AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾಕಾಶಿ ಧಾರವಾಡದ ರಸ್ತೆಗೆ ಇನ್ನೂ ಸಿಕ್ಕಿಲ್ಲ ದುರಸ್ತಿ ಭಾಗ್ಯ

ಧಾರವಾಡ ನಗರದ ಹಳೆಯ ಡಿವೈಎಸ್​ಪಿ ವೃತ್ತದಿಂದ ಮುರುಘಾಮಠದವರೆಗೆ ಸುಮಾರು 2.4 ಕೋಟಿ ರೂಪಾಯಿ ವೆಚ್ಚದ ಯೋಜನೆಯಿದಾಗಿದ್ದು. ಒಟ್ಟು 18 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾತ್ತಿರುವ ರಸ್ತೆಯಿದು. ಕಾಮಗಾರಿ ಆರಂಭವಾಗಿ ಹಲವಾರು ವರ್ಷಗಳೇ ಕಳೆದಿವೆ. ಆದರೂ ಕಾಮಗಾರಿ ಮಾತ್ರ ಅಂತಿಮ ಹಂತ ತಲುಪುತ್ತಲೇ ಇಲ್ಲ. ಇದರಿಂದಾಗಿ ಜನರು ನಿತ್ಯವೂ ಧೂಳನ್ನು ಕುಡಿದು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ.

ವಿದ್ಯಾಕಾಶಿ ಧಾರವಾಡದ  ರಸ್ತೆಗೆ ಇನ್ನೂ ಸಿಕ್ಕಿಲ್ಲ ದುರಸ್ತಿ ಭಾಗ್ಯ
ವರ್ಷಗಟ್ಟಲೆ ಕಳೆದರು ಮುಗಿಯದ ರಸ್ತೆ ಕಾಮಗಾರಿ
preethi shettigar
| Edited By: |

Updated on: Jan 07, 2021 | 7:01 PM

Share

ಧಾರವಾಡ: ಸುಂದರ ಪರಿಸರ ಎಂದ ಕೂಡಲೆ ಎಲ್ಲರ ಮನಸ್ಸಿನಲ್ಲಿ ಮೂಡುವುದು ಧಾರವಾಡ ನಗರದ ಚಿತ್ರಣ. ಇದಕ್ಕೆ ಕಾರಣ ಅಲ್ಲಿ ಅಚ್ಚುಕಟ್ಟಾಗಿ ನಿರ್ಮಿಸಿರುವ ರಸ್ತೆಗಳು ಮತ್ತು ಸ್ವಚ್ಛವಾದ ಪರಿಸರ. ಆದರೆ ಧಾರವಾಡದಲ್ಲಿಯೇ ಒಂದು ರಸ್ತೆ ಇದೆ. ಅದು ಪ್ರಸಿದ್ಧ ಮಠಕ್ಕೆ ಹೋಗುವ ರಸ್ತೆಯೂ ಹೌದು. ಈ ರಸ್ತೆಯಲ್ಲಿಯೇ ಮಾಜಿ, ಹಾಲಿ ಶಾಸಕರು ಹಾಗೂ ಇಬ್ಬರು ಮಹಾನಗರ ಪಾಲಿಕೆಯ ಸದಸ್ಯರ ಮನೆಗಳು ಕೂಡ ಬರುತ್ತವೆ. ಆದರೆ ಆ ರಸ್ತೆ ಮೂಲಕ ಹೋಗಬೇಕೆಂದರೆ ಒಂದೋ ನಿಮ್ಮ ಜೀವ ಗಟ್ಟಿಯಾಗಿರಬೇಕು, ಇಲ್ಲವೇ ನೀವು ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಇರಬೇಕು. ಅಷ್ಟರಮಟ್ಟಿಗೆ ಈ ರಸ್ತೆ ಹಾಳಾಗಿದೆ.

