾರ್ಡ್‌ಗಳನ್ನು ನೀಡುವುದರ ಜತೆಗೆ ಎಲ್ಲಾ ಬೋಗಸ್ ಕಾರ್ಡ್‌ಗಳನ್ನು ತೊಡೆದುಹಾಕಬೇಕು ಎಂದು ಅಧಿಕಾರಿಗಳಿಗೆ ಸಿದ್ದರಾಮಯ್ಯ ಖಡಕ್ ಸಂದೇಶ ರವಾನಿಸಿದ್ದಾರೆ.

6.17 ಲಕ್ಷ ಬೋಗಸ್ ಬಿಪಿಎಲ್ ಕಾರ್ಡ್ ರದ್ದು

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಕಾರ, ರಾಜ್ಯದಲ್ಲಿ 2.95 ಲಕ್ಷ ಹೊಸ ಪಡಿತರ ಚೀಟಿ (ಬಿಪಿಎಲ್) ಅರ್ಜಿಗಳು ಬಾಕಿ ಉಳಿದಿವೆ. 2021 ಡಿಸೆಂಬರ್ ಮತ್ತು 2024 ರ ಫೆಬ್ರವರಿ ನಡುವೆ ಅಧಿಕಾರಿಗಳು 6.17 ಲಕ್ಷ ಬೋಗಸ್ ಬಿಪಿಎಲ್ ಕಾರ್ಡ್​​ಗಳನ್ನು ಪತ್ತೆ ಮಾಡಿ ಪಟ್ಟಿಯಿಂದ ತೆಗೆದುಹಾಕಿದ್ದಾರೆ.

ಬಿಪಿಎಲ್ ಅಂಕಿಅಂಶವನ್ನು ಸಮರ್ಪಕವಾಗಿ ಇಟ್ಟುಕೊಳ್ಳುವು ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಅನಿವಾರ್ಯವಾಗಿದೆ. ಏಕೆಂದರೆ ಸರ್ಕಾರದ ಅನ್ನ ಭಾಗ್ಯ ಯೋಜನೆ ಹಾಗೂ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳ ಗುರುತಿಸುವಿಕೆಗೆ ಇದುವೇ ಪ್ರಮುಖ ಆಧಾರವಾಗಿದೆ. ಸರ್ಕಾರದ ಐದು ಉಚಿತ ಗ್ಯಾರಂಟಿ ಯೋಜನೆಗಳ ಪೈಕಿ ಈ ಎರಡು ಯೋಜನೆಗಳಿಗೇ 28,000 ಕೋಟಿ ರೂ.ಗಿಂತ ಹೆಚ್ಚು ವೆಚ್ಚವಾಗುತ್ತಿದೆ.

ಇದನ್ನೂ ಓದಿ: BPL Card: ಬಿಪಿಎಲ್​ ಕಾರ್ಡ್​ಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ; ಮಾನದಂಡಗಳೇನು?

