AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣ ಕನ್ನಡದಲ್ಲಿ ಕ್ರಿ.ಪೂ 700 ವರ್ಷಗಳಷ್ಟು ಹಳೆಯ ಟೆರಾಕೋಟಾ ಪ್ರತಿಮೆಗಳು ಪತ್ತೆ

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಬಳಿಯ ಮುದು ಕೊಣಾಜೆಯಲ್ಲಿ ಇತ್ತೀಚೆಗೆ ನಡೆಸಿದ ಪುರಾತತ್ವ ಅನ್ವೇಷಣೆಗಳಲ್ಲಿ ವಿಶಿಷ್ಟವಾದ ಪ್ರಾಚೀನ ಟೆರಾಕೋಟಾ ಪ್ರತಿಮೆಗಳು ಪತ್ತೆಯಾಗಿವೆ. ಈ ಪ್ರತಿಮೆಗಳು ಕ್ರಿ.ಪೂ 800-700 ವರ್ಷಗಳಷ್ಟು ಹಳೆಯದಾಗಿರಬಹುದು ಎಂದು ಅಂದಾಜಿಸಲಾಗಿದೆ. ಪತ್ತೆಯಾದ ಎಂಟು ಪ್ರತಿಮೆಗಳಲ್ಲಿ ಎರಡು ಗೋವುಗಳು, ಒಂದು ಮಾತೃ ದೇವತೆ ಸೇರಿವೆ.

ದಕ್ಷಿಣ ಕನ್ನಡದಲ್ಲಿ ಕ್ರಿ.ಪೂ 700 ವರ್ಷಗಳಷ್ಟು ಹಳೆಯ ಟೆರಾಕೋಟಾ ಪ್ರತಿಮೆಗಳು ಪತ್ತೆ
ದಕ್ಷಿಣ ಕನ್ನಡದಲ್ಲಿ ಕ್ರಿ.ಪೂ 700 ವರ್ಷಗಳಷ್ಟು ಹಳೆಯ ಟೆರಾಕೋಟಾ ಪ್ರತಿಮೆಗಳು ಪತ್ತೆ
Rakesh Nayak Manchi
|

Updated on: Sep 14, 2023 | 7:32 AM

Share

ಮಂಗಳೂರು, ಸೆ.14: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮೂಡುಬಿದಿರೆ ಬಳಿಯ ಮುದು ಕೊಣಾಜೆಯಲ್ಲಿ ಇತ್ತೀಚೆಗೆ ನಡೆಸಿದ ಪುರಾತತ್ವ ಅನ್ವೇಷಣೆ ವೇಳೆ ಪ್ರಾಚೀನ ಟೆರಾಕೋಟಾ (Terracotta) ಪ್ರತಿಮೆಗಳು ಕಂಡುಬಂದಿವೆ. ಮೂಳೆ ಮತ್ತು ಕಬ್ಬಿಣದ ತುಂಡುಗಳೊಂದಿಗೆ ಸಂರಕ್ಷಣೆಯ ವಿವಿಧ ಹಂತಗಳಲ್ಲಿ ವಿಶಿಷ್ಟವಾದ ಪ್ರತಿಮೆಗಳು ಕಂಡುಬಂದಿವೆ. ಈ ಪ್ರತಿಮೆಗಳು ಕ್ರಿ.ಪೂ 800-700 ವರ್ಷಗಳಷ್ಟು ಹಳೆಯದಾಗಿರಬಹುದು ಎಂದು ಉಡುಪಿ ಜಿಲ್ಲೆಯ ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ನಿವೃತ್ತ ಸಹಾಯಕ ಪ್ರಾಧ್ಯಾಪಕ ಟಿ.ಮುರುಗೇಶಿ ಹೇಳಿದ್ದಾರೆ.

ಪತ್ತೆಯಾದ ಎಂಟು ಪ್ರತಿಮೆಗಳಲ್ಲಿ ಎರಡು ಗೋವುಗಳು, ಒಂದು ಮಾತೃ ದೇವತೆ, ಎರಡು ನವಿಲುಗಳು, ಒಂದು ಕುದುರೆ, ಮಾತೃ ದೇವಿಯ ಕೈ ಸೇರಿದಂತೆ ಇನ್ನಿತರ ವಸ್ತುಗಳು ಒಳಗೊಂಡಿವೆ. ಮುಡು ಕೊಣಾಜೆಯಲ್ಲಿರುವ ಬೃಹತ್ ಶಿಲಾಯುಗದ ತಾಣವನ್ನು ಇತಿಹಾಸಕಾರ ಮತ್ತು ಸಂಶೋಧಕ ಪುಂಡಿಕೈ ಗಣಪಯ್ಯ ಭಟ್ ಅವರು 1980 ರ ದಶಕದಲ್ಲಿ ಕಂಡುಹಿಡಿದು ವರದಿ ಮಾಡಿದ್ದರು ಎಂದು ಅನ್ವೇಷಣೆಯಲ್ಲಿ ಭಾಗಿಯಾಗಿದ್ದ ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು ಐಟಿ ಪಾರ್ಕ್‌ ಸ್ಥಾಪನೆಗೆ ಸರ್ಕಾರ ಸಮ್ಮತಿ; ದಿನೇಶ್‌ ಗುಂಡೂರಾವ್‌

