AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ, ಕಿಡ್ನಿ ಜೋಪಾನ! ಪ್ರಸಿದ್ಧ ಆಸ್ಪತ್ರೆಯ ಹೆಸರಲ್ಲಿ ಫೇಕ್ ವೆಬ್​ಸೈಟ್; ಕಿಡ್ನಿ ಮಾರಿ 5 ಕೋಟಿ ರೂಪಾಯಿ ಪಡೆಯಿರಿ ಎಂದು ಜಾಹೀರಾತು

ನಗರದ ಒಂದು ಪ್ರಮುಖ ಆಸ್ಪತ್ರೆಯ ಹೆಸರಿನಲ್ಲಿ ನಕಲಿ ವೆಬ್​ಸೈಟ್ ಒಂದನ್ನು ತೆರೆದ ಕ್ರಿಮಿನಲ್​ಗಳು ಕಿಡ್ನಿ ಮಾರಾಟಕ್ಕೆ ವೇದಿಕೆ ಮಾಡಿಕೊಟ್ಟಿದ್ದಾರೆ. ಕಿಡ್ನಿ ಮಾರಾಟ ಮಾಡುವುದಕ್ಕೆ ಬರೋಬ್ಬರಿ 5 ಕೋಟಿ ರೂಪಾಯಿ ನೀಡುವುದಾಗಿ ವಂಚಕರು ನಕಲಿ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಹಣ, ಕಿಡ್ನಿ ಜೋಪಾನ! ಪ್ರಸಿದ್ಧ ಆಸ್ಪತ್ರೆಯ ಹೆಸರಲ್ಲಿ ಫೇಕ್ ವೆಬ್​ಸೈಟ್; ಕಿಡ್ನಿ ಮಾರಿ 5 ಕೋಟಿ ರೂಪಾಯಿ ಪಡೆಯಿರಿ ಎಂದು ಜಾಹೀರಾತು
ಸೈಬರ್ ಕ್ರೈಂ
TV9 Web
| Updated By: ganapathi bhat|

Updated on: Jun 26, 2021 | 6:25 PM

Share

ಬೆಂಗಳೂರು: ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆಯ ವೇಳೆ ಬಹಳಷ್ಟು ಸೈಬರ್ ಕ್ರೈಂ ಅಪರಾಧಗಳು ದಾಖಲಾಗಿದ್ದವು. ಕೊವಿಡ್-19 ಸೋಂಕಿತರಿಗೆ ಕೂಡ ಹಲವಷ್ಟು ಸಮಸ್ಯೆಗಳು ಉಂಟಾಗಿದ್ದವು. ವೈದ್ಯಕೀಯ ಆಮ್ಲಜನಕ ಪೂರೈಕೆ, ಆಕ್ಸಿಜನ್ ಕಾನ್ಸನ್​ಟ್ರೇಟರ್, ರೆಮ್​ಡಿಸಿವಿರ್ ಇಂಜೆಕ್ಷನ್, ಬ್ಲಾಕ್ ಫಂಗಸ್ ಔಷಧ ಇವುಗಳ ಬಗ್ಗೆಯೂ ಸೈಬರ್ ಕ್ರೈಂ ಅಪರಾಧಗಳು ನಡೆದಿದ್ದವು. ಆರೋಗ್ಯ ಸಮಸ್ಯೆಯನ್ನೂ ಜನರ ಅಸಹಾಯಕತೆಯನ್ನೂ ದುರ್ಬಳಕೆ ಮಾಡಿಕೊಂಡಂತಹ ಕೆಟ್ಟ ಪ್ರಸಂಗಗಳು ವರದಿಯಾಗಿದ್ದವು. ಇಂತಹುದೇ ಒಂದು ಕೆಟ್ಟ ಸೈಬರ್ ಕ್ರೈಂ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ.

ನಗರದ ಒಂದು ಪ್ರಮುಖ ಆಸ್ಪತ್ರೆಯ ಹೆಸರಿನಲ್ಲಿ ನಕಲಿ ವೆಬ್​ಸೈಟ್ ಒಂದನ್ನು ತೆರೆದ ಕ್ರಿಮಿನಲ್​ಗಳು ಕಿಡ್ನಿ ಮಾರಾಟಕ್ಕೆ ವೇದಿಕೆ ಮಾಡಿಕೊಟ್ಟಿದ್ದಾರೆ. ಕಿಡ್ನಿ ಮಾರಾಟ ಮಾಡುವುದಕ್ಕೆ ಬರೋಬ್ಬರಿ 5 ಕೋಟಿ ರೂಪಾಯಿ ನೀಡುವುದಾಗಿ ವಂಚಕರು ನಕಲಿ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ವರದಿಯ ಪ್ರಕಾರ, ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ ಆಸ್ಪತ್ರೆಯ ಡಾ. ನಿರಂಜನ್ ರೈ ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ದಾಖಲಾಗಿರುವ ಪ್ರಕರಣದ ಅನ್ವಯ ಡಾ. ಥಾಮಸ್ ಎಂಬವರ ವಿರುದ್ಧ ವಂಚಕ ವೆಬ್​ಸೈಟ್ ನಡೆಸುತ್ತಿದ್ದ ಆರೋಪದಲ್ಲಿ ದೂರು ದಾಖಲು ಮಾಡಿದ್ದಾರೆ.

