ಹಿಜಾಬ್ ನಿಯಮ ವಾಪಸ್ ಪಡೆಯಲು SYS ಸಮ್ಮೇಳನದಲ್ಲಿ ಸರ್ಕಾರಕ್ಕೆ ಹಕ್ಕೊತ್ತಾಯ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 24, 2024 | 10:41 PM

ಮಂಗಳೂರಿನ ಹೊರವಲಯದ ಅಡ್ಯಾರಿನಲ್ಲಿ ಸುನ್ನಿ ಯುವಜನ ಸಂಘಂ ಆಯೋಜನೆ ಮಾಡಿರುವ ಎಸ್​ವೈಎಸ್​ ಮಹಾ ಸಮ್ಮೇಳನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು. ಈ ವೇಳೆ ಮುಸ್ಲಿಂ ಮಹಿಳೆ ಮನೆಯಿಂದ ಹೊರಹೋದರೆ ಬುರ್ಖಾ ಹಾಕಲೇಬೇಕು. ಹಿಂದಿನ ಸರ್ಕಾರದ ಹಿಜಾಬ್ ನಿಯಮವನ್ನು ವಾಪಸ್ ಪಡೆಯುವಂತೆ ಶಾಪಿ ಸಹದಿ ಒತ್ತಾಯಿಸಿದ್ದಾರೆ. ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಗಿದೆ.​

ಹಿಜಾಬ್ ನಿಯಮ ವಾಪಸ್ ಪಡೆಯಲು SYS ಸಮ್ಮೇಳನದಲ್ಲಿ ಸರ್ಕಾರಕ್ಕೆ ಹಕ್ಕೊತ್ತಾಯ
SYS​​ನ ಮಹಾ ಸಮ್ಮೇಳನdಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿ​
Follow us on

ಮಂಗಳೂರು, ಜನವರಿ 24: ಮುಸ್ಲಿಂ ಮಹಿಳೆ ಮನೆಯಿಂದ ಹೊರಹೋದರೆ ಬುರ್ಖಾ ಹಾಕಲೇಬೇಕು. ಹಿಂದಿನ ಸರ್ಕಾರದ ಹಿಜಾಬ್ (hijab) ನಿಯಮವನ್ನು ವಾಪಸ್ ಪಡೆಯುವಂತೆ ಶಾಪಿ ಸಹದಿ ಒತ್ತಾಯಿಸಿದ್ದಾರೆ. ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಗಿದೆ. ಮಂಗಳೂರಿನ ಹೊರವಲಯದ ಅಡ್ಯಾರಿನಲ್ಲಿ ಸುನ್ನಿ ಯುವಜನ ಸಂಘಂ ಆಯೋಜನೆ ಮಾಡಿರುವ ಎಸ್​ವೈಎಸ್​ ಮಹಾ ಸಮ್ಮೇಳನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದಾಗ​ ಸರ್ಕಾರಕ್ಕೆ ಹಕ್ಕೊತ್ತಾಯಿಸಲಾಗಿದೆ. 2ಬಿ 4% ಮೀಸಲಾತಿಯಲ್ಲಿ ವಾಪಾಸ್ ಪಡೆದಿದ್ದನ್ನು ಸರ್ಕಾರ ವಾಪಾಸ್ ಪಡೆಯಲು ಮತ್ತು 2013 ರ ಜಾತಿಗಣತಿ ವರದಿ ಬಿಡುಗಡೆ ಮಾಡಲು ಒತ್ತಾಯಿಸಲಾಗಿದೆ.

ಮಂಗಳೂರು ಸಿಎಎ ಎನ್​ಆರ್​ಸಿ ಗೋಲಿಬಾರ್​ನಲ್ಲಿ ಮೃತಪಟ್ಟ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲಾಗಿದೆ. ಗೋಲಿವಾರ್ ವೇಳೆ ಯುವಕರ ಮೇಲಿರುವ ಕೇಸ್ ವಾಪಾಸ್ ತೆಗೆಯಲು ಆಗ್ರಹಿಸಲಾಗಿದೆ. ಹುಬ್ಬಳ್ಳಿ, ಡಿ‌.ಜೆ.ಹಳ್ಳಿ-ಕೆಜೆ ಹಳ್ಳಿ ಗಲಭೆಯಲ್ಲಿ ಜೈಲಿನಲ್ಲಿರುವ ಅಮಾಯಕರ ತಕ್ಷಣ ಬಿಡುಗಡೆಗೆ ಮತ್ತು ಚಿಕ್ಕಮಗಳೂರು ಬಾಬಾಬುಡನ್ ಗಿರಿ ದರ್ಗಾಕ್ಕೆ ಕಳೆದ ಸರ್ಕಾರ ತಂದ ಸಮಿತಿ ವಿಚಾರವಾಗಿ ಆದ ಅನ್ಯಾಯವನ್ನು ಸರಿಪಡಿಸಲು ಒತ್ತಾಯಿಸಲಾಗಿದೆ.

ನಿಮ್ಮ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇರುತ್ತೆ: ಡಿಸಿಎಂ ಡಿ.ಕೆ.ಶಿವಕುಮಾರ್

ಎಸ್​ವೈಎಸ್ ಮಹಾ ಸಮ್ಮೇಳನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದ್ದು, ಮುಸ್ಲಿಮರು ನನ್ನ ಸಹೋದರರು ಎಂದಿದ್ದಕ್ಕೆ ಟೀಕೆ, ವಿವಾದ ಮಾಡಿದರು. ಆದರೆ ಇದಕ್ಕೆಲ್ಲಾ ಹೆದರುವುದಿಲ್ಲ. ನೀವು ಹಕ್ಕೊತ್ತಾಯ ಮಾಡಿದ್ದು ಡಿ.ಕೆ.ಶಿವಕುಮಾರ್​​ಗೆ ಅಲ್ಲ, ಸರ್ಕಾರಕ್ಕೆ. ನಿಮ್ಮ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇರುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಫೆ.8ರಂದು‌ ಸಿಎಂ 2ನೇ ಹಂತದ ಜನಸ್ಪಂದನಾ ಕಾರ್ಯಕ್ರಮ: ಮೆಜೆಸ್ಟಿಕ್​ನಿಂದ ವಿಧಾನಸೌಧಕ್ಕೆ ಬಸ್ ಸೌಲಭ್ಯ

ನಾವು ನಿಮ್ಮ ಜೊತೆ ಇದ್ದು, ನಿಮ್ಮ ರಕ್ಷಣೆಗೆ ನಿಲ್ಲುತ್ತೇವೆ. ನಾನು ಕನಕಪುರದ ಬಂಡೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ, ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದಿದ್ದಾರೆ.

ರಾಮಮಂದಿರ ಮಂತ್ರಾಕ್ಷತೆಗೆ ಡಿಸಿಎಂ ಡಿಕೆ ಶಿವಕುಮಾರ್​​ ಟೀಕೆ

ರಾಮಮಂದಿರ ಮಂತ್ರಾಕ್ಷತೆ ಮಂತ್ರಾಕ್ಷತೆ ಅಕ್ಕಿ ಸಿಎಂ ಸಿದ್ದರಾಮಯ್ಯ ಕೊಟ್ಟ ಅಕ್ಕಿ. ಐದು ಗ್ಯಾರಂಟಿಗಳೇ ಕಾಂಗ್ರೆಸ್ ಕೊಟ್ಟ ಮಂತ್ರಾಕ್ಷತೆ ಎಂದು ರಾಮಮಂದಿರ ಮಂತ್ರಾಕ್ಷತೆ ಬಗ್ಗೆ ಟೀಕೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:27 pm, Wed, 24 January 24