ವಿದ್ಯಾಕಾಶಿಯ ಮಧ್ಯಭಾಗದಲ್ಲಿಯೇ ಇದೆ ಈ ರಸ್ತೆ: ಧಾರವಾಡ ನಗರದ ಹೃದಯ ಭಾಗದಲ್ಲಿರುವ ಹಳೆಯ ಡಿವೈಎಸ್​ಪಿ ವೃತ್ತದಿಂದ ಮುರುಘಾ ಮಠಕ್ಕೆ ಹೋಗುವ ರಸ್ತೆಯೇ ಇದೀಗ ತನ್ನ ವ್ಯಥೆಯ ಕಥೆಯನ್ನು ಹೇಳುತ್ತಿದೆ. ಕಳೆದ ಹಲವಾರು ವರ್ಷಗಳಿಂದಲೂ ಈ ರಸ್ತೆ ದುರಸ್ತಿಯಾಗುತ್ತದೆ ಎಂದು ಜನರೆಲ್ಲಾ ಕಾದು ಕಾದು ಸುಸ್ತಾಗಿ ಹೋಗಿದ್ದಾರೆ. ಈ ರಸ್ತೆ ಪ್ರಸಿದ್ಧ ಮುರುಘಾ ಮಠಕ್ಕೆ ದಾರಿಯೂ ಆಗಿರುವುದರಿಂದ ಇದನ್ನು ತುಂಬಾನೇ ಚೆನ್ನಾಗಿ ನಿರ್ಮಿಸಬೇಕು ಎನ್ನುವ ಆಗ್ರಹ ಬಹಳ ದಿನದ ಹಿಂದೆಯೇ ಆಗಿತ್ತು. ಇದೇ ಕಾರಣಕ್ಕೆ ಈ ರಸ್ತೆಯನ್ನು ಟೆಂಡರ್ ಶ್ಯೂರ್ ರಸ್ತೆಯನ್ನಾಗಿ ನಿರ್ಮಾಣ ಮಾಡಲು ನಿರ್ಧರಿಸಲಾಯಿತು. ಆದರೆ ಈ ರಸ್ತೆಯ ಗ್ರಹಗತಿಯೇ ಸರಿ ಇಲ್ಲ ಎಂದು ಕಾಣುತ್ತದೆ. ಇದರ ಗುತ್ತಿಗೆಯನ್ನು ಟ್ರಿನಿಟಿ ಗ್ರುಪ್ ಎನ್ನುವ ಕಂಪನಿಗೆ 2017 ರಲ್ಲಿಯೇ ನೀಡಲಾಯಿತು. ಆದರೆ ಕೆಲಸ ಮಾತ್ರ ಆರಂಭವಾಗಲೇ ಇಲ್ಲ.

ಈ ರಸ್ತೆಯ ವಿಶೇಷ: ಸ್ಮಾರ್ಟ್ ಸಿಟಿ ಯೋಜನೆಗೆ ಅವಳಿ ನಗರ ಆಯ್ಕೆಯಾದಾಗಿನಿಂದ ಅಲ್ಲಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಲೇ ಇವೆ. ಇಂತಹ ವೇಳೆಯಲ್ಲಿ ಅವಳಿ ನಗರದಲ್ಲಿ ಟೆಂಡರ್ ಶ್ಯೂರ್ ಯೋಜನೆಗೆ ಆಯ್ಕೆಯಾದ ಮೊದಲ ರಸ್ತೆ ಇದು. ಜನರ ದುರ್ದೈವವೋ ಗೊತ್ತಿಲ್ಲ. 2017 ರಲ್ಲಿಯೇ ಇದು ಅಂತಿಮವಾದರೂ, ಆದರೆ ಇದುವರೆಗೂ ಈ ಕಾಮಗಾರಿಯೇ ಮುಗಿದಿಲ್ಲ. ಇದರಿಂದಾಗಿ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ದುರಸ್ತಿ ಕಾಣದ ರಸ್ತೆಗಳು

