ಮಂಗಳೂರಿನಲ್ಲಿ ಯುಟಿ ಖಾದರ್ ಶಾಂತಿ ಮಂತ್ರ; ಗುಂಡೂರಾವ್ ಗ್ಯಾರಂಟಿ ಜಪ

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಗ್ಯಾರಂಟಿಗಳ ಬಗ್ಗೆ ಜಪ ಮಾಡಿದರೆ, ಸ್ಥಳೀಯ ಶಾಸಕರೂ ಆಗಿರುವ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರು ಶಾಂತಿ ಮಂತ್ರ ಜಪಿಸಿದರು.

ಮಂಗಳೂರಿನಲ್ಲಿ ಯುಟಿ ಖಾದರ್ ಶಾಂತಿ ಮಂತ್ರ; ಗುಂಡೂರಾವ್ ಗ್ಯಾರಂಟಿ ಜಪ
ಮಂಗಳೂರಿನಲ್ಲಿ ಯುಟಿ ಖಾದರ್ ಶಾಂತಿ ಮಂತ್ರ; ಗುಂಡೂರಾವ್ ಗ್ಯಾರಂಟಿ ಜಪ
Edited By: Rakesh Nayak Manchi

Updated on: Mar 09, 2024 | 9:05 PM

ಮಂಗಳೂರು, ಮಾ.9: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ (Ullal) ತಾಲೂಕಿನಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ (Guarantee Convention) ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅವರು ಗ್ಯಾರಂಟಿಗಳ ಬಗ್ಗೆ ಜಪ ಮಾಡಿದರೆ, ಸ್ಥಳೀಯ ಶಾಸಕರೂ ಆಗಿರುವ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ (UT Khader) ಅವರು ಶಾಂತಿ ಮಂತ್ರ ಜಪಿಸಿದರು.

ಚುನಾವಣೆ ಬಂದಾಗ ರಾಜಕೀಯ ಪಕ್ಷಗಳು ಆಶ್ವಾಸನೆ ಕೊಡುತ್ತವೆ. ಅಧಿಕಾರಕ್ಕೆ ಬಂದ ಬಳಿಕ ಅದನ್ನು ಮರೆತು ಹೋಗುತ್ತೆವೆ ಎಂಬ ಭಾವನೆ ಇತ್ತು. ಆದರೆ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿ ಹೆಚ್ಚಿನ ಬರಗಾಲ ಪರಿಸ್ಥಿತಿ ಬಂದಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಜನರನ್ನು ಇಂದು ಬದುಕಿಸಿದೆ. ತೀವ್ರ ಬರಗಾಲ ಇದ್ದರೂ ಕೇಂದ್ರ ಸರ್ಕಾರ ಒಂದು ನಯಾ ಪೈಸೆ ಕೊಟ್ಟಿಲ್ಲ. ಯಾಕೆ ಈ ರೀತಿಯ ತಾತ್ಸಾರ ಮನೋಭಾವ ಎಂದು ಪ್ರಶ್ನಿಸಿದರು.

ಸರ್ಕಾರ ಬಂದ ಮೇಲೆ ಏನೇನು ಮಾಡಿದ್ದೀರಾ ಎಂದು ಬಿಜೆಪಿಯವರು ಕೇಳುತ್ತಿದ್ದಾರೆ. ಆದರೆ ನೀವೇನೂ ಮಾಡಿದ್ದೀರಾ ಎಂದು ಬಿಜೆಪಿ ನಾಯಕರನ್ನು ಕೇಳುತ್ತಿದ್ದೇವೆ. ಮೋದಿ ಗ್ಯಾರಂಟಿ ಅಂತಾ ಅವರು ಶುರು ಮಾಡಿದ್ದಾರೆ. ನಾವು ಕನಸಿನ ಲೋಕ ಸೃಷ್ಟಿಸುತ್ತಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ ಎಂದರು.