ಈ ಸ್ಥಳವು ಮೂಡುಬಿದಿರೆಯಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಮೂಡುಬಿದಿರೆ-ಶಿರ್ತಾಡಿ ರಸ್ತೆಯಲ್ಲಿದೆ. ಇದು ಕಲ್ಲಿನ ಬೆಟ್ಟದ ಇಳಿಜಾರಿನಲ್ಲಿ ಒಂಬತ್ತು ಡಾಲ್ಮೆನ್​ಗಳನ್ನು ಒಳಗೊಂಡಿರುವ ಅತಿದೊಡ್ಡ ಮೆಗಾಲಿಥಿಕ್ ಡಾಲ್ಮೆನ್ (ಸಮಾಧಿ) ತಾಣವಾಗಿದೆ. ಆದರೆ ಕೇವಲ ಎರಡು ಡಾಲ್ಮೆನ್​ಗಳು ಮಾತ್ರ ಹಾಗೇ ಉಳಿದಿವೆ ಮತ್ತು ಉಳಿದ ಸಮಾಧಿಗಳು ಹಾನಿಯಾಗಿವೆ ಎಂದು ಅವರು ಹೇಳಿದರು.

ಡಾಲ್ಮೆನ್ ಅಡಿಯಲ್ಲಿ, ದೊಡ್ಡ ಕಲ್ಲಿನ ಚಪ್ಪಡಿಗಳನ್ನು ಗಡಿಯಾರದ ಕ್ರಮದಲ್ಲಿ ನಿರ್ಮಿಸಲಾಗಿದೆ, ಈ ಚೌಕಾಕಾರದ ಕೋಣೆಯನ್ನು ಕ್ಯಾಪ್ ಸ್ಟೋ್​ನಂತೆ ಮತ್ತೊಂದು ದೊಡ್ಡ ಕಲ್ಲಿನ ಚಪ್ಪಡಿಯಿಂದ ಮುಚ್ಚಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬೃಹತ್ ಶಿಲಾಯುಗದ ಸಂದರ್ಭದಲ್ಲಿ ಮುಡು ಕೊಣಾಜೆಯಲ್ಲಿ ಕಂಡುಬರುವ ಟೆರಾಕೋಟಾ ಪ್ರತಿಮೆಗಳು ಭಾರತದ ಅಪರೂಪದ ಆವಿಷ್ಕಾರವಾಗಿದೆ. ಸಮಾಧಿಗಳು ನಿಧಿ ಶೋಧಕರಿಂದ ಹಾನಿಗೊಳಾಗಿರುವುದು ಕಂಡುಬಂದಿವೆ. ಡಾಲ್ಮೆನ್​ಗಳಲ್ಲಿ ಕಂಡುಬರುವ ಗೋವುಗಳು ಡಾಲ್ಮೆನ್​ಗಳ ಕಾಲಾನುಕ್ರಮವನ್ನು ನಿರ್ಧರಿಸಲು ಸಹಾಯ ಮಾಡುತ್ತವೆ.

ಬೃಹತ್ ಶಿಲಾಯುಗದ ಸಮಾಧಿಯಲ್ಲಿ ಕಂಡುಬರುವ ಟೆರಾಕೋಟಾಗಳು ಕರಾವಳಿ ಕರ್ನಾಟಕದ ಭೂತ ಪಂಥ ಅಥವಾ ದೈವರಾಧನೆಯ ಅಧ್ಯಯನಕ್ಕೆ ದೃಢವಾದ ನೆಲವನ್ನು ಒದಗಿಸುತ್ತವೆ. ಕೇರಳ ಮತ್ತು ಈಜಿಪ್ಟಿನ ಮಲಂಪುಳಾ ಮೆಗಾಲಿಥಿಕ್ ಟೆರಾಕೋಟಾ ಪ್ರತಿಮೆಗಳಲ್ಲಿ ಗೋವು ಅಥವಾ ಗೋ ದೇವತೆಗಳನ್ನು ಕಾಣಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!