AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಬಾಣಿ ಸಮಾಜದ ಜತೆ ಸಂವಾದದಲ್ಲಿ ಡಿಕೆಶಿಯತ್ತ ಮೈಕ್ ಎಸೆದ ಶಾಸಕ ಪಿ.ಟಿ.ಪರಮೇಶ್ವರ್‌ನಾಯ್ಕ್

ಲಂಬಾಣಿ ಸಮಾಜದೊಂದಿಗಿನ ಸಂವಾದದ ಒಂದು ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಎಂದು ಘೋಷಣೆ ಕೂಗಿದ ಘಟನೆಯೂ ನಡೆಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಪುಷ್ಪ ಮಳೆ ಸುರಿಸಿದ ಕಾರ್ಯಕರ್ತರು ನೀವೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದರು.

ಲಂಬಾಣಿ ಸಮಾಜದ ಜತೆ ಸಂವಾದದಲ್ಲಿ ಡಿಕೆಶಿಯತ್ತ ಮೈಕ್ ಎಸೆದ ಶಾಸಕ ಪಿ.ಟಿ.ಪರಮೇಶ್ವರ್‌ನಾಯ್ಕ್
ಪಿ ಟಿ ಪರಮೇಶ್ವರ್ ನಾಯ್ಕ್ ಮೈಕನ್ನು ಎಸೆಯುತ್ತಿರುವ ದೃಶ್ಯ
TV9 Web
| Edited By: |

Updated on:Jul 15, 2021 | 7:17 PM

Share

ದಾವಣಗೆರೆ:  ನ್ಯಾಮತಿ ತಾಲೂಕಿನ  ಸೂರನಗೊಂಡಕೊಪ್ಪದ ಸೇವಾಲಾಲ್ ಪುಣ್ಯಕ್ಷೇತ್ರದಲ್ಲಿ ಲಂಬಾಣಿ ಸಮುದಾಯದವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂವಾದ ನಡೆಸುತ್ತಿದ್ದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ಪಿ.ಟಿ.ಪರಮೇಶ್ವರ್‌ ನಾಯ್ಕ್ ಜನರ ಪ್ರಶ್ನೆಗೆ ಉತ್ತರ ಕೊಡಲು ಮುಂದಾದರು. ಇದೇ ವೇಳೆ ಮಧ್ಯ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನೀವು ಉತ್ತರ ಕೊಡಲು ಬಂದಿಲ್ಲ. ನಾನು ಉತ್ತರ ಕೊಡಲು‌ ಬಂದಿದ್ದೇನೆ, ಉತ್ತರ ಕೊಡುತ್ತೇನೆ ಎಂದು ಶಾಸಕ ಪಿ.ಟಿ.ಪರಮೇಶ್ವರ್‌ ನಾಯ್ಕ್​ ಬಳಿ ಹೇಳಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತಿಗೆ ಪ್ರತ್ಯುತ್ತರವಾಗಿ ತಮ್ಮ ಮಾತನ್ನು ಅಲ್ಲಿಗೇ ನಿಲ್ಲಿಸಿದ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ಮೈಕನ್ನು ನಿಂತ ಸ್ಥಳದಿಂದಲೇ ಡಿ.ಕೆ.ಶಿವಕುಮಾರ್ (KPCC President DK Shivakumar )ಇದ್ದಲ್ಲಿ ಎಸೆದರು.

ಲಂಬಾಣಿ ಸಮಾಜದೊಂದಿಗಿನ ಸಂವಾದದ ಒಂದು ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಎಂದು ಘೋಷಣೆ ಕೂಗಿದ ಘಟನೆಯೂ ನಡೆಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಪುಷ್ಪ ಮಳೆ ಸುರಿಸಿದ ಕಾರ್ಯಕರ್ತರು ನೀವೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದರು.

ಬೇಗೂರಿನಲ್ಲಿ ಜತೆ ಡಿಕೆಶಿ ಸಂವಾದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬೇಗೂರು ಗ್ರಾಮದ ಲಂಬಾಣಿ ಸಮುದಾಯದ ಜತೆಯೂ ಸಂವಾದ ನಡೆಸಿದ ಅವರು ಕೊರೊನಾ ಸಂಕಷ್ಟದಲ್ಲಿ ರಾಜಕೀಯ ಸಭೆ ಮಾಡುವಂತಿಲ್ಲ. ಶೋಷಿತ ಸಮುದಾಯಗಳ ಸಂಕಷ್ಟ ಕೇಳುವುದು ನನ್ನ ಉದ್ದೇಶ. ಮೀನುಗಾರರನ್ನ ಭೇಟಿ ಮಾಡಿದ್ದೆ, ಈಗ ಲಂಬಾಣಿ ಜನಾಂಗ, ನೇಕಾರ ಸೇರಿದಂತೆ ಎಲ್ಲ ಸಮಾಜಗಳ ಜೊತೆ ಮಾತಾಡುವೆ ಎಂದು ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು. ಸಂವಾದದಲ್ಲಿ ಲಂಬಾಣಿ ಸಮಾಜದವರು ಅನೇಕ ಸಮಸ್ಯೆ ಗಮನಕ್ಕೆ ತಂದಿದ್ದಾರೆ. ಸಂಸದ ಡಿ.ಕೆ.ಸುರೇಶ ಮೂಲಕ ಸಂಸತ್ತಿನಲ್ಲಿ ತಾಂಡಾಗಳನ್ನು ಕಂದಾಯ ಜಮೀನನ್ನಾಗಿ ಪರಿವರ್ತನೆಗೆ ಪ್ರಶ್ನೆ ಮಾಡುತ್ತೇವೆ. ಲಂಬಾಣಿ ತಾಂಡಾದ ಜನರನ್ನು ಒಕ್ಕಲೆಬ್ಬಿಸಲು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ. ಲಂಬಾಣಿ ಜನರ ಧ್ವನಿಯಾಗಿ ನಾನು ಇರುತ್ತೇನೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: 

ಇದು ನಮ್ಮ ಸರ್ಕಾರ ಎಂಬ ಭಾವನೆಯೇ ಬರುತ್ತಿಲ್ಲ; ಡಿ ಕೆ ಶಿವಕುಮಾರ್, ಕುಮಾರಸ್ವಾಮಿ ಜತೆ ಯಡಿಯೂರಪ್ಪ ಹೊಂದಾಣಿಕೆ ಸದಾ ಇದೆ: ಸಚಿವ ಯೋಗೇಶ್ವರ್

ಟಿವಿ9 ವಿಶೇಷ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಂದರ್ಶನ: ‘ಎಲ್ಲರೂ ಕಾಂಗ್ರೆಸ್ ಮುಖ್ಯಮಂತ್ರಿಯ ಮಾತಾಡುವಂತೆ ಪಕ್ಷವನ್ನು ಬೆಳೆಸಿದ್ದೇವೆ

(MLA PT Parameshwar Naik through mike to KPCC President DK Shivakumar in Davanagere Honnali Lambani programme)

Published On - 6:29 pm, Thu, 15 July 21