ನೀವು ಶಾಂತಿಯನ್ನು ಕೊಡಿ, ಅಭಿವೃದ್ಧಿಯನ್ನು ನಾನು ಇಡುತ್ತೇನೆ

ಸಮಾವೇಶದಲ್ಲಿ ಮಾತನಾಡಿದ ಯು.ಟಿ ಖಾದರ್, ಈಗ ನನಗೆ ಯಾವುದೇ ಪಕ್ಷವಿಲ್ಲ. ಚುನಾವಣೆ ಸಂದರ್ಭ ಗ್ಯಾರಂಟಿಗಳ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಿದಾಗ ಇದು ಆಗುತ್ತಾ ಎಂದು ಪ್ರಶ್ನಿಸಿದರು. ಆರು ತಿಂಗಳೊಳಗೆ ಗ್ಯಾರಂಟಿ ಯೋಜನೆ ಜಾರಿಯಾಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಎಂದು ಹೇಳಿದ್ದೆ. ಆದರೆ ಸರ್ಕಾರ ಬಂದು ಒಂದು ತಿಂಗಳೊಳಗೆ ಗ್ಯಾರಂಟಿ ಯೋಜನೆ ಜಾರಿಯಾಗಿದೆ. ರಾಜ್ಯ ಸರ್ಕಾರದ ಹಲವು ಯೋಜನೆಗಳನ್ನು ನಿಮ್ಮ ಕಾಲಬುಡಕ್ಕೆ ತಂದೊಪ್ಪಿಸುತ್ತೇನೆ. ಶಾಂತಿಯನ್ನು ನೀವು ಕೊಡಿ ಅಭಿವೃದ್ಧಿಯನ್ನು ನಾನು ನಿಮ್ಮ ಮುಂದೆ ಇಡುತ್ತೇನೆ ಎಂದರು.

ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ನೀರಿಗೆ ಹಾಹಾಕಾರ ಉಂಟಾಗದಂತೆ ಎಚ್ಚರವಹಿಸಲು ದಿನೇಶ್ ಗುಂಡೂರಾವ್ ಸೂಚನೆ

ಸಮಾವೇಶದಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಚುನಾವಣೆಗೆ ಮೊದಲು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದ್ದೇವೆ. ಹಿಂದಿನ ಸರ್ಕಾರ 7 ಕೆ.ಜಿ ಅಕ್ಕಿಯಲ್ಲಿ 2 ಕೆ.ಜಿ ಕಿತ್ತುಕೊಂಡಿತ್ತು. ನಾವು ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೆವು. ಆದರೆ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಕೊಟ್ಟಿಲ್ಲ. ಆದರೂ ಧೃತಿಗೆಡದೆ ನಮ್ಮ ಸರ್ಕಾರ ಅಕ್ಕಿಯ ಬದಲು ಹಣ ನೀಡುತ್ತಿದೆ ಎಂದರು.

ಗ್ಯಾರಂಟಿ ಯೋಜನೆ ತಲುಪ್ತಿಲ್ಲ ಅಂತಾ ಗೇಲಿ ಮಾಡುತ್ತಿದ್ದಾರೆ. ಯಾರಿಗೆ ತಲುಪಿದೆ ಎಂದು ನೋಡಲು ಈ ರೀತಿಯ ಉತ್ಸವಗಳು ನಡೆಯುತ್ತಿದೆ. ಇದು ಗ್ಯಾರಂಟಿ ಉತ್ಸವ ಮಾತ್ರವಲ್ಲ ಸಾರ್ಥಕ ಸಮಾವೇಶ. ದೇಶದಲ್ಲಿ ಕುಬೇರರು ಕಟ್ಟುವ ತೆರಿಗೆ ಕಡಿಮೆಯಾಗಿದೆ. ದುಡಿಯುವ ವರ್ಗದ ಜನರ ಮೇಲೆ ಟ್ಯಾಕ್ಸ್ ಏರಿಕೆ ಮಾಡಿದರು. ಎಲ್ಲಾ ಜಾಸ್ತಿಯಾದರೂ ಬೆವರು ಸುರಿಸಿ ದುಡಿಯವ ಜನರ ಸಂಪಾದನೆ ಜಾಸ್ತಿಯಾಗಿಲ್ಲ. ಆದರೆ ನೀವು ಕಟ್ಟಿದ ತೆರಿಗೆಯನ್ನು ನಾವು ನಿಮಗೆ ವಾಪಾಸು ಕೊಡುತ್ತಿದ್ದೇವೆ. ವಿರೋಧ ಪಕ್ಷದವರು ಬಿಟ್ಟಿ ಭಾಗ್ಯ ಎಂದು ಟೀಕೆ ಮಾಡುತ್ತಾರೆ. ಶ್ರೀಮಂತರಿಗೆ ತೆರಿಗೆ ಕಡಿಮೆ ಮಾಡಿದ್ದು ಬಿಟ್ಟಿ ಭಾಗ್ಯ ಅಲ್ವಾ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us