ಕರ್ನಾಟಕದಲ್ಲಿ 76 ಲಕ್ಷ ಪಿಂಚಣಿದಾರರಿದ್ದಾರೆ ಎಂದ ಸಿದ್ದರಾಮಯ್ಯ, ಭಾರತದಲ್ಲಿ ಅತಿ ಹೆಚ್ಚು ಪಿಂಚಣಿ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಪಿಂಚಣಿ ಸ್ವೀಕರಿಸುವವರು ಮೃತಪಟ್ಟರೆ ಅಂಥವರ ಹೆಸರಿನಲ್ಲಿ ಆಗುತ್ತಿರುವ ಪಾವತಿಯನ್ನು ನಿಲ್ಲಿಸಲು ಅಧಿಕಾರಿಗಳು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಲಂಡನ್‌ನ ಟರ್ಕಿಶ್ ಕಾನ್ಸುಲೇಟ್ ಹೊರಗೆ ಕುರಾನ್ ಸುಟ್ಟ ವ್ಯಕ್ತಿ
ಲಂಡನ್‌ನ ಟರ್ಕಿಶ್ ಕಾನ್ಸುಲೇಟ್ ಹೊರಗೆ ಕುರಾನ್ ಸುಟ್ಟ ವ್ಯಕ್ತಿ
ಮುಂದಿನ ಸಲ ಮಾತಾಡ್ತೀನಿ: ಪ್ರತಿಕ್ರಿಯೆ ನೀಡದೇ ಹೊರಟ ಪವಿತ್ರಾ ಗೌಡ
ಮುಂದಿನ ಸಲ ಮಾತಾಡ್ತೀನಿ: ಪ್ರತಿಕ್ರಿಯೆ ನೀಡದೇ ಹೊರಟ ಪವಿತ್ರಾ ಗೌಡ
ಉಕ್ರೇನ್‌ನ ಚೆರ್ನೋಬಿಲ್ ಪರಮಾಣು ಸ್ಥಾವರದ ಮೇಲೆ ರಷ್ಯಾದ ಡ್ರೋನ್‌ ದಾಳಿ
ಉಕ್ರೇನ್‌ನ ಚೆರ್ನೋಬಿಲ್ ಪರಮಾಣು ಸ್ಥಾವರದ ಮೇಲೆ ರಷ್ಯಾದ ಡ್ರೋನ್‌ ದಾಳಿ
ತುಂಬಿದ ಕೊಡ ತುಳಕಿತಲೇ ಪರಾಕ್: ಮೈಲಾರಲಿಂಗೇಶ್ವರನ ಕಾರ್ಣಿಕ
ತುಂಬಿದ ಕೊಡ ತುಳಕಿತಲೇ ಪರಾಕ್: ಮೈಲಾರಲಿಂಗೇಶ್ವರನ ಕಾರ್ಣಿಕ
ಯತ್ನಾಳ್​​ಗೆ ನೋಟೀಸ್ ಕೊಟ್ಟಿದ್ದು ನಾನಲ್ಲ, ಶಿಸ್ತು ಸಮಿತಿ: ವಿಜಯೇಂದ್ರ
ಯತ್ನಾಳ್​​ಗೆ ನೋಟೀಸ್ ಕೊಟ್ಟಿದ್ದು ನಾನಲ್ಲ, ಶಿಸ್ತು ಸಮಿತಿ: ವಿಜಯೇಂದ್ರ
ಮುಖ್ಯವಾಹಿನಿಗೆ ಬರುವ ಪ್ರಮಾಣಿಕ ಪ್ರಯತ್ನ ಬಾಗಪ್ಪ ಮಾಡುತ್ತಿದ್ದ: ಮಲಗೊಂಡ
ಮುಖ್ಯವಾಹಿನಿಗೆ ಬರುವ ಪ್ರಮಾಣಿಕ ಪ್ರಯತ್ನ ಬಾಗಪ್ಪ ಮಾಡುತ್ತಿದ್ದ: ಮಲಗೊಂಡ
‘ನಮ್ಮ ಪ್ರೀತಿಯ ರಾಮು’ ಸಿನಿಮಾ ನೋಡಿ ಖುಷಿಪಟ್ಟ ದರ್ಶನ್ ಅಭಿಮಾನಿಗಳು
‘ನಮ್ಮ ಪ್ರೀತಿಯ ರಾಮು’ ಸಿನಿಮಾ ನೋಡಿ ಖುಷಿಪಟ್ಟ ದರ್ಶನ್ ಅಭಿಮಾನಿಗಳು
ಆರೋಪಿಗಳು ಬಾಗಪ್ಪನ ಹತ್ಯೆ ನಂತರ ಕಾಡಲ್ಲಿ ಓಡಾಡಿಕೊಂಡಿದ್ದರು: ಎಸ್​ ಪಿ
ಆರೋಪಿಗಳು ಬಾಗಪ್ಪನ ಹತ್ಯೆ ನಂತರ ಕಾಡಲ್ಲಿ ಓಡಾಡಿಕೊಂಡಿದ್ದರು: ಎಸ್​ ಪಿ
ಪವಿತ್ರಾ ಬದುಕಿನ ಏಳು-ಬೀಳಿನ ಬಗ್ಗೆ ಬಿಗ್​ಬಾಸ್ ನೀತು ಮಾತು
ಪವಿತ್ರಾ ಬದುಕಿನ ಏಳು-ಬೀಳಿನ ಬಗ್ಗೆ ಬಿಗ್​ಬಾಸ್ ನೀತು ಮಾತು
ಟ್ರಂಪ್ ಜೊತೆಗಿನ ಮೋದಿ ಮಾತುಕತೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮೆಚ್ಚುಗೆ
ಟ್ರಂಪ್ ಜೊತೆಗಿನ ಮೋದಿ ಮಾತುಕತೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮೆಚ್ಚುಗೆ