18 ಕೋಟಿ ರೂಪಾಯಿ ಕಾಮಗಾರಿ: ಧಾರವಾಡ ನಗರದ ಹಳೆಯ ಡಿವೈಎಸ್​ಪಿ ವೃತ್ತದಿಂದ ಮುರುಘಾಮಠದವರೆಗೆ ಸುಮಾರು 2.4 ಕೋಟಿ ರೂಪಾಯಿ ವೆಚ್ಚದ ಯೋಜನೆಯಿದಾಗಿದ್ದು. ಒಟ್ಟು 18 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾತ್ತಿರುವ ರಸ್ತೆಯಿದು. ಕಾಮಗಾರಿ ಆರಂಭವಾಗಿ ಹಲವಾರು ವರ್ಷಗಳೇ ಕಳೆದಿವೆ. ಆದರೂ ಕಾಮಗಾರಿ ಮಾತ್ರ ಅಂತಿಮ ಹಂತ ತಲುಪುತ್ತಲೇ ಇಲ್ಲ. ಇದರಿಂದಾಗಿ ಜನರು ನಿತ್ಯವೂ ಧೂಳನ್ನು ಕುಡಿದು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಇದೇ ರಸ್ತೆಯಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಅವರ ಮನೆಯೂ ಬರುತ್ತದೆ. ಆಗಾಗ ಅವರು ಈ ರಸ್ತೆ ಕಾಮಗಾರಿ ವೀಕ್ಷಣೆ ಮಾಡುತ್ತಲೇ ಇರುತ್ತಾರೆ. ಆದರೂ ಕಾಮಗಾರಿಗೆ ವೇಗ ಸಿಗುತ್ತಿಲ್ಲ.

ದೂಳಿನಿಂದ ಕೂಡಿದ ರಸ್ತೆ

ಅರ್ಧಕ್ಕೆ ನಿಂತಿರುವ ಕಾಮಗಾರಿ

ಈ ಬಗ್ಗೆ ಏನಂತಾರೆ ಅಧಿಕಾರಿಗಳು: ಈ ಕಾಮಗಾರಿಯ ಉಸ್ತುವಾರಿಯನ್ನು ಕೆ-ಶಿಪ್​ನ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಇದರ ಸಂಪೂರ್ಣ ಮಾಹಿತಿಯನ್ನು ಅವರೇ ಪಡೆದುಕೊಳ್ಳುತ್ತಾರೆ ಎಂದು ಹೇಳುವ ಅಧಿಕಾರಿಗಳು. ಈ ಬಗ್ಗೆ ಕೆ-ಶಿಪ್​ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀಶೈಲ ಹೊನಕೇರಿಯವರನ್ನು ಕೇಳಿದರೆ, ಗುತ್ತಿಗೆದಾರರು ಕಾಮಗಾರಿಯನ್ನು 2 ತಿಂಗಳಲ್ಲಿ ಮುಗಿಸುವುದಾಗಿ ಹೇಳಿದ್ದಾರೆ. ಅದಾಗಲೇ ಎಲ್ಲಾ ಕೆಲಸಗಳು ಮುಕ್ತಾಯವಾಗಿವೆ. ಇದೀಗ ರಸ್ತೆಗೆ ಕೊನೆಯ ಹಂತದಲ್ಲಿ ಬಿಟ್ಯುಮಿನ್ ಹಾಕಬೇಕಿದೆ. ಇನ್ನು 2 ತಿಂಗಳಲ್ಲಿ ಎಲ್ಲಾ ಕೆಲಸ ಮುಗಿಸಿ, ಸಾರ್ವಜನಿಕ ಸೇವೆಗೆ ಈ ರಸ್ತೆ ಲಭ್ಯವಾಗುತ್ತದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.

ಗುಂಡಿ ಬಿದ್ದಿರುವ ರಸ್ತೆ

ಅದಾಗಲೇ ಇಂತಹ ರಸ್ತೆಯಲ್ಲಿಯೇ 4 ವರ್ಷ ಸಂಚರಿಸಿ, ಸಂಕಷ್ಟ ಅನುಭವಿಸಿದ ಜನರಿಗೆ ಮುಂದಿನ ದಿನಗಳಲ್ಲಾದರೂ ಒಳ್ಳೆಯ ರಸ್ತೆಯಲ್ಲಿ ಓಡಾಡುವ ಅವಕಾಶ ಸಿಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿ ರಸ್ತೆ

ಕೋಟೆನಾಡಿನಲ್ಲಿ ಮುಗಿಯದ ರಸ್ತೆ ಕಾಮಗಾರಿ: ಹೆಚ್ಚಿನ ಧೂಳಿನಿಂದ ಸೃಷ್ಟಿಯಾಯ್ತು ಕೊರೊನಾ ಆತಂಕ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?