ಪ್ರಕರಣದ ವಿಶೇಷ ಏನು ಅಂದರೆ, ಫೇಕ್ ವೆಬ್​ಸೈಟ್ ಕೂಡ ಮಣಿಪಾಲ್ ಆಸ್ಪತ್ರೆಯ ವೆಬ್​ಸೈಟ್​ಗೆ ಬಹಳಷ್ಟು ಹೋಲುವಂತಿದೆ. ಹೀಗೆ ತಯಾರಾಗಿರುವ ಫೇಕ್ ವೆಬ್​ಸೈಟ್​ನಲ್ಲಿ ಡಾ. ಥಾಮಸ್ ಜೋಸೆಫ್ ಎಂಬ ಹೆಸರಿನಲ್ಲಿ ಇರುವ ಸಂದೇಶ ಹೀಗಿದೆ. ನಿಮ್ಮ ಕಿಡ್ನಿಯನ್ನು 5 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿ. ಅದಕ್ಕಾಗಿ ನಮ್ಮನ್ನು ಸಂಪರ್ಕಿಸಿ ಹಾಗೂ ಇಂದೇ ಹಣ ಪಡೆದುಕೊಳ್ಳಿ. ನೀವು ಒಂದು ಕಿಡ್ನಿ ಮಾರಿಯೂ ಸಹಜ ಜೀವನ ನಡೆಸಬಹುದು ಎಂದು ಅದರಲ್ಲಿ ಹೇಳಲಾಗಿದೆ.

ಪೊಲೀಸರ ಮಾಹಿತಿಯ ಪ್ರಕಾರ, ಈ ವೆಬ್​ಸೈಟ್​ಗೆ ಭೇಟಿ ನೀಡಿರುವ ಬಹಳಷ್ಟು ಮಂದಿಯನ್ನು ವೆಬ್​ಸೈಟ್ ಬೇರೆ ಕಡೆಗೆ ರಿಡೈರೆಕ್ಟ್ ಮಾಡಿದೆ. ಇದರಲ್ಲಿ ರಿಜಿಸ್ಟ್ರೇಷನ್ ಫೀಸ್ ಎಂಬ ವಿಭಾಗ ಇರುವುದು ಕೂಡ ಕಂಡುಬಂದಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ನಾವು ವಂಚಕರ ಜಾಲವನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದೇವೆ. ಆರೋಪಿಗಳು ಬೇರೆ ರಾಜ್ಯದವರು ಎಂದು ಕಾಣುತ್ತದೆ. ನಾವು ತನಿಖೆಯ ಆರಂಭಿಕ ಹಂತದಲ್ಲಿ ಇದ್ದೇವೆ. ಯಾರಾದರೂ ಇದರಿಂದಾಗಿ ಹಣ ಕಳೆದುಕೊಂಡವರು ಇದ್ದರೆ ನಮಗೆ ಮಾಹಿತಿ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಈ ಬಗ್ಗೆ ಟೈಮ್ಸ್ ನೌ ನ್ಯೂಸ್ ಹಾಗೂ ಟೈಮ್ಸ್ ಆಫ್ ಇಂಡಿಯಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಹೀಗೆ ಮೋಸದ ಜಾಲ ಬೆಳೆಸಿಕೊಂಡು ಹಣ ಕೀಳುವ ಪ್ರಕರಣಗಳು ಹಲವಾರು ವರದಿಯಾಗುತ್ತಿದೆ. ಫೇಸ್ಬುಕ್ ಖಾತೆ ಮೂಲಕವೂ ಹಣ ಕೇಳುವ ಘಟನೆಗಳು ನಡೆದಿದೆ. ಈ ಬಗ್ಗೆ ಜನರೇ ಸ್ವಯಂ ಜಾಗೃತಿ ಇಟ್ಟುಕೊಳ್ಳುವುದು. ಸಾಧ್ಯವಾದಷ್ಟು ಎಚ್ಚರಿಕೆಯಿಂದ ಆನ್​ಲೈನ್ ವ್ಯವಹಾರ ನಡೆಸುವುದು. ಅಪರಿಚಿತರಿಗೆ, ಅಪರಿಚಿತ ವೆಬ್​ಸೈಟ್​ಗಳಿಗೆ, ಅನುಮಾನಾಸ್ಪದ ಸೈಟ್​ಗಳಿಗೆ ಹಣ ನೀಡದಿರುವುದು ಒಳ್ಳೆಯದು.

ಇದನ್ನೂ ಓದಿ: ಅನುಪಮಾ ಪರಮೇಶ್ವರನ್​ ನಕಲಿ ಮಾರ್ಕ್ಸ್​ ಕಾರ್ಡ್​ ವೈರಲ್​; ಈ ಹಗರಣದ ಹಿಂದೆ ಯಾರೆಲ್ಲ ಇದ್ದಾರೆ?

₹17.72 ಕೋಟಿ ನಕಲಿ ಕರೆನ್ಸಿ ಕೈವಶವಿರಿಸಿಕೊಂಡಿದ್ದ ಜ್ಯೋತಿಷಿ ಪೊಲೀಸರ ವಶಕ್ಕೆ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!